ಮುಖ್ಯ ಸುದ್ದಿ
ರಾಮತೀರ್ಥ ಆಶ್ರಮದಲ್ಲಿ ವಿಜೃಂಭಣೆಯ ರಥೋತ್ಸವ

CHITRADURGA NEWS | 22 JUNE 2024
ಚಿತ್ರದುರ್ಗ: ನಗರದ ಮೇದೆಹಳ್ಳಿ ರಸ್ತೆಯಲ್ಲಿರುವ ರಾಮತೀರ್ಥ ಆಶ್ರಮದಲ್ಲಿ ರಾಜಯೋಗಿಸ್ವಾಮಿ ರಾಮತೀರ್ಥರ ಹಾಗೂ ಜಗನ್ನಾತಾ ಚೂಡಾಮಣಿ ಮಾತಾಜಿರವರ ಪುಣ್ಯಾರಾಧನೆ ಹಾಗೂ ರಥೋತ್ಸವ ಸಾವಿರಾರು ಭಕ್ತರು ಸಮ್ಮುಖದಲ್ಲಿ ವಿಜೃಂಭಣೆಯಿಂದ ಜರುಗಿತು.
ಇದನ್ನೂ ಓದಿ: ಮನಸ್ಸಿನ ಹತೋಟಿಗೆ ಯೋಗ ಸಹಕಾರಿ | ಸಾಣೇಹಳ್ಳಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ
ಬೃಹಧಾಕಾರದ ಹೂವಿನ ಹಾರ, ಬಾಳೆಕಂಬ, ಬಣ್ಣ ಬಣ್ಣದ ಭಾವುಟ, ಹೊಂಬಾಳೆಯಿಂದ ರಥವನ್ನು ಅಲಂಕರಿಸಲಾಗಿತ್ತು. ಆಶ್ರಮದ ಆವರಣದಲ್ಲಿ ನೆರದಿದ್ದ ಅಪಾರ ಭಕ್ತರ ಸಮ್ಮುಖದಲ್ಲಿ ಮೂರು ಸುತ್ತು ರಥೋತ್ಸವ ಸಾಗಿತು. ಡೊಳ್ಳು, ತಮಟೆ, ನಂದಿಕೋಲು, ಛತ್ರಿ ಚಾಮರಗಳು ರಥೋತ್ಸವದಲ್ಲಿ ವಿಜೃಂಭಿಸುತ್ತಿತ್ತು.
ನೂರಾರು ಸಂಖ್ಯೆಯಲ್ಲಿ ನೆರೆದಿದ್ದ ಮಹಿಳೆಯರು ಕೂಡ ರಥೋತ್ಸವದಲ್ಲಿ ಪಾಲ್ಗೊಂಡು ಕೀರ್ತನೆಗಳನ್ನು ಹಾಡುತ್ತಿದ್ದರು. ರಥೋತ್ಸವದಲ್ಲಿ ಭಕ್ತರು ಕುಣಿದು ಕುಪ್ಪಳಿಸುತ್ತ ಭಕ್ತಿ ಸಮರ್ಪಿಸಿದರೆ ಕೆಲವರು ಚಿಕ್ಕ ಚಿಕ್ಕ ಮಕ್ಕಳನ್ನು ಹೆಗಲ ಮೇಲೆ ಹೊತ್ತುಕೊಂಡು ರಥೋತ್ಸವದಲ್ಲಿ ಕುಣಿದು ಕುಪ್ಪಳಿಸುತ್ತಿದ್ದರು.
ಇದನ್ನೂ ಓದಿ: ಹಳ್ಳಿಹಳ್ಳಿಗೂ ಯೋಗ ಪಸರಿಸಿದ ಮಲ್ಲಾಡಿಹಳ್ಳಿ ರಾಘವೇಂದ್ರ ಸ್ವಾಮೀಜಿ | ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್
ಕಳಸ ಸ್ಥಾಪನೆ, ಗಣಪತಿ ಪೂಜೆ, ನವಗ್ರಹ ಪೂಜೆ, ಹೋಮ, ಗುರುಪೂಜೆ, ಪಂಚಾಮೃತಾಭಿಷೇಕ, ಮಹಾ ಮಂಗಳಾರತಿ ನಂತರ ಅನ್ನಸಂತರ್ಪಣೆ ನಡೆಯಿತು.
ಕರ್ನಾಟಕ ಸೇರಿದಂತೆ ನೆರೆಯ ಆಂಧ್ರ, ತಮಿಳುನಾಡು ರಾಜ್ಯಗಳಿಂದಲೂ ಭಕ್ತರು ಆಗಮಿಸಿದ್ದರು. ಆಶ್ರಮದ ಗುರುಗಳಾದ ಪ್ರಹ್ಲಾದ್ಸ್ವಾಮಿ, ರಾಮತೀರ್ಥಾಶ್ರಮದ ಟ್ರಸ್ಟ್ನ ಸದಸ್ಯರುಗಳಾದ ಗಿರೀಶ್, ಎನ್.ಜೆ.ದೇವರಾಜರೆಡ್ಡಿ ಇವರುಗಳು ರಥೋತ್ಸವದಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ: ಕಲ್ಲು ಗಣಿ ಗುತ್ತಿಗೆ ಮಂಜೂರಾತಿಗೆ 160 ಅರ್ಜಿ ಬಾಕಿ | ಜಿಲ್ಲಾಧಿಕಾರಿ ಟಿ.ವೆಂಕಟೇಶ್
ರಥೋತ್ಸವದ ಮುಕ್ತಿ ಭಾವುಟವನ್ನು ಚಿತ್ರದುರ್ಗದ ಹೂವಿನ ಅಂಗಡಿ ಕಾಂತಣ್ಣ ಮೂರು ಲಕ್ಷದ ಹತ್ತು ಸಾವಿರ ರೂ.ಗಳಿಗೆ ಪಡೆದುಕೊಂಡರು. ರಥೋತ್ಸವದ ಮೊದಲನೆ ಹಾರವನ್ನು ಬೊಮ್ಮೇನಹಳ್ಳಿಯ ವಕೀಲ ಶ್ರೀನಿವಾಸ್ ಎಂಬತ್ತು ಸಾವಿರ ರೂ.ಗಳಿಗೆ ಪಡೆದರು. ಮಾತಾಜಿ ಅಮ್ಮನವರ ಹಾರವನ್ನು ಬಸವರಾಜಪ್ಪ ಕಡ್ಲೆಗುದ್ದು ಇವರು ಇಪ್ಪತ್ತೈದು ಸಾವಿರ ರೂ.ಗಳಿಗೆ ಪಡೆದುಕೊಂಡರು. ಮಹಾರಥೋತ್ಸವದ ದೊಡ್ಡ ಹಾರವನ್ನು ಅಲುಮೇಲು ಶ್ರೀನಿವಾಸ್ರವರು ಒಂದು ಲಕ್ಷ ರೂ.ಗಳಿಗೆ ಪಡೆದುಕೊಂಡರು.
