Connect with us

    leopard; ಚಿತ್ರದುರ್ಗ ಹೊರವಲಯದ ಹೆದ್ದಾರಿ ಪಕ್ಕದ ಬಂಡೆ ಮೇಲೆ ಚಿರತೆ ಪ್ರತ್ಯಕ್ಷ

    ಚಿತ್ರದುರ್ಗ ಹೊರವಲಯದ ಹೆದ್ದಾರಿ ಪಕ್ಕದ ಬಂಡೆ ಮೇಲೆ ಚಿರತೆ ಪ್ರತ್ಯಕ್ಷ

    ಮುಖ್ಯ ಸುದ್ದಿ

    leopard; ಚಿತ್ರದುರ್ಗ ಹೊರವಲಯದ ಹೆದ್ದಾರಿ ಪಕ್ಕದ ಬಂಡೆ ಮೇಲೆ ಚಿರತೆ ಪ್ರತ್ಯಕ್ಷ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 27 AUGUST 2024

    ಚಿತ್ರದುರ್ಗ: ಹೊಳಲ್ಕೆರೆ ರಸ್ತೆಯ ಶ್ರೀಕೃಷ್ಣ ಯಾದವ ಮಠದ ಹಿಂಭಾಗದಲ್ಲಿರುವ ಗುಡ್ಡದ ಬಂಡೆಯ ನಡುವೆ ಚಿರತೆ(leopard)ಯೊಂದು ಆರಾಮವಾಗಿ ಮಲಗಿ ರಸ್ತೆಯಲ್ಲಿ ಓಡಾಡುತ್ತಿದ್ದ ಜನ, ವಾಹನಗಳನ್ನು ನೋಡುತ್ತಿದ್ದ ದೃಶ್ಯ ಸಂಜೆ ಸಾರ್ವಜನಿಕರ ಕಣ್ಣಿಗೆ ಬಿದ್ದಿದೆ.

    ರಸ್ತೆಯಲ್ಲಿ ಹೋಗುತ್ತಿದ್ದ ಯಾರದ್ದೋ ಕಣ್ಣಿಗೆ ಬಿದ್ದ ಚಿರತೆ ನೋಡಲು‌ ಜನ ವಾಹನಗಳನ್ನು ಬದಿಗೆ ನಿಲ್ಲಿಸಿ ಕುತೂಹಲದಿಂದ ಬರುತ್ತಿದ್ದರು.

    ಕ್ಲಿಕ್ ಮಾಡಿ ಓದಿ: Village Assistant; ಗ್ರಾಮ ಸಹಾಯಕರ ಹುದ್ದೆ | ಅರ್ಜಿ ಆಹ್ವಾನ

    ಇನ್ನೂ ಹಾಡಹಗಲೇ ನಗರದ ಸಮೀಪದಲ್ಲೇ ಚಿರತೆ ಪ್ರತ್ಯಕ್ಷವಾಗಿದ್ದನ್ನ ಕಂಡು, ಚಿರತೆ ನೋಡಲು ಜನ ಮುಗಿ ಬಿದ್ದಿದ್ದಾರೆ. ಇನ್ನೂ ಚಿರತೆ ಕಾಣಿಸಿಕೊಂಡ ಬೆನ್ನಲ್ಲೇ ಸುತ್ತಮುತ್ತಲಿನ ಬಡಾವಣೆ ನಿವಾಸಿಗಳಲ್ಲಿ ಆತಂಕ ಮನೆ ಮಾಡಿದೆ.

    ಹೊಳಲ್ಕೆರೆ ರಸ್ತೆಯಲ್ಲಿ ಓಡಾಟ ಮಾಡುವ ವಾಹನ ಸವಾರರಲ್ಲೂ ಕೂಡಾ ಚಿರತೆ ಭಯ ಮೂಡಿಸಿದೆ.

    ಸ್ಥಳಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿ, ಚಿರತೆ ಸೆರೆಗೆ ಮುಂದಾಗಿದ್ದಾರೆ.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top