ಮುಖ್ಯ ಸುದ್ದಿ
Bharamasagara: ಶಾದಿಮಹಲ್ ನಿರ್ಮಾಣಕ್ಕೆ 50 ಲಕ್ಷ ಅನುದಾನ | ಸಚಿವ ಜಮೀರ್ ಅಹಮದ್ ಖಾನ್ ಭರವಸೆ


CHITRADURGA NEWS | 06 OCTOBER 2024
ಚಿತ್ರದುರ್ಗ: ಭರಮಸಾಗರದಲ್ಲಿ(Bharamasagara) ಶಾದಿಮಹಲ್ ನಿರ್ಮಾಣಕ್ಕೆ 50 ಲಕ್ಷ ರೂ. ಅನುದಾನ ನೀಡುವುದಾಗಿ ಅಲ್ಪಸಂಖ್ಯಾತ ಮತ್ತು ವಕ್ಫ್ ಖಾತೆ ಸಚಿವ ಬಿ.ಝಡ್.ಜಮೀರ್ ಅಹಮ್ಮದ್ಖಾನ್ ಭರವಸೆ ನೀಡಿದರು.
ಭಾನುವಾರ ಭರಮಸಾಗರಕ್ಕೆ ಭೇಟಿ ನೀಡಿದ್ದ ವೇಳೆ ತಮ್ಮನ್ನು ಭೇಟಿಯಾದ ಅಲ್ಪಸಂಖ್ಯಾತ ಮುಖಂಡರ ಮನವಿ ಆಲಿಸಿ ಭರವಸೆ ನೀಡಿದರು.
ಇದನ್ನೂ ಓದಿ: ಬೊಮ್ಮೇನಹಳ್ಳಿಯಲ್ಲಿ ಶಾಲೆ, ಆಸ್ಪತ್ರೆ ನಿರ್ಮಾಣ | ಶಾಸಕ ಕೆ.ಸಿ.ವೀರೇಂದ್ರ(ಪಪ್ಪಿ) ಭರವಸೆ
ಸಚಿವ ಜಮೀರ್ ಅಹಮ್ಮದ್ಖಾನ್, ಭರಮಸಾಗರದ ಜಿಲ್ಲಾ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಹಾಗೂ ಕೆಪಿಸಿಸಿ ಸದಸ್ಯ ಎಚ್.ಎನ್.ತಿಪ್ಪೇಸ್ವಾಮಿ ಅವರ ನಿವಾಸಕ್ಕೆ ಅನಿರೀಕ್ಷಿತ ಭೇಟಿ ನೀಡಿ ಮಾತುಕತೆ ನಡೆಸಿದರು.
ಇದೇ ವೇಳೆ ಪಕ್ಷ ಸಂಘಟನೆಗೆ ಹೆಚ್ಚು ಒತ್ತು ನೀಡುವಂತೆ ಕಾಂಗ್ರೆಸ್ ಕಾರ್ಯಕರ್ತರಿಗೆ ಸೂಚಿಸಿದರು.
ಇದನ್ನೂ ಓದಿ: ವಿವಿ ಸಾಗರಕ್ಕೆ ಭರ್ಜರಿ ಒಳಹರಿವು | ಮೈದುಂಬಿದ ವೇದಾವತಿ
ಈ ವೇಳೆ ವಕ್ಫ್ ಬೋರ್ಡ್ ಅಧ್ಯಕ್ಷ ಕೆ.ಅನ್ವರ್ ಭಾಷಾ, ತಾಪಂ ಮಾಜಿ ಅಧ್ಯಕ್ಷ ವೆಂಕಟೇಶ್, ಕೆ.ಟಿ.ಸಿ.ಮೌನೇಶ್, ಬೇವಿನಹಳ್ಳಿ ಅನಿಲ್ಕುಮಾರ್, ಪ್ರವೀಣ್ ಸಿಖ್ವಾದ್ ಭಾμÁ, ದಾದಾಪೀರ್, ಜಮೀರ್ ಅಹಮದ್, ರಶೀದ್ ಇತರರಿದ್ದರು.

