ಮುಖ್ಯ ಸುದ್ದಿ
ಕುಡಿಯುವ ನೀರು ಸರಬರಾಜಿನಲ್ಲಿ ವ್ಯತ್ಯಯ | ವಿದ್ಯುತ್ ಪೂರೈಕೆ ಸಮಸ್ಯೆ

Published on
CHITRADURGA NEWS | 31 MAY 2024
ಚಿತ್ರದುರ್ಗ: ಹಿರಿಯೂರು ನಗರಕ್ಕೆ ನೀರು ಪೂರೈಕೆ ಮಾಡುತ್ತಿರುವ ವಾಣಿವಿಲಾಸ ಜಲಾಶಯದಲ್ಲಿ ವಿದ್ಯುತ್ ಪೂರೈಕೆಯಲ್ಲಿ ದೋಷ ಉಂಟಾಗಿದೆ. ಈ ಕಾರಣಕ್ಕೆ ಮೇ 31 ಮತ್ತು ಜೂನ್ 1ರಂದು ನಗರದಲ್ಲಿ ನೀರು ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ಕ್ಲಿಕ್ ಮಾಡಿ ಓದಿ: ಜಿಲ್ಲಾಸ್ಪತ್ರೆಗೆ ನ್ಯಾಯಾಧೀಶರ ಭೇಟಿ | ಸ್ವಚ್ಛತೆ ಕಾಪಾಡಲು ಸೂಚನೆ
ಮೇ 31ರಂದು ಬಿಡುಗಡೆ ಮಾಡಬೇಕಿದ್ದ ಬಡಾವಣೆಗಳಿಗೆ ಜೂನ್ 1ರಂದು ಹಾಗೂ ಜೂನ್ 1ರಂದು ನೀರು ಬಿಡಬೇಕಿದ್ದ ಬಡಾವಣೆಗಳಿಗೆ ಜೂನ್ 2ರಂದು ಬಿಡಲಾಗುತ್ತದೆ ಎಂದು ಹಿರಿಯೂರು ನಗರಸಭೆ ಪ್ರಕಟಣೆ ತಿಳಿಸಿದೆ.

Continue Reading
Related Topics:Drinking Water, electricity, Hiriyur, Kannada News, Supply, ಕನ್ನಡ ನ್ಯೂಸ್, ಕುಡಿಯುವ ನೀರು, ವಿದ್ಯುತ್, ವ್ಯತ್ಯಯ, ಸರಬರಾಜು, ಹಿರಿಯೂರು

Click to comment