CHITRADURGA NEWS | 28 JUNE 2025
ಹೊಸದುರ್ಗ: ಕುಡಿಯುವ ನೀರಿನ ವಿಚಾರವಾಗಿ ಹೊಸದುರ್ಗ ತಾಲೂಕಿನ ಎಲ್ಲ ಮುಖಂಡರು ಒಗ್ಗಟ್ಟಿನ ಮಂತ್ರ ಜಪಿಸಿ, ದಾವಣಗೆರೆ ರೈತರ ಸೋಗಿನಲ್ಲಿ ಕೆಲ ಮುಖಂಡರು ಅಡ್ಡಿ ಮಾಡುತ್ತಿರುವುದನ್ನು ಖಂಡಿಸಿದರು.
Also Read: ಹೊಸದುರ್ಗ ಸ್ಥಬ್ದ | ಸ್ವಯಂ ಪ್ರೇರಿತವಾಗಿ ಅಂಗಡಿ ಮುಂಗಟ್ಟು ಬಂದ್

ಭದ್ರಾ ಜಲಾಶಯದಿಂದ ಹೊಸದುರ್ಗ ಪಟ್ಟಣ ಹಾಗೂ ತಾಲೂಕಿನ 346 ಜನವಸತಿ ಪ್ರದೇಶಗಳಿಗೆ ಕುಡಿಯುವ ನೀರು ತರುವ ಕಾಮಗಾರಿಗೆ ಅಡ್ಡಿ ಮಾಡಿದ್ದನ್ನು ವಿರೋಧಿಸಿ ಕರೆ ನೀಡಿದ್ದ ಹೊಸದುರ್ಗ ಬಂದ್ ಯಶಸ್ವಿಯಾಯಿತು.
ಬೆಳಗ್ಗೆಯಿಂದಲೇ ಹೊಸದುರ್ಗ ಪಟ್ಟಣ ಸ್ಥಬ್ದವಾಗಿತ್ತು. ನಗರದ ವೀರಭದ್ರಸ್ವಾಮಿ ದೇವಸ್ಥಾನದಿಂದ ಅಂಬೇಡ್ಕರ್(ಟಿಬಿ) ವೃತ್ತದವರೆಗೆ ಹಮ್ಮಿಕೊಂಡಿದ್ದ ಪ್ರತಿಭಟನಾ ಮೆರವಣಿಗೆಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿದ್ದರು.
ಈ ವೇಳೆ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಶಾಸಕರಾದ ಬಿ.ಜಿ.ಗೋವಿಂದಪ್ಪ, ಈಗಾಗಲೇ 21 ಕುಡಿಯುವ ನೀರಿನ ಯೋಜನೆಗೆ ಭದ್ರಾ ಕಾಲುವೆ ಸೀಳಿ ನೀರು ಹೋಗಲು ಅವಕಾಶ ಕೊಟ್ಟು 22ನೇ ಯೋಜನೆಗೆ ಅಡ್ಡಿ ಮಾಡುವುದರಲ್ಲಿ ಅರ್ಥ ಇಲ್ಲ, ಇದರಿಂದ ಕೊನೆಯ ಭಾಗಕ್ಕೆ ನೀರು ಹರಿಯುವುದಿಲ್ಲ ಎಮ್ನುವುದು ಅವೈಜ್ಞಾನಿಕ ಎಂದರು.
2013 ರಲ್ಲಿ ತಾಲೂಕಿನ ಕುಡಿಯುವ ನೀರಿನ ಸಮಸ್ಯೆ, ಫ್ಲೋರೈಡ್ ಅಂಶ ಕುರಿತು ಸರ್ಕಾರಕ್ಕೆ ವರದಿ ಕೊಡಲಾಗಿತ್ತು. 2015ರಲ್ಲಿ ಅನುಮೋದನೆ ಸಿಕ್ಕಿತ್ತು. ಚಿಕ್ಕಮಗಳೂರು ಶಾಸಕರು ಕೂಡಾ ಇದಕ್ಕೆ ಕೈ ಜೋಡಿಸಿ, ಅಲ್ಲಿಗೂ ಭದ್ರಾ ಜಲಾಶಯದಿಂದ ನೀರು ತೆಗೆದುಕೊಳ್ಳುವ ಯೋಜನೆ ಇದಾಗಿದೆ ಎಂದರು.
Also Read: ಕುಡಿಯುವ ನೀರಿನ ರಾಜಕೀಯ | ಭದ್ರಾ ನೀರು ಹರಿಸಲು ಅಡ್ಡಿ | ಅವಳಿ ಜಿಲ್ಲೆಗಳಲ್ಲಿ ಬೀದಿಗಿಳಿದು ಹೋರಾಟ
ಭದ್ರಾ ಜಲಾಶಯದ ಬಲದಂಡೆ ಮೂಲಕ ನೀರು ತೆಗೆದುಕೊಳ್ಳಲು ತಜ್ಞರ ತಂಡ ವರದಿ ಕೊಟ್ಟ ಹಿನ್ನೆಲೆಯಲ್ಲಿ ಈ ಕೆಲಸ ಪ್ರಾರಂಭವಾಗಿದೆ. ಕೆಲ ಹಿತಾಸಕ್ತಿಗಳು ಇದಕ್ಕೆ ಅಡ್ಡಿ ಮಾಡುತ್ತಿದ್ದಾರೆ.
ಈ ಸಂಬಂಧ ಬಿಆರ್ಪಿನಲ್ಲಿ ನಡೆದ ಸಭೆಯಲ್ಲಿ ನೀರು ತೆಗೆದುಕೊಳ್ಳಲು ಬಿಡಲ್ಲ ಎಂದು ಹೊರ ನಡೆದಿದ್ದಾರೆ.
ಈ ಹಿನ್ನೆಲೆಯಲ್ಲಿ ಬೆಂಗಳೂರು ಐಐಎಸ್ಸಿ ವಿಜ್ಞಾನಿಗಳಿಗೆ ವರದಿ ನೀಡಲು ಮನವಿ ಮಾಡಿದ್ದೇವೆ ಎಂದು ವಿವರಿಸಿದರು.
ಕಾಮಗಾರಿಗೆ 834 ಕೋಟಿ ಅನುದಾನ ಮಂಜೂರಾಗಿದೆ. ಶೇ.80 ರಷ್ಟು ಕೆಲಸ ಆಗಿದೆ. ದಾವಣಗೆರೆ ಉಸ್ತುವಾರಿ ಸಚಿವರಾದ ಎಸ್.ಎಸ್.ಮಲ್ಲಿಕಾರ್ಜುನ್ ಅವರು ಈ ಬಗ್ಗೆ ಗಮನಹರಿಸಿ ಪ್ರತಿಭಟನೆ ಹತ್ತಿಕ್ಕಿ ಕಾಮಗಾರಿ ಮುಂದುವರೆಯಲು ಅವಕಾಶ ಮಾಡಿಕೊಡಬೇಕು ಎಂದರು.
Also Read: ನೀರಿನ ವಿಚಾರದಲ್ಲಿ ರಾಜಕೀಯ ಸಲ್ಲದು | ಜಿಲ್ಲಾ ನೀರಾವರಿ ಅನುಷ್ಠಾನ ಹೋರಾಟ ಸಮಿತಿ
ಪ್ರತಿಭಟನೆಯಲ್ಲಿ ಎಂಎಲ್ಸಿ ಕೆ.ಎಸ್.ನವೀನ್, ಹಿರಿಯ ಪತ್ರಕರ್ತ ಚಿಕ್ಕಪ್ಪನಹಳ್ಳಿ ಷಣ್ಮುಖಪ್ಪ, ಬಿಜೆಪಿ ಮುಖಂಡರಾದ ಎಸ್.ಲಿಂಗಮೂರ್ತಿ, ಜೆಡಿಎಸ್ ಅಧ್ಯಕ್ಷ ಗಣೇಶ್, ಎಂ.ಪಿ.ಶಂಕರ್, ಕಾರೇಹಳ್ಳಿ ಬಸವರಾಜ್, ರಾಜೇಶ್, ಸದ್ಗುರು ಆಯುರ್ವೇದ ಉದ್ಯಮಿ ಪ್ರದೀಪ್, ತುಂಬಿನಕೆರೆ ಬಸವರಾಜ್ ಇತರರಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail
chitradurganews23@gmail.com
» Whatsapp Number
