CHITRADURGA NEWS | 25 JANUARY 2026
ಚಿತ್ರದುರ್ಗ: ನಮ್ಮ ಪೂರ್ವಿಕರ ಯಾವುದೇ ಆಚಾರಗಳು ವೈಜ್ಞಾನಿಕ ತಳದಿಯ ಮೇಲೆ ನಿರೂಪಿತವಾಗಿವೆ. ಆ ಕಾರಣಕ್ಕಾಗಿ ಅವರ ಪ್ರತಿಯೊಂದು ಆಚರಣೆಯಲ್ಲಿಯೂ ವೈಜ್ಞಾನಿಕತೆ ಬಿಟ್ಟಿಲ್ಲ ಎಂದು ಮುರುಘಾಮಠದ ಸಾಧಕರಾದ ಶ್ರೀ ಮುರುಘೇಂದ್ರ ಸ್ವಾಮೀಜಿ ತಿಳಿಸಿದರು.
ಇದನ್ನೂ ಓದಿ: ಸರ್ಕಾರಿ ಕಲಾ ಕಾಲೇಜು ಆವರಣದಲ್ಲಿ ಜಿಲ್ಲಾ ಮಟ್ಟದ ಉದ್ಯೋಗ ಮೇಳ | ಫೆಬ್ರವರಿ 01ಕ್ಕೆ
ರಥಸಪ್ತಮಿ ಅಂಗವಾಗಿ ಮುರುಘಾ ಮಠದ ಆವರಣದಲ್ಲಿರುವ ಅನುಭವ ಮಂಟಪದಲ್ಲಿ ನಿರಂತರವಾಗಿ ಉಚಿತವಾಗಿ ನಡೆಯುತ್ತಿರುವ ಆಯುಷ್ ಯೋಗ ಶಿಕ್ಷಣ ಕೇಂದ್ರದ ವತಿಯಿಂದ ಭಾನುವಾರ ಏರ್ಪಡಿಸಿದ್ದ ರಥಸಪ್ತಮಿ ಪ್ರಯುಕ್ತ ೧೦೮ ಸೂರ್ಯ ನಮಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಮಗೆ ಗೊತ್ತಿಲ್ಲದಂತೆ ವಿಜ್ಞಾನ ನಮ್ಮ ಆಚರಣೆಯಲ್ಲಿ ಇದ್ದೇ ಇದೆ. ಅದು ಮೂಡನಂಬಿಕೆ ಅಲ್ಲ, ವಿಜ್ಞಾನ. ವಿಜ್ಞಾನದಲ್ಲಿ ಅಂಧ ಆಚರಣೆಗಳನ್ನು ಆಚರಿಸಲು ಅವಕಾಶವಿಲ್ಲ. ಹಾಗೆಯೇ ಯೋಗವು ಸಹ ವೈಜ್ಞಾನಿಕ ತಳಹದಿಯ ಮೇಲೆ ನಿರೂಪಿತವಾಗಿದೆ. ಯಾವುದನ್ನೇ ಆಗಲಿ ನಾವು ಮೂಢನಂಬಿಕೆಯ ಆಧಾರದ ಮೇಲೆ ಆಚರಿಸುವುದಕ್ಕಿಂತ ಸತ್ಸಂಪ್ರದಾಯಗಳ ಆಚರಣೆಗೆ ಒತ್ತು ಕೊಡಬೇಕೆಂದು ಕರೆ ನೀಡಿದರು.
ನಾವು ಬೆಳಗ್ಗೆ ಬೇಗ ಏಳುವುದರಿಂದ, ಆ ಸಂದರ್ಭದ ನಡಿಗೆ ಅಥವಾ ಕೆಲಸಗಳಿಂದ ನಮಗೆ ಉತ್ತಮವಾದ ಆಕ್ಸಿಜನ್ ದೊರಕುತ್ತದೆ. ಬೋಧಿವೃಕ್ಷದ ಸುತ್ತುವುದಲ್ಲ. ಅದರ ಕೆಳಗೆ ಕುಳಿತು ಅಥವಾ ಧ್ಯಾನ ಮಾಡಿದರೆ ಎಷ್ಟೊಂದು ಬಗ್ಗೆ ಆಮ್ಲಜನಕ ನಮಗೆ ನಿರಾಯಸವಾಗಿ ದೊರಕುತ್ತದೆ. ಇನ್ನು ಹಳ್ಳಿಗಳಲ್ಲಿನ ಬೆಳಗಿನ ಚಟುವಟಿಕೆಗಳಂತೂ ಎಂತಹ ಹಿತಕರವಾಗಿರುತ್ತದೆ ಅದನ್ನು ಅನುಭವಿಸಿದವರಿಗೆ ಗೊತ್ತಿದೆ ಎಂದು ಮುರುಘೇಂದ್ರ ಸ್ವಾಮೀಜಿಗಳು ನುಡಿದರು.
ಇದನ್ನೂ ಓದಿ: 25 ಜನರಿಗೆ ಜೈಲು ಶಿಕ್ಷೆ | ಆಸ್ಪತ್ರೆ ಬಳಿ ಗುಂಪು ಗಲಾಟೆ ಮಾಡಿದ್ದ ಆರೋಪ
ಆಯುಷ್ ಯೋಗ ಕ್ಷೇಮ ಕೇಂದ್ರದ ಅಧ್ಯಕ್ಷ ಬಿ.ಆರ್.ಪ್ರಸನ್ನ ಕುಮಾರ್ ಮಾತನಾಡಿ, ರಥಸಪ್ತಮಿ ದಿನದಂದು ಸೂರ್ಯ ಜನ್ಮ ತಾಳಿದ ಬಗೆಗೆ ಮಾತನಾಡಿದರು.
ಯೋಗ ಶಿಕ್ಷಣ ಕೇಂದ್ರದ ಎಂ. ಆರ್. ಮಂಜುನಾಥ್ ಸ್ವಾಗತಿಸಿದರು. ಸಂಸ್ಥೆಯ ಕಾರ್ಯದರ್ಶಿ ಎಲ್. ಎಸ್ .ಬಸವರಾಜ್ ವಂದಿಸಿದರು ಸಂಸ್ಥೆಯ ನಿರ್ದೇಶಕರಾದ ಶಿವಕುಮಾರ್ .ಜಿ ಶಿವಯೋಗಿ, ಜಿ. ವೀರಣ್ಣ , ಲೋಕೇಶ್, ರಾಮಾಂಜನೇಯ ಮತ್ತಿತರ ಯೋಗಾಸಕ್ತರು ಭಾಗವಹಿಸಿ 108 ಸೂರ್ಯ ನಮಸ್ಕಾರವನ್ನು ನೆರವೇರಿಸಿದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
