CHITRADURGA NEWS | 15 AUGUST 2026
ಚಿತ್ರದುರ್ಗ: ಸಮಾಜದಲ್ಲಿ ಅವಿಭಕ್ತ ಕುಟುಂಬಗಳ ಕೊಂಡಿ ಕಳಚುತ್ತಿದ್ದು, ವಿಭಕ್ತ ಕುಟುಂಬಗಳ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಕುಟುಂಬಗಳ ನಡುವೆ ದ್ವೇಷ ಹಾಗೂ ಅಸಹಕಾರದ ವಾತಾವರಣ ನಿರ್ಮಾಣವಾಗುತ್ತಿದೆ ಎಂದು ಚಿತ್ರದುರ್ಗ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್ಜೆಎಂ ವಿದ್ಯಾಪೀಠ ಆಡಳಿತ ಮಂಡಳಿ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿ ಆತಂಕ ವ್ಯಕ್ತಪಡಿಸಿದರು.
ಇದನ್ನೂ ಓದಿ: ಕುಂದುಕೊರತೆ ಪರಿಹಾರಕ್ಕೆ ಪ್ರಜಾ ಸೇವಾ ಶಾಖೆ | 2,747 ಕರೆಗಳಿಗೆ ಸ್ಪಂದನೆ
ತಾಲ್ಲೂಕಿನ ಸಾಸಲಹಟ್ಟಿ ಗ್ರಾಮದ ಕಂಟ್ರಾಕ್ಟರ್ ಪೂಜಾರ ತಿಪ್ಪೇಸ್ವಾಮಿ ಅವರು ಶ್ರಾವಣ ಮಾಸದ ಅಂಗವಾಗಿ ಆಯೋಜಿಸಿದ್ದ ಮನೆಯಲ್ಲಿ ಮಹಾಮನೆ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಕೂಡು ಕುಟುಂಬಗಳಲ್ಲಿನ ಒಡಕು ಹಾಗೂ ಹೊಂದಾಣಿಕೆಯ ಕೊರತೆಯಿಂದ ಪರಸ್ಪರ ಬಾಂಧವ್ಯ ಕ್ಷೀಣಿಸುತ್ತಿದೆ ಎಂದರು.
ಹಿಂದೆ ಮನೆಗಳಲ್ಲಿ ಹತ್ತಾರು, ನೂರಾರು ಜನರು ಒಟ್ಟಾಗಿ ವಾಸಿಸುತ್ತಿದ್ದ ಸಹಜ ಬದುಕು ಇಂದು ಕಾಣುವುದು ಅಪರೂಪವಾಗಿದೆ. ಸಹಜ ಬಾಳ್ವೆ, ಸಹೋದರತೆ ಮತ್ತು ಒಗ್ಗಟ್ಟಿನ ಬದುಕಿನಲ್ಲಿಯೇ ನಾಡಿನ ಅಭಿವೃದ್ಧಿ ಅಡಗಿದೆ. ಭೌತಿಕವಾಗಿ ಎಷ್ಟೇ ಅಭಿವೃದ್ಧಿ ಸಾಧಿಸಿದರೂ ಬೌದ್ಧಿಕ ಹಾಗೂ ಮಾನವೀಯ ಮೌಲ್ಯಗಳಲ್ಲಿ ಹಿಂದುಳಿಯಬಾರದು ಎಂದು ಹೇಳಿದರು.
ಎಲ್ಲ ದಾರ್ಶನಿಕರು ಸಮಾಜ ಒಗ್ಗಟ್ಟಾಗಿ ಬಾಳಲು ಅಗತ್ಯವಾದ ಆದರ್ಶ ಮತ್ತು ಮೌಲ್ಯಗಳನ್ನು ನೀಡಿದ್ದಾರೆ. ಆ ಮೌಲ್ಯಗಳ ವಾರಸುದಾರರಾಗಿ ನಾವು ಬದುಕಬೇಕು ಎಂದು ಕರೆ ನೀಡಿದರು.
ಇದನ್ನೂ ಓದಿ: ಮತದಾರರ ಪಟ್ಟಿ ಪರಿಷ್ಕರಣೆ | ಚಿತ್ರದುರ್ಗದಲ್ಲಿ ಶೇ.90.15 ಗಣಕೀಕರಣ ಪೂರ್ಣ | ಡಿಸಿ
ಸಾಸಲಹಟ್ಟಿ ಗ್ರಾಮಕ್ಕೂ ಮುರುಘಾಮಠಕ್ಕೂ ಅವಿನಾಭಾವ ಸಂಬಂಧವಿದೆ ಎಂದು ಸ್ಮರಿಸಿದ ಶ್ರೀಗಳು, ತಮ್ಮ ಬಾಲ್ಯ ಜೀವನದಲ್ಲಿ ಗ್ರಾಮದ ಪ್ರಮುಖರಾದ ನಟರಾಜ್ ಅವರು ವಿದ್ಯಾಭ್ಯಾಸಕ್ಕೆ ಅವಕಾಶ ಕಲ್ಪಿಸಲು ಹಲವು ಕಡೆ ವಿಚಾರಿಸಿ, ಕೊನೆಗೆ ಕೊಡಗಿನ ಮುರುಘಾಮಠದ ಶಾಖಾಮಠವಾದ ಬೇಳೂರು ಮಠದಲ್ಲಿ ಶಿಕ್ಷಣಕ್ಕೆ ಅವಕಾಶ ದೊರಕಿಸಿಕೊಟ್ಟಿದ್ದನ್ನು ನೆನಪಿಸಿಕೊಂಡರು.
ಇದೇ ಗ್ರಾಮದ ತಾಯಿ ಮಾತೆ ಮಹಾದೇವಿಯವರು ಧಾರ್ಮಿಕ ಲಾಂಛನ ಸ್ವೀಕರಿಸಿ ಸ್ತ್ರೀಕುಲಕ್ಕೆ ಕಣ್ಮಣಿಯಾಗಿ, ಮಹಿಳಾ ಜಗದ್ಗುರುವಾಗಿ ಬಸವತತ್ವದ ಪ್ರಸಾರಕ್ಕೆ ಶ್ರಮಿಸಿದ್ದಾರೆ. ಅವರಂತಹ ಆದರ್ಶ ವ್ಯಕ್ತಿಗಳ ಹಾದಿಯಲ್ಲಿ ನಾವೆಲ್ಲರೂ ಸಾಗಬೇಕು ಎಂದು ಹೇಳಿದರು.
ಇದನ್ನೂ ಓದಿ: ಚಲಿಸುತ್ತಿದ್ದ ಕಾರಿಗೆ ಹಿಂಬದಿಯಿಂದ ಲಾರಿ ಡಿಕ್ಕಿ | ಇಬ್ಬರು ಸಾವು
ಕಾರ್ಯಕ್ರಮದಲ್ಲಿ ಕುಮಾರ್, ಕಂಟ್ರಾಕ್ಟರ್ ತಿಪ್ಪೇಸ್ವಾಮಿ, ಪಿ. ವೀರೇಂದ್ರಕುಮಾರ್, ಜಾಗತಿಕ ಲಿಂಗಾಯತ ಮಹಾಸಭಾದ ಬಸವರಾಜ ಕಟ್ಟಿ ಸೇರಿದಂತೆ ಹಲವರು ಉಪಸ್ಥಿತರಿದ್ದರು. ಜಮುರಾ ಕಲಾವಿದರು ವಚನಗೀತೆಗಳನ್ನು ಪ್ರಸ್ತುತಪಡಿಸಿದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

