
CHITRADURGA NEWS | 31 OCTOBER 2024
ಚಿತ್ರದುರ್ಗ: ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಗೆ (Award) ಕಲೆ, ಸಾಹಿತ್ಯ, ಸಂಸ್ಕøತಿ, ಜಾನಪದ, ಸಮಾಜ ಸೇವೆ, ಪತ್ರಿಕೋದ್ಯಮ, ಕ್ರೀಡೆ, ಸಂಗೀತ ಸೇರಿದಂತೆ ಹಲವು ಕ್ಷೇತ್ರಗಳಿಂದ 28 ಜನರನ್ನು ಆಯ್ಕೆ ಮಾಡಲಾಗಿದೆ.
ಇದನ್ನೂ ಓದಿ: ಒನಕೆ ಓಬವ್ವ ಜಿಲ್ಲಾ ಕ್ರೀಡಾಂಗಣಕ್ಕೆ ಮೂಲಭೂತ ಸೌಕರ್ಯ ಒದಗಿಸಿ, ಶುಲ್ಕ ನಿಗದಿಪಡಿಸಿ | ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಸೂಚನೆ

ಜಿಲ್ಲಾಧಿಕಾರಿ ಕಚೇರಿಯಿಂದ ಅಧಿಕೃತ ಪಟ್ಟಿ ಬಿಡುಗಡೆಯಾಗಿದ್ದು, ನವೆಂಬರ್ 1 ರಂದು ನಡೆಯುವ ಕನ್ನಡ ರಾಜ್ಯೋತ್ಸವದಲ್ಲಿ ಪ್ರಶಸ್ತಿಗೆ ಆಯ್ಕೆಯಾದವರನ್ನು ಸನ್ಮಾನಿಸಲಾಗುತ್ತದೆ.
ಪ್ರಶಸ್ತಿಗೆ ಆಯ್ಕೆಯಾದವರ ಪಟ್ಟಿ:
ಜಾನಪದ ಕ್ಷೇತ್ರ: ಹಿರಿಯೂರು ತಾಲೂಕು ಕೆ.ಎನ್.ಕೊಟ್ಟಿಗೆ ಗುರುಮೂರ್ತಿ ಹಾಗೂ ಚಿತ್ರದುರ್ಗ ತಾಲೂಕು ಹುಲ್ಲೇಹಾಳ್ ಗ್ರಾಮದ ಡಿ.ನಾಗರಾಜ್.
ರಂಗಭೂಮಿ ಕ್ಷೇತ್ರದಲ್ಲಿ ಮುದ್ದಾಪುರದ ಎನ್.ವೆಂಕಟೇಶ್, ಚಳ್ಳಕೆರೆ ತಾಲೂಕು ನನ್ನಿವಾಳದ ಹನುಮಂತಪ್ಪ.
ಇದನ್ನೂ ಓದಿ: ಅತ್ತೆ ಮಾವನ ಕೊಲೆ ಮಾಡಿದ್ದ ಅಳಿಯನ ಬಂಧನ | ತೆಲಂಗಾಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯ ತಲಾಶ್..!
ಶಿಕ್ಷಣ ಕ್ಷೇತ್ರ: ವೆಂಕಟೇಶ್ವರ ಬಿ.ಇಡಿ ಕಾಲೇಜು ಪ್ರಾಚಾರ್ಯ ಡಾ.ಬಿ.ಸಿ.ಅನಂತರಾಮು, ಹಿರಿಯೂರಿನ ಪ್ರೊ.ಎಂ.ಜಿ.ರಂಗಸ್ವಾಮಿ.
ವೈದ್ಯಕೀಯ ಕ್ಷೇತ್ರ: ಡಾ.ನವೀನ್ ಬಸವರಾಜ್ ಸಜ್ಜನ್,
ಸಾಹಿತ್ಯ ಕ್ಷೇತ್ರ: ಹಿರಿಯೂರಿನ ನಿವೃತ್ತ ಪ್ರಾಚಾರ್ಯ ಡಿ.ಸಿ.ಪಾಣಿ, ಚಿತ್ರದುರ್ಗದ ಸಂತಫಿಲೋಮಿನಾ ವಿದ್ಯಾಸಂಸ್ಥೆಯ ಎಸ್.ಫ್ಲೋಮಿನ್ ದಾಸ್, ಹೊಳಲ್ಕೆರೆ ಪಟ್ಟಣದ ಸಿದ್ದವ್ವನಹಳ್ಳಿ ವೀರೇಶ್.
ಇದನ್ನೂ ಓದಿ:ಅಡಿಕೆ ಧಾರಣೆ | ರಾಶಿ ಬೆಲೆಯಲ್ಲಿ ಭರ್ಜರಿ ಏರಿಕೆ
ಕ್ರೀಡಾ ಕ್ಷೇತ್ರ: ಎಂ.ಜೆ.ವೇದಾಂತ್, ಗೋಪಾಲಪುರ ರಸ್ತೆಯ ಫೈಲ್ವಾನ್ ಅಫೀಜ್.
ಚಿತ್ರಕಲೆ ಕ್ಷೇತ್ರ: ಚಳ್ಳಕೆರೆಯ ಆರ್.ವೆಂಕಟೇಶ್ ರೆಡ್ಡಿ, ಚಿತ್ರದುರ್ಗದ ಡಿ.ನಾಗರಾಜ್(ನಾಗು ಆಟ್ರ್ಸ್).
ಸಮಾಜ ಸೇವೆ: ಚಿತ್ರದುರ್ಗದ ವೈ.ವಿ.ಮಹೇಂದ್ರನಾಥ್, ಜೋಗಿಮಟ್ಟಿ ರಸ್ತೆಯ ಈ.ಅಶೋಕ್ ಕುಮಾರ್.
ಇದನ್ನೂ ಓದಿ: 127 ಅಡಿ ದಾಟಿದ ವಿವಿ ಸಾಗರ ನೀರಿನ ಮಟ್ಟ | ಕೋಡಿಗೆ 3 ಅಡಿ ಬಾಕಿ
ಮುದ್ರಣ ಕ್ಷೇತ್ರ: ಹೊಳಲ್ಕೆರೆ ತಾಲೂಕು ತೇಕಲವಟ್ಟಿಯ ಎಂ.ಕೃಷ್ಣಮೂರ್ತಿ.
ಸಂಕೀರ್ಣ ಕ್ಷೇತ್ರ: ರೈತ ಮುಖಂಡ ಇ.ಎನ್.ಲಕ್ಷ್ಮೀಕಾಂತ್, ಕೊಟೆ ಪ್ರವಾಸಿ ಮಾರ್ಗದರ್ಶಿ ಬಿ.ಮೋಹಿದ್ದೀನ್ ಖಾನ್ ಹಾಗೂ ನೀರಾವರಿ ಹೋರಾಟ ಸಮಿತಿಯ ಕೆ.ಆರ್.ದಯಾನಂದ್.
ಕೃಷಿ ಕ್ಷೇತ್ರ: ಚಳ್ಳಕೆರೆ ತಾಲೂಕು ಗುಡಿಹಳ್ಳಿಯ ಬಡಗಿ ರಂಗಪ್ಪ.
ಇದನ್ನೂ ಓದಿ:ನಾಯಕ ನೌಕರರ ಕ್ಷೇಮಾಭಿವೃದ್ಧಿ ಸಂಘದಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ
ಪತ್ರಿಕೋದ್ಯಮ ಕ್ಷೇತ್ರ: ಚಂದ್ರವಳ್ಳಿ ಪತ್ರಿಕೆ ಸಂಪಾದಕ ಹರಿಯಬ್ಬೆ ಹೆಂಜಾರಪ್ಪ, ಉದಯವಾಣಿ ಜಿಲ್ಲಾ ವರದಿಗಾರ ತಿಪ್ಪೇಸ್ವಾಮಿ ನಾಕೀಕೆರೆ, ಸುವರ್ಣ ನ್ಯೂಸ್ ವರದಿಗಾರ ಕಿರಣ್ ತೊಡರನಾಳು, ಬಿ.ಟಿವಿ ವರದಿಗಾರ ಸಿ.ರಾಜಶೇಖರ್ ಅವರಿಗೆ ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಪ್ರಕಟವಾಗಿದೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
