CHITRADURGA NEWS | 9 MAY 2026
ಚಿತ್ರದುರ್ಗ: ಚಿತ್ರದುರ್ಗದಲ್ಲಿ ರಾಜಾವೀರ ಮದಕರಿ ನಾಯಕರ ಥೀಮ್ ಪಾರ್ಕ್(ಸ್ಮಾರಕ) ನಿರ್ಮಿಸುವ ವಿಚಾರ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.
೨೦೧೮ರಲ್ಲಿ ಚುನಾವಣಾ ಪ್ರಚಾರಕ್ಕೆ ಆಗಮಿಸಿದ್ದ ಅಂದಿನ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿದ್ದ ಅಮಿತ್ ಶಾ ಅವರು, ವಾಲ್ಮೀಕಿ ನಾಯಕ ಸಮುದಾಯದ ಸಭೆಯಲ್ಲಿ ಚಿತ್ರದುರ್ಗದಲ್ಲಿ ರಾಜಾ ಮದಕರಿ ನಾಯಕರ ಥೀಮ್ ಪಾರ್ಕ್ ನಿರ್ಮಾಣ ಮಾಡುವ ಭರವಸೆ ನೀಡಿದ್ದರು.
ಇದನ್ನೂ ಓದಿ: ಕರ್ನಾಟಕದಲ್ಲಿ ಬಿಜೆಪಿ ಸೂರ್ಯ ಉದಯಿಸುತ್ತಿದೆ | ಬಸವರಾಜ ಬೊಮ್ಮಾಯಿ
ಆದರೆ, ಈ ಭರವಸೆ ನೀಡಿ ೬ ವರ್ಷ ಕಳೆದರೂ ಯಾವ ಕೆಲಸವೂ ಆಗಲಿಲ್ಲ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ, ಸುದ್ದಿಗೋಷ್ಠಿಯಲ್ಲಿ ಈ ವಿಚಾರ ಪದೇ ಪದೇ ಚರ್ಚೆಗೆ ಬರುತ್ತಿತ್ತು.
ಬಿ.ಎಸ್.ಯಡಿಯೂರಪ್ಪ ಅವರ ಅಭಿಮಾನೋತ್ಸವ ಕಾರ್ಯಕ್ರಮಕ್ಕೆ ಅಮಿತ್ ಶಾ ಅವರು ಆಗಮಿಸುತ್ತಿದ್ದಾರೆ ಎನ್ನುವ ಸುದ್ದಿ ತಿಳಿಯುತ್ತಿದ್ದಂತೆ ಮತ್ತೆ ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಚರ್ಚೆಗಳು ಶುರುವಾಗಿದ್ದವು.
ಅಮಿತ್ ಶಾ ಕಿವಿಗೆ ಬಿದ್ದ ವಿವಾದ:
ಅಂತೂ ಮದಕರಿ ಥೀಮ್ ಪಾರ್ಕ್ ವಿಚಾರ ಕೇಂದ್ರ ಗೃಹ ಸಚಿವರಾದ ಅಮಿತ್ ಶಾ ಅವರ ಗಮನಕ್ಕೆ ಬಂದಿದೆ.
ಶನಿವಾರ ಚಿತ್ರದುರ್ಗಕ್ಕೆ ಆಗಮಿಸಿ ಯಡಿಯೂರಪ್ಪ ಅಭಿಮಾನೋತ್ಸವ ಭಾಷಣ ಆರಂಭಿಸುತ್ತಲೇ ಮದಕರಿ ನಾಯಕ ಸ್ಮಾರಕ ವಿಚಾರ ಪ್ರಸ್ತಾಪಿಸಿದರು.
ಇದನ್ನೂ ಓದಿ: ಯಡಿಯೂರಪ್ಪ ಅದ್ದೂರಿ ಪುರ ಪ್ರವೇಶ | ಸಂಭ್ರಮದಿಂದ ಸ್ವಾಗತಿಸಿದ ಕೋಟೆ ನಗರಿ
ನಾನು ಹಿಂದೆ ಚುನಾವಣಾ ಪ್ರಚಾರಕ್ಕೆ ಬಂದಾಗ ಮದಕರಿ ನಾಯಕರ ಸ್ಮಾರಕದ ಭರವಸೆ ನೀಡಿದ್ದೆ. ಇದನ್ನು ಕೆಲವರು ವಿವಾದ ಮಾಡಿದ್ದಾರೆ ಎಂದು ಮಾತು ಆರಂಭಿಸಿದ ಅಮಿತ್ ಶಾ, ಆಗ ರಾಜ್ಯದಲ್ಲಿ ನಮ್ಮ ಸರ್ಕಾರ ಬರಲಿಲ್ಲ. ಈ ಕಾರಣಕ್ಕೆ ಹಿನ್ನಡೆಯಾಗಿದೆ ಎಂದರು.
ಮದಕರಿ ಸ್ಮಾರಕ ಕುರಿತು ಅಮಿತ್ ಶಾ ಮಾತುಗಳು ಇಲ್ಲಿವೆ:
https://x.com/i/status/2053097976051192112
ಚಿಂತೆ ಬೇಡ ಮೋದಿ ಸರ್ಕಾರ ಇದೆ. ನಾವು ಮದಕರಿ ನಾಯಕರ ಸ್ಮಾರಕ ನಿರ್ಮಾಣ ಮಾಡಿಯೇ ಮಾಡುತ್ತೇವೆ ಎಂದು ಅಮಿತ್ ಶಾ ಪುನರುಚ್ಚಾರ ಮಾಡಿದರು.
ಇದನ್ನೂ ಓದಿ: ಆಧುನಿಕ ಭಗೀರಥ ಯಡಿಯೂರಪ್ಪ | BSY ಕುರಿತು ಸಿರಿಗೆರೆ ಶ್ರೀ ಲೇಖನ
ಅಭಿಮಾನೋತ್ಸವದ ಅಭಿಮಾನದ ಸನ್ಮಾನ ಸ್ವೀಕರಿಸಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ವೀರವನಿತೆ ಒನಕೆ ಓಬವ್ವನ ತಪೋನಾಡು, ವೀರ ಮದಕರಿ ನಾಯಕರು ಆಳಿದ ಚಿತ್ರದುರ್ಗಕ್ಕೆ ಸಮಸ್ತ ಕನ್ನಡ ನಾಡಿನ ಜನ ಹರಿದು ಬಂದಿದ್ದೀರಿ. ಈ ಅಭಿಮಾನೋತ್ಸವಕ್ಕೆ ನಾನು ಜನ್ಮಜನ್ಮಕ್ಕೂ ಋಣಿಯಾಗಿರುತ್ತೇನೆ ಎಂದರು.
ಸರ್ದಾರ್ ವಲ್ಲಭಬಾಯ್ ಪಟೇಲ್ ನಂತರ ದೇಶದ ಉಕ್ಕಿನ ಮನುಷ್ಯರಾಗಿ ಸಂಕಲ್ಪ ತೊಟ್ಟು ಕೆಲಸ ಮಾಡುತ್ತಿರುವ ಅಮಿತ್ ಶಾ ಅವರು, ದುರ್ಗದ ನೆಲದಲ್ಲಿ ಮದಕರಿ ನಾಯಕರಂತೆ ಕಂಗೊಳಿಸುತ್ತಿದ್ದಾರೆ ಎಂದು ಬಣ್ಣಿಸಿದ್ದು ಕೂಡಾ ವಿಶೇಷವಾಗಿತ್ತು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
