CHITRADURGA NEWS | 08 OCTOBER 2024
ಚಿತ್ರದುರ್ಗ: ಬೆಂಗಳೂರಿನಲ್ಲಿ(Bangalore) ಜಯದೇವ ಹೃದಯಾಲಯ ತೆರೆಯಲು ಶ್ರೀ ಜಯದೇವ ಸ್ವಾಮೀಜಿ ಕಾರಣರಾಗಿದ್ದಾರೆ. ಅವರ 150ನೇ ಜಯಂತಿ ಅಂಗವಾಗಿ ಚಿತ್ರದುರ್ಗದಲ್ಲಿ ಜಯದೇವ ಹೃದ್ರೋಗಾಲಯ(Heart Hospital) ತೆರೆಯಲು ಅಧಿವೇಶನದಲ್ಲಿ ಒತ್ತಾಯಿಸುವುದಾಗಿ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ(Minister Ramalingareddy) ಭರವಸೆ ನೀಡಿದರು.
ಕ್ಲಿಕ್ ಮಾಡಿ ಓದಿ: Madakari Nayaka; ಅ.13 ರಂದು ವಕೀಲರ ಸಂಘದಿಂದ ಮದಕರಿ ನಾಯಕ ನಾಟಕ ಪ್ರದರ್ಶನ

ಜಯದೇವ ಜಗದ್ಗುರುಗಳ 150ನೇ ಜಯಂತ್ಯುತ್ಸವದ ಅಂಗವಾಗಿ ಕೃಷಿ ಮೇಳ, ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ, ಜೊಡೆತ್ತು ಪ್ರದರ್ಶನ ಮತ್ತು ಸಾಕು ಪ್ರಾಣಗಳ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
1963 ರಲ್ಲಿ ಬರಗಾಲ ಬಂದಾಗ ಹೆಚ್ಚು ಇಳುವರಿ ತೆಗೆಯುವ ಕಾರಣಕ್ಕೆ ರಾಸಯಾನಿಕಗಳ ಬಳಕೆ ಕೃಷಿಯಲ್ಲಿ ಪ್ರಾರಂಭವಾಯಿತು. ಇದಕ್ಕಿಂತ ಪೂರ್ವದಲ್ಲಿ ಎಲ್ಲಾ ಕಡೆಗಳಲ್ಲೂ ಸಾವಯವ ಕೃಷಿಯೇ ಪ್ರಧಾನವಾಗಿತ್ತು ಎಂದು ಸಚಿವರು ತಿಳಿಸಿದರು.
ನಮ್ಮ ಕ್ಷೇತ್ರದಲ್ಲಿ 23 ಸರ್ಕಾರಿ ಶಾಲೆಗಳನ್ನು ದತ್ತು ಸ್ವೀಕರಿಸಿ ಹೈಟೆಕ್ ಶಾಲೆಗಳಾಗಿ ಪರಿವರ್ತನೆ ಮಾಡಿದ್ದಯ, ಮಾದರಿ ಶಾಲೆಗಳನ್ನಾಗಿ ಮಾಡಲಾಗಿದೆ. ಇದರಿಂದ ಸರ್ಕಾರಿ ಶಾಲೆಗಳು ಬಲಗೊಳ್ಳುವ ಜೊತೆಗೆ ಬಡವರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರೆಯುತ್ತದೆ ಎಂದರು.
ಕ್ಲಿಕ್ ಮಾಡಿ ಓದಿ: Kabbadi; ಶ್ರೀಗುರು ತಿಪ್ಪೇರುದ್ರಸ್ವಾಮಿ ಪ್ರೌಢಶಾಲೆಗೆ ಕಬಡ್ಡಿಯಲ್ಲಿ ಪ್ರಥಮ ಸ್ಥಾನ
ತುಮಕೂರು ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ಮುರುಘಾ ಮಠದ ಶರಣ ಸಂಸ್ಕೃತಿ ಉತ್ಸವ ಮಧ್ಯ ಕರ್ನಾಟಕದ ಬಹದೊಡ್ಡ ಉತ್ಸವವಾಗಿದೆ, ಈ ಕಾರ್ಯಕ್ರಮದಲ್ಲಿ ರೈತ, ಕೃಷಿಗೆ ಹೆಚ್ಚು ಒತ್ತು ನೀಡಲಾಗುತ್ತಿದೆ.
ಇಂದು ಶಾಲೆಗಳಲ್ಲಿ ಮಕ್ಕಳು ಡಾಕ್ಟರ್ ಇಂಜಿನಿಯರ್ ಎನ್ನುತ್ತಾರೆಯೇ ಹೊರತು ರೈತ ಎನ್ನುವುದಿಲ್ಲ. ಕಾರಣ ರೈತನ ಕೆಲಸ ಕಷ್ಟದ ಕೆಲಸ. ಚಳಿ, ಮಳೆ ಗಾಳಿ ಬಿಸಿಲನ್ನು ಲೆಕ್ಕಿಸದೆ ರೈತ ಕೆಲಸ ಮಾಡಬೇಕಿದೆ. ಕೃಷಿ ಮಾಡಲು ಮನೆಮಂದಿ ಎಲ್ಲಾ ಬೇಕು. ಇವತ್ತಿನ ಆಹಾರದಿಂದ ಆರೋಗ್ಯ ಹದಗೆಡುತ್ತಿದೆ ಎಂದು ಬೇಸರಿಸಿದರು.
ಜಯದೇವ ಜಗದ್ಗರುಗಳ ದೂರ ದೃಷ್ಟಿ ಅಪಾರವಾದದ್ದು. ಆ ಕಾಲದಲ್ಲಿಯೇ ನಾಡಿನಾದ್ಯಂತ ವಿದ್ಯಾರ್ಥಿ ನಿಲಯಗಳನ್ನು ನಿರ್ಮಾಣ ಮಾಡಿದವರು. ಅಂತಹ ಮಹಾತ್ಮರ 150ನೇ ಜಯಂತ್ಯುತ್ಸವದಲ್ಲಿ ಪಾಲ್ಗೊಳ್ಳುವುದೇ ನನ್ನ ಭಾಗ್ಯ ಎಂದರು.
ಕ್ಲಿಕ್ ಮಾಡಿ ಓದಿ: Apmc: ಮಾರುಕಟ್ಟೆ ಧಾರಣೆ | ಅಕ್ಟೋಬರ್ 08 | ಚಿತ್ರದುರ್ಗದಲ್ಲಿ ಇಂದಿನ ಹತ್ತಿ ರೇಟ್
ಎಸ್.ಜೆ.ಎಂ. ವಿದ್ಯಾಪೀಠದ ಆಡಳಿತ ಮಂಡಳಿ ಅಧ್ಯಕ್ಷ ಶಿವಯೋಗಿ ಕಳಸದ ಮಾತನಾಡಿ, ರಾಜ್ಯದಲ್ಲಿ ಸಾವಯವ ಕೃಷಿ ಅನುಸರಿಸಲು ತೊಂದರೆ ಇಲ್ಲ. ಆದರೆ ರೈತ ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ಸಿಗಬೇಕಿದೆ. ಶೇ.70 ಕ್ಕಿಂತ ಹೆಚ್ಚು ಕೃಷಿಕರು ಈ ದೇಶದಲ್ಲಿ ಇನ್ನು ಹೆಚ್ಚಿನ ಉತ್ಪಾದನೆಗೆ ಗಮನ ಹರಿಸಬೇಕು. ಕೃಷಿ ಪದವಿಯ ನಂತರ ವಿದ್ಯಾರ್ಥಿಗಳು ಮರಳಿ ತಮ್ಮ ಊರಿಗೆ ಬಂದು ವೈಜ್ಞಾನಿಕ ಕೃಷಿಯನ್ನು ಬೆಂಬಲಿಸಬೇಕಾಗಿದೆ ಎಂದು ಹೇಳಿದರು.
ಮಠದ ಆಡಳಿತ ಮಂಡಳಿ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿ ಮಾತನಾಡಿ, ಜಯದೇವ ಜಗದ್ಗುರುಗಳು ಈ ನಾಡಿಗೆ ಕೊಟ್ಟ ಕೊಡುಗೆಯನ್ನು ಸ್ಮರಿಸಲು ಅವರ 150 ನೇ ಜಯಂತೊತ್ಸವವನ್ನು ಹಮ್ಮಿಕೊಳ್ಳಲಾಗಿದೆ. ಸಮಾಜದ ಎಲ್ಲಾ ವರ್ಗಗಳಿಗೂ ಉಪಯೋಗವಾಗುವಂತಹ ಕಾರ್ಯಗಳನ್ನು ಮಾಡಿದ್ದಾರೆ ಎಂದರು.
1924 ರಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನದಲ್ಲಿ ಮಹಾತ್ಮ ಗಾಂಧೀಜಿಯವರಿಗೆ ವಚನದ ಪುಸ್ತಕಗಳನ್ನು ಕೊಟ್ಟು ಬಸವಣ್ಣನವರ ವಿಚಾರಧಾರೆಗಳನ್ನು ಪರಚಯಿಸಿದವರು ಎಂದು ಸ್ಮರಿಸಿದರು.
ಕ್ಲಿಕ್ ಮಾಡಿ ಓದಿ: VV sagara; ವಾಣಿವಿಲಾಸ ಜಲಾಶಯಕ್ಕೆ ಒಂದೇ ವಾರದಲ್ಲಿ ಹರಿದು ಬಂತು ಒಂದು TMC ನೀರು
ಕಾರಿಗನೂರಿನ ಪ್ರಗತಿಪರ ರೈತ ತೇಜಸ್ವಿ ಪಟೇಲ್ ಮಾತನಾಡಿ, ಒಬ್ಬ ರೈತ ನಾಲ್ಕು ತಿಂಗಳು ಬೆಳೆದ ಬೆಳೆಯನ್ನು ಮಾರುಕಟ್ಟೆಯಲ್ಲಿ ಬಂಡವಾಳಗಾರರು ಕೇಳಿದ ಬೆಲೆಗೆ ಮಾರಾಟ ಮಾಡ ಬೇಕಾಗುತ್ತದೆ. ರೈತನಿಗೆ ಯಾರ ಬಯವೂ ಇಲ್ಲ ಆನೆ, ಹುಲಿ, ಚಿರತೆಯಂತಹ ಕ್ರೂರ ಪ್ರಾಣ ಗಳಿದ್ದರೂ, ಭಯವಿಲ್ಲದೆ ಕೃಷಿ ಮಾಡುತ್ತಾನೆ. ಆದರೆ ಅವನಿಗೆ ಭಯ ಇರುವುದು ಇಂದಿನ ಮಾರುಕಟ್ಟೆಯ ಮೇಲೆ. ಉಣ್ಣೆ ರಕ್ತ ಹೀರುವಂತೆ ರೈತನ ಬೆಳೆಯ ಹಣವನ್ನೆಲ್ಲ ಸಾಲ ಹೀರುತ್ತಿದ್ದೆ ಎಂದರು.
ರೈತ ಸಂಘದ ರಾಜ್ಯ ಕಾರ್ಯಾಧ್ಯಕ್ಷ ಈಚಘಟ್ಟದ ಸಿದ್ದವೀರಪ್ಪ ಮಾತನಾಡಿ, ಚಿತ್ರದುರ್ಗ ಜಿಲ್ಲೆ ಸದಾ ಬರಗಾಲದ ಪ್ರದೇಶ ಮಳೆ ಬಂದರೂ ರೈತರಿಗೆ ತೊಂದರೆ ಬರದೇ ಇದ್ದರೂ ತೊಂದರೆ. ರೈತನ ಬೆಳೆಗೆ ಬೆಂಬಲ ಬೆಲೆ ಇಲ್ಲದ ಕಾರಣ ಸಮಸ್ಯಗಳಿಗೆ ತುತ್ತಾಗುತ್ತಿದ್ದಾನೆ. ಮನಷ್ಯನ ಆಹಾರ ಇಂದು ಕಲುಷಿತವಾಗಿದೆ.
ವಿಷದ ಆಹಾರವನ್ನು ನಾವಿಂದು ಸೇವಿಸುತ್ತಿದ್ದೇವೆ. ಇಂದು ಎಲ್ಲಾ ಅಧಿಕಾರಿಗಳು ರೈತನ ಕೃಷಿ ಸಮಸ್ಯೆಗಳಿಗೆ ಗಮನಹರಿಸಬೇಕಿದೆ. ಚಿತ್ರದುರ್ಗದ ಏಕೈಕ ಜೀವನದಿ ವೇದಾವತಿ ನದಿಯನ್ನು ಪುನಃಶ್ಚೇತನಗೊಳಿಸಿ ಹರಿಯಲು ಬಿಡಬೇಕು ಎಂದು ಮನವಿ ಮಾಡಿದರು.
ವಸ್ತು ಪ್ರದರ್ಶನದಲ್ಲಿ ತೋಟಗಾರಿಕೆ ಇಲಾಖೆ ಪ್ರಥಮ ಸ್ಥಾನ ಗಳಿಸಿದರೆ ಕೃಷಿ ಇಲಾಖೆ ದ್ವಿತೀಯ ಸ್ಥಾನಗಳಿಸಿದರೆ, ಜಲಸಂಪನ್ಮೂಲ ಇಲಾಖೆಯ ಭದ್ರಾ ಮೇಲ್ದಂಡೆ ಯೋಜನೆ ಮಾದರಿಗೆ ತೃತೀಯ ಸ್ಥಾನ ದೊರೆಯಿತು.
ಕ್ಲಿಕ್ ಮಾಡಿ ಓದಿ: Chitradurga jail: ಜೈಲಿನಲ್ಲಿ ಮುರುಘಾ ಶರಣರು ಓದಿದ ಪುಸ್ತಕಗಳು ಎಷ್ಟು ಗೊತ್ತಾ ?
ಪ್ರಗತಿಪರ ರೈತ ಹಿರಿಯೂರಿನ ಸಿದ್ಧರಾಮಪ್ಪ, ದೊಣ್ಣೆ ಹಳ್ಳಿಯ ವೈ.ಎನ್.ಸಂತೋಷಕುಮಾರ್ ಗಜ್ಜಗಾನಹಳ್ಳಿಯ ಪಿ.ಭಾಗ್ಯಮ್ಮ, ಕುರಕಾಲ ಹಟ್ಟಿಯ ಟಿ.ರವಿಕುಮಾರ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಸಕ ಕೆ.ಸಿ.ವೀರೇಂದ್ರ (ಪಪ್ಪಿ), ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ತಾಜ್ಪೀರ್, ದ್ರಾಕ್ಷಾರಸ ಮಂಡಳಿ ಅಧ್ಯಕ್ಷ ಡಾ.ಯೋಗೀಶ್ ಬಾಬು ಉಪಸ್ಥಿತರಿದ್ದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
