By using this site, you agree to the Privacy Policy and Terms of Use.
Accept
Chitradurga News-Kannada NewsChitradurga News-Kannada NewsChitradurga News-Kannada News
Notification
Font ResizerAa
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Reading: ಸಾಣೇಹಳ್ಳಿ ಮಠದಲ್ಲಿ ಇಷ್ಟಲಿಂಗ ದೀಕ್ಷೆ | ಪಂಡಿತಾರಾಧ್ಯ ಶ್ರೀ ನೇತೃತ್ವ 
Share
Font ResizerAa
Chitradurga News-Kannada NewsChitradurga News-Kannada News
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Search
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Follow US
© 2022 Foxiz News Network. Ruby Design Company. All Rights Reserved.

Home » ಸಾಣೇಹಳ್ಳಿ ಮಠದಲ್ಲಿ ಇಷ್ಟಲಿಂಗ ದೀಕ್ಷೆ | ಪಂಡಿತಾರಾಧ್ಯ ಶ್ರೀ ನೇತೃತ್ವ 

ಹೊಸದುರ್ಗ

ಸಾಣೇಹಳ್ಳಿ ಮಠದಲ್ಲಿ ಇಷ್ಟಲಿಂಗ ದೀಕ್ಷೆ | ಪಂಡಿತಾರಾಧ್ಯ ಶ್ರೀ ನೇತೃತ್ವ 

News Desk Chitradurga News
Last updated: 1 May 2025 19:40
News Desk Chitradurga News
2 months ago
Share
ಸಾಣೇಹಳ್ಳಿ ಮಠದಲ್ಲಿ ಇಷ್ಟಲಿಂಗ ದೀಕ್ಷೆ | ಪಂಡಿತಾರಾಧ್ಯ ಶ್ರೀ ನೇತೃತ್ವ
SHARE
https://chat.whatsapp.com/Jhg5KALiCFpDwME3sTUl7x

CHITRADURGA NEWS | 01 MAY 2025

ಹೊಸದುರ್ಗ: ಇಲ್ಲಿನ ಸಾಣೇಹಳ್ಳಿ ಶ್ರೀಮಠದಲ್ಲಿ ಆಯೋಜಿಸಿದ್ದ ಮಾಸಿಕ ಇಷ್ಟಲಿಂಗ ದೀಕ್ಷಾ ಕಾರ್ಯಕ್ರಮದ ಸಾನಿಧ್ಯ ವಹಿಸಿ, ಧರ್ಮಾಸಕ್ತರಿಗೆ ಇಷ್ಟಲಿಂಗ ದೀಕ್ಷೆ ನೀಡಿ ಮಾತನಾಡಿದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರು, ದೇವರ ಬಗ್ಗೆ ಸರಿಯಾದ ಅರಿವು ನೀಡುವ ಕಾರ್ಯವೇ ದೀಕ್ಷೆ. ಎಲ್ಲರೂ ದೇವರು, ಧರ್ಮದ ಬಗ್ಗೆ ನಂಬಿಕೆ ಇರುವಂಥವರೇ. ಅವರನ್ನು ಆಸ್ತಿಕರು ಎನ್ನುವರು.

Also Read: ನಾಳೆ SSLC RESULT | ನಿಮ್ಮ ಫಲಿತಾಂಶ ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ..

ದೇವರು ಧರ್ಮದ ಬಗ್ಗೆ ಹೊಸ ರೀತಿ ವ್ಯಾಖ್ಯಾನ ನೀಡಿದವರು 12ನೇ ಶತಮಾನದ ಶರಣರು. ದೇವನೊಬ್ಬ ನಾಮ ಹಲವು. ವಿಶ್ವ ಚೈತನ್ಯ ಒಂದೇ. ದೇವರಲ್ಲಿ ಹೆಣ್ಣು, ಗಂಡೆಂಬ ಭೇದವಿಲ್ಲ. ದೇವರು ನಿರಾಕಾರ, ವಿಶ್ವವ್ಯಾಪಿ. ಇಂಥ ದೇವರನ್ನು ಹೊರಗಿನ ಕಣ್ಣುಗಳಿಂದ ನೋಡಲು ಸಾಧ್ಯವಿಲ್ಲ. ಸ್ಥಾವರ ಗುಡಿಗಳು ದೇವರ ತಾಣಗಳಲ್ಲ. ಪ್ರತಿಯೊಬ್ಬರ ಅಂತರಂಗದಲ್ಲಿರುವ ಚೈತನ್ಯವನ್ನೇ ಗುರು ಇಷ್ಟಲಿಂಗದ ಮೂಲಕ ಅಂಗೈಗೆ ಕರುಣಿಸುವರು. ಆದರೆ ಶರಣರು ಇರುವುದನ್ನು ದೇವರು ಎನ್ನುವರು.

ಆದರೆ ಗುಡಿಯಲ್ಲಿರುವ ದೇವರಿಗೆ ಇವ್ಯಾವ ಗುಣಗಳು ಇಲ್ಲ. ಆದರೆ ನಮ್ಮೊಳಗೆ ಇರುವ ಚೈತನ್ಯವೇ ದೇವರೆಂದು ಭಾವಿಸಿ ಅಂಗೈಯಲ್ಲಿ ಇಷ್ಟಲಿಂಗವನ್ನು ಕರುಣಿಸಿ ಈ ದೇಹಕ್ಕೆ ಚೈತನ್ಯ ನೀಡಿದರ ಬಸವಣ್ಣನವರು. ಆದ್ದರಿಂದ ಬಸವಣ್ಣನವರು ಇಷ್ಟಲಿಂಗದ ಜನಕ. ಬಸವಣ್ಣ ಜಗದ ಗುರು. ವಿಶ್ವಗುರು. ಅವರನ್ನು ಸಾಂಸ್ಕೃತಿಕ ನಾಯಕ ಎಂದು ಕರೆಯುವರು. ಪ್ರತಿಯೊಬ್ಬ ವ್ಯಕ್ತಿಗೂ ಸಂಸ್ಕಾರ ಬಹಳ ಮುಖ್ಯ. ಸಂಸ್ಕಾರದಿಂದ ಮಾತ್ರ ಏನಾದರೂ ಬದಲಾವಣೆ ಸಾಧ್ಯ. ಮಾನವನಿಗೆ ಸರಿಯಾದ ಸಂಸ್ಕಾರ ಸಿಕ್ಕರೆ ಮಹಾಮಾನವನಾಗುವನು.

ಬಸವಣ್ಣನವರು ಮನಸ್ಸು ಮಾಡಿದರೆ ವೈಭವದ ದೇವಸ್ಥಾನವನ್ನು ಕಟ್ಟಿಸಬಹುದಿತ್ತು. ಆದರೆ ಅದರಿಂದ ಜನರನ್ನು ದಿಕ್ಕು ತಪ್ಪಿಸಿ ದುರ್ಮಾರ್ಗದ ಕಡೆಗೆ ಕರೆದುಕೊಂಡು ಹೋಗುವುದನ್ನು ಗಮನಿಸಿ ತನ್ನ ದೇಹವನ್ನೇ ದೇವಾಲಯವನ್ನಾಗಿ ಮಾಡಿಕೊಂಡರು. ಹೊರಗಿರುವ ದೇವರನ್ನು ನಮ್ಮೊಳಗಡೆ ಚೈತನ್ಯದ ಮೂಲಕ ತಂದುಕೊಂಡರು.

Also Read: ಅಕ್ಷಯ ತೃತೀಯವು ಈ ರಾಶಿಯವರಿಗೆ ಶುಭ ಯೋಗ ತರಲಿದೆಯಂತೆ

ಭಗವಂತನೇ ತಂದೆ, ತಾಯಿ, ಬಂಧು ಬಳಗವಾಗುವನು. ಅರಿವನ್ನು ಮೂಡಿಸುವವರೇ ನಿಜವಾದ ಗುರು. ಅಲ್ಲಮಪ್ರಭುಗಳು ಬಸವಣ್ಣನವರನ್ನು ಜಗದ ಗುರು ಎಂದು ಒಪ್ಪಿಕೊಂಡಿದ್ದರು. ಆದ್ದರಿಂದಲೇ ಅವರು ವಿಶ್ವದ ಗುರುವಾದರು. ದೇವರು ಬೇರೆ ಅಲ್ಲ, ನಾನು ಬೇರೆ ಅಲ್ಲ ಎನ್ನುವ ಏಕಭಾವ ಪ್ರತಿಯೊಬ್ಬರಲ್ಲು ಬರಬೇಕು.

ವಿಪತ್ತು ಬಂದಾಗ ಮಾತ್ರ ಭಗವಂತನನ್ನು ಪೂಜೆ ಮಾಡದೇ ನಿತ್ಯವೂ ಪೂಜೆ, ಸ್ಮರಣೆ ಮಾಡಿಕೊಳ್ಳಬೇಕು. ದೇವರನ್ನು ಮರೆತರೆ ಹೊಡೆದ ಮಡಿಕೆಯಂತಾಗುವುದು. ಯಾವಾಗಲೂ ದೇವಸ್ಮರಣೆ ಮಾಡಬೇಕೆಂದರು. ದೇವರನ್ನು ಗುಡಿಯಲ್ಲಿ ನದಿಯಲ್ಲಿ, ಮರದಲ್ಲಿ ಕಾಣುವುದಲ್ಲ. ನಮ್ಮೊಳಗಡೆಯೇ ದೇವರನ್ನು ಕಂಡುಕೊಳ್ಳಬೇಕು.

ಬತ್ತುವ ಜಲ ಒಣಗುವ ಮರದ ಪೂಜೆಯನ್ನು ಶರಣರು ವಿರೋಧಿಸಿದರು. ಮೌಢ್ಯಗಳನ್ನು ಪ್ರಶ್ನೆ ಮಾಡುವುದರ ಮೂಲಕ ನಿಜಾಚರಣೆಯ ಬಗ್ಗೆ ಅರಿವು ಮೂಡಿಸಿದರು.

ಲಿಂಗಾಯತ ಧರ್ಮದ ನೀತಿ ಸಿದ್ಧಾಂತಗಳು ಅಷ್ಟಾವರಣ, ಪಂಚಾಚಾರ, ಷಟ್ ಸ್ಥಲಗಳು. ಲಿಂಗಾವಂತರು ಇದರ ಬಗ್ಗೆ ಅರಿವನ್ನು ಬೆಳೆಸಿಕೊಳ್ಳಬೇಕು. ಗುರು ಅರಿವನ್ನು ಮೂಡಿಸಿ ಇಷ್ಟಲಿಂಗವನ್ನು ಕರುಣಿಸುವನು. ಜಂಗಮ ಭಕ್ತರಿಗೆ ಸರಿಯಾದ ಮಾರ್ಗವನ್ನು ತೋರಿಸುವನು. ಪ್ರಸಾದ ಎಂದರೆ ಸರಿಯಾದ ತಿಳಿವಳಿಕೆಯನ್ನು ಪಡಪಡೆದುಕೊಳ್ಳುವುದು.

Also Read: ಪಿತ್ತದೋಷವಿರುವವರ ಆಹಾರ ಹೀಗಿರಲಿ

ಮನಸ್ಸಿನ ಶುದ್ಧಿಯಿಂದ ಆಡುವ ಮಾತುಗಳೆಲ್ಲವೂ ಮಂತ್ರಗಳಾಗುವವು. ಮನುಷ್ಯನಿಗೆ ನೀತಿ ಸಂಹಿತೆ ಇಲ್ಲದೇ ಹೋದರೆ ದಾರಿತಪ್ಪುವನು. ಕಾಯ ಶುದ್ದಿ ಹಾಗೂ ಕಾಯಕ ಶ್ರದ್ಧೆಯನ್ನು ಬೆಳೆಸಿಕೊಂಡರೆ ಮನುಷ್ಯ ನೆಮ್ಮದಿಯ ಬದುಕನ್ನು ಸಾಗಿಸುವನು.

ಇಷ್ಟಲಿಂಗ ಧರಿಸಿದವನು ಕುಲ ಅಳಿಸಿ ಶಿವಕುಲನಾಗುವನು. ನಾವೆಲ್ಲರೂ ಶಿವನ ಮಕ್ಕಳೆಂದು ಭಾವಿಸಿ .ಜಾತ್ಯಾತೀತ ಮನೋಭಾವನೆ ಬೆಳೆಸಿಕೊಳ್ಳಬೇಕು. ಗಣಾಚಾರ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ಬಾಗಿದ ತಲೆ ಮುಗಿದ ಕೈಯಾಗಿಸುವ ಭಾಗ ಬೆಳೆಸಿಕೊಳ್ಳಬೇಕು.

ದೀಕ್ಷೆಯನ್ನು ಪಡೆಯುವ ಉದ್ದೇಶ ಅಂತರಂಗ, ಬಹಿರಂಗ ಶುದ್ದಿಯನ್ನು ಮಾಡಿಕೊಳ್ಳುವುದು. ಮೌಢ್ಯವನ್ನು ದೂರ ಮಾಡಿಕೊಂಡು ಸತ್ ಚಿಂತನೆ ಮಾಡಿಕೊಳ್ಳುವುದು. ದುರ್ಬುದ್ಧಿಯನ್ನು ಬಿಟ್ಟು ಸುಬುದ್ಧಿಯನ್ನು ಬೆಳೆಸಿಕೊಳ್ಳುವುದು.

12ನೇ ಶತಮಾನದಲ್ಲಿ ಬಸವಾದಿ ಶಿವಶರಣರು ಸಂಸ್ಕಾರ ನೀಡುವ ಸಲುವಾಗಿ `ಅನುಭವ ಮಂಟಪ’ ಸ್ಥಾಪಿಸಿದರು. ಅನುಭವ ಮಂಟಪ ಕಟ್ಟಡವಲ್ಲ; ವಿಚಾರ ವಿನಿಮಯಗಳ ಮಥನ. ಆ ಸಂಸ್ಕಾರದ ಫಲವಾಗಿ ಸಾಮಾನ್ಯನೂ ಅಸಾಮಾನ್ಯ, ಶರಣ, ಶರಣೆ, ಅನುಭಾವಿಗಳಾದರು. ಅಂಥವರೆಲ್ಲರೂ ಸೇರಿ ಹೊಸ ಸಮಾಜವನ್ನು ಸೃಷ್ಟಿಸಲು ಸಾಧ್ಯವಾಯಿತು. ಹದಗೆಡುವ, ಅಧೋಗತಿಗೆ ಹೋಗುವ ಬದುಕನ್ನು ವಿಕಾಸಗೊಳಿಸುವ ನಿಟ್ಟಿನಲ್ಲಿ ಈರೀತಿಯ ಸಂಸ್ಕಾರದ ಅಗತ್ಯವಿದೆ. ಅರಿವಿನ ಮೂಲಕ ಅಜ್ಞಾನವನ್ನು ನಿವಾರಿಸಿಕೊಳ್ಳಬೇಕು. ದೈಹಿಕ ಸ್ವಚ್ಛತೆ ಮುಖ್ಯ.

Also Read: ಚರ್ಮದ ಅಲರ್ಜಿ ಮತ್ತು ಶಿಲೀಂಧ್ರಗಳ ಸೋಂಕಿಗೆ ರೋಸ್ ವಾಟರ್ ಒಳ್ಳೆಯದೇ? 

ಮೌಢ್ಯವನ್ನು ನಂಬುವ, ಭವಿಷ್ಯ ಹೇಳುವ, ಕೇಳುವುದರ ಮೂಲಕ ಬದುಕನ್ನು ಬದಲಾಯಿಸಲಾಗುವುದಿಲ್ಲ. ಇಷ್ಟಲಿಂಗ ದೀಕ್ಷೆ ಕಡೆದುಕೊಂಡವರು ಲಿಂಗಾವಂತರಾಗಿ ವೈಜ್ಞಾನಿಕವಾಗಿ ಆಲೋಚನೆ ಮಾಡುವ ಶಕ್ತಿಯನ್ನು ಬೆಳೆಸಿಕೊಂಡರೆ ಖಂಡಿತ ಬದುಕನ್ನು ಬದಲಾಯಿಸಿಕೊಳ್ಳಬಹುದು.

ಪಂಚಾಚಾರಗಳೆಂದರೆ ಲಿಂಗಾಚಾರ, ಶಿವಾಚಾರ, ಸದಾಚಾರ, ಗಣಾಚಾರ, ಭೃತ್ಯಾಚಾರ. ಇವು ಬದುಕಿನ ನೀತಿಸಂಹಿತೆಗಳು. ಇವುಗಳ ಅನುಸಾರವಾಗಿ ಬದುಕನ್ನು ಸಾಗಿಸಿದರೆ ಬದುಕು ಸಾರ್ಥಕವಾಗುವುದು ಎಂದರು.

ಸಿರಿಮಠ ದೀಕ್ಷಾ ಕಾರ್ಯಕ್ರಮ ನಡೆಸಿಕೊಟ್ಟರು.

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» Chitradurga News gmail

chitradurganews23@gmail.com

» Whatsapp Number

TAGGED:ChitradurgaChitradurga newsChitradurga UpdatesHosadurgaIshtalinga initiationKannada Latest NewsKannada NewsPanditaradhya Shivacharya Srisanehalliಇಷ್ಟಲಿಂಗ ದೀಕ್ಷೆಕನ್ನಡ ನ್ಯೂಸ್ಕನ್ನಡ ಲೇಟೆಸ್ಟ್ ನ್ಯೂಸ್ಕನ್ನಡ ಸುದ್ದಿಚಿತ್ರದುರ್ಗಚಿತ್ರದುರ್ಗ ನ್ಯೂಸ್ಪಂಡಿತಾರಾಧ್ಯ ಶಿವಾಚಾರ್ಯ ಶ್ರೀಸಾಣೇಹಳ್ಳಿಹೊಸದುರ್ಗ
Share This Article
Facebook Email Print
Previous Article AI IMAGE ನಾಳೆ SSLC RESULT | ನಿಮ್ಮ ಫಲಿತಾಂಶ ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ..
Next Article ನಕಲಿ ಕಾರ್ಮಿಕ ಕಾರ್ಡ್ ಪತ್ತೆ ಮಾಡಿ | ಶಾಸಕ ವೀರೇಂದ್ರ (ಪಪ್ಪಿ)
Leave a Comment

Leave a Reply Cancel reply

Your email address will not be published. Required fields are marked *

arecanut price list
ಅಡಿಕೆ ಧಾರಣೆ | ಜೂನ್‌ 16 | ರಾಜ್ಯದ ಯಾವ ಮಾರುಕಟ್ಟೆಯಲ್ಲಿ ಎಷ್ಟು ರೇಟ್‌
ಅಡಕೆ ಧಾರಣೆ
UPSC ಪರೀಕ್ಷೆ ತರಬೇತಿಗೆ ಅರ್ಜಿ ಆಹ್ವಾನ
ಮುಖ್ಯ ಸುದ್ದಿ
ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾಗಿ ಪಾಪೇಶ್ ಅವಿರೋಧ ಆಯ್ಕೆ
ಮುಖ್ಯ ಸುದ್ದಿ
ಖಾಸಗಿ ಕಂಪನಿಗಳಲ್ಲಿ ಉದ್ಯೋಗ | ಜೂ.19 ರಂದು ನೇರ ನೇಮಕಾತಿ ಸಂದರ್ಶನ
ಮುಖ್ಯ ಸುದ್ದಿ
© Chitradurga News. Ruby Design Company. All Rights Reserved.
Welcome Back!

Sign in to your account

Username or Email Address
Password

Lost your password?

Not a member? Sign Up