CHITRADURGA NEWS | 13 JULY 2026
ಚಿತ್ರದುರ್ಗ: ರೋಟರಿಕ್ಲಬ್ ಸೇವೆ, ಜಾಗತಿಕ ಶಾಂತಿ ಆಶಯವಾಗಿದೆ ಎಂದು ರೋಟರಿ ಡಿಸ್ಟ್ರಿಕ್ಟ್ ಗೌರ್ನರ್ ಎಲೆಕ್ಟ್ ಪಿ.ಹೆಚ್.ಎಫ್. ಡಾ.ತ್ರಿವಿಕ್ರಮ್ ಜೋಷಿ ಅಭಿಪ್ರಾಯ ವ್ಯಕ್ತಪಡಿಸಿದರು.
ಇದನ್ನೂ ಓದಿ: ಈಗೀಗ ಮನುಷ್ಯ- ಮನುಷ್ಯರ ನಡುವೆ ಹೊಂದಾಣಿಕೆ, ಸಹಬಾಳ್ವೆ ಇಲ್ಲ | ಡಾ.ಕೇದಾರಲಿಂಗ ಶ್ರೀಗಳು
ನಗರದ ಎಸ್.ಆರ್.ಬಿ.ಎಂ.ಎಸ್ ರೋಟರಿ ಬಾಲಭವನದಲ್ಲಿ ನಡೆದ 2026-27ನೇ ಸಾಲಿನ ರೋಟರಿ ಕ್ಲಬ್ ಆಫ್ ಚಿತ್ರದುರ್ಗದ ನೂತನ ಅಧ್ಯಕ್ಷರಾಗಿ ಯೋಗೀಶ್ ಸಹ್ಯಾದ್ರಿ ಮತ್ತು ರೋಟರಿ ಕ್ಲಬ್ ಆಫ್ ಚಿತ್ರದುರ್ಗ ಕಾರ್ಯದರ್ಶಿಯಾಗಿ ಕೆ.ಜಿ.ಮಂಜುನಾಥ್ ಅವರ ಪದಾಧಿಕಾರಿಗಳಿಗೆ ಪ್ರಮಾಣ ವಚನ ಬೋಧಿಸಿ ಮಾತನಾಡಿದ ಅವರು,
ಪರಿಸರ ಸಂರಕ್ಷಣೆಗೂ ರೋಟರಿ ಆದ್ಯತೆ ನೀಡಿದೆ. ಜೊತೆಗೆ ಜನಸಂಖ್ಯೆ ಸ್ಫೋಟ ಸ್ವಾರ್ಥಕ್ಕಾಗಿ ನಿರಂತರವಾಗಿ ಪರಿಸರವನ್ನು ಹಾಳು ಮಾಡುತ್ತಿದ್ದೇವೆ. ಅಭಿವೃದ್ಧಿ ಯೋಜನೆಗಳ ನೆಪದಲ್ಲಿ ಕಟ್ಟಡ, ರಸ್ತೆ, ಅಣೆಕಟ್ಟೆಗಾಗಿ ವಿಪರೀತ ಅರಣ್ಯನಾಶವಾಗಿದೆ. ಗಣಿಗಾರಿಕೆ ಬೆಟ್ಟ ಗುಡ್ಡಗಳನ್ನೂ ಉರುಳಿಸಿದೆ. ಹರಿಯುವ ನೀರನ್ನು ಇವೆಲ್ಲದರ ತಾಪಮಾನ ಕಲುಷಿತಗೊಳಿಸಿದ್ದೇವೆ. ಪರಿಣಾಮ ವಿಪರೀತವಾಗಿ ಜಾಗತಿಕ ಹೆಚ್ಚಿ ಆತಂಕದಾಯಕ 43 ನಿರ್ಮಾಣ ಮಾಡಿದೆ.
ಗಿಡಮರಗಳನ್ನು ಬೆಳೆಸುವುದರ ಜೊತೆಗೆ ಪರಿಸರದ ಸಂರಕ್ಷಣೆ, ನೀರಿನ ಹಿತಮಿತವಾದ ಬಳಕೆಯನ್ನು ರೋಟರಿ ಪ್ರೋತ್ಸಾಹಿಸುತ್ತಲೇ ಬಂದಿದೆ ಎಂದವರು ವಿವರಿಸಿ ಹೊಸಚಿಗುರು ಹಳೆಬೇರು ಕೂಡಿರುವ ಮರ ಸೊಬಗು ಎಂಬಂತೆ ರೋಟರಿಯಲ್ಲಿ ಯುವಕರು ಪ್ರಮುಖ ಪಾತ್ರವಹಿಸುತ್ತಿದ್ದಾರೆ.
ಇದನ್ನೂ ಓದಿ: PM ವಿಶ್ವಕರ್ಮ ಯೋಜನೆ | ಜುಲೈ 14 ರಿಂದ 24 ರವರೆಗೆ ಸಾಲ ಸಂಪರ್ಕ ಶಿಬಿರ
ಹಿರಿಯರು ಮಾರ್ಗದರ್ಶನ ನೀಡುತ್ತಿದ್ದು ಸಮಾಜಮುಖಿ ಸೇವೆ ಕಾರ್ಯಗಳಲ್ಲಿ ಮತ್ತು ಸಕ್ರಿಯವಾಗಿ ಗೊತ್ತಾಗುತ್ತದೆ. ನಿಸ್ವಾರ್ಥವಾದ ಸೇವೆಯಲ್ಲಿ ಸಂತೃಪ್ತಿ ಸಿಗುತ್ತದೆ. ಹೆಚ್ಚೆಚ್ಚು ವೃತ್ತಿಪರರು ರೋಟರಿ ಆಂದೋಲನವನ್ನು ಸೇರಿ ಮಾಡುವಂತಾಗಬೇಕು ಎಂದರು.
ರೋಟರಿ ಕ್ಲಬ್ ಚಿತ್ರದುರ್ಗ ಜನತೆಗೆ ಅನುಕೂಲಕರವಾದ ಸೇವಾ ಕೇಂದ್ರವನ್ನು ನಿರ್ಮಾಣ ಮಾಡಿ, ಜನತೆಗೆ ಕಡಿಮೆ ವೆಚ್ಚದಲ್ಲಿ ಚಿಕಿತ್ಸೆಯನ್ನು ನೀಡುತ್ತಿದೆ, ಇದರೊಂದಿಗೆ ಅನೇಕ ಜನಪರ ಕಾರಯೋಜನೆಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ.
ರೋಟರಿ ಫೌಂಡೇಶನ ಮೂಲಕ ಆರ್ಥಿಕ ನೆರವು ಸೇವಾಕಾರಗಳಿಗೆ ನೀಡಲಾಗುತ್ತಿದೆ. ಕ್ಲಬ್ ನೀಡಿದ ಕೊಡುಗೆಗೆ ದುಪ್ಪಟ್ಟು ಹಣ ಸೇವಾಯೋಜನೆಗಳಿಗೆ ವಾಪಾಸ್ಸು ಬರುತ್ತಿದೆ ಇಲ್ಲಿಯ ಸದಸ್ಯರು ಅಂತರರಾಷ್ಟ್ರೀಯ ರೋಟರಿಗೆ ಕೊಡುಗೆ ನೀಡಿದ್ದಾರೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ಉತ್ತಮ ಕಾವ್ಯಗಳನ್ನು ನಿರೀಕ್ಷಿಸುವುದಾಗಿ ನುಡಿದರು.
ಇದನ್ನೂ ಓದಿ: ಸಕಲ ಸರ್ಕಾರಿ ಗೌರವದೊಂದಿಗೆ ಎಚ್.ಹನುಮಂತಪ್ಪ ಅಂತಿಮ ವಿದಾಯ | ಸಿಎಂ ಡಿಕೆಶಿ ಗೌರವ ನಮನ
ರೋಟರಿ ಕ್ಲಬ್ ನೂತನ ಅಧ್ಯಕ್ಷ ಯೋಗೀಶ್ ಸಹ್ಯಾದ್ರಿ ಮಾತನಾಡಿ, ಚಿತ್ರದುರ್ಗ ರೋಟರಿ ಕ್ಲಬ್ ನ ಅಧ್ಯಕ್ಷರಾಗಿ ಆಯ್ಕೆಯಾಗಿರುವುದಕ್ಕೆ ಹೆಮ್ಮೆ ಇದೆ. ಕಿರಿಯ ವಯಸ್ಸಿನ ತಮಗೆ ಹಿರಿಯರೆಲ್ಲಾ ಸೇರಿ ದೊಡ್ಡ ಹೊಣೆಗಾರಿಕೆ ನೀಡಿರುವುದು ಸಂತೋಷದ ರೋಟರಿ ಅಪೇಕ್ಷೆಯಂತೆ ಪದಾಧಿಕಾರಿಗಳು ಮತ್ತು ಸದಸ್ಯರ ಸಲಹೆ-ಸಂಗತಿ, ಎಲ್ಲರ ಸಹಕಾರ ಪಡೆದು ಉತ್ತಮ ಕಾರ್ಯಚಟುವಟಿ ಹಮ್ಮಿಕೊಳ್ಳಲಾಗುವುದು.
ಸಮಾಜ ಸೇವೆ ಮಾಡುವ ಅವಕಾಶ ಕೇವಲ ಕೆಲವು ವ್ಯಕ್ತಿಗಳಿಗೆ ದೊರೆಯುತ್ತದೆ. ಎಲ್ಲ ಕ್ಷೇತ್ರಗಳಲ್ಲಿಯೂ ಪ್ರತಿಯೊಬ್ಬರಿಗೂ ಸಾಧನೆ ಮಾಡುವ ಅವಕಾಶ ಇದೆ.
ರೋಟರಿ ಅಧ್ಯಕ್ಷರಾಗಿ ನಾನು ಚಿತ್ರದುರ್ಗ ಜಿಲ್ಲೆಯ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಅಭಿವೃದ್ಧಿಪಡಿಸುವ ಹಂಬಲವಿದೆ. ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಹಾಗೂ ಯುವಕರಿಗೆ, ಮಹಿಳೆಯರ ಉನ್ನತಿಗಾಗಿ ಶ್ರಮಿಸುವ ಕಾರ್ಯಚಟುವಟಿಕೆಗಳನ್ನು ರೂಪಿಸುತ್ತೇನೆ.
ಇದನ್ನೂ ಓದಿ: ಡಿವೈಡರ್ಗೆ ಅಪ್ಪಳಿಸಿದ ಬಸ್ | 28 ಪ್ರಯಾಣಿಕರಿಗೆ ಗಾಯ | ಇಬ್ಬರು ಮೃತ
ಚಿತ್ರದುರ್ಗ ಜಿಲ್ಲಾ ಮಟ್ಟದ ಅಧಿಕಾರಿಗಳ ಜೊತೆ ಸಮಾಲೋಚನೆ ನಡೆಸುವ ಮೂಲಕ ಜಿಲ್ಲೆಯ ಅಭಿವೃದ್ಧಿಗೆ ರೋಟರಿ ಕ್ಲಬ್ ಮೂಲಕ ಸಹಕರಿಸುವುದಾಗಿ ತಿಳಿಸಿದರು.
ಐಪಿಡಿಜಿ ಎಂ.ಕೆ.ರವೀಂದ್ರ, ಪಿಡಿಜಿ ಕೆ.ಮಧುಪ್ರಸಾದ್, ಹಾಲಿ ಅಧ್ಯಕ್ಷ ಎ.ಎಂ. ಭಾಗ್ಯಲಕ್ಷ್ಮೀ, ಕಾರ್ಯದರ್ಶಿ ಜಿ.ವಿ.ಅನುರಾಧ ಭಾಗವಹಿಸಿದ್ದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

