Connect with us

    KSRTC ಬಸ್ ಹರಿದು ಕುರಿಗಾಯಿ ರಾಜಪ್ಪ ಹಾಗೂ 21 ಕುರಿಗಳ ದುರ್ಮರಣ

    21 ಕುರಿಗಳ ದುರ್ಮರಣ

    ಮುಖ್ಯ ಸುದ್ದಿ

    KSRTC ಬಸ್ ಹರಿದು ಕುರಿಗಾಯಿ ರಾಜಪ್ಪ ಹಾಗೂ 21 ಕುರಿಗಳ ದುರ್ಮರಣ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 27 MAY 2024

    ಚಿತ್ರದುರ್ಗ: KSRTC ಬಸ್ ಹರಿದು ಕುರಿಗಳನ್ನು ಕರೆದುಕೊಂಡು ಹೋಗುತ್ತಿದ್ದ ವ್ಯಕ್ತಿ ಸೇರಿದಂತೆ 21 ಕುರಿಗಳು ಮೃತಪಟ್ಟಿವೆ.

    ಚಿತ್ರದುರ್ಗ ಹೊರವಲಯದ ರಾಷ್ಟ್ರೀಯ ಹೆದ್ದಾರಿ 13 ರಲ್ಲಿ ಈರಜ್ಜನಹಟ್ಟಿ ಗೇಟ್ ಬಳಿ ಈ ಅವಘಡ ನಡೆದಿದೆ.

    ಇದನ್ನೂ ಓದಿ: ಮೊಳಕಾಲ್ಮೂರು ಘಟನೆಗೆ ಬೆಸ್ಕಾಂ ಸ್ಪಷ್ಟನೆ | ಹಾಗಾದರೆ ಅಂದು ರಾತ್ರಿ ಎಷ್ಟೊತ್ತು ವಿದ್ಯುತ್ ಇರಲಿಲ್ಲ

    ಚಳ್ಳಕೆರೆ ತಾಲೂಕು ನೆಲಗೇತನಹಟ್ಟಿ ನಿವಾಸಿ ರಾಜಪ್ಪ(30) ಸ್ಥಳದಲ್ಲೇ ಮೃತಪಟ್ಟರೆ, ಮತ್ತೋರ್ವ ಕುರಿಗಾಯಿ ತಿಪ್ಪಣ್ಣ ಗಂಭೀರವಾಗಿ ಗಾಯಗೊಂಡು ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ದಾಖಲಾಗಿದ್ದಾರೆ.

    ಮಳೆ ಇಲ್ಲದೆ ಮೇವು, ನೀರಿಗೆ ಸಮಸ್ಯೆ ಆಗಿದ್ದ ಕಾರಣಕ್ಕೆ ಚನ್ನಗಿರಿ ಭಾಗಕ್ಕೆ ನೆಲಗೇತನಹಟ್ಟಿಯಿಂದ ಕುರಿ ಮೇಯಿಸಲು ಹೋಗಿದ್ದರು. ಕಳೆದ ಹತ್ತು ದಿನಗಳಿಂದ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ವಾಪಾಸು ಊರಿಗೆ ಮರಳುತ್ತಿದ್ದಾಗ ಈ ಅವಘಡ ನಡೆದಿದೆ.

    ಇದನ್ನೂ ಓದಿ: ಕಾಂಗ್ರೆಸ್ OPS ಪರವಾಗಿದೆ | MLC ಪುಟ್ಟಣ್ಣ

    ಸುಮಾರು 2 ಲಕ್ಷಕ್ಕೂ ಹೆಚ್ಚು ಮೌಲ್ಯದ 21 ಕುರಿಗಳು ಈರಜ್ಜನಹಟ್ಟಿ ರಸ್ತೆ ಬದಿಯಲ್ಲಿವೆ.

    ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, KSRTC ಬಸ್ ಪೊಲೀಸರ ವಶದಲ್ಲಿದೆ.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top