
CHITRADURGA NEWS | 31 OCTOBER 2025
ಚಿತ್ರದುರ್ಗ: ಹೊಳಲ್ಕೆರೆ ತಾಲ್ಲೂಕಿನ ಈಚಘಟ್ಟ ಗ್ರಾಮದಲ್ಲಿ ಬಸವೋತ್ಸವ ಹಾಗೂ ಮುರುಘೇಂದ್ರ ಶಿವಯೋಗಿಗಳವರ ಜಯಂತ್ಯುತ್ಸವದ ಅಂಗವಾಗಿ ಏರ್ಪಡಿಸಿದ್ದ ಪ್ರಚಾರ ಕಾರ್ಯ ಹಾಗೂ ಗ್ರಾಮದ ವೀರಭದ್ರೇಶ್ವರಸ್ವಾಮಿ ದೇವಾಲಯದಲ್ಲಿ ಭಕ್ತರ ಸಭೆ ಜರುಗಿತು.
ಇದನ್ನೂ ಓದಿ: 26 ಸಾಧಕರಿಗೆ ಜಿಲ್ಲಾ ಕನ್ನಡ ರಾಜ್ಯೋತ್ಸವ ಪುರಸ್ಕಾರ
ಈ ವೇಳೆ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಸಾಧಕ ಶ್ರೀಗಳಾಗಿರುವ ಬಸವ ಮುರುಘೇಂದ್ರ ಸ್ವಾಮೀಜಿ ಭಾಗವಹಿಸಿ ಮಾತನಾಡಿ, ಗೌತಮ ಸಂಸಾರ, ರಾಜ್ಯಭಾರ ಎಲ್ಲ ವೈಭವವನ್ನು ತ್ಯಜಿಸಿ ಕೆಲ ಕಾರಣಗಳಿಗೆ ಉತ್ತರ ಹುಡುಕಲು ಕೆಲವರ್ಷಗಳ ತಪಸ್ಸನ್ನಾಚರಿಸಿ ಜ್ಞಾನೋದಯವಾಗಿ ಬುದ್ಧನೆನಿಸಿಕೊಂಡದ್ದು ಒಂದು ಇತಿಹಾಸ.
ನಂತರದಲ್ಲಿ ಬಸವಣ್ಣ ಸಂಸಾರದಲ್ಲಿದ್ದು ಬಿಜ್ಜಳನ ಆಸ್ಥಾನದಲ್ಲಿ ಮಂತ್ರಿಯಾಗಿ ಬಾಲ್ಯದಲ್ಲಿನ ಸಂಪ್ರದಾಯಕ್ಕೆ ಸೆಡ್ಡು ಹೊಡೆದು ಹೊಸ ವಿಚಾರಗಳಿಗೆ ಅನುಭವ ಮಂಟಪದ ಮೂಲಕ ಅವಕಾಶ ನೀಡಿ ದೇಶವೇ ಕಲ್ಯಾಣದತ್ತ ನೋಡುವಂತೆ ಮಾಡಿದ್ದು ಮತ್ತೊಂದು ಚರಿತ್ರೆ.
ಅದರಂತೆ ಈ ನಾಡಿನಲ್ಲಿ 18-19ನೇ ಶತಮಾನದಲ್ಲಿ ಬಸವಣ್ಣನ ನಿಜ ವಾರಸುದಾರರಾಗಿ ಅವರ ಇಡೀ ತತ್ವವನ್ನು ಆಚರಣೆಗೆ ತಂದವರು ಅಥಣಿ ಮುರುಘೇಂದ್ರ ಶಿವಯೋಗಿಗಳು ಎಂದು ದಾರ್ಶನಿಕರ ವಿಚಾರಧಾರೆಯನ್ನು ಮೆಲುಕು ಹಾಕಿದರು.
ಬೆಳಗಾವಿ ನಾಡಿನ ಪುಣ್ಯಪುರುಷ ಚಿತ್ರದುರ್ಗ ಅದು ಹೊಳಲ್ಕೆರೆ ತಾಲ್ಲೂಕಿನ ಈಚಘಟ್ಟ ಗ್ರಾಮಕ್ಕೆ ಅವರ ವಿಚಾರಧಾರೆ ಬಂದಿದೆ ಎಂದರೆ ನಿಮ್ಮೂರಿನ ಭಾಗ್ಯವೇ ಸರಿ. ಇವರು ಅಂತಿಥವರಲ್ಲ. ನೋಡಲು ಸಾಮಾನ್ಯರಂತೆ ಕಂಡರೂ ಒಳಗಿನ ಚೈತನ್ಯ ಅಸಮಾನ್ಯವಾದುದಾಗಿತ್ತು. ಬುದ್ಧರಂತೆ ತಪಸ್ಸಿಗೆ ಹೆಚ್ಚಿನ ಮಹತ್ವ ನೀಡಿ ಅದರಿಂದ ಪ್ರಭಾವ ಹೊಂದಿ ಅನೇಕರ ಬಾಳಿನಲ್ಲಿ ಬೆಳಕು ಭರವಸೆ ಮೂಡಿಸಿದ ಘನಮಹಿಮರು.
ಇದನ್ನೂ ಓದಿ: TAPCMS | ಅಧ್ಯಕ್ಷ, ಉಪಾಧ್ಯಕ್ಷ, ನಿರ್ದೇಶಕರು ಅವಿರೋಧ ಆಯ್ಕೆ
ಅಂತಹ ಚರಿತ್ರ ಪುರುಷರ ಜಯಂತ್ಯುತ್ಸವದ ಅಂಗವಾಗಿ ಬೆಂಗಳೂರಿನ ವಿಜಯನಗರದ ಹಂಪಿ ಕ್ರೀಡಾಂಗಣದಲ್ಲಿ (ಚಂದ್ರಶೇಖರ್ ಆಜಾದ್ ವೇದಿಕೆಯಲ್ಲಿ) ನವೆಂಬರ್ 14, 15 ಮತ್ತು 16ರಂದು ಮೂರುದಿನಗಳ ಕಾಲ ಬಸವೋತ್ಸವವನ್ನು ಹಮ್ಮಿಕೊಳ್ಳಲಾಗಿದೆ.
ಇವರ ಮಹಿಮೆಯಿಂದ ಚಿತ್ರದುರ್ಗ ಬೃಹನ್ಮಠದ ಜಯದೇವರು, ಜಯವಿಭವರು ಹಾಗೂ ಮಲ್ಲಿಕಾರ್ಜುನ ಮುರುಘರಾಜೇಂದ್ರ ಶ್ರೀಗಳವರು ಪೀಠವನ್ನಲಂಕರಿಸಿದ್ದನ್ನು ಸ್ಮರಿಸಬಹುದಾಗಿದೆ ಎಂದರು.
ರಾಷ್ಟ್ರನಾಯಕ ಬಾಲಗಂಗಾಧರ ತಿಲಕರ ಭೇಟಿ ಹಾಗೂ ಧೈರ್ಯ ನೀಡಿದ್ದು, ಕರ್ನಾಟದ ಗಾಂಧಿ ಖ್ಯಾತಿಯ ಹರ್ಡೇಕರ್ ಮಂಜಪ್ಪನವರಿಗೆ ಲಿಂಗದೀಕ್ಷೆ(ಆಧ್ಯಾತ್ಮ) ನೀಡಿದ್ದು, ಇದರಿಂದ ಪ್ರೇರಿತರಾದ ಹರ್ಡೇಕರ್ ಮಂಜಪ್ಪನವರು ಅಂದಿನ ಮೃತ್ಯುಂಜಯಪ್ಪಗಳು ಸೇರಿ ದಾವಣಗೆರೆ ವಿರಕ್ತಮಠದಲ್ಲಿ ಪ್ರಥಮವಾಗಿ ಬಸವ ಜಯಂತಿ ಆಚರಿಸಿದ್ದು, ಶಿರಸಂಗಿಯ ಲಿಂಗರಾಜ ದೇಸಾಯಿಯವರಿಗೆ ದಾಸೋಹ ತತ್ವಗೈಯ್ಯಲು ಪ್ರೇರಣೆ ನೀಡಿದ್ದು, ಅಂದಿನ ಶ್ರೀಶೈಲ ಪೀಠದ ವಾಗೀಶ ಪಂಡಿತಾರಾಧ್ಯ ಶ್ರೀಗಳವರಿಗೆ ಜಗದ್ಗುರುವಾಗುತ್ತೀಯಾ ಎಂದು ಹರಸಿದ್ದು, ಬಿ.ಡಿ. ಜತ್ತಿಯವರಿಗೆ ಆಶೀರ್ವದಿಸಿದ್ದು, ಇವೆಲ್ಲವೂ ಅವರ ತಪಸ್ಸಿನ ಫಲವೆಂದೇ ಹೇಳಬಹುದು.
ತಮ್ಮ ಬದುಕಿನಲ್ಲಿ ಬಸವಣ್ಣನವರನ್ನು ಉಸಿರಾಗಿಸಿಕೊಂಡ ಕಾರಣ ಜಯಂತಿ ಜತೆಗೆ ಬಸವೋತ್ಸವ ಎನ್ನುವ ಹೆಸರಿನೊಂದಿಗೆ ಈ ಕಾರ್ಯಕ್ರಮವನ್ನು ಅಥಣಿಯ ಗಚ್ಚಿನಮಠದ ಶ್ರೀ ಶಿವಬಸವ ಸ್ವಾಮಿಗಳವರ ನೇತೃತ್ವದಲ್ಲಿ ಬೃಹತ್ ಸಮಾವೇಶ ನಡೆಯಲಿದೆ. ಗ್ರಾಮದ ಹಾಗೂ ಸುತ್ತಮುತ್ತಲಿನ ಜನತೆ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಎಂದು ಸಲಹೆ ಮಾಡಿದರು.
ಇದನ್ನೂ ಓದಿ: ಸರ್ದಾರ್ ವಲ್ಲಭಬಾಯಿ ಪಟೇಲ್ | ನ.12 ರಂದು ಏಕತೆಯ ಸಂದೇಶ ಸಾರಲು ಪಾದಯಾತ್ರೆ | ಸಂಸದ ಗೋವಿಂದ ಕಾರಜೋಳ
ಈ ಸಂದರ್ಭದಲ್ಲಿ ಗ್ರಾಮದ ಮಾಜಿ ಛೇರ್ಮನ್ ಟಿ.ವೀರಭದ್ರಪ್ಪ, ಎಂ.ಜೆ.ನಂಜಪ್ಪಯ್ಯ, ದಗ್ಗೆ ಮಂಜುನಾಥ್, ಎಪಿಎಂಸಿಯ ಪದಾಧಿಕಾರಿ ಯು.ಎಸ್. ಅಂಕಳಪ್ಪ, ಜಿ.ಟಿ. ಪ್ರಕಾಶ್, ಡಿ.ಎಂ.ಮಲ್ಲಿಕಾರ್ಜುನಪ್ಪ, ಪರಮೇಶ್, ಬಸಣ್ಣ, ಎನ್.ತಿಪ್ಪೇಸ್ವಾಮಿ, ಉಜ್ಜಿನಸ್ವಾಮಿ, ಕೆ.ಮಂಜುನಾಥ, ಪ್ರಸನ್ನ, ವೀರಭದ್ರಪ್ಪ, ಪ್ರಧಾನ ಅರ್ಚಕ ವೀರಭದ್ರಪ್ಪ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.
ಇದಕ್ಕು ಮುನ್ನ ಗ್ರಾಮದ ಪ್ರಧಾನ ಬೀದಿಯಲ್ಲಿ ವಾದ್ಯಗಳ ಮೂಲಕ ಶ್ರೀ ಮುರಘೇಂದ್ರ ಶಿವಯೋಗಿಗಳವರ ಭಾವಚಿತ್ರದ ಮೆರವಣಿಗೆಯು ಬಸವ ಮುರುಘೇಂದ್ರ ಸ್ವಾಮಿಗಳ ನೇತೃತ್ವದಲ್ಲಿ ನಡೆಯಿತು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
