Connect with us

    DJ Violation: ಗಣೇಶ ಮೂರ್ತಿ ವಿಸರ್ಜನೆಯಲ್ಲಿ ನಿಯಮ ಉಲ್ಲಂಘನೆ | ಡಿ.ಜೆ ಸೌಂಡ್‌ ಸಿಸ್ಟಂ ವಶ

    ಮುಖ್ಯ ಸುದ್ದಿ

    DJ Violation: ಗಣೇಶ ಮೂರ್ತಿ ವಿಸರ್ಜನೆಯಲ್ಲಿ ನಿಯಮ ಉಲ್ಲಂಘನೆ | ಡಿ.ಜೆ ಸೌಂಡ್‌ ಸಿಸ್ಟಂ ವಶ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 13 SEPTEMBER 2024
    ಚಿತ್ರದುರ್ಗ: ಗಣೇಶ ಮೂರ್ತಿ ವಿಸರ್ಜನೆ ಮೆರವಣಿಗೆಗೆ ಬಳಸಿದ್ದ ಟ್ರ್ಯಾಕ್ಟರ್‌, ಡಿ.ಜೆ. ಸ್ಪೀಕರ್‌ ಹಾಗೂ ಜನರೇಟರ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ತಾಲ್ಲೂಕಿನ ಭೀಮಸಮುದ್ರ ಗ್ರಾಮದಲ್ಲಿ ನಡೆದಿದೆ.

    ಬುಧವಾರ ರಾತ್ರಿ 11.20ರವರೆಗೂ ಡಿ.ಜೆ. ಬಳಕೆ, ವಾಹನ ಸಂಚಾರಕ್ಕೆ ಅಡ್ಡಿಪಡಿಸಿದ ಆರೋಪದ ಮೇಲೆ ಗ್ರಾಮದ ವಿನಾಯಕ ಗೆಳೆಯರ ಬಳಗದ ವಿರುದ್ಧ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜೊತೆಗೆ ಮೆರವಣಿಗೆಗೆ ಬಳಸಿದ್ದ ಟ್ರ್ಯಾಕ್ಟರ್‌, ಡಿ.ಜೆ. ಸ್ಪೀಕರ್‌ ಹಾಗೂ ಜನರೇಟರ್‌ಗಳನ್ನು ವಶಕ್ಕೆ ಪಡೆಯಲಾಗಿದೆ.

    ಕ್ಲಿಕ್ ಮಾಡಿ ಓದಿ: ದಿನ ಭವಿಷ್ಯ | ಸೆಪ್ಟೆಂಬರ್ 13 | ಮೌಲ್ಯದ ವಸ್ತು ಖರೀದಿ, ವ್ಯವಹಾರಗಳಲ್ಲಿ ಈಡೇರುವ ನಿರೀಕ್ಷೆ

    ಗ್ರಾಮದ ಮುಖ್ಯರಸ್ತೆಯಲ್ಲಿ ಮಧ್ಯರಾತ್ರಿವರೆಗೂ ವಾಹನ ಸಂಚಾರಕ್ಕೆ ಅಡ್ಡಿಪಡಿಸಿ ಮೆರವಣಿಗೆ ನಡೆಸಲಾಗಿದೆ. ಆಯೋಜಕರು ಮೆರವಣಿಗೆ ಸಂಬಂಧ ಯಾವುದೇ ಅನುಮತಿ ಪಡೆದಿರಲಿಲ್ಲ. ಜೊತೆಗೆ ಡಿ.ಜೆ ಸೌಂಡ್‌ ಸಿಸ್ಟಂ ಬಳಸಿ ನಿಯಮ ಉಲ್ಲಂಘನೆ ಮಾಡಲಾಗಿದೆ ಎಂದು ಆರೋಪಿಸಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.

    ಜಿಲ್ಲೆಯಲ್ಲಿ ಮಧ್ಯರಾತ್ರಿವರೆಗೂ ಗಣೇಶ ಮೆರವಣಿಗೆ ಮಾಡಿದರೆ, ನಿಯಮ ಉಲ್ಲಂಘಿಸಿ ಡಿ.ಜೆ ಸೌಂಡ್‌ ಸಿಸ್ಟಂ ಬಳಸಿದರೆ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಲಾಗುವುದು’ ಎಂದು ಎಸ್‌ಪಿ ರಂಜಿತ್‌ ಕುಮಾರ್‌ ಬಂಡಾರು ಎಚ್ಚರಿಸಿದ್ದಾರೆ.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top