
CHITRADURGA NEWS | 04 DECEMBER 2025
ಚಿತ್ರದುರ್ಗ: ನಗರದ ಮುರುಘಾ ಮಠದಲ್ಲಿ ಶಿವಶರಣ ಶ್ರೀ ಮಾದಾರ ಚನ್ನಯ್ಯ ಜಯಂತಿ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಸ್ಜೆಎಂ ವಿದ್ಯಾಪೀಠ ಹಾಗೂ ಮುರುಘಾ ಮಠದ ಆಡಳಿತ ಮಂಡಳಿ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿ ಮಾತನಾಡಿ, ಶಿವಶರಣ ಮಾದಾರ ಚೆನ್ನಯ್ಯ ಬಸವಾದಿ ಶರಣರ ಕಾಲದಲ್ಲಿ ಇದ್ದಂತಹ ಮಹಾನುಭಾವರು ಎಂದು ಬಣ್ಣಿಸಿದರು.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಡಿಸೆಂಬರ್ 04 | ಹತ್ತಿ ರೇಟ್ ಎಷ್ಟಿದೆ?
ಅಂದು ತಮ್ಮ ಊರಿನಲ್ಲಿರುವ ಬಾವಿ, ಕೆರೆಯ ನೀರು ಕುಡಿಯುವಂತಿರಲಿಲ್ಲ. ಓಡಾಡುವಾಗ ಹಿಂದೆ ಪೊರಕೆ ಕಟ್ಟಿಕೊಂಡು ಓಡಾಡಬೇಕಿತ್ತು. ಏನಾದರೂ ಘೋಷಣೆಗಳು ಕೇಳಿಬರುತ್ತಿದ್ದರೆ ಕಿವಿ ಮುಚ್ಚಿಕೊಳ್ಳಬೇಕಿತ್ತು.
ಹೀಗೆ ಒಬ್ಬ ಮನುಷ್ಯ ಇನ್ನೊಬ್ಬನನ್ನು ಕೀಳಾಗಿ ನೋಡುವ ವ್ಯವಸ್ಥೆ ಇತ್ತು. ಇಂಥ ಕಾಲಘಟ್ಟದಲ್ಲಿ ಬಸವಣ್ಣನವರು ಮಾದಾರ ಚೆನ್ನಯ್ಯ, ಡೋಹರ ಕಕ್ಕಯ್ಯ, ಅಂಬಿಗರ ಚೌಡಯ್ಯ, ಮಡಿವಾಳ ಮಾಚಯ್ಯ, ಹಡಪದ ಅಪ್ಪಣ್ಣನವರನ್ನು ಪಕ್ಕದಲ್ಲಿಟ್ಟುಕೊಂಡು ಯಾವುದೇ ಜಾತಿ ಕನಿಷ್ಟ ಮತ್ತು ಶ್ರೇಷ್ಠವಲ್ಲ ಎಂದು ಸಾರಿದರು. ಬಸವಣನವರು ಉತ್ತಮ ಕುಲದಲ್ಲಿ ಜನಿಸಿದರೂ ಜಾತಿ ವ್ಯವಸ್ಥೆಯನ್ನು ಹೋಗಲಾಡಿಸಲು ಶ್ರಮಿಸಿದರು ಎಂದು ಹೇಳಿದರು.
ಇದನ್ನೂ ಓದಿ: ಹಿರಿಯೂರು ನಗರಕ್ಕೆ 100 ಕೋಟಿ | ಒಳಚರಂಡಿ ಯೋಜನೆಗೆ ಆಡಳಿತಾತ್ಮಕ ಅನುಮೋದನೆ
21ನೇ ಶತಮಾನದಲ್ಲಿ ಇಷ್ಟೊಂದು ಆಧುನಿಕತೆ, ತಂತ್ರಜ್ಞಾನ ಬೆಳೆದರೂ ಸಮಾಜದಲ್ಲಿ ಜಾತಿ ಮೂಲಕ ವ್ಯಕ್ತಿಯ ವ್ಯಕ್ತಿತ್ವವನ್ನು ಗುರುತಿಸುವ ಕೆಲಸ ನಡೆಯುತ್ತಿದೆ ಎಂದು ಬಸವಕುಮಾರ ಸ್ವಾಮೀಜಿ ವಿಷಾಧ ವ್ಯಕ್ತಪಡಿಸಿದರು.

12ನೇ ಶತಮಾನದಲ್ಲಿ ಅಸಮಾನತೆ, ಜಾತಿ ವ್ಯವಸ್ಥೆಯ ವಿರುದ್ಧ ಕ್ರಾಂತಿಯಾಯಿತು. ಬಸವಣ್ಣನವರಿಗೆ ಜಾತಿವ್ಯವಸ್ಥೆ ಎಂಬುದು ಅತ್ಯಂತ ಸವಾಲಿನ ಹಾದಿಯಾಗಿತ್ತು. 950 ವರ್ಷಗಳ ಹಿಂದೆ ಜಾತಿ ವ್ಯವಸ್ಥೆಯು ಒಬ್ಬ ವ್ಯಕ್ತಿ ಭೂಮಿಯ ಮೇಲೆ ಬದುಕಲು ಯೋಗ್ಯನಲ್ಲ ಎಂಬಷ್ಟು ಕೆಟ್ಟದಾಗಿತ್ತು ಎಂದು ವಿವರಿಸಿದರು.
ಇದನ್ನೂ ಓದಿ: ಸಿಎಂ ಹುದ್ದೆ ಬದಲಾದರೆ ಡಾ.ಪರಮೇಶ್ವರ್ ಅವರಿಗೆ ಆದ್ಯತೆ ಕೊಡಿ
ಶ್ರೀ ಮುರುಘೇಂದ್ರ ಸ್ವಾಮಿಗಳು ಮಾತನಾಡಿ, ಅಷ್ಟಾವರಣದಲ್ಲಿ ಅರಿವು, ಪಂಚಾಚಾರದಲ್ಲಿ ಆಚಾರ ಮತ್ತು ಆರು ಸ್ಥಲಗಳಲ್ಲಿ ಅನುಭಾವ ಪಡೆದಿದ್ದ ಮಾದಾರಚೆನ್ನಯ್ಯನವರು ಹಿರಿಯ ಶರಣರಾಗಿದ್ದರು. ಇವರು ಸಾಕಷ್ಟು ವಚನಗಳನ್ನು ರಚಿಸಿದ್ದಾರೆ. ಇವರು ಮೂಲತಃ ತಮಿಳುನಾಡಿನವರು. ತಮಿಳುನಾಡಿನ ಈಗಿನ ಚೆನ್ನೈ ಮೊದಲು ಬ್ರಿಟೀಷರು ಇದ್ದಾಗ ಮದ್ರಾಸ್ ಎಂದಿತ್ತು. ಈ ಸ್ಥಳಕ್ಕೆ ಮದ್ರಾಸ್ ಎಂದರೆ ಮಾದಾರ, ಚನ್ನೈ ಎಂದರೆ ಚೆನ್ನಯ್ಯ ಎಂಬ ರೀತಿಯಲ್ಲಿ ಎರಡು ಹೆಸರು ಕೂಡಿ ಮಾದಾರ ಚೆನ್ನಯ್ಯ ಎನ್ನುತ್ತಿದ್ದುದು ಇತಿಹಾಸ. ಶರಣರ ಎಷ್ಟೋ ಕ್ಷೇತ್ರಗಳು ಕಾಲಗತಿಯಲ್ಲಿ ನಮ್ಮ ಕಣ್ಣಿಗೆ ಕಾಣದೆ ಅಡಗಿವೆ. ಅವುಗಳ ಇತಿಹಾಸವನ್ನು ಪುನಃ ತೆಗೆಯಬೇಕು. ಅಂತಹ ಇತಿಹಾಸವನ್ನು ಮಾದಾರ ಚೆನ್ನಯ್ಯ ಶರಣರು ಹೊಂದಿದ್ದಾರೆ ಎಂದರು.
ಇದನ್ನೂ ಓದಿ: ಟ್ರ್ಯಾಕ್ಟರ್ ಟ್ರಾಲಿಗೆ ರಿಪ್ಲೆಕ್ಟರ್ ಅಳವಡಿಕೆ ವಿಚಾರ | RTO ಬಗ್ಗೆ ಅಸಮಧಾನ
ಸಭೆಯಲ್ಲಿ ಶಿವಮೂರ್ತಯ್ಯ ಸಿ.ಎಂ., ಮೇಘನ ಜಿ.ಸಿ., ಶ್ರೀಧರ್ ಪಿ ವಿಷಯ ಮಂಡನೆ ಮಾಡಿದರು.
ವಿಜಯಲಕ್ಷ್ಮೀ ಮತ್ತು ದೇವಿಕಾ ವಚನ ಪಠಣ ಮಾಡಿದರು. ಎಸ್.ಜೆ.ಎಂ. ಕನ್ನಡ ಮಾಧ್ಯಮ ಶಾಲೆ ಹಾಗೂ ಬಸವೇಶ್ವರ ವೈದ್ಯಕೀಯ ಮಹಾವಿದ್ಯಾಲಯದ ಸಹಯೋಗದಲ್ಲಿ ಕಾರ್ಯಕ್ರಮ ಸಂಘಟಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಸಹಶಿಕ್ಷಕ ನಾಗರಾಜ ಟಿ. ಸ್ವಾಗತಿಸಿದರು. ನಿರ್ಮಲ ಎಲ್. ನಿರೂಪಿಸಿದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
