By using this site, you agree to the Privacy Policy and Terms of Use.
Accept
Chitradurga News-Kannada NewsChitradurga News-Kannada NewsChitradurga News-Kannada News
Notification
Font ResizerAa
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Reading: ಉಗುರುಗಳು ಆಗಾಗ ತುಂಡಾಗುತ್ತಿದ್ದರೆ ಅದು ಈ 5 ರೋಗದ ಲಕ್ಷಣವಂತೆ
Share
Font ResizerAa
Chitradurga News-Kannada NewsChitradurga News-Kannada News
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Search
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Follow US
© 2022 Foxiz News Network. Ruby Design Company. All Rights Reserved.

Home » ಉಗುರುಗಳು ಆಗಾಗ ತುಂಡಾಗುತ್ತಿದ್ದರೆ ಅದು ಈ 5 ರೋಗದ ಲಕ್ಷಣವಂತೆ

Life Style

ಉಗುರುಗಳು ಆಗಾಗ ತುಂಡಾಗುತ್ತಿದ್ದರೆ ಅದು ಈ 5 ರೋಗದ ಲಕ್ಷಣವಂತೆ

News Desk Chitradurga News
Last updated: 15 May 2025 21:08
News Desk Chitradurga News
1 month ago
Share
SHARE
https://chat.whatsapp.com/Jhg5KALiCFpDwME3sTUl7x

CHITRADURGA NEWS | 16 may 2025

ಸಾಮಾನ್ಯವಾಗಿ, ಉಗುರುಗಳು ದುರ್ಬಲಗೊಂಡು ಮುರಿಯಲು ಶುರುಮಾಡಿದಾಗ ಯಾರೂ ಅದರ ಬಗ್ಗೆ ವಿಶೇಷ ಗಮನ ಹರಿಸುವುದಿಲ್ಲ. ಸರಿಯಾದ ಕಾಳಜಿ ವಹಿಸದಿದ್ದರೆ ಮಾತ್ರ ಉಗುರುಗಳು ಮುರಿಯುತ್ತವೆ ಎಂದು ಹೆಚ್ಚಿನ ಜನರು ಭಾವಿಸುತ್ತಾರೆ. ಆದರೆ, ಇದು ನಿಜವಲ್ಲ. ದುರ್ಬಲ ಉಗುರುಗಳು ನಿಮ್ಮ ಕಳಪೆ ಆರೋಗ್ಯವನ್ನು ಸೂಚಿಸುತ್ತವೆ. ಆದ್ದರಿಂದ, ನಿಮ್ಮ ಉಗುರುಗಳು ದುರ್ಬಲವಾಗಿ ಆಗಾಗ ತುಂಡಾಗುತ್ತಿದ್ದರೆ ಅದು ಈ ರೋಗಗಳ ಲಕ್ಷಣ ಎಂದು ತಿಳಿದುಕೊಳ್ಳಿ.

ಥೈರಾಯ್ಡ್‍

ಥೈಯಾಯ್ಡ್ ಎಂದಾಕ್ಷಣ ಕೂದಲು ದುರ್ಬಲವಾಗುವುದು ಮತ್ತು ತೂಕ ಹೆಚ್ಚಾಗುವುದು ಅಥವಾ ಕಡಿಮೆಯಾಗುವುದು ಎಂದುಕೊಳ್ಳುತ್ತಾರೆ. ಆದರೆ ಥೈರಾಯ್ಡ್ ಗ್ರಂಥಿಯಲ್ಲಿ ಸಮಸ್ಯೆ ಇದ್ದಾಗ, ಹಾರ್ಮೋನುಗಳ ಬದಲಾವಣೆಗಳು ಸಂಭವಿಸಲು ಶುರುವಾಗುತ್ತದೆ. ಇದು ಉಗರಗಳ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ. ತಜ್ಞರ ಪ್ರಕಾರ, ಹೈಪೋಥೈರಾಯ್ಡಿಸಮ್ ಅಥವಾ ಹೈಪರ್ ಥೈರಾಯ್ಡಿಸಮ್ ಎರಡೂ ಪರಿಸ್ಥಿತಿಗಳಲ್ಲಿ, ಉಗುರುಗಳ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ ಮತ್ತು ಅವು ದುರ್ಬಲವಾಗುತ್ತವೆ ಮತ್ತು ಮುರಿಯಲು ಶುರುವಾಗುತ್ತವೆ.

ಪೌಷ್ಟಿಕಾಂಶದ ಕೊರತೆಗಳು

ದೇಹದಲ್ಲಿ ಪೋಷಕಾಂಶಗಳ ಕೊರತೆ ಉಂಟಾದಾಗ, ಅದರಿಂದ ಉಗುರುಗಳ ಮೇಲೆ ದುಷ್ಪರಿಣಾಮಗಳು ಬೀರುತ್ತವೆ. ಪೋಷಕಾಂಶಗಳ ಕೊರತೆಯಾದಾಗ ಮುಖ್ಯವಾಗಿ ಕಬ್ಬಿಣ, ಪ್ರೋಟೀನ್, ಬಯೋಟಿನ್ ಮತ್ತು ಬಿ-12 ಸಾಕಷ್ಟು ಸಿಗದೆ ಉಗುರುಗಳು ದುರ್ಬಲವಾಗುತ್ತವೆ. ಇದರಿಂದ ಉಗುರುಗಳಲ್ಲಿ ಬಿರುಕುಗಳು ಕಾಣಿಸಿಕೊಳ್ಳುತ್ತವೆ ಮತ್ತು ಅವು ಮುರಿಯಲು ಶುರುವಾಗುತ್ತವೆ. ದೇಹದಲ್ಲಿ ಪೋಷಕಾಂಶಗಳ ಕೊರತೆಯ ಸಂಭವಿಸಿದಾಗ, ರೋಗನಿರೋಧಕ ಶಕ್ತಿ ದುರ್ಬಲಗೊಳ್ಳುವುದು, ಕೂದಲು ಉದುರಲು ಶುರುವಾಗುತ್ತದೆ.

ಹೃದಯ ಸಮಸ್ಯೆಗಳು

ಹೃದಯ ಸಮಸ್ಯೆಗಳ ಎಂದಾಗ, ನಾವೆಲ್ಲರೂ ಆಯಾಸ, ದೌರ್ಬಲ್ಯ, ಉಸಿರಾಟದ ತೊಂದರೆ ಮತ್ತು ಅನಿಯಮಿತ ಹೃದಯ ಬಡಿತದಂತಹ ಕೆಲವು ಸಾಮಾನ್ಯ ಲಕ್ಷಣಗಳ ಬಗ್ಗೆ ಮಾತನಾಡುತ್ತೇವೆ. ಆದರೆ, ಹೃದಯಕ್ಕೆ ಸಂಬಂಧಿಸಿದ ಸಮಸ್ಯೆ ಇದ್ದರೆ, ಅದು ಉಗುರುಗಳ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ.

ತಜ್ಞರ ಪ್ರಕಾರ, ಹೃದಯ ಸಮಸ್ಯೆ ಇರುವವರ ಉಗುರುಗಳು ದುರ್ಬಲವಾಗಿ , ನಿರ್ಜೀವವಾಗಿ ಕಾಣುತ್ತವೆ. ಅಂತಹ ಜನರ ಉಗುರುಗಳು ಸಂಪೂರ್ಣವಾಗಿ ಹಳದಿ ಬಣ್ಣಕ್ಕೆ ತಿರುಗುತ್ತವೆ. ಏಕೆಂದರೆ ಹೃದಯ ಕಾಯಿಲೆಯಿಂದಾಗಿ ದೇಹದಲ್ಲಿ ರಕ್ತ ಪರಿಚಲನೆ ಸರಿಯಾಗಿ ನಡೆಯುವುದಿಲ್ಲ. ಇದರಿಂದಾಗಿ ಉಗುರುಗಳಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳು ಉಂಟಾಗುತ್ತದೆ.

ಮೂತ್ರಪಿಂಡ ಸಂಬಂಧಿತ ಕಾಯಿಲೆಗಳು

ಮೂತ್ರಪಿಂಡವು ನಮ್ಮ ದೇಹದ ಒಂದು ಪ್ರಮುಖ ಅಂಗವಾಗಿದೆ. ಮೂತ್ರಪಿಂಡಗಳು ಸರಿಯಾಗಿ ಕಾರ್ಯನಿರ್ವಹಿಸದಿದ್ದಾಗ, ದೇಹದ ತ್ಯಾಜ್ಯವನ್ನು ತೆಗೆದುಹಾಕಲು ಸಾಧ್ಯವಿಲ್ಲ. ನಮ್ಮ ದೇಹದಲ್ಲಿನ ವಿಷಗಳು ರಕ್ತಪ್ರವಾಹದಲ್ಲಿ ಸಂಗ್ರಹವಾಗಲು ಶುರುವಾಗುತ್ತವೆ. ಅದರ ಪರಿಣಾಮ ಉಗುರುಗಳ ಮೇಲೂ ಗೋಚರಿಸುತ್ತದೆ. ಉಗುರುಗಳು ದುರ್ಬಲವಾಗಿ ತುಂಡಾಗುತ್ತವೆ ಮತ್ತು ಅವುಗಳ ಬಣ್ಣವೂ ಬದಲಾಗುತ್ತದೆ.

ಲಿವರ್‍ ಸಮಸ್ಯೆಗಳು 

ಯಾರಿಗಾದರೂ ಲಿವರ್‍ಗೆ ಸಂಬಂಧಿಸಿದ ಸಮಸ್ಯೆಗಳಿದ್ದರೆ, ಅವರ ಉಗುರುಗಳ ಬೆಳವಣಿಗೆಯ ಮೇಲೂ ಪರಿಣಾಮ ಬೀರುತ್ತದೆ. ಇಷ್ಟೇ ಅಲ್ಲ, ಲಿವರ್‍ನಲ್ಲಿ ಯಾವುದೇ ಸಮಸ್ಯೆ ಇದ್ದರೆ, ಅದರ ಲಕ್ಷಣಗಳು ಮೊದಲು ಉಗುರುಗಳ ಮೇಲೆ ಕಂಡುಬರುತ್ತವೆ ಎಂದು ತಜ್ಞರು ಹೇಳುತ್ತಾರೆ. ಉಗುರುಗಳ ವಿನ್ಯಾಸ ಬದಲಾದಂತೆ ಅವು ಬಣ್ಣ ಕಳೆದುಕೊಳ್ಳುತ್ತವೆ ಮತ್ತು ಉಗುರುಗಳು ಸಹ ದುರ್ಬಲವಾಗುತ್ತವೆ ಮತ್ತು ತುಂಡಾಗುತ್ತವೆ.

ಇದು ಮಾಹಿತಿ ಮಾತ್ರ
ಆರೋಗ್ಯ ಸಮಸ್ಯೆ ಇರುವವರು ವೈದ್ಯರನ್ನು ಸಂಪರ್ಕಿಸಿ, ಮುಂದುವರೆಯಿರಿ.

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» Chitradurga News gmail

chitradurganews23@gmail.com

» Whatsapp Number

TAGGED:ChitradurgaChitradurga newsChitradurga UpdatesdiseaseHealthKannada Latest NewsKannada NewsNailಆರೋಗ್ಯಉಗುರುಕನ್ನಡ ನ್ಯೂಸ್ಕನ್ನಡ ಲೇಟೆಸ್ಟ್ ನ್ಯೂಸ್ಕನ್ನಡ ಸುದ್ದಿಚಿತ್ರದುರ್ಗಚಿತ್ರದುರ್ಗ ನ್ಯೂಸ್ರೋಗ
Share This Article
Facebook Email Print
Previous Article OPERATION ABYAS ಕ್ಷಣ ಮಾತ್ರದಲ್ಲಿ ರಣರಂಗವಾದ ಪೊಲೀಸ್‌ ಮೈದಾನ | ನಾಗರೀಕರ ರಕ್ಷಣೆ ಅಣುಕು ಕಾರ್ಯಾಚರಣೆ | ಜಿಲ್ಲಾಡಳಿತ ಆಯೋಜನೆ
Next Article ಬೇಸಿಗೆಯಲ್ಲಿ ಗರ್ಭಿಣಿಯರು ಈ 5 ಪಾನೀಯಗಳನ್ನು ಕುಡಿಯುವುದು ಉತ್ತಮ
Leave a Comment

Leave a Reply Cancel reply

Your email address will not be published. Required fields are marked *

arecanut price list
ಅಡಿಕೆ ಧಾರಣೆ | ಜೂನ್‌ 17 | ಇಂದಿನ ಮಾರುಕಟ್ಟೆ ಪೂರ್ಣ ವಿವರ
ಅಡಕೆ ಧಾರಣೆ
ಜೇನು ಕೃಷಿಯನ್ನು ಸಮಗ್ರ ಕೃಷಿಯನ್ನಾಗಿ ಅಳವಡಿಸಿಕೊಳ್ಳಿ | ಸಹಾಯಕ ಕೃಷಿ ನಿರ್ದೇಶಕ ಆರ್.ರಜನೀಕಾಂತ
ಮುಖ್ಯ ಸುದ್ದಿ
ಎಬಿವಿಪಿ ಹಿರಿಯೂರು ಪದಾಧಿಕಾರಿಗಳ ಆಯ್ಕೆ | ಅಧ್ಯಕ್ಷರಾಗಿ ಪ್ರಾಧ್ಯಾಪಕ ರಂಗಸ್ವಾಮಿ
ಹಿರಿಯೂರು
APMC: ಮಾರುಕಟ್ಟೆ ಧಾರಣೆ | ಇಂದಿನ ಹತ್ತಿ ರೇಟ್ ಎಷ್ಟಿದೆ?
ಮಾರುಕಟ್ಟೆ ಧಾರಣೆ
© Chitradurga News. Ruby Design Company. All Rights Reserved.

Chitradurga News App

Install
Welcome Back!

Sign in to your account

Username or Email Address
Password

Lost your password?

Not a member? Sign Up