CHITRADURGA NEWS | 22 OCTOBER 2025
ಹೊಸದುರ್ಗ: ವಿವಿ ಸಾಗರ ಜಲಾಶಯ ಭರ್ತಿಯಾಗುತ್ತಿದ್ದಂತೆ ಒಂದೆಡೆ ಸಂಭ್ರಮ ಮನೆ ಮಾಡಿದರೆ, ಮತ್ತೊಂದೆಡೆ ಸಂಕಟವೂ ಪ್ರಾರಂಭವಾಗುತ್ತದೆ. ಜಲಾಶಯ ಭರ್ತಿಯಾಗುತ್ತಿದ್ದಂತೆ ನದಿಗೆ ನೀರು ಹರಿಯುತ್ತದೆ. ನದಿ, ಕಾಲುವೆ ಪಾತ್ರದ ರೈತರಿಗೆ ನೆರವಾಗುತ್ತದೆ.
ಆದರೆ, ಹಿನ್ನೀರು ಭಾಗದ ಹೊಸದುರ್ಗ ತಾಲೂಕಿನ ಲಕ್ಕಿಹಳ್ಳಿ, ಅಂಚಿಬಾರಿ, ಬೇವಿನಹಳ್ಳಿ, ಅಯ್ಯನಹಳ್ಳಿ, ಮಾಡದಕೆರೆ, ಪೂಜಾರಹಟ್ಟಿ, ಅತ್ತಿಮಗ್ಗೆ, ರಾಮಜ್ಜನಹಳ್ಳಿ, ಮತ್ತೋಡು ಹೋಬಳಿಯ ಹಲವು ಹಳ್ಳಿಗಳ ರೈತರ ಜಮೀನು, ತೋಟ ಮುಳುಗಡೆಯಾಗುತ್ತವೆ.
ಇದನ್ನೂ ಓದಿ: VANIVILASA SAGARA DAM: ವಿವಿ ಸಾಗರ ಕೋಡಿಯಲ್ಲಿ ಜಲ ವೈಭವ | ಮೈದುಂಬಿದ ವೇದಾವತಿ | ಮುಂದುವರೆದ ಮಳೆ
ಕಳೆದ ನಾಲ್ಕು ವರ್ಷಗಳಿಂದ ಈ ಸಮಸ್ಯೆ ಕಾಡುತ್ತಿದ್ದು, ಇದಕ್ಕೆ ಪರ್ಯಾಯ ವ್ಯವಸ್ಥೆ ಕಂಡುಕೊಳ್ಳಬೇಕು. ರೈತರ ಸ್ವಾಧೀನದಲ್ಲಿರುವ ಪರಿಹಾರ ಬಾರದ ಜಮೀನು ತೋಟ ಮುಳುಗಡೆ ಆಗಿದ್ದರೆ ಅವರಿಗೆ ಪರಿಹಾರ ಕಲ್ಪಿಸಬೇಕು ಎಂದು ಹೊಸದುರ್ಗ ತಾಲೂಕು ಆಡಳಿತ ಹಾಗೂ ಜಿಲ್ಲಾ ಆಡಳಿತ ಚಿಂತನೆ ನಡೆಸಿ ಸಮೀಕ್ಷೆಯನ್ನೂ ನಡೆಸಿವೆ.
ಹೊಸದುರ್ಗ ಶಾಸಕ ಬಿ.ಜಿ.ಗೋವಿಂದಪ್ಪ ತುರ್ತು ಸುದ್ದಿಗೋಷ್ಠಿ:
ವಿವಿ ಸಾಗರ ಭರ್ತಿಯಾದ ವಿಚಾರವಾಗಿ ಅ.21 ರಂದು ಹೊಸದುರ್ಗ ಶಾಸಕ ಬಿ.ಜಿ.ಗೋವಿಂದಪ್ಪ ತುರ್ತು ಸುದ್ದಿಗೋಷ್ಠಿ ನಡೆಸಿದ್ದು, ಹಿನ್ನೀರು ಭಾಗದ ರೈತರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ. ನಮ್ಮ ಮೇಲೆ ಭರವಸೆ ಇಟ್ಟು ತಾಲೂಕಿನ ಜನತೆ ಮತ ಹಾಕಿದ್ದಾರೆ. ಅವರ ಋಣ ತೀರಿಸುವ ಕೆಲಸ ಮಾಡುತ್ತೇನೆ ಎಂದಿದ್ದಾರೆ.
ಇದನ್ನೂ ಓದಿ: ವಿದ್ಯಾರ್ಥಿ ಮೇಲೆ ಹಲ್ಲೆ ಪ್ರಕರಣ | ಶಿಕ್ಷಕ ಅಮಾನತು | ಡಿಸಿ ಸೂಚನೆ
ಹಿನ್ನೀರು ಭಾಗದ ಹಲವು ಹಳ್ಳಿಗಳಿಗೆ ಭೇಟಿ ನೀಡಿದ ನಂತರ ಮಾತನಾಡಿದ ಅವರು, ಕಳೆದ ಒಂದು ವಾರದಿಂದ ಅಜ್ಜಂಪುರ, ತರೀಕೆರೆ, ಅರಸಿಕೆರೆ, ಹೊಸದುರ್ಗ ಭಾಗದಲ್ಲಿ ಅಧಿಕ ಮಳೆಯಾಗುತ್ತಿದ್ದು, ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ ಎಂದಿದ್ದಾರೆ.
ಈಗಾಗಲೇ. ಜಲಾಶಯ 132 ಅಡಿ ತಲುಪಿದ್ದು, ತೂಬಿನಿಂದಲೂ ನೀರನ್ನು ಹೊರಗೆ ಹರಿಸಲಾಗುತ್ತಿದೆ. ವಿಶ್ವೇಶ್ವರಯ್ಯ ಜಲ ನಿಗಮದ ಅಧಿಕಾರಿಗಳು ಲಕ್ಕಿಹಳ್ಳಿ, ಮಾಡದಕೆರೆ, ಡೊಡ್ಡಕಿಟ್ಟದಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ವರದಿಯನ್ನು ಡಿಸಿಎಂ ಕಚೇರಿಗೂ ನೀಡಲಾಗಿದೆ ಎಂದರು.
ಇದನ್ನೂ ಓದಿ: ವಿದ್ಯಾರ್ಥಿಗೆ ಮನಬಂದಂತೆ ಥಳಿಸಿದ ಶಿಕ್ಷಕ | ಗುಲ್ಬರ್ಗಾದಲ್ಲಿ ಬಂಧಿಸಿದ ಪೊಲೀಸರು
ಅಂತಿಮ ರೂಪು ರೇಷೆ ನಿಗಧಿ ಮಾಡಿ 130 ಅಡಿಗೆ ನೀರು ನಿಲ್ಲಿಸಲಾಗುವುದು. ಇದಕ್ಕಾಗಿ ಅಂದಾಜು 200 ಕೋಟಿ ರೂ. ವೆಚ್ಚದಲ್ಲಿ ಕ್ರಸ್ಟ್ ಗೇಟ್ ಅಳವಡಿಸಲು ಟೆಂಡರ್ ಪ್ರಕ್ರಿಯೆ ನಡೆಯಲಿದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ. ಇದೇ ತಿಂಗಳ ಅಂದರೆ, ಅ.26 ರಂದು ಸಭೆ ನಿಗಧಿಯಾಗಿದೆ. 124 ಕೋಟಿ ರೂ.ಗಳಿಗೆ ಅನುಮೋದನೆಯಾಗಿ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
