
ಚಿತ್ರದುರ್ಗ ನ್ಯೂಸ್.ಕಾಂ: ವಿಜಯದಶಮಿ ಅಂಗವಾಗಿ ನಗರದಲ್ಲಿಂದು ಆರೆಸ್ಸೆಸ್ಸ್ (ರಾಷ್ಟ್ರೀಯ ಸ್ವಯಂ ಸೇವಕ) ಸಂಘ ಸ್ವಯಂಸೇವಕರ ಪಥಸಂಚಲನ ಹಮ್ಮಿಕೊಳ್ಳಲಾಗಿದೆ.
ಆರೆಸ್ಸೆಸ್ಸ್ ಸಂಸ್ಥಾಪನೆಯಾಗಿದ್ದು ವಿಜಯದಶಮಿ ದಿನವೇ ಆಗಿರುವುದರಿಂದ ದೇಶಾದ್ಯಂತ ವಿಜಯ ದಶಮಿ ಸಂದರ್ಭದಲ್ಲಿ ಸಂಘದ ಸ್ವಯಂಸೇವಕರು ಪಥ ಸಂಚಲನ ನಡೆಸುವ ಸಂಪ್ರದಾಯ ನಡೆದು ಬಂದಿದೆ.
ಅದರಂತೆ ಇಂದು ಚಿತ್ರದುರ್ಗದಲ್ಲಿ ಪಥ ಸಂಚಲನ ನಡೆಯಲಿದ್ದು, ಆರೆಸ್ಸೆಸ್ಸ್ ಗಣವೇಶ(ಯೂನಿಫಾರಂ) ಬಿಳಿ ಶರ್ಟ್, ಕಪ್ಪು ಟೋಪಿ, ಪ್ಯಾಂಟ್, ಶೂ ಹಾಗೂ ದಂಡದೊಂದಿಗೆ ಸುಮಾರು 500 ಮಂದಿ ಇಂದಿ ಪಥ ಸಂಚಲನದಲ್ಲಿ ಭಾಗವಹಿಸಲಿದ್ದಾರೆ.

ಇದನ್ನೂ ಓದಿ: ರಾಜ್ಯ ಸರ್ಕಾರದ ವಿರುದ್ಧ ಬೀದಿಗಿಳಿದ ಎಬಿವಿಪಿ
ಪಥಸಂಚಲನಕ್ಕೂ ಮೊದಲು ಬರಗೇರಮ್ಮ ದೇವಸ್ಥಾನದ ಬಳಿ ನಡೆಯುವ ವೇದಿಕೆ ಕಾರ್ಯಕ್ರಮದಲ್ಲಿ ಆರೆಸ್ಸೆಸ್ಸ್ ಕರ್ನಾಟಕ ಪ್ರಚಾರ ಪ್ರಮುಖ್ ಅರುಣ್ಕುಮಾರ್ ಸ್ವಯಂಸೇವಕರನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಆನಂತರ ಹೊಳಲ್ಕೆರೆ ರಸ್ತೆಯಲ್ಲಿರುವ ಶ್ರೀ ಬರಗೇರಮ್ಮ ದೇವಸ್ಥಾನದಿಂದ ಪಥ ಸಂಚಲನ ಪ್ರಾರಂಭವಾಗಲಿದ್ದು, ಬುರುಜನಹಟ್ಟಿ, ಚಿಕ್ಕಪೇಟೆ, ಆನೆಬಾಗಿಲು ಮೂಲಕ ಗಾಂಧಿ ವೃತ್ತ ತಲುಪಿ ಅಲ್ಲಿಂದ ಹೊಳಲ್ಕೆರೆ ರಸ್ತೆ ಮೂಲಕ ಮತ್ತೆ ಬರಗೇರಮ್ಮ ದೇವಸ್ಥಾನದ ಬಳಿ ಬಂದು ಸಮಾರೋಪಗೊಳ್ಳಲಿದೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
