
CHITRADURGA NEWS | 17 JUNE 2026
ಚಿತ್ರದುರ್ಗ: ಅಭಿವೃದ್ಧಿಯಲ್ಲಿ ಮಾದರಿಯಾಗಿರುವ ಚಳ್ಳಕೆರೆಯ ಸೌಮ್ಯ ಸ್ವಭಾವದ ಶಾಸಕ ಟಿ.ರಘುಮೂರ್ತಿ ಅವರ ಮೇಲೆ ಪಕ್ಕದ ಮೊಳಕಾಲ್ಮೂರು ಶಾಸಕರು ಲಘುವಾಗಿ ಮಾತನಾಡಿರುವುದು ಬೇಸರದ ಸಂಗತಿ ಎಂದು ಚಿತ್ರದುರ್ಗ ಜಿಲ್ಲಾ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಎ.ನಾಗರಾಜ್ ಅಸಮಧಾನ ವ್ಯಕ್ತಪಡಿಸಿದರು.

ಇದನ್ನೂ ಓದಿ: ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘದ ನೂತನ ಅಧ್ಯಕ್ಷರಾದ ಬಸವರಾಜ್ ಗೆ ಸನ್ಮಾನ
ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಳ್ಳಕೆರೆಯಲ್ಲಿ ನೂರಾರು ಕೋಟಿ ರೂ. ಅನುದಾನ ತಂದು ಹಿಂದೆಂದೂ ಕಾಣದಂತಹ ಅಭಿವೃದ್ಧಿ ಕೆಲಸಗಳನ್ನು ಮಾಡಿರುವ ಟಿ.ರಘುಮೂರ್ತಿ ಅವರು, ಜಿಲ್ಲೆಯ ಸಚಿವರಾದರೆ ಜಿಲ್ಲಾ ಅಭಿವೃದ್ಧಿ ಆಗುವುದರಲ್ಲಿ ಎರಡು ಮಾತಿಲ್ಲ. ಅವರ ಅಭಿವೃದ್ಧಿ ಕಾರ್ಯಗಳನ್ನು ನೋಡಿ ಅವರಿಗೆ ಸಚಿವ ಸ್ಥಾನ ನೀಡಬೇಕು ಎನ್ನುವುದು ನಮ್ಮ ಬೇಡಿಕೆ ಎಂದರು.
ಇತ್ತೀಚೆಗೆ ಕಾರ್ಯಕರ್ತರ ಸಭೆ ನಡೆಸಿದ ಮೊಳಕಾಲ್ಮೂರು ಶಾಸಕರು, ರಘುಮೂರ್ತಿ ಅವರ ಜನ್ಮ ದಿನಾಚರಣೆ ಸಂದರ್ಭದಲ್ಲಿ ಆಗಮಿಸಿದ್ದ ಮಠಾಧೀಶರು ಆಶೀರ್ವಧಿಸಿದ್ದು, ಅವರ ಕಾಲಿಗೆ ಬಿದ್ದಿರುವ ಬಗ್ಗೆ ಹಗುರವಾಗಿ ಮಾತನಾಡಿದ್ದಾರೆ. ಇದು ಸರಿಯಲ್ಲ. ಅವಕಾಶ ಸಿಕ್ಕಿದರೆ ಹಿರಿಯರಾಗಿರುವ ಏಳೆಂಟು ಬಾರಿ ಶಾಸಕರಾಗಿರುವ ಅವರೇ ಸಚಿವರಾಗಲಿ. ಸ್ವಾಗತಿಸುತ್ತೇವೆ. ಆದರೆ, ಮತ್ತೊಬ್ಬರ ಬಗ್ಗೆ ಲಘುವಾಗಿ ಮಾತನಾಡುವುದು ಸೂಟು, ಬೂಟು ಎಂದು ಮಾತನಾಡುವುದು ತರವಲ್ಲ ಎಂದರು.
ಟಿ.ರಘುಮೂರ್ತಿ ಅವರು, ಚಳ್ಳಕೆರೆಯಲ್ಲಿ ಯುಜಿಡಿ ಕಾಮಗಾರಿಗಳು, ತಾಲೂಕು ಕಚೇರಿ, ಕುರುಬ, ಯಾದವ, ಒಕ್ಕಲಿಗ ಸಮಾಜದ ಭವನಗಳು, ಕುಡಿಯುವ ನೀರಿನ ವ್ಯವಸ್ಥೆ. ಆಟದ ಮೈದಾನ, ತಾಂತ್ರಿಕ ಕಾಲೇಜು, ಜಿಟಿಟಿಸಿ, ಬೀದಿ ದೀಪ, ವೇದಾವತಿ ನದಿಗೆ ೭ ಕಡೆಗಳಲ್ಲಿ ಬ್ಯಾರೇಜ್ ನಿರ್ಮಾಣ ಮಾಡಿ ಕಿಲೋ ಮೀಟರ್ವರೆಗೆ ನೀರು ನಿಲ್ಲವಂತೆ ಮಾಡಿದ್ದರಿಂದ ಹಸಿರು ವಾತಾವರಣ ಮನೆ ಮಾಡಿದೆ. ರೈತರು ತೋಟಗಾರಿಕೆ ಬೆಳೆಗಳತ್ತ ಮುಖ ಮಾಡಿದ್ದಾರೆ ಎಂದು ಅಭಿವೃದ್ಧಿ ಕಾರ್ಯಗಳನ್ನು ವಿವರಿಸಿದರು.
ಇದನ್ನೂ ಓದಿ: ಜಿಲ್ಲೆಯ ಶಾಲೆ-ಕಾಲೇಜು, ದೇವಸ್ಥಾನ, ಸರ್ಕಾರಿ ಕಚೇರಿಗಳನ್ನು ತಂಬಾಕು ಮುಕ್ತಗೊಳಿಸಿ
ಮುಖಂಡ ಚೌಳೂರು ಪ್ರಕಾಶ್ ಮಾತನಾಡಿ, ಏಳು ಬಾರಿ ಗೆದ್ದವರು ಮಾಡದ ಅಭಿವೃದ್ಧಿ ಕೆಲಸಗಳನ್ನು ನಮ್ಮ ಶಾಸಕರು ಮಾಡಿದ್ದಾರೆ. ಅವರ ಕೆಲಸಗಳೇ ಮಾತನಾಡುತ್ತಿವೆ. ಅಂಥವರ ತೇಜೋವಧೆ ಮಾಡುವುದು ಸರಿಯಲ್ಲ ಎಂದರು.
ಹಿರಿತನವಿದ್ದರೆ, ಅವರ ಪ್ರಾಮಾಣಿಕತೆಯನ್ನು ಪಕ್ಚದ ವರಿಷ್ಟರ ಮುಂದೆ ಹೇಳಿ ಸಚಿವರಾಗುವುದಾದರೆ ಆಗಲಿ. ಆದರಡ, ಸೌಮ್ಯ ಸ್ವಭಾವದ ರಘುಮೂರ್ತಿ ಅವರ ಮೇಲೆ ಆರೋಪ ಮಾಡುವುದು ಸರಿಯಲ್ಲ.
ವಿವಿಧ ಜಾತಿಯ ಮಠಾಧೀಶರು ಬಂದು ಆಶೀರ್ವದಿಸಿದಾಗ ಅವರ ಬಗ್ಗೆ ಲಘುವಾಗಿ ಮಾತನಾಡುವುದು ಖಂಡನೀಯ. ಈ ಮಾತುಗಳನ್ನು ನಾವು ಒಪ್ಪುವುದಿಲ್ಲ. ನಮ್ಮ ಶಾಸಕರು ಮಾಡಿರುವ ಕೆಲಸಗಳ ಸಾಕ್ಷಿಗುಡ್ಡೆಗಳು ಬೇಕಾದಷ್ಟಿವೆ. ಅವುಗಳ ಆಧಾರದ ಮೇಲೆ ಸಚಿವ ಸ್ಥಾನ ಕೇಲುತ್ತಿದ್ದೇವೆ ಎಂದರು.
ಇದನ್ನೂ ಓದಿ: ನಾಲ್ಕು ವರ್ಷದ ಬಾಲಕ ಸಾವು | ಬಿಜೆಪಿ ಮಂಡಲ ಅಧ್ಯಕ್ಷ ಅಭಿನಂದನ್ ಪುತ್ರ
ಮುಖಂಡ ತ್ಯಾಗರಾಜ್ ಮಾತನಾಡಿ, ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಅವರು ತಾಲೂಕಿನಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಅವರಿಗೆ ಸಚಿವ ಸ್ಥಾನ ಸಿಕ್ಕಿದರೆ ಇಡೀ ಜಿಲ್ಲೆಗೆ ಹೊಸ ಸ್ವರೂಪ ಕೊಡುತ್ತಾರೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಮಠಾಧೀಶರು ಅವರನ್ನು ಸಚಿವರಾಗಲಿ ಎಂದು ಹರಸಿದ್ದಾರೆ. ಆದರೆ, ಇದನ್ನು ಸಹಿಸದೆ ಲಘುವಾಗಿ ಮಾತನಾಡಿರುವುದು ಶಾಸಕರ ಅಭಿಮಾನಿಗಳಿಗೆ ಬೇಸರ ತರಿಸಿದೆ ಎಂದು ಹೇಳಿದರು.
ಚಳ್ಳಕೆರೆ ತಾಲೂಕು ಗ್ಯಾರೆಂಟಿ ಸಮಿತಿ ಸದಸ್ಯ ಅನಿಲ್ ಸುದ್ದಿಗೋಷ್ಠಿಯಲ್ಲಿದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
