
CHITRADURGA NEWS | 14 JUNE 2026
ಹೃದಯವು ನಮ್ಮ ದೇಹದ ಅತ್ಯಂತ ಪ್ರಮುಖ ಅಂಗವಾಗಿದ್ದು, ಇಡೀ ದೇಹಕ್ಕೆ ಆಮ್ಲಜನಕ ಮತ್ತು ಪೋಷಣೆಯನ್ನು ತಲುಪಿಸಲು ನಿರಂತರವಾಗಿ ರಕ್ತವನ್ನು ಪಂಪ್ ಮಾಡುತ್ತದೆ. ಆದರೆ ಬದಲಾಗುತ್ತಿರುವ ಜೀವನಶೈಲಿ, ಒತ್ತಡ, ಅನಿಯಮಿತ ಆಹಾರ ಪದ್ಧತಿ ಮತ್ತು ದೈಹಿಕ ಚಟುವಟಿಕೆಯ ಕೊರತೆಯಿಂದಾಗಿ, ಹೃದಯ ಕಾಯಿಲೆಯ ಪ್ರಕರಣಗಳು ಇಂದಿನ ದಿನಗಳಲ್ಲಿ ಹೆಚ್ಚಾಗಿ ಕಂಡುಬರುತ್ತಿವೆ. ಹೃದಯ ಸಮಸ್ಯೆಗಳು ಆರಂಭಿಕ ಹಂತಗಳಲ್ಲಿ ಸಣ್ಣ ಪುಟ್ಟ ಲಕ್ಷಣಗಳಾಗಿ ಕಾಣಿಸಿಕೊಳ್ಳುತ್ತದೆ. ಆದರೆ ಜನರು ಇವುಗಳನ್ನು ಸಾಮಾನ್ಯವೆಂದು ಭಾವಿಸಿ ನಿರ್ಲಕ್ಷಿಸುತ್ತಾರೆ. ತಜ್ಞರ ಪ್ರಕಾರ, ಈ ಲಕ್ಷಣಗಳನ್ನು ಮೊದಲೇ ಗುರುತಿಸುವುದರಿಂದ ಗಂಭೀರ ಹೃದಯ ಕಾಯಿಲೆ ಮತ್ತು ಹೃದಯಾಘಾತದಂತಹ ಮಾರಣಾಂತಿಕ ಪರಿಸ್ಥಿತಿಗಳನ್ನು ತಡೆಯಬಹುದು ಎನ್ನಲಾಗುತ್ತದೆ. ಹಾಗಾಗಿ ನಿಮ್ಮ ದೇಹದಲ್ಲಿ ಈ ರೀತಿಯ ಅಸಾಮಾನ್ಯ ಬದಲಾವಣೆಗಳನ್ನು ನೀವು ಗಮನಿಸುತ್ತಿದ್ದರೆ, ಜಾಗರೂಕರಾಗಿರಿ.

ಎದೆ ನೋವು
ಎದೆ ನೋವು, ಬಿಗಿತ, ಭಾರ ಅಥವ ಒತ್ತಡವು ಹೃದಯ ಕಾಯಿಲೆಯ ಸಾಮಾನ್ಯ ಲಕ್ಷಣಗಳಾಗಿವೆ. ಈ ನೋವು ಕೆಲವು ನಿಮಿಷಗಳ ಕಾಲ ಇರಬಹುದು ಅಥವ ಪದೇ ಪದೇ ಬರಬಹುದು. ಕೆಲವೊಮ್ಮೆ ಈ ನೋವು ಭುಜ, ಕುತ್ತಿಗೆ, ಬೆನ್ನು ಅಥವ ತೋಳಿಗೂ ಹರಡಬಹುದು. ಇದು ಪದೇ ಪದೇ ಸಂಭವಿಸುತ್ತಿದ್ದರೆ, ನೀವು ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.
ಉಸಿರಾಟದ ತೊಂದರೆ
ಮೆಟ್ಟಿಲುಗಳನ್ನು ಹತ್ತುವಾಗ ನಿಮಗೆ ತುಂಬಾ ದಣಿವು ಅಥವ ಉಸಿರಾಟದ ತೊಂದರೆ ಕಾಣಿಸಿದರೆ, ಅದು ಹೃದಯ ದೌರ್ಬಲ್ಯದ ಸಂಕೇತವಾಗಿರಬಹುದು. ಹೃದಯವು ರಕ್ತವನ್ನು ಸರಿಯಾಗಿ ಪಂಪ್ ಮಾಡಲು ಸಾಧ್ಯವಾಗದಿದ್ದಾಗ, ಶ್ವಾಸಕೋಶದ ಮೇಲೆ ಒತ್ತಡ ಹೆಚ್ಚಾಗುತ್ತದೆ ಮತ್ತು ಉಸಿರಾಟ ಕಷ್ಟವಾಗುತ್ತದೆ.
ತೀವ್ರ ಆಯಾಸ ಮತ್ತು ದೌರ್ಬಲ್ಯ
ವಿಶ್ರಾಂತಿ ಪಡೆದಿದ್ದರೂ ನಿಮಗೆ ನಿರಂತರವಾಗಿ ದಣಿವು ಅನಿಸುತ್ತಿದ್ದರೆ, ಅದನ್ನು ಸಾಮಾನ್ಯ ದೌರ್ಬಲ್ಯ ಎಂದು ಭಾವಿಸಿ ನಿರ್ಲಕ್ಷಿಸಬೇಡಿ. ಹೃದಯದ ಕಾರ್ಯ ಕಡಿಮೆಯಾದಾಗ, ಸಾಕಷ್ಟು ಆಮ್ಲಜನಕ ದೇಹದ ಭಾಗಗಳನ್ನು ತಲುಪುವುದಿಲ್ಲ. ಇದು ಆಯಾಸ ಮತ್ತು ಶಕ್ತಿಯ ಕೊರತೆಗೆ ಕಾರಣವಾಗಬಹುದು.
ಅನಿಯಮಿತ ಅಥವ ವೇಗದ ಹೃದಯಬಡಿತ
ಹೃದಯ ಬಡಿತದಲ್ಲಿ ಹಠಾತ್ ಹೆಚ್ಚಳ ಅಥವ ಇಳಿಕೆ ಹೃದಯ ಸಮಸ್ಯೆಯ ಸಂಕೇತವಾಗಿರಬಹುದು. ಈ ಸ್ಥಿತಿ ಪದೇ ಪದೇ ಬರುತ್ತಿದ್ದರೆ, ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳುವುದು ಅತ್ಯಗತ್ಯ.
ಪಾದಗಳು, ಕಣಕಾಲುಗಳು ಅಥವ ಕಾಲುಗಳ ಊತ
ಹೃದಯದ ಕಾರ್ಯ ಚಟುವಟಿಕೆಗೆ ತೊಂದರೆಯಾದಾಗ, ದೇಹದಲ್ಲಿ ದ್ರವಗಳು ಸಂಗ್ರಹವಾಗಲು ಶುರುವಾಗುತ್ತವೆ. ಇದು ಪಾದಗಳು, ಕಣಕಾಲುಗಳು ಮತ್ತು ಕಾಲ್ಬೆರಳುಗಳಲ್ಲಿ ಊತವನ್ನು ಉಂಟುಮಾಡಬಹುದು. ಈ ಲಕ್ಷಣವು ಹೃದಯಾಘಾತದಂತಹ ಗಂಭೀರ ಸ್ಥಿತಿಯ ಆರಂಭಿಕ ಸೂಚನೆಯೂ ಆಗಿರಬಹುದು.
ಹೃದಯವನ್ನು ಆರೋಗ್ಯವಾಗಿಡಲು ಏನು ಮಾಡಬೇಕು ?
ಸಮತೋಲಿತ ಮತ್ತು ಪೌಷ್ಟಿಕ ಆಹಾರವನ್ನು ಸೇವಿಸಿ
ನಿಯಮಿತವಾಗಿ ವ್ಯಾಯಾಮ ಮಾಡಿ
ಧೂಮಪಾನ ಮತ್ತು ತಂಬಾಕಿನಿಂದ ದೂರವಿರಿ
ಒತ್ತಡವನ್ನು ನಿಯಂತ್ರಣದಲ್ಲಿಡಿ
ನಿಮ್ಮ ರಕ್ತದೊತ್ತಡ, ಸಕ್ಕರೆ ಮತ್ತು ಕೊಲೆಸ್ಟ್ರಾಲ್ ಅನ್ನು ನಿಯಮಿತವಾಗಿ ಪರೀಕ್ಷಿಸಿಕೊಳ್ಳಿ
ಸಾಕಷ್ಟು ನಿದ್ರೆ ಪಡೆಯಿರಿ .


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
