ಹೆತ್ತ ತಂದೆಯನ್ನೇ ಕೊಂದ ಪಾಪಿ ಪುತ್ರ

Published on

CHITRADURGA NEWS | 27 OCTOBER 2024
ಹಿರಿಯೂರು: ಕ್ಷುಲ್ಲಕ ಕಾರಣಕ್ಕೆ ಹೆತ್ತ ತಂದೆಯನ್ನೇ ಮಗ ಕೊಲೆ ಮಾಡಿರುವ ಭೀಕರ ಘಟನೆ ನಡೆದಿದೆ.
ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕು ಕುಂದಲಗುರ ಗ್ರಾಮದಲ್ಲಿ ಈ ಘಟನೆ ನಡೆದಿದಿದೆ.
50 ವರ್ಷದ ರಂಗಸ್ವಾಮಿ ಕೊಲೆಯಾದ ದುರ್ದೈವಿ. ಕೊಲೆ ಮಾಡಿದ ಪಾಪಿ ಪುತ್ರ ದೇವರಾಜನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮನೆಯಲ್ಲಿ ಊಟದ ವಿಚಾರಕ್ಕೆ ಗಲಾಟೆ ನಡೆದಿದೆ ಎನ್ನಲಾಗಿದೆ.
ಘಟನಾ ಸ್ಥಳಕ್ಕೆ ಹೆಚ್ವುವರಿ ಪೊಲೀಸ್ ವರಿಷ್ಠಾಧಿಕಾರಿ ಕುಮಾರಸ್ವಾಮಿ, CPI ಗುಡ್ಡಪ್ಪ ಹಾಗೂ ಅಬ್ಬಿನಹೊಳೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ದೂರು ದಾಖಲಿಸಿಕೊಳ್ಳುತ್ತಿದ್ದಾರೆ.

Continue Reading
You may also like...
Related Topics:Abbinahole, Chitradurga news, crime, featured, Hiriyuru, Kannada News, Murder, Police, ಅಪರಾಧ, ಅಬ್ಬಿನಹೊಳೆ, ಕನ್ನಡ ಸುದ್ದಿ, ಕೊಲೆ, ಚಿತ್ರದುರ್ಗ, ಚಿತ್ರದುರ್ಗನ್ಯೂಸ್, ತಂದೆಯ ಕೊಲೆ, ಪೊಲೀಸ್, ಮಗನಿಂದ ಕೊಲೆ, ಹಿರಿಯೂರು

Click to comment