
CHITRADURGA NEWS | 27 OCTOBER 2025
ಹೊಸದುರ್ಗ: ಮಹಿಳೆಯರ ಮೇಲೆ ಕೇವಲ ಅನುಕಂಪ ತೋರಿಸಿದರೆ ಸಾಲದು ಅಂತಃಕರಣ ತೋರಿಸಿ ಅಭಿವೃದ್ಧಿಯ ಪತದತ್ತ ಕೊಂಡೊಯ್ಯುವ ಜವಾಬ್ದಾರಿ ಪುರುಷರ ಮೇಲಿದೆ ಎಂದು ಶಾಂತವೀರ ಶ್ರೀ ಹೇಳಿದರು.
ಇದನ್ನೂ ಓದಿ: ದಿನ ಭವಿಷ್ಯ | 27 ಅಕ್ಟೋಬರ್ | ಉದ್ಯೋಗಿಗಳಿಗೆ ಕೆಲಸದ ಒತ್ತಡ, ದೂರದ ಪ್ರಯಾಣ ಬೇಡ, ಆರೋಗ್ಯದಲ್ಲಿ ಎಚ್ಚರ
ತಾಲೂಕಿನ ಗುಡ್ಡದನೇರಲಕೆರೆ ಗ್ರಾಮದಲ್ಲಿ ಶ್ರೀ ತಿಪ್ಪೇಸ್ವಾಮಿ ಕಲಾ ಮತ್ತು ಸಾಂಸ್ಮಿಕ ಮಹಿಳಾ ಭಜನಾ ಮಂಡಳಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಚಿತ್ರದುರ್ಗ ಸಹಯೋಗದಲ್ಲಿ ಆಯೋಜಿಸಿದ್ದ ಮಹಿಳಾ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ.
ಪ್ರತಿಯೊಬ್ಬ ಪುರುಷನ ಯಶಸ್ಸಿನ ಹಿಂದೆ ಮಹಿಳೆಯ ಪಾತ್ರ ದೊಡ್ಡದಿದೆ, ಮಹಿಳೆಯರಿಗೆ ಸ್ಥಾನಮಾನ ಅಧಿಕಾರ ಕೊಡುವಾಗ ಅನುಮಾನಿಸುವುದು ಮಹಿಳಾ ಕುಲಕ್ಕೆ ಮಾಡಿದ ಅಪಮಾನ.
ಬಸವಾದಿ ಶರಣರಂತೆ ಸಂವಿಧಾನದಂತೆ ಶೇ.50 ಮೀಸಲಾತಿಯನ್ನು ಕೊಡಬೇಕಾದ ನಾವುಗಳು ಶೇ.33 ಕೊಡಲು ತಾರತಮ್ಯ ಮಾಡುತ್ತಿರುವುದು ಸಂವಿಧಾನಕ್ಕೆ ಮತ್ತು ಹೆಣ್ಣಿಗೆ ಮಾಡಿದ ದ್ರೋಹ.
ಆಡಳಿತ ರೂಡ ಪಕ್ಷಗಳು ಸ್ತ್ರೀ ಸಬಲತೆಗಾಗಿ ಮಹಿಳಾ ಕಲ್ಯಾಣಕ್ಕಾಗಿ ಯೋಜನೆಗಳನ್ನು ರೂಪಿಸಿ ಅವರನ್ನು ಮುಖ್ಯ ವಾಹಿನಿಗೆ ತರಲು ರಾಜಕೀಯ ಇಚ್ಛಾಶಕ್ತಿಬೇಕು ಆದರೆ ರಾಜಕೀಯ ಇಚ್ಚಾ ಶಕ್ತಿಯ ಕೊರತೆಯಿಂದ ಮಹಿಳಾ ಮೀಸಲಾತಿ ಕಡತ ಕುಂಟುತ್ತ ಸಾಗಿದೆ.
ಇದನ್ನೂ ಓದಿ: ಚಿತ್ರದುರ್ಗದಲ್ಲಿ ಔಷಧ ಭವನ ಉದ್ಘಾಟನೆ | ಜಿಲ್ಲೆಯ ಪಾರ್ಮಾಸಿಸ್ಟ್ ಗಳು ಭಾಗೀ
ಒಂದು ಕುಟುಂಬ ಒಂದು ದೇಶ ಅಭಿವೃದ್ಧಿಯ ಹಿನ್ನೆಲೆಯಲ್ಲಿ ಮಹಿಳೆಯರ ಪಾತ್ರ ಮತ್ತು ತ್ಯಾಗ ಅಪಾರವಾದದ್ದು. ಅವರ ತ್ಯಾಗವನ್ನು ಸ್ಮರಿಸಿ ಗೌರವದಿಂದ ನಡೆಸಿಕೊಳ್ಳಬೇಕಾದ ಜವಾಬ್ದಾರಿ ಸಮಾಜದ ಮೇಲಿದೆ.
ಹೆಣ್ಣು ಹೆಣ್ಣಲ್ಲ, ಹೆಣ್ಣು ರಕ್ಕಸಿಯಲ್ಲ ಇನ್ನು ಸಾಕ್ಷಾತ್ ಕಪಿಲಸಿದ್ದ ಮಲ್ಲಿಕಾರ್ಜುನ ಎನ್ನುವ ಮೂಲಕ ಹೆಣ್ಣಿಗೆ ಶ್ರೇಷ್ಠತೆ, ಮಾನ್ಯತೆ ನೀಡಿದ್ದ ವಚನ ಸಾಹಿತ್ಯ ಮತ್ತು ಶರಣರು ಗುಡ್ಡದ ನೇರಲ್ಕೆರೆ ಗ್ರಾಮ ಸ್ವಸಂಸ್ಕೃತ ಮತ್ತು ಸಾಂಸ್ಕೃತಿಕ ವಾತಾವರಣ ಇರುವ ಗ್ರಾಮ ಇಲ್ಲಿನ ಮಹಿಳೆಯರ ಹೋರಾಟದ ಪ್ರತಿಫಲವಾಗಿ ಮಧ್ಯಪಾನವನ್ನು ಮಾರುವುದು ಕಠಿಣವಾಗಿದೆ.
ಈ ಗ್ರಾಮದ ಮಹಿಳೆಯರಂತೆ ಎಲ್ಲಾ ಗ್ರಾಮದ ಮಹಿಳೆಯರು ಜಾಗೃತರಾದರೆ ಮಧ್ಯಪಾನ ಮಾರುವುದು ಗ್ರಾಮಗಳಲ್ಲಿ ನಿಲ್ಲುತ್ತದೆ. ಇತ್ತೀಚಿಗೆ ಮಧ್ಯಪಾನದ ಜೊತೆ ಜೊತೆಯಲಿ ಗುಟ್ಕಾ ಹಾವಳಿ ಡ್ರಗ್ಸ್ ಮಾಫಿಯಾ ಆನ್ಲೈನ್ ಗೇಮಿಂಗ್ ಯುವಕರನ್ನು ದಾರಿ ತಪ್ಪಿಸುತ್ತಿದೆ. ಕುಟುಂಬದ ಹಿರಿಯರು ಇವೆಲ್ಲವನ್ನೂ ಗಮನಿಸಿ ಯುವಕರಿಗೆ ಸರಿಯಾದ ಮಾರ್ಗದರ್ಶನ ನೀಡಬೇಕೆಂದು ಕಿವಿಮಾತು ಹೇಳಿದರು
ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್ ಮಾತನಾಡಿ, ಮಹಿಳೆ ಮನಸು ಮಾಡಿದರೆ ಏನೆಲ್ಲ ಸಾಧಿಸಲು ಸಾಧ್ಯವಿದೆ. ಮಹಿಳೆಯರ ಜಾಗದಿಂದ ನಾವೆಲ್ಲರೂ ಮೇಲೆ ಬಂದಿದ್ದೇವೆ. ಅವರ ತ್ಯಾಗಕ್ಕೆ ಅನುಗುಣವಾಗಿ ಗೌರವದಿಂದ ನಡೆಸಿಕೊಳ್ಳಬೇಕಾದ ಜವಾಬ್ದಾರಿ ಪುರುಷರ ಮೇಲಿದೆ. ಇಲ್ಲಿನ ಮಹಿಳಾ ಸಂಘ ಭಜನೆ ಕಲಿತು ಹಳ್ಳಿ ಹಳ್ಳಿಗಳಲ್ಲಿ ಭಜನೆಗೆ ಹೋಗುತ್ತಿರುವುದು ತುಂಬಾ ಸಂತೋಷದ ವಿಷಯ.
ಇದನ್ನೂ ಓದಿ: ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಪಿ.ರಘು ಜಿಲ್ಲಾ ಪ್ರವಾಸ
ಮುಂದಿನ ದಿನಗಳಲ್ಲಿ ಮಕ್ಕಳಿಗೆ ಭಜನೆಗಳನ್ನು ಕಲಿಸಿ ಸಾಂಸ್ಕೃತಿಕ ವಾತಾವರಣ ನಿರ್ಮಿಸಬೇಕಾದ ಕಾರ್ಯವನ್ನು ನಾವುಗಳೆಲ್ಲ ಮಾಡಬೇಕಾಗಿದೆ. ಬಾಲ್ಯದಿಂದ ಮುಪ್ಪಿನವರೆಗೂ ಹೆಣ್ಣಿನ ಆಶ್ರಯ ಹಾರೈಕೆ ಬೆಲೆಕಟ್ಟಲಾಗದು ಹಾಗಾಗಿ ಹೆಣ್ಣನ್ನು ಗೌರವರಿಂದ ನೋಡಿಕೊಳ್ಳಬೇಕಾದ ಜವಾಬ್ದಾರಿ ಹಾಗೂ ಕರ್ತವ್ಯ ನಮ್ಮದಾಗಬೇಕೆಂದು ತಿಳಿಸಿದರು.
ಡಿ.ಓ.ಮೊರಾರ್ಜಿ, ಕಲಾ ಮತ್ತು ಸಾಂಸ್ಕೃತಿಕ ಮಹಿಳಾ ಭಜನಾ ಮಂಡಳಿ ಅಧ್ಯಕ್ಷ ತಿಪ್ಪೇಸ್ವಾಮಿ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಬಿ.ಎಸ್.ದ್ಯಾಮಣ್ಣ, ಎರಗುಂಟಪ್ಪ ಶಿಕ್ಷಕರಾದ ಪ್ರಕಾಶ್, ಗ್ರಾಮದ ಎಂ.ಎಲ್.ನಾಗರಾಜ್, ಮುಖಂಡರಾದ ರಮೇಶ್ ಸೇರಿದಂತೆ ಸುತ್ತಮುತ್ತ ಗ್ರಾಮಗಳ ಮಹಿಳೆಯರು ಭಾಗವಹಿಸಿದ್ದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
