
CHITRADURGA NEWS | 13 JANUARY 2026
ಚಿತ್ರದುರ್ಗ: ಜಾಗತಿಕ ಲಿಂಗಾಯತ ಮಹಾಸಭಾದ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕು ಘಟಕದ ಪದಾಧಿಕಾರಿಗಳು ಹೊರತಂದಿರುವ 2026ರ ತೂಗು ದಿನದರ್ಶಿಕೆ (ಕ್ಯಾಲೆಂಡರ್)ಯನ್ನು ಶ್ರೀ ಜಗದ್ಗುರು ಮುರುಘಾರಾಜೇಂದ್ರ ಬೃಹನ್ಮಠದಲ್ಲಿ ಆಡಳಿತ ಮಂಡಳಿಯ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿ ಬಿಡುಗಡೆಗೊಳಿಸಿದರು.
ಇದನ್ನೂ ಓದಿ: ಅಡಿಕೆ ಧಾರಣೆ | 13 ಜನವರಿ | ಭೀಮಸಮುದ್ರ ಸೇರಿ ರಾಜ್ಯದ ಅಡಿಕೆ ಮಾರ್ಕೇಟ್ ರೇಟ್

ಲಿಂಗಾಯತ ಧರ್ಮ, ಅದರ ಉದ್ದೇಶ, ಅದರಿಂದಾಗುವ ಉಪಯೋಗ ಸೇರಿದಂತೆ ವೈಚಾರಿಕ ನಿಲುವುಗಳ ವಿಶೇಷ ಮಾಹಿತಿ ಇದೆ ಎಂದು ಸ್ವಾಮೀಜಿ ನುಡಿದರು.
ಈ ದಿನದರ್ಶಿಕೆಯಲ್ಲಿ 12 ತಿಂಗಳ ದಿನಾಂಕ ಸಾಂಕೇತಿಕವಾಗಿದ್ದು ರಾಷ್ಟ್ರೀಯ ಹಾಗೂ ರಾಜ್ಯದ ಹಬ್ಬಗಳು ಹಾಗೂ ಶರಣ ಜಯಂತಿಗಳು ಅಷ್ಟೇ ನಮೂದಿಸಲಾಗಿದೆ. ಉಳಿದಂತೆ ಜನವರಿ ತಿಂಗಳಲ್ಲಿ ಬಸವಸಂಸ್ಕೃತಿ ಅಭಿಯಾನದ ಉದ್ದೇಶಗಳಾದ ಸ್ತ್ರೀ-ಪುರುಷ ಸಮಾನತೆ, ಬಸವಣ್ಣನವರ ಜಾತ್ಯಾತೀತ ಭಾರತದ ಕಲ್ಪನೆ, ದಾಸೋಹತತ್ತ್ವ ಹಾಗೂ ಕಾಯಕವೇ ಕೈಲಾಸ ವಿಚಾರಗಳ ಬಗ್ಗೆ ಮಾಹಿತಿ ಇದೆ.
ಫೆಬ್ರವರಿ ತಿಂಗಳಲ್ಲಿ ಬಸವಾದಿ ಶರಣರ ದೃಷ್ಟಿಯಲ್ಲಿ ದೇವರು ಎಂದರೆ ಯಾರು? ಅವರು ಸ್ಥಾವರವನ್ನು ಏಕೆ ಕೈಬಿಟ್ಟು ಇಷ್ಟಲಿಂಗಕ್ಕೆ ಮಹತ್ವ ಕೊಟ್ಟರೆಂಬ ವಿಚಾರ, ಮಾರ್ಚ್ ತಿಂಗಳಲ್ಲಿ ಲಿಂಗಾಯತ ಧರ್ಮದ ಬಗ್ಗೆ ಉಲ್ಲೇಖವಿದೆ. ಏಪ್ರಿಲ್ನಲ್ಲಿ 12ನೇ ಶತಮಾನದಲ್ಲಿ ಬಸವಾದಿ ಶರಣರು ತಳಸಮುದಾಯವನ್ನು ಮುಖ್ಯವಾಹಿನಿಗೆ ತರಲು ಪ್ರಯತ್ನಿಸಿದ ವಿಚಾರವಿದೆ.
ಇದನ್ನೂ ಓದಿ: ಸರ್ಕಾರಿ ಅಧಿಕಾರಿಗಳ ವಿರುದ್ಧದ ಅನಾಮಿಕ ದೂರುಗಳ ಪರಿಗಣನೆ ಬೇಡ | ADC ಕುಮಾರಸ್ವಾಮಿ
ಮೇ ತಿಂಗಳಲ್ಲಿ 12ನೇ ಶತಮಾನದ ಎಲ್ಲರ ಪ್ರೀತಿಯ ಮತ್ತು ಚುಂಬಕ ಶಕ್ತಿಯಾಗಿ ಕಲ್ಯಾಣಕ್ಕೆ ನಾಡಿನೆಲ್ಲೆಡೆಯಿಂದ ಕರೆಯಿಸಿಕೊಂಡ ಬಸವಣ್ಣನವರ ಬಗ್ಗೆ ಮಾಹಿತಿ, ಜೂನ್ ತಿಂಗಳಲ್ಲಿ ಬಸವಣ್ಣನವರು ದೇವರೇ, ಪವಾಡ ಪುರುಷರೆ? ಹೀಗೆ ಹಲವು ವಿಚಾರಗಳ ಮೇಲೆ ಬೆಳಕು ಚೆಲ್ಲುವ ವಿವರವಿದೆ.
ಜುಲೈ ತಿಂಗಳಲ್ಲಿ ಲಿಂಗಾಯತ ಧರ್ಮದ ಅಡಿಯಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ಹೋರಾಟ ಮಾಡುತ್ತಿರುವ ಬಗ್ಗೆ, ಆ ಬಗ್ಗೆ ಪ್ರಯೋಜನ, ಸೌಲಭ್ಯ ಹಾಗೂ ಧಾರ್ಮಿಕ ವಿಚಾರವಾಗಿ ವಿವರ ನೀಡಲಾಗಿದ್ದು, ಆಗಸ್ಟ್ನಲ್ಲಿ ದೇವರ ಹೆಸರಲ್ಲಿ ಪ್ರಾಣಿಬಲಿ ಕೊಡುವುದು ಎಷ್ಟು ಸರಿ ಎಂಬುದಿದೆ.
ಸೆಪ್ಟೆಂಬರ್ನಲ್ಲಿ ಕೆಲಮಾನವರು ತಾವು ನಂಬಿರುವ ತಮ್ಮ ಸುಖ ದುಃಖಗಳಿಗೆ ಗ್ರಹಗಳ ಪ್ರಭಾವ ಕಾರಣವೆ? ಎಂಬ ಬರಹವಿದೆ. ಅಕ್ಟೋಬರ್ನಲ್ಲಿ ರಾಶಿ ಚಕ್ರದ ಬಗ್ಗೆ ವೈಜ್ಞಾನಿಕ ವಿವರಣೆಯೂ ಇದೆ.
ನವೆಂಬರ್ ತಿಂಗಳಲ್ಲಿ ವಾಸ್ತು ಎಂಬ ವಿಚಾರವಾಗಿ ಎನ್.ಶಂಕರಪ್ಪ ಅವರ ವಿಚಾರವಿದೆ. ಇನ್ನು ಡಿಸೆಂಬರ್ನಲ್ಲಿ ಕಾಯಕ ಆಧಾರಿತ ಲಿಂಗಾಯತ ಧರ್ಮದ 102 ಪಂಗಡಗಳ ಪಟ್ಟಿ ಮುದ್ರಿಸಲಾಗಿದೆ. ದಿನದ ದಿನಾಂಕದ ಜತೆಗೆ ಒಂದು ಉಪಯುಕ್ತ ಮಾಹಿತಿ ನೀಡಿ ಮಾಹಿತಿ ತಿಳಿದುಕೊಳ್ಳಲು ಸಹಕಾರಿಯಾಗಿದೆ.
ಇದನ್ನೂ ಓದಿ: ಚಿತ್ರದುರ್ಗ ಮಾರುಕಟ್ಟೆ | ಜನವರಿ 13 | ಹತ್ತಿ ರೇಟ್ ಎಷ್ಟಿದೆ?
ಈ ಸಂದರ್ಭದಲ್ಲಿ ಘಟಕದ ಅಧ್ಯಕ್ಷರಾದ ಜೆ.ಮಲ್ಲೇಶ್ ರೇಷ್ಮೆರಾಜ, ಉಪಾಧ್ಯಕ್ಷರಾದ ಚಂದ್ರಪ್ಪ, ಪ್ರಧಾನ ಕಾರ್ಯದರ್ಶಿ ಎಂ.ರಂಗನಾಥ್, ಖಜಾಂಚಿ ಮುರುಘೇಶ್, ನಿರ್ದೇಶಕರಾದ ಬಸವರಾಜ, ಮಹಾಲಿಂಗಪ್ಪ, ಮಂಜುನಾಥ, ಜಗದೀಶ್ವರಪ್ಪ ಸೇರಿದಂತೆ ಚಿತ್ರದುರ್ಗ ಜಿಲ್ಲಾ ಘಟಕದ ಪದಾಧಿಕಾರಿಗಳಾದ ಬಸವರಾಜ ಕಟ್ಟಿ ಹಾಗೂ ಜಿ.ಟಿ.ನಂದೀಶ್ ಭಾಗವಹಿಸಿದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
