
CHITRADURGA NEWS | 05 MARCH 2025
ಹೊಸದುರ್ಗ: ಹೊಸದುರ್ಗ ತಾಲೂಕಿನ ಜನರಿಗೆ ಜಾಂಬವಂತನ ಕಾಟ ತಪ್ಪಿದಂತೆ ಕಾಣುತ್ತಿಲ್ಲ.
ಈವರೆಗೆ ಇಲ್ಲಿನ ಕುಂಚಿಟಿಗ ಮಹಾಸಂಸ್ಥಾನದ ಆವರಣದಲ್ಲಿ ಕಾಣಸಿಕೊಳ್ಳುತ್ತಿದ್ದ ಕರಡಿಗಳು, ಈಗ ಇನ್ನೂ ಸ್ವಲ್ಪ ಮುಂದೆ ಹೋಗಿ ಖಾಸಗಿ ಲೇಔಟ್ಗಳಲ್ಲಿ ರಾಜಾರೋಷವಾಗಿ ತಿರುಗಾಡುತ್ತಿವೆ.
ಇದನ್ನೂ ಓದಿ: ಅಕ್ಷರದಿಂದ ಸಾಕ್ಷರತೆ | ದೇವರ ಸಂಸ್ಕಾರದಿಂದ ಅಭಿವೃದ್ಧಿ | ಸದ್ಗುರು ಡಿ.ಎಸ್.ಪ್ರದೀಪ್
ಪಟ್ಟಣದ ಕಂಬದ ದೇವರ ಬಡಾವಣೆಯಲ್ಲಿ ಯಾವುದೋ ದನ ಅಥವಾ ಎಮ್ಮೆಯಂತೆಯೇ ಜೋಡಿ ಕರಡಿ ಸಹಜವಾಗಿ ಓಡಾಡುತ್ತಿರುವ ದೃಶ್ಯವನ್ನು ಪಕ್ಕದ ಮನೆಯವರು ಮೊಬೈಲ್ ಮೂಲಕ ಸೆರೆ ಹಿಡಿದಿದ್ದಾರೆ.
ಕರಡಿಯ ಹಿಂದೆ ಎರಡು ನಾಯಿಗಳು ಬೊಗಳಿಕೊಂಡು ಓಡಾಡುತ್ತಿದ್ದು, ಕರಡಿಯನ್ನ ಗುರುತಿಸಿದೆ ಯಾರಾದರೂ ಜನ ಬಂದಿದ್ದರೆ ಗತಿಯೇನು ಎಂಬ ಆತಂಕ ಕಾಡುತ್ತದೆ.
ಇದನ್ನೂ ಓದಿ: SJM ಡೆಂಟಲ್ ಕಾಲೇಜಿಗೆ 30 ರ್ಯಾಂಕ್
ಹಾಡು ಹಗಲೇ ನಗರದಲ್ಲಿ ಕರಡಿಗಳ ಓಡಾಟದಿಂದ ಆತಂಕಗೊಂಡಿರುವ ಪಟ್ಟಣದ ಜನತೆ ಕರಡಿ ಹಿಡಿಯುವಂತೆ ಅರಣ್ಯ ಇಲಾಖೆಗೆ ಆಗ್ರಹ ಮಾಡಿದ್ದಾರೆ.

________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
