
CHITRADURGA NEWS | 25 SEPTEMBER 2024
ಚಿತ್ರದುರ್ಗ: ಹುಟ್ಟು ಆಕಸ್ಮಿಕ ಆದರೆ ಸಾವು ನಿಶ್ಚಯ ಇದರ ಮಧ್ಯೆದಲ್ಲಿ ಬದುಕಿದಾಗ ಉತ್ತಮವಾದ ಕೆಲಸವ ಮಾಡಬೇಕು ಎಂದು ಬಾಳೆಹೊನ್ನೂರು(Balehonnur) ಶ್ರೀಮದ್ ರಂಭಾಪುರಿ(Rambhapuri Sri) ಜಗದ್ಗುರು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಶ್ರೀಗಳು ಹೇಳಿದರು.
ಕ್ಲಿಕ್ ಮಾಡಿ ಓದಿ: Support; ಸಿಎಂ ಸಿದ್ದರಾಮಯ್ಯ ಬೆಂಬಲಿಸಿ ಶೋಷಿತ ಸಮುದಾಯ, ಹಿಂದುಳಿದ ವರ್ಗಗಳಿಂದ ಧರಣಿ
ನಗರದ ದವಳಗಿರಿ ಬಡಾವಣೆಯಲ್ಲಿನ ಪಟೇಲ್ ಶಿವಕುಮಾರ್ ನಿವಾಸದಲ್ಲಿ ಅವರ ಪುತ್ರ ಅಭೀಷೇಕ ಎಸ್ ಪಟೇಲ್ರವರ ಶಿವಗಣಾರಾಧನೆ ಸಮಾರಂಭದ ಸಾನಿಧ್ಯವಹಿಸಿ ಮಾತನಾಡಿದ ಶ್ರೀಗಳು,
ಇಲ್ಲಿ ಸಾವು ಸಮಯ ಮೀರಿ ಬಂದರೆ ಯಾವುದೇ ನೋವಿಲ್ಲ ಆದರೆ ಸಾವು ಮಧ್ಯದಲ್ಲಿ ಬಂದರೆ ಮಾತ್ರ ಎಲ್ಲರನ್ನು ದುಃಖಕ್ಕೆ ತಳ್ಳುತ್ತದೆ ಈ ನೋವನ್ನು ಮರೆತು ಸಮಾಜ ಮುಖಿಯಾದ ಕಾರ್ಯವನ್ನು ಮಾಡುವುದರ ಮೂಲಕ ಅದನ್ನು ಮರೆಯಬೇಕಿದೆ ಎಂದರು.
ರುದ್ರಪ್ಪರವರ ಮನೆತನ ಆದರ್ಶ ಹಾಗೂ ಸಂಸ್ಕಾರವಂತ ಮನೆತನವಾಗಿದೆ. ತಂದೆ ಮಾರ್ಗದರ್ಶನದಲ್ಲಿ ಬೆಳೆದವರು ಯಾವಾಗಲೂ ಉತ್ತಮರಾಗುತ್ತಾರೆ ಎನ್ನುವುದಕ್ಕೆ ಶಿವಕುಮಾರ್ ಸಾಕ್ಷಿಯಾಗಿದ್ದಾರೆ.
ಕ್ಲಿಕ್ ಮಾಡಿ ಓದಿ: BJP Protest; ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಾಯಿಸಿ ಚಿತ್ರದುರ್ಗ ಬಿಜೆಪಿಯಿಂದ ಪ್ರತಿಭಟನೆ
ಅಭೀಷೇಕ ಕನಸು ಕಾಣುವ ಸಮಯದಲ್ಲಿ ಭಗವಂತ ಅವನನ್ನು ಕರೆದುಕೊಡಿದ್ದಾನೆ. ಆತನ ಇನ್ನೂ ಬದುಕಿದ್ದರೆ ಉತ್ತಮವಾದ ಜೀವನವನ್ನು ನಡೆಸುವುದರ ಮೂಲಕ ಬೇರೆಯವರಿಗೆ ಮಾರ್ಗದರ್ಶನವಾಗುತ್ತಿತು.
ಸಾವು ಎಲ್ಲರಿಗೂ ಬರುತ್ತದೆ ಅದಕ್ಕೆ ಅಂಜದೇ ಧೈರ್ಯದಿಂದ ಬದುಕನ್ನು ನಡೆಸಬೇಕಿದೆ. ವೀರಶೈವ ಸಮುದಾಯದಲ್ಲಿ ಸಾವಿನಲ್ಲಿಯೂ ಸಹಾ ಸಾರ್ಥಕತೆಯನ್ನು ಮರೆದಿದ್ದಾರೆ. ಮರಣದಲ್ಲಿ ಮಹಾನವಮಿಯನ್ನು ಕಂಡುಕೊಂಡಿದ್ದಾರೆ.
ಅಭೀಷೇಕರವರು ಚಿಕ್ಕ ವಯಸ್ಸಿನಲ್ಲಿಯೇ ಎಲ್ಲರಲ್ಲೂ ಸಹಾ ಆತ್ಮೀಯತೆಯನ್ನು ಕಂಡುಕೊಂಡಿದ್ದಾರೆ. ಮಾತಿನಲ್ಲಿ, ಕೃತಿಯಲ್ಲಿ ಹೊಂದಾಣಿಕೆಯನ್ನು ಪಡೆದಿದ್ದರು. ಇವರನ್ನು ನೋಡಿಕೊಂಡವರಿಗೆ ಸ್ಮರಣೆ ಮಾಡುವುದು ಅಗತ್ಯವಾಗಿದೆ. ಇದನ್ನು ಶಿವಕುಮಾರ್ ಮಾಡಿದ್ದಾರೆ. ಎಂದು ಶ್ರೀಗಳು ಸ್ಮರಣೆ ಮಾಡಿದರು.
ಸಂಸದ ಗೋವಿಂದ ಕಾರಜೋಳ ಮಾತನಾಡಿ, ಅಭೀಷೇಕರವರ ನಿಧನದಿಂದ ಅವರ ಕುಟುಂಬ ಹಾಗೂ ಬಂಧುಗಳಿಗೆ ನೋವು ಆಗಿದೆ, ಚಿಕ್ಕ ವಯಸ್ಸಿನಲ್ಲಿಯೇ ಎಲ್ಲರನ್ನು ಬಿಟ್ಟು ಆಗಲಿದ್ದಾರೆ. ತಂದೆ-ತಾಯಿಗಳಿಗೆ ಇವರ ದುಃಖವನ್ನು ಭರಿಸುವ ಶಕ್ತಿ ಭಗವಂತ ನೀಡಲಿ.
ಕ್ಲಿಕ್ ಮಾಡಿ ಓದಿ: Cyber ಪೊಲೀಸರ ಕಾರ್ಯಾಚರಣೆ | ಅಂತಾರಾಜ್ಯ ಡ್ರಗ್ಸ್ ಪೆಡ್ಲರ್ ಬಂಧನ
ಶಾಸಕ ಕೆ.ಸಿ.ವಿರೇಂಧ್ರ ಮಾತನಾಡಿ, ಅಭೀಷೇಕ್ ಸಾವಿನಲ್ಲಿಯೂ ಸಹಾ ಸಾರ್ಥಕತೆಯನ್ನು ಮರೆದಿದ್ದಾರೆ ಕಣ್ಣುಗಳನ್ನು ದಾನ ಮಾಡುವುದರ ಮೂಲಕ ಬೇರೆಯವರಿಗೆ ದಾರಿ ದೀಪವಾಗಿದ್ದಾರೆ. ಅಭೀಷೇಕ ಹೆಸರಿನಲ್ಲಿ ಅವರ ತಂದೆ 1 ಕೋಟಿ ಹಣವನ್ನು ಠೇವಣಿಯಾಗಿ ಇರಿಸಿ ಆದ್ದರರಿಂದ ಬರುವ ಬಡ್ಡಿಯಿಂದ ಸಮಾಜಮುಖಿ ಕೆಲಸವನ್ನು ಮಾಡುವಂತೆ ತಿಳಿಸಿರುವುದು ಉತ್ತಮವಾದ ಕೆಲಸವಾಗಿದೆ ಎಂದರು.
ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ ಮಾತನಾಡಿ, ಹುಟ್ಟಿದ ಮೇಲೆ ತುಂಬು ಜೀವನ ನಡೆಸಿ ಸಾಯುವುದು ಸಾಮಾನ್ಯ ಆದರೆ ಚಿಕ್ಕ ವಯಸ್ಸಿನಲ್ಲಿಯೇ ಸಾಯುವುದು ದುಃಖದ ವಿಷಯವಾಗಿದೆ. ಅದರಲ್ಲೂ ತಂದೆ-ತಾಯಿಗಳ ಮುಂದೆ ಮಗ ಸಾಯುವುದು ಇನ್ನು ನೋಡಲಾದ ಪರಿಸ್ಥಿತಿಯಾಗಿದೆ. ಅಭೀಷೇಕ ಹೆಸರಿನಲ್ಲಿ ಪ್ರತಿ ವರ್ಷ ಸಹಾಯ ಮಾಡುವುದು ಉತ್ತಮವಾದ ಕಾರ್ಯವಾಗಿದೆ ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್.ನವೀನ್ ಮಾತನಾಡಿ, ಅಭೀಷೇಕ ವಿಶೇಷ ಚೇತನ ವ್ಯಕ್ತಿಯಾಗಿದ್ದು, ಎಲ್ಲರಲ್ಲೂ ಸಹಾ ಹೊಂದಿಕೊಂಡು ಹೋಗುವಂತೆ ವ್ಯಕ್ತಿಯಾಗಿದ್ದರು, ಕೆಲವೇ ಕಾಲ ಬದುಕಿದ್ದರು ಸಹಾ ಎಲ್ಲರ ಮನದಲ್ಲಿ ನೆಲೆಯಾಗಿ ನಿಂತಿದ್ದಾರೆ. ಅವರು ನೆನಪುಗಳು ಮುಂದಿನ ದಿನದಲ್ಲಿ ಕಾಡುವುದು ಸಾಮಾನ್ಯ ಇದರಲ್ಲಿಯೇ ಬದುಕನ್ನು ಸಾಗಿಸಬೇಕಿದೆ ಎಂದರು.
ಕ್ಲಿಕ್ ಮಾಡಿ ಓದಿ: Hindu Mahaganapati Shobhayatra: ಹಿಂದೂ ಮಹಾಗಣಪತಿ ಶೋಭಾಯಾತ್ರೆ | ಬೈಕ್ ರ್ಯಾಲಿಗೆ ಸಿದ್ದತೆ
ಮಾಜಿ ಸಚಿವ ಎಚ್.ಏಂಕಾತಯ್ಯ, ಮಾಜಿ ಶಾಸಕ ಎಸ್.ಕೆ.ಬಸವರಾಜನ್, ಭಾಜಪ ಮುಖಂಡರಾದ ಲಿಂಗಮೂರ್ತಿ, ಡಾ.ಸಿದ್ದಾರ್ಥ ಮಾತನಾಡಿದರು.
ಕಾರ್ಯಕ್ರಮದಲ್ಲಿ ಪಟೇಲ್ ರುದ್ರಪ್ಪ, ಮಹೇಶ್ವರಪ್ಪ, ಪ್ರಸನ್ನ ಕುಮಾರ್, ಲಕ್ಷ್ಮೀಕಾಂತರೆಡ್ಡಿ ಸೇರಿದಂತೆ ಇತರರು ಭಾಗವಹಿಸಿದ್ದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
