CHITRADURGA NEWS | 15 JULY 2024
ಚಿತ್ರದುರ್ಗ: ಭೀಮಸಮುದ್ರ ಹಾಗೂ ಸುತ್ತಮುತ್ತ ಹಳ್ಳಿಯ ರೈತ ಸಂಘದವರು ಸಾಸಿವೆಹಳ್ಳಿ ಏತ ನೀರಾವರಿ ಜಂಕ್ಷನ್ ವಿದ್ಯುತ್ 48 ಟವರ್ ನಿರ್ಮಾಣ ಕಾಮಗಾರಿ ವೀಕ್ಷಿಸಿದರು.
ಇದನ್ನೂ ಓದಿ: Murugh matha; ಕಳ್ಳತನವಾಗಿದ್ದ ಮುರುಘಾ ಶರಣರ ಬೆಳ್ಳಿ ವಿಗ್ರಹ ದಿಢೀರ್ ಪ್ರತ್ಯಕ್ಷ | ಮುರುಘಾ ಮಠಕ್ಕೆ ಶ್ವಾನ ದಳ ದೌಡು
ಈ ವೇಳೆ ರೈತ ಮುಖಂಡ ಜೆ. ಮೇಘರಾಜ್ ಹಳಿಯೂರು ಮಾತನಾಡಿ, ಸಾಸಿವೆಹಳ್ಳಿ ಸರ್ಕಾರಿ ಶಾಲೆಯವರು ಟವರ್ ನಿರ್ಮಾಣಕ್ಕೆ ತಡೆಯಾಗ್ನೇ ತಂದಿದ್ದರು, ಹೈಕೋರ್ಟ್ ವಜಾ ಗೊಳಿಸಿ 48ನೇ ಟವರ್ ನಿರ್ಮಾಣಕ್ಕೆ ಚಾಲನೆ ನೀಡಿದೆ ಎಂದು ತಿಳಿಸಿದರು.
ಟಿ.ಎಸ್.ಮಹೇಶ್ವರಪ್ಪ ಮಾತನಾಡಿ, 12 ವರ್ಷಗಳಿಂದ ಸಾಸವೆಹಳ್ಳಿ ಇಂದ ಭೀಮಸಮುದ್ರದ ಕೆರೆಯವರಿಗೆ ಕಾಮಗಾರಿ ಪ್ರಗತಿಯಲ್ಲಿ ಸಾಗಿದೆ, ಎರೆಡು, ಮೂರು ತಿಂಗಳಲ್ಲಿ ಸಾಸಿವೆಹಳ್ಳಿಯಿಂದ ಬರುವ ಎಲ್ಲಾ ಕೆರೆಗಳಲ್ಲಿ ನೀರು ತುಂಬಿಸುವ ಯೋಜನೆ ಇದಾಗಿದ್ದು, ರೈತರಲ್ಲಿ ಸಂತಸ ಮನೆ ಮಾಡಿದೆ ಎಂದರು.
ಇದನ್ನೂ ಓದಿ: AGNIVEER; ಅಗ್ನಿವೀರ ವಾಯು ಸೇವೆಗೆ ಅರ್ಜಿ ಆಹ್ವಾನ
ಈ ಸಂದರ್ಭದಲ್ಲಿ ಎಸ್.ಎಂ.ಶಿವಕುಮಾರ್, ಎಂ.ಸಿದ್ದಪ್ಪ, ಪಿ.ಗಾದ್ರಪ್ಪ, ವಿ.ಪ್ರಕಾಶ್, ಬಿ. ಶ್ರೀಕಂಠಪ್ಪ, ಕೆ.ಆರ್, ಮಂಜು, ಆರ್, ಈಶ್ವರ್ ಸೇರಿದಂತೆ ರೈತರು ಇದ್ದರು.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
