By using this site, you agree to the Privacy Policy and Terms of Use.
Accept
Chitradurga News-Kannada NewsChitradurga News-Kannada NewsChitradurga News-Kannada News
Notification
Font ResizerAa
  • ಮುಖಪುಟ
  • ಮುಖ್ಯ ಸುದ್ದಿ
    ಮುಖ್ಯ ಸುದ್ದಿShow More
    ನೈಸರ್ಗಿಕ ಕೃಷಿ ಕಾರ್ಯಾಗಾರ
    ನೈಸರ್ಗಿಕ ಕೃಷಿಗೆ ಉತ್ತೇಜನ | ಜಿಲ್ಲೆಯಲ್ಲಿ 500 ಬಯೋಡೈಜೆಸ್ಟರ್ ಘಟಕ ಸ್ಥಾಪನೆ ಗುರಿ
    2 hours ago
    DC ramya
    ಮಾಧ್ಯಮ ವರದಿಗಳಿಗೆ ಜಿಲ್ಲಾಡಳಿತದ ಸಂಪೂರ್ಣ ಸಹಕಾರ | ಡಿಸಿ ರಮ್ಯ
    3 hours ago
    ಭದ್ರೆಗೆ ಸಾಣೇಹಳ್ಳಿ ಬಳಿ ಬಾಗೀನ ಅರ್ಪಿಸಿದ ಪಂಡಿತಾರಾಧ್ಯ ಶ್ರೀ
    4 hours ago
    ಎಲ್ಲೀವರೆಗೆ ಹರಿದು ಬಂದಳು ಗೊತ್ತಾ ಭದ್ರೆ | ಬಯಲು ಸೀಮೆಯಲ್ಲಿ ಸಂಭ್ರಮ
    7 hours ago
    ವಚನಾಭಿಷೇಕ ಕಾರ್ಯಕ್ರಮ
    ರಾಜ್ಯ, ರಾಷ್ಟ್ರಮಟ್ಟದ ಪ್ರಖ್ಯಾತರು, ರಾಷ್ಟ್ರಕವಿಗಳು ಎಸ್‌ಜೆಎಂ ಸಂಸ್ಥೆಯಲ್ಲಿ ಅಧ್ಯಯನ ಮಾಡಿದ್ದಾರೆ | ಡಾ.ಬಸವಕುಮಾರ ಸ್ವಾಮೀಜಿ
    15 hours ago
  • ಕ್ರೈಂ ಸುದ್ದಿ
    ಕ್ರೈಂ ಸುದ್ದಿShow More
    ಖಾಸಗಿ ಬಸ್ ಪಲ್ಟಿ | ಸ್ಥಳದಲ್ಲೇ ಮೂವರ ಸಾವು | 15ಕ್ಕೂ ಹೆಚ್ಚು ಮಂದಿಗೆ ಗಾಯ
    3 weeks ago
    ಚಲಿಸುತ್ತಿದ್ದ ಕಾರಿಗೆ ಹಿಂಬದಿಯಿಂದ ಲಾರಿ ಡಿಕ್ಕಿ | ಇಬ್ಬರು ಸಾವು
    4 weeks ago
    ನಾಯಿ ತಪ್ಪಿಸಲು ಹೋಗಿ ರಸ್ತೆ ಬದಿ ನಿಂತಿದ್ದವರಿಗೆ ಕಾರು ಡಿಕ್ಕಿ | ಸ್ಥಳದಲ್ಲೇ ಓರ್ವ ಸಾವು
    2 months ago
    LOHITH NITHYASHREE
    ಭೀಕರ ಅಪಘಾತ ಮಾರುತಿ ಗ್ಯಾಸ್‌ನ ಲೋಹಿತ್‌ ಪ್ರಸಾದ್‌ ದಂಪತಿ ಸಾವು | ಹೊಳಲ್ಕೆರೆ ಕಣಿವೆ ಬಳಿ ಕಾರು ಲಾರಿ ನಡುವೆ ಅಪಘಾತ
    2 months ago
    ಲಾರಿ-ಬಸ್ ನಡುವೆ ಭೀಕರ ಅಪಘಾತ | 12ಕ್ಕೂ ಹೆಚ್ಚು ಮಂದಿಗೆ ಗಾಯ
    2 months ago
  • ತಾಲೂಕು
    ತಾಲೂಕುShow More
    ಮಾರಿಕಾಂಭ ದೇವಿಯ ಪರವು ಆಚರಣೆ
    ಮಾರಿಕಾಂಭ ದೇವಿಯ ಪರವು ಆಚರಣೆ | ಶತಮಾನದ ಪರಂಪರೆ ಮುಂದುವರಿಕೆ
    5 days ago
    ಹೊಸದುರ್ಗ | ಭಕ್ತಿಭಾವದಿಂದ ನೆರವೇರಿದ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯ ಉದ್ಘಾಟನೆ
    ಹೊಸದುರ್ಗ | ಭಕ್ತಿಭಾವದಿಂದ ನೆರವೇರಿದ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯ ಉದ್ಘಾಟನೆ
    2 weeks ago
    ವಿದ್ಯುತ್ ಸ್ಪರ್ಶಿಸಿ ನವಿಲು, ಚಿರತೆ ಸಾವು
    4 weeks ago
    ಸಾಣೇಹಳ್ಳಿ ಶ್ರೀಮಠದಲ್ಲಿ ಮಾಸಿಕ ಇಷ್ಟಲಿಂಗ ದೀಕ್ಷಾ ಕಾರ್ಯಕ್ರಮ
    ಬದುಕು ಬದಲಿಸುವ ಶಕ್ತಿ ಇಷ್ಟಲಿಂಗ ದೀಕ್ಷೆಗಿದೆ | ಸಾಣೇಹಳ್ಳಿ ಪಂಡಿತಾರಾಧ್ಯ ಶ್ರೀ
    1 month ago
    ಚಳ್ಳಕೆರೆ ತಾಲೂಕು ಪಂಚಾಯತಿ ಸಭಾಂಗಣದಲ್ಲಿ ಪತ್ರಿಕಾ ದಿನಾಚರಣೆ
    ಜವಾಬ್ದಾರಿ ಅರಿತವರು ಮಾತ್ರ ಪತ್ರಕರ್ತರಾಗಲು ಸಾಧ್ಯ | ಶಾಸಕ ಟಿ.ರಘುಮೂರ್ತಿ
    2 months ago
  • ಅಡಕೆ ಧಾರಣೆ
    ಅಡಕೆ ಧಾರಣೆShow More
    arecanut price list
    ಅಡಿಕೆ ಧಾರಣೆ | 7 ಸೆಪ್ಟಂಬರ್‌ | ಇಂದಿನ ಅಡಿಕೆ ರೇಟ್‌
    1 day ago
    arecanut price list
    ಅಡಿಕೆ ಧಾರಣೆ | ಸೆಪ್ಟಂಬರ್‌ 4 | ಯಾವ ಅಡಿಕೆಗೆ ಎಷ್ಟು ರೇಟ್‌
    4 days ago
    arecanut price list
    ಅಡಿಕೆ ಧಾರಣೆ | ಸೆ.3 | ಚನ್ನಗಿರಿ, ತೀರ್ಥಹಳ್ಳಿ ಸೇರಿ ರಾಜ್ಯದ ಅಡಿಕೆ ವಹಿವಾಟು
    5 days ago
    arecanut price list
    ಅಡಿಕೆ ಧಾರಣೆ | ಅಡಿಕೆ ಬೆಲೆಯಲ್ಲಿ ಕುಸಿತ
    2 months ago
    ARECANUT RATE
    ಅಡಿಕೆ ಧಾರಣೆ | 8 ಜೂನ್‌ | ಇಂದಿನ ಅಡಿಕೆ ರೇಟ್‌
    3 months ago
  • Dina Bhavishya
    Dina BhavishyaShow More
    ದಿನ ಭವಿಷ್ಯ
    ದಿನ ಭವಿಷ್ಯ | ಸೆಪ್ಟೆಂಬರ್ 08 | ನಿರುದ್ಯೋಗಿಗಳಿಗೆ ಹೊಸ ಉದ್ಯೋಗಾವಕಾಶಗಳು, ಹಠಾತ್ ಆರ್ಥಿಕ ಲಾಭ
    15 hours ago
    today bhavishya
    ದಿನ ಭವಿಷ್ಯ | ಸೆಪ್ಟೆಂಬರ್ 07 | ಉದ್ಯೋಗದಲ್ಲಿ ಅಧಿಕಾರಿಗಳಿಂದ ಬೆಂಬಲ, ಅರೋಗ್ಯದಲ್ಲಿ ಎಚ್ಚರ
    2 days ago
    today bhavishya
    ದಿನ ಭವಿಷ್ಯ | ಸೆಪ್ಟೆಂಬರ್ 06 | ಕೈಗೆತ್ತಿಕೊಂಡ ಕೆಲಸಗಳಲ್ಲಿ ವಿಳಂಬ, ಹಠಾತ್ ಆರ್ಥಿಕ ಲಾಭದ ಸೂಚನೆ
    3 days ago
    today bhavishya
    ದಿನ ಭವಿಷ್ಯ | ಸೆಪ್ಟೆಂಬರ್ 05 | ಶ್ರಮಕ್ಕೆ ತಕ್ಕ ಫಲಿತಾಂಶ ಅರೋಗ್ಯದಲ್ಲಿ ಜಾಗೃತಿ ವಹಿಸಿ
    4 days ago
    today bhavishya
    ದಿನ ಭವಿಷ್ಯ | ಸೆಪ್ಟೆಂಬರ್ 04 | ಉದ್ಯೋಗಗಳಲ್ಲಿ ಕೆಲಸದ ಒತ್ತಡ, ದೂರದ ಪ್ರಯಾಣ ಬೇಡ
    5 days ago
  • ಮಾರುಕಟ್ಟೆ ಧಾರಣೆ
    ಮಾರುಕಟ್ಟೆ ಧಾರಣೆShow More
    ಮಾರುಕಟ್ಟೆ ಧಾರಣೆ | ಸೆಪ್ಟೆಂಬರ್ 08 | ಹತ್ತಿ ರೇಟ್ ಎಷ್ಟಿದೆ?
    7 hours ago
    ಮಾರುಕಟ್ಟೆ ಧಾರಣೆ | ಸೆಪ್ಟೆಂಬರ್ 07 | ಮೆಕ್ಕೆಜೋಳ, ರಾಗಿ, ಶೇಂಗಾ ರೇಟ್ ಎಷ್ಟಿದೆ?
    1 day ago
    ಮಾರುಕಟ್ಟೆ ಧಾರಣೆ | ಸೆಪ್ಟೆಂಬರ್ 05 | ಹತ್ತಿ ರೇಟ್ ಎಷ್ಟಿದೆ?
    3 days ago
    ಮಾರುಕಟ್ಟೆ ಧಾರಣೆ | ಸೆಪ್ಟೆಂಬರ್ 04 | ರಾಗಿ, ಶೇಂಗಾ ರೇಟ್…..
    4 days ago
    ಚಿತ್ರದುರ್ಗ ಮಾರುಕಟ್ಟೆಯಲ್ಲಿ ಇಂದಿನ ಹತ್ತಿ ರೇಟ್ ಎಷ್ಟಿದೆ?
    5 days ago
  • ಹೊಳಲ್ಕೆರೆ
    ಹೊಳಲ್ಕೆರೆShow More
    Inauguration of Teachers' Day Celebrations
    ಗುರು ಸ್ಥಾನ ಪರಮ ಪವಿತ್ರ | ಮಕ್ಕಳ ಭವಿಷ್ಯ ರೂಪಿಸುವ ಹೊಣೆ ಶಿಕ್ಷಕರದ್ದು | ಶಾಸಕ ಎಂ.ಚಂದ್ರಪ್ಪ
    3 days ago
    Inauguration of the Public Service Movement meeting
    ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ | ಶಾಸಕ ಚಂದ್ರಪ್ಪ
    3 days ago
    ತಾಳಿಕಟ್ಟೆ–ದೊಗ್ಗನಾಳ್ ರಸ್ತೆ ಅಭಿವೃದ್ಧಿಗೆ ₹12 ಕೋಟಿ | ಶಾಸಕ ಎಂ.ಚಂದ್ರಪ್ಪ
    1 week ago
    ಹೊಳಲ್ಕೆರೆ ಪಟ್ಟಣದ ಕ್ರೀಡಾಂಗಣದಲ್ಲಿ 80ನೇ ಸ್ವಾತಂತ್ರ್ಯೋತ್ಸವ
    ಹಿರಿಯರ ತ್ಯಾಗದ ಮಾರ್ಗದರ್ಶನದಲ್ಲಿ ಮುನ್ನಡೆಯೋಣ | ಶಾಸಕ ಡಾ.ಎಂ.ಚಂದ್ರಪ್ಪ
    3 weeks ago
    ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ
    ಮನೆ ಮನೆಗೆ ಶುದ್ಧ ಕುಡಿಯುವ ನೀರು, ಮಕ್ಕಳಿಗೆ ಉಚಿತ ಶಿಕ್ಷಣ–ಸೌಲಭ್ಯ | ಶಾಸಕ ಚಂದ್ರಪ್ಪ
    1 month ago
  • ಹಿರಿಯೂರು
    ಹಿರಿಯೂರುShow More
    Power outage on May 1
    ಜೂನ್ 23 ರಂದು ಹಿರಿಯೂರು ತಾಲೂಕಿನಲ್ಲಿ ವಿದ್ಯುತ್ ವ್ಯತ್ಯಯ
    3 months ago
    ವೈಷ್ಣವ
    ನಾಲ್ಕು ವರ್ಷದ ಬಾಲಕ ಸಾವು | ಬಿಜೆಪಿ ಮಂಡಲ ಅಧ್ಯಕ್ಷ ಅಭಿನಂದನ್ ಪುತ್ರ
    3 months ago
    Babburu Horticulture college
    ಕೃಷಿ ಪ್ರಾಯೋಗಿಕ ಮರು ಪರೀಕ್ಷೆ ಜೂನ್ 1ಕ್ಕೆ ನಿಗದಿ
    4 months ago
    ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಎಬಿವಿಪಿ ಪ್ರತಿಭಟನೆ
    ಹಿರಿಯೂರು | ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಎಬಿವಿಪಿ ಒತ್ತಾಯ 
    5 months ago
    VaniVilasa sagara dam
    ವಿವಿ ಸಾಗರದಿಂದ ಅಚ್ಚುಕಟ್ಟು ಪ್ರದೇಶದ ರೈತರಿಗೆ ನೀರು | ಒಂದು ತಿಂಗಳು ನಾಲೆಗೆ ನೀರಿನ ಹರಿವು
    7 months ago
  • ಹೊಸದುರ್ಗ
    ಹೊಸದುರ್ಗShow More
    ಹೊಸದುರ್ಗ | ಭಕ್ತಿಭಾವದಿಂದ ನೆರವೇರಿದ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯ ಉದ್ಘಾಟನೆ
    ಹೊಸದುರ್ಗ | ಭಕ್ತಿಭಾವದಿಂದ ನೆರವೇರಿದ ಲಕ್ಷ್ಮೀ ನರಸಿಂಹ ಸ್ವಾಮಿ ದೇವಾಲಯ ಉದ್ಘಾಟನೆ
    2 weeks ago
    ವಿದ್ಯುತ್ ಸ್ಪರ್ಶಿಸಿ ನವಿಲು, ಚಿರತೆ ಸಾವು
    4 weeks ago
    ಸಾಣೇಹಳ್ಳಿ ಶ್ರೀಮಠದಲ್ಲಿ ಮಾಸಿಕ ಇಷ್ಟಲಿಂಗ ದೀಕ್ಷಾ ಕಾರ್ಯಕ್ರಮ
    ಬದುಕು ಬದಲಿಸುವ ಶಕ್ತಿ ಇಷ್ಟಲಿಂಗ ದೀಕ್ಷೆಗಿದೆ | ಸಾಣೇಹಳ್ಳಿ ಪಂಡಿತಾರಾಧ್ಯ ಶ್ರೀ
    1 month ago
    ಉಪನ್ಯಾಸ ಹಾಗೂ ಸ್ವಾಗತ ಸಮಾರಂಭ
    ಬಡತನ ನಿರ್ಮೂಲನೆಗೆ ಶಿಕ್ಷಣವೇ ಬ್ರಹ್ಮಾಸ್ತ್ರ | ಶಾಂತವೀರ ಶ್ರೀ
    2 months ago
    ಅಂತರ್ ಜಿಲ್ಲಾ ಬೈಕ್ ಕಳ್ಳರ ಬಂಧನ | 4 ಬೈಕುಗಳು ವಶಕ್ಕೆ
    3 months ago
  • Life Style
    Life StyleShow More
    H1N1
    ಹಂದಿ ಜ್ವರ (ಪ್ಲೂ)ಬಂದರೆ ಏನು ತಿನ್ನಬೇಕು? ತಿಳಿಯಿರಿ
    14 hours ago
    hair loss in men
    ಪುರುಷರ ಕೂದಲು ಉದುರುವುದನ್ನು ತಡೆಯಲು ಯಾವ ಎಣ್ಣೆ ಹೆಚ್ಚು ಪರಿಣಾಮಕಾರಿ?
    15 hours ago
    Women's breasts
    ಮಹಿಳೆಯರು ಸ್ತನಗಳನ್ನು ಆರೋಗ್ಯವಾಗಿಡಲು ಪ್ರತಿದಿನ ಈ ಅಭ್ಯಾಸಗಳನ್ನು ರೂಢಿಸಿಕೊಳ್ಳಿ
    2 days ago
    Pineapple
    ಅನಾನಸ್‌ನ ಹಣ್ಣಿನ ಮಧ್ಯದಲ್ಲಿರುವ ಗಟ್ಟಿ ಭಾಗ ತಿಂದರೆ ಏನಾಗುತ್ತದೆ ಗೊತ್ತಾ?
    2 days ago
    white and blue conch flowers
    ಬಿಳಿ ಮತ್ತು ನೀಲಿ ಶಂಖಪುಷ್ಪ ಹೂಗಳಲ್ಲಿ ಸೇವಿಸಲು ಯಾವುದು ಉತ್ತಮ?
    3 days ago
Reading: Kannada Novel: 7. ಊರು ತೊರೆದು ಬಂದವರು | ಹಬ್ಬಿದಾ ಮಲೆಮಧ್ಯದೊಳಗೆ
Share
Font ResizerAa
Chitradurga News-Kannada NewsChitradurga News-Kannada News
  • ಮುಖಪುಟ
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Search
  • ಮುಖಪುಟ
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Follow US
© 2025 | Chitradurganews.com | Powered by Karnatakabest
ಸಂಡೆ ಸ್ಪಷಲ್

Kannada Novel: 7. ಊರು ತೊರೆದು ಬಂದವರು | ಹಬ್ಬಿದಾ ಮಲೆಮಧ್ಯದೊಳಗೆ

News Desk Chitradurga News
Last updated: 20 October 2024 13:21
News Desk Chitradurga News
2 years ago
Share
Habbida Malemadhyadolage
ಹಬ್ಬಿದಾ ಮಲೆಮಧ್ಯದೊಳಗೆ
SHARE

CHITRADURGA NEWS | 20 October 2024

ಮುಂಗಾರು ಮಳೆಗಳೆಲ್ಲಾ ಕೈಕೊಟ್ಟು ಮುಂಗಾರಿನ ಬಿತ್ತನೆಯಾಗದೆ ಗೌನಳ್ಳಿ ನಿವಾಸಿಗಳು ದಿನಬೆಳಗಾದರೆ ಮುಗಿಲು ನೋಡುತ್ತಾ ಎತ್ತು ದನಕರುಗಳಿಗೆ ಮೇವು ಹೊಂದಿಸುವುದು ಕಷ್ಟಕರವಾಗಿತ್ತು. ಆದ್ದರಿಂದ ಹಳ್ಳಿ ನಿವಾಸಿಗಳು ಉಂಬೊತ್ತಿಗೆ ಊಟ ಮಾಡಿ ಕರಾವಿನ ಆಕಳು ಎಮ್ಮೆ ಇತ್ಯಾದಿಗಳನ್ನು ಹಳ್ಳದ ದಂಡೆಯಲ್ಲಿ ಬೆಳೆದಿದ್ದ ಮೆದೆಸೆಂಟೆ ಮತ್ತಿತರ ಹುಲ್ಲು ಸೊಪ್ಪಿನ ಜಾಗಗಳಲ್ಲಿ ಅಡ್ಡಾಡಿಸಲು ಹೊಡೆದೊಯ್ಯುತ್ತಿದ್ದರು. ಉಳಿದವರು ಇದ್ದಬದ್ದ ಕೆಲಸ ಮುಂತಾದುವುಗಳಲ್ಲಿ ಮಗ್ನರಾಗಿರುತ್ತಿದ್ದರು.

ಸ್ವಲ್ಪ ಹೊತ್ತಿನಲ್ಲಿ ಊರಿನ ನೈರುತ್ಯ ದಿಕ್ಕಿಗಿದ್ದ ಓಣಿಯಲ್ಲಿ ಕೊರಳಿಗೆ ಕಟ್ಟಿದ್ದ ಗಂಟೆಯ ಸದ್ದು ಮಾಡುತ್ತಾ ಮುಂದುಗಡೆ ಅಲಂಕಾರಗೊಂಡಿದ್ದ ಬಸವ ಅದರ, ಹಿಂದೆ ತುಂಬಿದ ಬಂಡಿ, ಅದರ ಹಿಂದೆ, ಆಕಳು, ಕರು, ಎಮ್ಮೆ ಮತ್ತು ಕರುಗಳು, ಅವುಗಳ ಹಿಂದೆ ಕುರಿ ಆಡಿನ ಮಂದೆ ಜತೆಯಲ್ಲಿ ಏಳೆಂಟು ಜನ ಗಂಡಸರು ಹೆಂಗಸರು ಮಕ್ಕಳು ನಡೆದು ಬರುತ್ತಿದ್ದರು.

ಮುಂದುಗಡೆ ಠೀವಿಯಿಂದ ಬರುತ್ತಿದ್ದ ಬಸವನ ಬೆನ್ನಿಗೆ ಜೂಲು ಹಾಕಿ ಎರಡು ಕಡೆ ಇಳಿಬಿದ್ದಿದ್ದ ಎರಡು ಮಂಕರಿಗಳು, ಹಿತ್ತಾಳೆ ಗಿಂಡಿ ಬಸನನ ಎರಡೂ ಕೋಡುಗಳಿಗೆ ಪೂಜೆ ಮಾಡಿ ಹಣೆಗೆ ವಿಭೂತಿ, ಭಂಡಾರ ದೇವಿಗೆ ಸೊಪ್ಪು ಮುಂತಾದುವುಗಳಿಂದ ಅಲಂಕರಿಸಲಾಗಿತ್ತು. ಇವರನ್ನು ನೋಡುತ್ತಲೇ ಊರ ಜನ ಓಡೋಡಿ ಬಂದು ಜತೆಯಾದರು.

ಹಿಂದಿನ‌ ಸಂಚಿಕೆ ಓದಲು ಕ್ಲಿಕ್ ಮಾಡಿ: 1 ಹೂತಿಟ್ಟ ಚಿನ್ನಕ್ಕಾಗಿ ಹುಡುಕಾಟ 

ಗಾಡಿ ಮಗ್ಗುಲಲ್ಲಿ ಕಲಕೊಡ ತಲೆಗೆ ಕೆಂಪು ರೇಶಿಮೆ ವಸ್ತ್ರದ ರುಮಾಲು ಧರಿಸಿದ್ದ ಯಜಮಾನರು ಕೊಡಿ. ಕೊಂಡ ಗೌನಳ್ಳಿಗರಿಗೆ ಕೈ ಎತ್ತಿ ನಮಸ್ಕರಿಸಿದ್ದರು. ಊರಿನ ಗೌಡರಿಗೆ ಮತ್ತು ಗೊಂಚಿಕಾರರಿಗೆ ಪರಿಚಯವಿದ್ದ ಅವರು ಕಣಿವೆ ಮಾರಿಯ ಪೂಚಾರರಾಗಿದ್ದ ಲಿಂಗಣ್ಣನವರನ್ನು ಕಾಣುತ್ತಲೇ ಇವರೂ ನಮಸ್ಕಾರ ಮಾಡಿ ಅಶ್ಚತ್ಯದಿಂದ “ಇದೇನು ಹಿಂಗೆ ಮನೆ ಮಾರು ತೊರು ಎತ್ತುಕರ ಮಂದಿ ಮಕ್ಕಳ ಕಟ್ಟಿಗಂಡು ಬಾ ಇದೀರಾ. ಎಲ್ಲಿಗೋಗಬೇಕಯ್ತಾ ಇದೀರಾ.

ಇರೋದಾದ್ರೆ ನಮ್ಮೂರಾಗೆ ಇದ್ದುಬಿಡಿ” ಎಂದು ಕಕುಲಾತಿಯ ಮಾತಾಡಿದರು. ಪೂಜಾರಿ ಲಿಂಗಪ್ಪನವರು ಮುಂದೆ ನಡೆಯುತ್ತಿದ್ದ ಕಟ್ಟೆ ಬಸವನ್ನ ತೋರಿಸಿ “ಪೂಜೆ ಮಾಡಿ ಆಡ್ಡುಬಿದ್ದು ಅದರ ಹಿಂದೆ ಹೋಗ್ತಾ ಇದ್ದೀವಿ. ಅದು ಎಲ್ಲಿ ನಿಲ್ಲುತ್ತೋ ಅಲ್ಲಿ ಮನೆ ಮಾರು ಕಟ್ಟಂತೀವಿ”, ಸಮಾಧಾನದಿಂದ್ದೆ ಉತ್ತರಿಸಿದ್ದರು. ಹೀಗೆ ಮಾತಾಡುತ್ತಲೇ ಊರಿನ ಬಡಗಲ ದಿಕ್ಕಿನ ಓಣಿಗೆ ಸೇರಿದ್ದರು. ಊರಿನ ಕೆಲವರು ಇವರಿಗೆ ಕುಡಿಯಲು ಮಜ್ಜಿಗೆ ಮುಂತಾದುವನ್ನು ತಂದು ಕೊಟ್ಟಿದ್ದರು.

ಅವರ ಜತೆಯಲ್ಲೇ ನಡೆಯುತ್ತಾ “ಅಮ್ಮನ ಪೂಜಾರಿಕೆ ಮಾಡ್ಕಂಡು ನಿರುಮ್ಮಳವಾಗಿದ್ರಿ, ಊರು ಬಿಡೋ ಅಂಥದ್ದೇನು ಬಂತು” ಅಂತ ಒತ್ತಾಯ ಮಾಡಿ ಕೇಳಿದಾಗ, “ಮತ್ತೋಡು ಪಾಳೇಗಾರು ನಮಿಗೆ ಕಣಿವೆ ಮಾರಿಯ ಪೂಜಾರಿಕೆ ಕೊಟ್ಟಿದ್ರು. 60, 70 ವರ್ಷ ಯಾವ ಅಡ್ಡಿ ಆತಂಕ ಇಚ್ಛೆ ನಡಿಸ್ಟೆಂಡ್ ಬರಿದ್ವಿ. ಈಗ ದುರ್ಗದೋರು ಇದು ನಮ್ಮ ಆಳ್ವಿಕೆಗೆ ಸೇರುತ್ತೆ.

ಹಿಂದಿನ‌ ಸಂಚಿಕೆ ಓದಲು ಕ್ಲಿಕ್ ಮಾಡಿ: 2 ಕರುವುಗಲ್ಲು ನೆಟ್ಟು ಊರು ಕಟ್ಟಿದರು

ಮತ್ತೋಡಿನರು ಏನಿದ್ರೂ ಹೊಳೆ ಆಚೆಗೆ ಮಾತ್ರ. ಈಚೆ ಕಡೆ ನಡಿಯಲ್ಲ. ಈಗ ಭರಮಗಿರಿ ಸೀಮೆಗೆ ನೀವು ಒಳ ಪಟ್ಟಿದೀರಿ ಅು ಕಿರುಕುಳ ಕೊಡ್ತಿದ್ರು. ಕುರಿ ಆಡು ಕಳ್ಳನ ಆದ್ದು, ಆದ್ರೂ ಸುಧಾರಿಸ್ಸಂದ್ವಿ, ಈಗ ಅವರ ದೌರ್ಜನ್ಯ ಜಾಸ್ತಿ ಆತು. ಅದಕ್ಕೆ ಅಲ್ಲಿರಬಾರು ಅಯ್ತ ಹೊಳ್ ಬಂದಿದ್ದೀವಿ. ನೋಡೋಕು ಕಟ್ಟೆ ಬಸವ ಎಲ್ಲಿಗೆ ಮುಟ್ಟಿಸ್‌ತಾನೋ”. ಬೇಜಾರಿನಿಂದಲೇ ಪೂಜಾರರು, ಮಾತಾಡಿದ್ದರು. ಹೀಗೆ ಮಾತಾಡುತ್ತಾ ಕೆನ್ನಳ್ಳಿ ಸಮೀಪಕೆ ಬಂದಿದ್ದರು.

ಗೌನಹಳ್ಳಿಯ ಕೆಲವರು ತುಂಬಿದ ಬಂಡಿಯನ್ನು ಸ್ವಲ್ಪದೂರ ಹಳ್ಳದಲ್ಲಿ ನಡೆಸಿ ಇಳಕಲು ಇದ್ದಕಡೆ ಹಳ್ಳದ ದಡ ಹತ್ತಿಸಿದ್ದರು. ಕಟ್ಟೆ ಬಸವ ಮಾತ್ರ ಹಳ್ಳಹತ್ತಿ ಬಡಗಲ ದಿಕ್ಕಿನಲ್ಲಿ ನಿಧಾನಕ್ಕೆ ಹೆಜ್ಜೆ ಹಾಕುತ್ತಿತ್ತು. ಹಿಂದೆ ಬಂದಿದ್ದ ದನಕರು. ಎಮ್ಮೆ, ಕುರಿ, ಆಡು ಹಳ್ಳದಲ್ಲಿ ನೀರು ಕಂಡಕೂಡಲೇ ಹೊಟ್ಟೆ ತುಂಬಾ ನೀರು ಕುಡಿದು ದಡದಲ್ಲಿ ಸಿಗುತ್ತಿದ್ದ ಮೇವಿಗೆ ರಾಪಾಡಿದ್ದವು. ಗೌನಳ್ಳಿ ಜನ ಅವೆಲ್ಲವನ್ನೂ ಹಳ್ಳದ ಗಡ್ಡೆ ಹತ್ತಿಸಿ ಬಂಡಿ ಹಿಂದೆ ಸಾಗಹಾಕಿದರು. “ಒಳ್ಳೆ ಜನಕ್ಕೆ ದೇವು ಅನ್ಯಾಯ ಮಾಡಲ್ಲ. ಇವು ಎಲ್ಲಿಗೋದ್ರು ಕಾಪಾಡ್ತಾನೆ” ಅಂ- ದುಕೊಂಡು ಭಾರವಾದ ಹೃದಯದಿಂದ ಗೌನಹಳ್ಳಿಯತ್ತ ಹೆಜ್ಜೆ ಹಾಕಿದ್ದರು.

ಮುಂದೆ ನಿಧಾನವಾಗಿ ನಡೆಯುತ್ತಿದ್ದ ಕಟ್ಟೆ ಬಸವ ಅರ್ಧ ಮೈಲಿ ದೂರ ಪಡುವಲಕ್ಕಿದ್ದ ಗುಡ್ಡದ ಮಗ್ಗುಲಲ್ಲಿ ನಡೆದು ಗುಡ್ಡ ಕೊನೆಯಾದ ಕಡೆ ಸ್ವಲ್ಪ ಹೊತ್ತು ನಿಂತು ಹಿಂದೆ ಬರುತ್ತಿದ್ದ ಬಂಡಿ ಹತ್ತಿರ ಬಂದ ಕೂಡಲೇ ಪಡುವಲ ಮುಖನಾಗಿ ಮುಂದೆ ನಡೆಯಿತು. ಬಸವನನ್ನೆ ಹಿಂಬಾಲಿಸಿ ನಡೆದಿದ್ದವರು ಏನೊಂದೂ ಯೋಚಿಸದೆ ‘ಬಸವಣ್ಣ ಎಲ್ಲಿಗೆ ಕರೆದೊಯ್ಯುತ್ತಾನೋ ಅಲ್ಲಿಗೆ ಹೋಗೋಣ’ ಎಂದು ಹಿಂದೆ ಹಿಂದೆ ನಡೆದರು. ಹೊತ್ತು ವಾಲಿ ಇನ್ನೊಂದು ಗಂಟೆಗೆ ಮುಳುಗಿ ಕತ್ತಲಾಗೋ ಸಮಯಕ್ಕೆ ಕೊಳಾಳು ಗ್ರಾಮ ತಲುಪಿದ ಬಸವ ತೆಂಕಲಿಗೆ ಎತ್ತರದಲ್ಲಿದ್ದ ಹಾಳು ಕೋಟೆಗೋಡೆ ಕಡೆಗೆ ಹೆಜ್ಜೆ ಹಾಕಿ ಅಲ್ಲಿನ ದಿಬ್ಬದ ಮೇಲೆ ನಿಂತು ಗಂಜು ಹೊಯ್ದು, ಸಗಣಿ ಉದುರಿಸಿತ್ತು.

ಹಿಂದಿನ‌ ಸಂಚಿಕೆ ಓದಲು ಕ್ಲಿಕ್ ಮಾಡಿ: 3 ಎಲ್ಲರೂ ಲಿಂಗವಂತರಾದರು.

ಕೊಳಹಾಳ ನಿವಾಸಿಗಳಲ್ಲಿ ನಾಯ್ಕರ ಜಾತಿಯವರು ಬಹು ಸಂಖ್ಯೆಯಲ್ಲಿದ್ದರು. ಸ್ವಲ್ಪ ಭಾಗ ಕೆಳಜಾತಿ ಜನರು ವಾಸಿಸುತ್ತಿದ್ದರು. ಊರ ಮುಂದಿನ ಬಯಲಲ್ಲಿ ಲೋಕಾಭಿರಾಮ ಮಾತಾಡುತ್ತಿದ್ದವರು ಮತ್ತಿತರರು ಕಟ್ಟೆ ಬಸವ ಹತ್ತಿ ಹೋದ ಕಡೆ ಹೋಗಿ ಆಶ್ಚರದಿಂದ ನೋಡುತ್ತಿರುವಾಗ ಕೆಂಪು ರುಮಾಲಿನ ಪೂಜಾರಿ ಲಿಂಗಪ್ಪನವರು ನಿಧಾನವಾಗಿ ಅಲ್ಲಿಗೆ ತಲುಪಿದ್ದರು.

ತುಂಬಿದ ಬಂಡಿ ಅಲ್ಲಿಗೆ ತಲುಪಲು ಕಷ್ಟಸಾಧ್ಯವಿತ್ತು. ಬಸವ ನಿಂತ ಸ್ಥಳ ತಲುಪಿದ ಲಿಂಗಪ್ಪನವರ ಗುರು ಕೂನ ವಿಚಾರಿಸಿದರು ಕೊಳಾಳ ಜನ. ಲಿಂಗಪ್ಪನವರು ನಿಧಾನವಾಗಿ ತಾವು “ಭರಮಗಿರಿ ವಾಸಿಗಳೆಂದೂ ಮತ್ತು ಕಣಿವೆ ಮಾರಮ್ಮನ ಪೂಜಾರರು” ಎಂದೂ” ತಿಳಿಸಿ, “ಈಗ ಯಾವುದೋ ತಾಪತ್ರಯಕ್ಕೆ ಸಿಲುಕಿ ಊರು ಬಿಟ್ಟು ಹೊರಡಬೇಕಾಯಿತು. ನಾವು ಹೊರಡುವಾಗ ಈ ಬಸವನಿಗೆ ಪೂಜೆ ಮಾಡಿ ನೀನು ಕಟ್ಟೆ ಬಸವ ನೀನು ಕರೆದಲ್ಲಿಗೆ ಬರುತ್ತೇವೆ ಎಂದು ಎಲ್ಲರೂ ಪೂಜೆ ಮಾಡಿ ಅಡ್ಡಬಿದ್ದಿದ್ದೆವು. ಈಯಪ್ಪ ಈಗ ಇಲ್ಲಿಗೆ ತಂದು ಮುಟ್ಟಿದ್ದಾನೆ” ಎಂದು ಹೇಳಿಕೊಂಡಿದ್ದರು.

ಇದನ್ನು ಕೇಳಿದ ಕೊಳಾಳಿನ ಜನ ಮತ್ತು ಮುತಖಂಡರು “ಉತ್ತವಾರು ಊರಿಗೆ ಬಂದಿದೀರಾ. ನಿಮಗೆ ಪಾಗ ಕೊಡಬೇಕಾದ್ದು ನಮ್ಮ ಕರ್ತವ್ಯ” ಎಂದು ಉದಾರತೆಯಿಂದ ಮಾತಾಡಿ “ಈಗ ನಿಮ್ಮ ಕಟ್ಟೆ ಬಸವಣ್ಣ ಎಲ್ಲಿ ನಿಂತು ಗಂಜು ಹೊಯ್ದು ಸಗಣಿ ಹಾಕಿದೆಯೋ ಅಲ್ಲೆ ಮನೆ ಕಟ್ಟಿಕೊಳ್ಳಿ, ನಾವ ಕೈಲಾದ ಸಹಾಯ ಮಾಡ್ತೀವಿ” ಎಂದು ಆಶ್ವಾಸನೆ ನೀಡಿದರು. ಪೂಚಾರಿ ಲಿಂಗಪ್ಪನವರು ಕಟ್ಟೆ ಬಸವನ ಪಾದಕ್ಕೆ ಅಡ್ಡಬಿದ್ದು “ಇಲ್ಲಿ ಇರನೇನಪ್ಪಾ ಮಾಸ್ವಾಮಿ” ಎಂದು ಕೇಳಿದರು.

ಹಿಂದಿನ‌ ಸಂಚಿಕೆ ಓದಲು ಕ್ಲಿಕ್ ಮಾಡಿ: 4 ಮೈಲಾರಲಿಂಗಸ್ವಾಮಿ ಗುಡಿ ನಿರ್ಮಾಣ.

ಅದಕ್ಕೆ ಬಸವ ತಲೆಯಾಡಿಸಿತ್ತು, ಆಗ ಕೊಳಹಾಳ ವಾಸಿಗಳು ಕೆಳಗೆ ಹೋಗಿ ತುಂಬಿದ ಬಂಡಿಯನ್ನು ಕೇಕೇ ಹಾಕಿಕೊಂಡು ಎತ್ತುಗಳಿಂದ ಎಳೆಸಿಕೊಂಡು ಮೇಲೆ ಹತ್ತಿಸಿದ್ದರು. ಕೆಲ ಹೊತ್ತಿಗೆಲ್ಲಾ ಹಿಂದೆ ಬರುತ್ತಿದ್ದ ದನಕರು ಎಮ್ಮೆ, ಕುರಿ ಆಡು ಎಲ್ಲಾ ಹತ್ತಿ ಬಂದು ಇವರನ್ನೂ ಕೂಡಿಕೊಂಡಿದ್ದವು.

“ಈಗ ಮಳೆಗಾಲ ಆದ್ರೂ ಮುಂಗಾರು ಕೈಕೊಟ್ಟಿತೆ. ಬ್ಯಾಗ್ಗೆ ಕಾಲ ಇದ್ದಂಗೈತೆ. ರಾತ್ರಿ ಇಲ್ಲೆ ಇದ್ದೀರಾ ಅತ್ವಾ ಯಾರದಾನ ಮನೆ ಹಜಾರದಾಗೆ ಮನಿಕೈಮೀರಾ. ಹೆಂಗ್ ಮಾಡ್ತೀರಾ ನೋಡ್ರಿ.” ಕೆಲವು ಕೊಳಾಳ ನಿವಾಸಿಗಳು ವಿಚಾರಿಸಿದ್ದರು. “ಬುತ್ತಿಕಟ್ಕಂಡ್ ಬಂದೈದೀವಿ ಇಲ್ಲೇ ಉಂಡು ಇಲ್ಲೇ ಪಸಂದಾಗೈತೆ ಇಲ್ಲೇ ಮಲಗಿ ರಾತ್ರಿ ಕಳೀತೀವಿ. ದನಕರು ಕುರಿ ಮ್ಯಾಕೆ ಐದಾವೆ ಎಲ್ಲಾ ಇಲ್ಲೆ ಇದ್ದಾವೆ”, ಪೂಜಾರಿ ಲಿಂಗಪ್ಪ ಮಾತಾಡಿದ್ದರು.

“ಯಾರಾದೂ ಹುಡುಗ್ರು ನಾಕೈದು ಕೊಡ ನೀರು ತಂದು ಕೊಡ್ರಪ್ಪಾ, ಇವರಿಗೆ ಊಟ ಮಾಡಾಕೆ ಕುಡಿಯಾಕೆ ನೀರು ಬೇಕಾಗುತ್ತೆ”. ನಾಯ್ಕರ ಹಿರಿಯನೊಬ್ಬ ಸೂಚಿಸಿದ ಕೂಡಲೇ ಕೆಲವು ಯುವಕರು ದಡಾಬಡಾ ಇಳಿದು ಹೋಗಿದ್ದರು. “ಪೂಜಾರೇ ಉಂಡು ಮಲಿಕ್ಕಳ್ಳಿ ಬೆಳಿಗ್ಗೆ ಬಂದು ಕಾಣೀವಿ” ಎಂದು ಆತನೇ ಮಾತಾಡಿ “ಬರೆಪ್ಪಾ ಎದ್ದಾಗ ಬರಾನ” ಎಂದು ತಮ್ಮೂರವರೊಡನೆ ಹಿಂತಿ- ರುಗಿದ್ದರು.

ಕೊಳಹಾಳ ನಿವಾಸಿಗಳ ಸಹಾಯ ಸಹಕಾರದಿಂದ ತಿಂಗಳೊಪ್ಪತ್ತಿನಲ್ಲಿ ಒಂದು ಮಾಳಿಗೆ ಮನೆಯನ್ನ ನಿರಿಸಿಕೊಂಡು ಪೂಜಾರ ಲಿಂಗಪ್ಪನವರು ಮತ್ತು ಅವರ ಬಂಧುಗಳು ಕೊಳಹಾಳ ನಿವಾಸಿಗಳಾದರು.

ಹಿಂದಿನ‌ ಸಂಚಿಕೆ ಓದಲು ಕ್ಲಿಕ್ ಮಾಡಿ: 5 ಕೆನ್ನಳ್ಳಿಯ ದುರಂತ.

ಭರಮಗಿರಿಯನ್ನು ತೊರೆದು ಕೊಳಹಾಳಿಗೆ ಬಂದು ನೆಲಸಿದ ಪೂಜಾರ ಲಿಂಗಪ್ಪನವರು ಸ್ಥಳೀಯರ ಪ್ರೀತಿ ವಿಶ್ವಾಸಗಳನ್ನು ಗಳಿಸಿ ಕಾಲಾನಂತರದಲ್ಲಿ ಭೂಮಿ ಕಾಣಿ ಆಸ್ತಿ ಸಂಪಾದಿಸಿ ಊರಿನಲ್ಲಿ ಗೌರವಸ್ಥರಾಗಿದ್ದರು.

ಮುಂದೆ 60 ವರ್ಷಗಳಲ್ಲಿ ಈ ಮನೆತನದಲ್ಲಿ ಕೆಂಚಪ್ಪನೆಂಬ ಅವಧೂತನ ಜನನವಾಗುತ್ತದೆ. ಈತನ ಪ್ರಭಾವಲಯದಲ್ಲಿ ಈ ಮನೆತನ ಗದ್ದುಗೆಯವರ ಮನೆತನವೆಂದು ಪ್ರಖ್ಯಾತವಾಗುತ್ತದೆ.

ಅವಧೂತ ಕೆಂಚಪ್ಪನ ಮಗಳು ಚಲುವೆ ಭೈರಮ್ಮನೆಂಬ ಹೆಸರಿನವಳಲ್ಲಿ ಗೌನಳ್ಳಿ ಪರಿಸರದ ಕೆನ್ನಳ್ಳಿಯ ಗೌಡನು ಅನುರಕ್ತನಾಗಿ, ಅವಳು ಮತ್ತು ಈ ಗೌಡ ಕೊಳಾಳು ಕೆನ್ನಳ್ಳಿಗಳ ಗುಡ್ಡ ಕಣಿವೆಗಳಲ್ಲಿ ಮಧ್ಯೆ ಓಡಾಡಿಕೊಂಡಿದ್ದರು. ಕೆನ್ನಳ್ಳಿ ಗೌಡನ ಪತ್ನಿ ಇದರಿಂದ ರೋಸಿ ಹೋಗಿ ಗೌಡನ ಅನುಚರರಿಂದಲೇ ಕೆನ್ನಳ್ಳಿ ಸಮೀಪದ ಕಣಿವೆಯಲ್ಲಿ ಭೈರಮ್ಯಳ ಕೊಲೆ ಮಾಡಿಸುತ್ತಾಳೆ. ಈಗಲೂ ಕೊಲೆಯಾದ ಕಣಿವೆಗೆ ಭೈರಜ್ಜಿ (ಪ್ರೀತಿಯಿಂದ ಭೈರಜ್ಜಿ ಎಂದು ಸಂಬೋಧಿಸುತ್ತಾರೆ) ಕಣಿವೆ ಎಂದೇ ಹೆಸರಾಗಿದೆ.

ಮತ್ತೋಡು ಪಾಳೇಗಾರ ಹಿರಿಯ ಹಾಲಪ್ಪ ನಾಯಕನು ತಮ್ಮ ಪಟ್ಟಮಹಿಷಿ ನಾಗಕೆಂಚಾಂಬೆಯ ಸೀಮಂತದ ನೆನಪಿನಲ್ಲಿ ಶಾಲಿವಾಹನ ಶಕೆ 1651 (1729- 30) ಸೌಮ್ಯನಾಮ ಸಂವತ್ಸರದಲ್ಲಿ ತಮ್ಮ ಪಾಳೇಪಟ್ಟಿನ ಕೆಲವು ದೈವಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸಿದಾಗ ಲಿಂಗಪ್ಪನ ಮೂಲ ಪುರುಷರಾದ ಹುಳಿಯಾರ ವಕ್ಕಲು ಗೌಡರಿಗೆ ಕಣಿವೆ ಮಾರಮ್ಮ ದೈವದ ಪೂಜಾಧಿಕಾರವನ್ನು ವಹಿಸಿಕೊಟ್ಟಿರುತ್ತಾರೆ.

ಹಿಂದಿನ‌ ಸಂಚಿಕೆ ಓದಲು ಕ್ಲಿಕ್ ಮಾಡಿ: 6 ಎಲ್ಲೆಲ್ಲಿಂದಲೋ ಬಂದರು.

ಈ ಮಧ್ಯೆ ಹಿರಿಯೂರ ಪಾಳೇಗಾರ ಕೆಂಚಣ್ಣ ನಾಯಕ ಕ್ರಿ.ಶ. 1652ರಲ್ಲಿ ಮೃತನಾದ ಮೇಲೆ ಕೆಲ ಕಾಲಾನಂತರದಲ್ಲಿ ಚಿತ್ರಕಲ್ ದುರ್ಗದ ಪಾಳೇಗಾರ ಇಮ್ಮಡಿ ಮೆದಕೇರಿನಾಯಕನು ಹಿರಿಯೂರು, ನನ್ನಿವಾಳ ಮತ್ತು ಐಮಂಗಲ ಪ್ರದೇಶಗಳನ್ನು ವಶಪಡಿಸಿಕೊಳ್ಳುತ್ತಾನೆ.

ಆನಂತರ ಇವನು ತನ್ನ ಆಡಳಿತಾನುಕೂಲಕ್ಕೆ ಬೇರೆ ಬೇರೆ ಊರುಗಳನ್ನು ಸೇರಿಸಿ ಹಿರಿಯೂರು ಸೀಮೆ, ಐಮಂಗಲ ಸೀಮೆ, ಇಕ್ಕನೂರು ಸೀಮೆ, ಭರಮಗಿರಿ ಸೀಮೆ ಧರಪುರ ಸೀಮೆ ಮತ್ತು ರಂಗಸಮುದ್ರ ಸೀಮೆ ಮುಂತಾಗಿ ವ್ಯವಸ್ಥೆಗೊಳಿಸಿದ್ದನು. ಭರಮಗಿರಿ ಸೀಮೆಯ ಉಸ್ತುವಾರಿ ನಾಯಕನು ಕಣಿಮೆ ಮಾರಿಯ ಪೂಜಾರರಿಗೆ ಕಿರುಕುಳ ನೀಡಿ, ಅವರು ಊರು ತ್ಯಜಿಸುವಂತೆ ಮಾಡಿದ್ದನೆಂದು ಪ್ರತೀತಿ.

ಮುಂದುವರೆಯುವುದು……..

 

________________________________________________

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

________________________________________________

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ. 

» Chitradurga News gmail: chitradurganews23@gmail.com

» Whatsapp Number:  9008943015

________________________________________________

TAGGED:ChitradurgaChitradurga newsChitradurga UpdatesGaunahalliGS UjjinappaHabbidah MalemadhyadolageHiriyurKannada Latest NewsKannada NewsPlains epicಕನ್ನಡ ನ್ಯೂಸ್ಕನ್ನಡ ಲೇಟೆಸ್ಟ್ ನ್ಯೂಸ್ಕನ್ನಡ ಲೇಟೆಸ್ಟ್ ಸುದ್ದಿಕನ್ನಡ ಸುದ್ದಿಗೌನಹಳ್ಳಿಚಿತ್ರದುರ್ಗ ಅಪ್ಡೇಟ್ಸ್ಚಿತ್ರದುರ್ಗ ನ್ಯೂಸ್ಜಿ.ಎಸ್.ಉಜ್ಜಿನಪ್ಪಬಯಲು ಸೀಮೆ ಮಹಾಕಾದಂಬರಿಹಬ್ಬಿದಾ ಮಲೆಮಧ್ಯದೊಳಗೆಹಿರಿಯೂರು
Share This Article
Facebook Email Print
Previous Article cows death ದನದ ಕೊಟ್ಟಿಗೆಗೆ Short circute ನಿಂದ ಬೆಂಕಿ | ಹಸು, ಕರುಗಳ ಧಾರುಣ ಸಾವು
Next Article ಹೊಸದುರ್ಗ ಶಾಸಕ ಬಿ.ಜಿ.ಗೋವಿಂದಪ್ಪ ಜನ್ಮದಿನಾಚರಣೆ BG Govindappa; ಹೊಸದುರ್ಗ ಶಾಸಕ ಬಿ.ಜಿ.ಗೋವಿಂದಪ್ಪ ಜನ್ಮದಿನಾಚರಣೆ | ಪತ್ನಿಯೊಂದಿಗೆ ನಾಯಕನಹಟ್ಟಿಗೆ ಭೇಟಿ
Leave a Comment

Leave a Reply Cancel reply

Your email address will not be published. Required fields are marked *

ನೈಸರ್ಗಿಕ ಕೃಷಿ ಕಾರ್ಯಾಗಾರ
ನೈಸರ್ಗಿಕ ಕೃಷಿಗೆ ಉತ್ತೇಜನ | ಜಿಲ್ಲೆಯಲ್ಲಿ 500 ಬಯೋಡೈಜೆಸ್ಟರ್ ಘಟಕ ಸ್ಥಾಪನೆ ಗುರಿ
ಮುಖ್ಯ ಸುದ್ದಿ
DC ramya
ಮಾಧ್ಯಮ ವರದಿಗಳಿಗೆ ಜಿಲ್ಲಾಡಳಿತದ ಸಂಪೂರ್ಣ ಸಹಕಾರ | ಡಿಸಿ ರಮ್ಯ
ಮುಖ್ಯ ಸುದ್ದಿ
ಭದ್ರೆಗೆ ಸಾಣೇಹಳ್ಳಿ ಬಳಿ ಬಾಗೀನ ಅರ್ಪಿಸಿದ ಪಂಡಿತಾರಾಧ್ಯ ಶ್ರೀ
ಮುಖ್ಯ ಸುದ್ದಿ
ಎಲ್ಲೀವರೆಗೆ ಹರಿದು ಬಂದಳು ಗೊತ್ತಾ ಭದ್ರೆ | ಬಯಲು ಸೀಮೆಯಲ್ಲಿ ಸಂಭ್ರಮ
ಮುಖ್ಯ ಸುದ್ದಿ
© Chitradurga News 2025 | Powered By Karnatakabest.com
Loading Comments...
Welcome Back!

Sign in to your account

Username or Email Address
Password

Lost your password?

Not a member? Sign Up