CHITRADURGA NEWS | 12 AUGUST 2026
ಚಿತ್ರದುರ್ಗ: ಚಿತ್ರದುರ್ಗದ ಬಸವಕೇಂದ್ರ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಮಹಾಸಂಸ್ಥಾನದ ವತಿಯಿಂದ ಶ್ರಾವಣಮಾಸದ ಅಂಗವಾಗಿ ‘ಅನುಭಾವ ಶ್ರಾವಣ–ಶರಣ ಚಿಂತನ ಮಾಲಿಕೆ’ ಕಾರ್ಯಕ್ರಮವನ್ನು ಆ.13ರಿಂದ ಸೆ.10ರವರೆಗೆ 29 ದಿನಗಳ ಕಾಲ ಆಯೋಜಿಸಲಾಗಿದೆ.
ಇದನ್ನೂ ಓದಿ: ಮಳೆ ಕೊರತೆ | ಬಿತ್ತನೆ ವೈಫಲ್ಯ, ಮಧ್ಯಂತರ ಪರಿಹಾರಕ್ಕೆ ಶಿಫಾರಸ್ಸು ಮಾಡಿ | ರಘುಮೂರ್ತಿ
ಪ್ರತಿದಿನ ಬೆಳಗ್ಗೆ ಮೂಲಕರ್ತೃ ಮುರಿಗೆ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳ ಲೀಲಾವಿಶ್ರಾಂತಿ ಸ್ಥಾನದಲ್ಲಿ ವಚನಾಭಿಷೇಕ, ವಚನಪಠಣ, ಬಸವಲಿಂಗ ನಾಮಾವಳಿ ಹಾಗೂ ಪರಂಪರೆಯಲ್ಲಿ ಸಾಗಿಬಂದ ಮಹಾಸ್ವಾಮಿಗಳ ಭಾವಚಿತ್ರಗಳಿಗೆ ಗೌರವ ನಮನ ಸಲ್ಲಿಸಲಾಗುವುದು.
ಇದರೊಂದಿಗೆ ನಗರ ಹಾಗೂ ಜಿಲ್ಲೆಯ ವಿವಿಧೆಡೆ ಭಕ್ತರು, ವಿವಿಧ ಸಮಾಜಗಳು ಮತ್ತು ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಶಿವಯೋಗ ಇಷ್ಟಲಿಂಗ ಪೂಜಾವಿಧಾನ, ಲಿಂಗದೀಕ್ಷೆ ಹಾಗೂ ವಚನತತ್ವಾನುಷ್ಠಾನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.
32 ಪುಣ್ಯಪುರುಷರ ಜೀವನದರ್ಶನ
ಶ್ರಾವಣಮಾಸದ ಅಂಗವಾಗಿ ಪ್ರತಿದಿನ ಸಂಜೆ 6.45ರಿಂದ ಶ್ರೀಮಠದ ಬಸವೇಶ್ವರ ಸಭಾಂಗಣದಲ್ಲಿ ಬಸವಾದಿ ಶಿವಶರಣರ ತತ್ವಾದರ್ಶಗಳನ್ನು ಪ್ರಸಾರ ಮಾಡಿದ ಶಿವಯೋಗಿಗಳು, ಆಧ್ಯಾತ್ಮ ಸಾಧಕರು, ತತ್ವಪದಕಾರರು, ಬಸವತತ್ವನಿಷ್ಠ ಮಹಾಸ್ವಾಮಿಗಳು, ತ್ರಿವಿಧ ದಾಸೋಹಿಗಳು, ಸಾಮಾಜಿಕ ಹೋರಾಟಗಾರರು ಹಾಗೂ ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸಿದ ಪುಣ್ಯಪುರುಷರ ಜೀವನ ಮತ್ತು ಸಾಧನೆಯ ಕುರಿತು ವಿಶೇಷ ಉಪನ್ಯಾಸ ಏರ್ಪಡಿಸಲಾಗಿದೆ.
ಇದನ್ನೂ ಓದಿ: ವಿವಿ ಸಾಗರ, ಗಾಯತ್ರಿ ಜಲಾಶಯಗಳಿಗೆ ಸಾರ್ವಜನಿಕರು ಮತ್ತು ಪ್ರವಾಸಿಗರ ಪ್ರವೇಶ ತಾತ್ಕಾಲಿಕ ನಿಷೇಧ
ನಾಯಕನಹಟ್ಟಿ ತಿಪ್ಪೇರುದ್ರ ಸ್ವಾಮಿಗಳು, ಚೆಲುಮೆರುದ್ರ ಸ್ವಾಮಿಗಳು, ಮೃತ್ಯುಂಜಯಪ್ಪಗಳು, ಮಹಾಂತಪ್ಪಗಳು, ಮಂಟೇಸ್ವಾಮಿಗಳು, ಮಲೆಮಹದೇಶ್ವರರು, ಜಯದೇವಿತಾಯಿ ಲಿಗಾಡೆ, ಕೊಟ್ಟೂರು ಗುರುಬಸವೇಶ್ವರರು, ಕೋಲಶಾಂತೇಶ್ವರರು, ಭಾಲ್ಕಿ ಚೆನ್ನಬಸವಪಟ್ಟದೇವರು, ಶಿರಹಟ್ಟಿ ಫಕ್ಕೀರೇಶ್ವರರು, ನಿಜಗುಣ ಶಿವಯೋಗಿಗಳು, ಗುಬ್ಬಿ ಶ್ರೀ ಚೆನ್ನಬಸವೇಶ್ವರರು, ಕಲಬುರ್ಗಿ ಶರಣಬಸವೇಶ್ವರರು, ಕಾನಾಮಡುಗು ಶರಣರು, ಪಂಡಿತ ಪಂಚಾಕ್ಷರಿ ಪುಟ್ಟರಾಜ ಗವಾಯಿಗಳು, ಇಳಕಲ್ ವಿಜಯಮಹಾಂತ ಶಿವಯೋಗಿಗಳು, ಕಡಕೋಳದ ಮಡಿವಾಳಪ್ಪ, ಹಾನಗಲ್ ಕುಮಾರಸ್ವಾಮಿಗಳು, ಸಿದ್ಧಗಂಗಾ ಶಿವಕುಮಾರ ಸ್ವಾಮಿಗಳು, ಮೈಲಾರ ಬಸವಲಿಂಗ ಶರಣರು, ಮುಪ್ಪಿನ ಷಡಕ್ಷರಿಗಳು, ಷಣ್ಮುಖ ಶಿವಯೋಗಿಗಳು, ವಿಶ್ವಬಂಧು ಮರುಳಸಿದ್ದರು, ವಿಜಯಪುರದ ಸಿದ್ಧೇಶ್ವರ ಸ್ವಾಮಿಗಳು, ನಿಡಸೋಸಿಯ ಶಿವಯೋಗಿಗಳು, ಮುರಗೋಡು ಮಹಾಂತ ಶಿವಯೋಗಿಗಳು, ಸುತ್ತೂರು ಆದಿಜಗದ್ಗುರುಗಳು, ಶಿರಸಂಗಿಯ ಲಿಂಗರಾಜರು, ಮಹಾಲಿಂಗಪುರದ ಮಹಾಲಿಂಗೇಶ್ವರರು, ಕೂಡಲಸಂಗಮದ ಲಿಂಗಾನಂದ ಶ್ರೀಗಳು, ಕೊಪ್ಪಳದ ಗವಿಸಿದ್ದೇಶ್ವರ ಶ್ರೀಗಳು ಹಾಗೂ ದಾವಣಗೆರೆಯ ಶ್ರೀ ಗುರು ಬಕ್ಕೇಶ್ವರರು ಸೇರಿದಂತೆ 32 ಪುಣ್ಯಪುರುಷರ ಕುರಿತು ಅನುಭಾವಿಗಳಿಂದ ಉಪನ್ಯಾಸ ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ ಪ್ರತಿದಿನ ವಚನ ಸಂಗೀತ ಕಾರ್ಯಕ್ರಮವೂ ನಡೆಯಲಿದೆ. ಸರ್ವ ಸಮಾಜಗಳ ವಿವಿಧ ಸಂಘ-ಸಂಸ್ಥೆಗಳು, ಭಕ್ತರು, ಅಭಿಮಾನಿಗಳು, ಸಾರ್ವಜನಿಕರು ಹಾಗೂ ಎಸ್ಜೆಎಂ ವಿದ್ಯಾಸಂಸ್ಥೆಯ ಶಾಲಾ-ಕಾಲೇಜುಗಳ ಸಿಬ್ಬಂದಿ ಸಹಕಾರದೊಂದಿಗೆ ಕಾರ್ಯಕ್ರಮ ನಡೆಯಲಿದೆ.
ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳುವಂತೆ ಶ್ರೀಮಠದ ಪ್ರಕಟಣೆ ಮನವಿ ಮಾಡಿದೆ. ಕಾರ್ಯಕ್ರಮಕ್ಕೆ ಆಗಮಿಸುವವರಿಗೆ ಸಮಾರಂಭದ ಬಳಿಕ ಪ್ರಸಾದ (ಊಟ)ದ ವ್ಯವಸ್ಥೆ ಮಾಡಲಾಗಿದೆ.
ಇದನ್ನೂ ಓದಿ: ಚಿತ್ರದುರ್ಗ ಮಾರುಕಟ್ಟೆಯಲ್ಲಿ ಇಂದಿನ ಹತ್ತಿ ರೇಟ್ ಎಷ್ಟಿದೆ?
ನಗರದಿಂದ ಶ್ರೀಮಠಕ್ಕೆ ಆಗಮಿಸುವವರಿಗೆ ನೀಲಕಂಠೇಶ್ವರ ದೇವಸ್ಥಾನ ಹಾಗೂ ದೊಡ್ಡಪೇಟೆ ಕಡೆಯಿಂದ ವಾಹನ ವ್ಯವಸ್ಥೆ ಕಲ್ಪಿಸಲಾಗಿದೆ. ವಿವಿಧ ಬಡಾವಣೆಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವುದಾದರೆ ಮುಂಚಿತವಾಗಿ ಮಾಹಿತಿ ನೀಡಿದಲ್ಲಿ ಅಲ್ಲಿಂದಲೂ ಬಸ್ ವ್ಯವಸ್ಥೆ ಮಾಡಲಾಗುವುದು. ಹೆಚ್ಚಿನ ಮಾಹಿತಿಗಾಗಿ 8951140275, 9448295901, 9743996859 ಸಂಪರ್ಕಿಸಬಹುದು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

