CHITRADURGA NEWS | 30 APRIL 2025
ಚಿತ್ರದುರ್ಗ: ಬಸವೇಶ್ವರರ ಜಯಂತಿ ಶುಭ ಸಂದರ್ಭದಲ್ಲಿ ನಗರದ ಐತಿಹಾಸಿಕ ಮುರುಘರಾಜೇಂದ್ರ ಬೃಹನ್ಮಠದಿಂದ “ಸತ್ಯ ಶುದ್ಧ ಕಾಯಕ” ತ್ರೈಮಾಸಿಕ ಪತ್ರಿಕೆಯನ್ನು ಲೋಕಾರ್ಪಣೆ ಮಾಡಲಾಯಿತು.
ಏ.29 ಮಂಗಳವಾರ ಸಂಜೆ ಮುರುಘಾ ಮಠದ ಅನುಭವ ಮಂಟಪದಲ್ಲಿ ನಡೆದ ಬಸವ ಜಯಂತಿ ಕಾರ್ಯಕ್ರಮದಲ್ಲಿ ಲೋಕಾರ್ಪಣೆ ಮಾಡಲಾಯಿತು.

ಇದನ್ನೂ ಓದಿ: SSLC ಪರೀಕ್ಷೆ ಅಕ್ರಮ | ಹತ್ತು ಜನ ಶಿಕ್ಷಕರ ಅಮಾನತು | ಫಲಿತಾಂಶದ ಮೇಲೆ ಪರಿಣಾಮ ಬೀರುತ್ತಾ ?
ಪತ್ರಿಕೆಯ ಸಂಪಾದಕರಾಗಿ ಇತಿಹಾಸ ಸಂಶೋಧಕ ಡಾ.ಬಿ.ರಾಜಶೇಖರಪ್ಪ, ಮೊದಲ ಸಂಚಿಕೆ ಬಿಡುಗಡೆ ಮಾಡಿದರು.
ಈ ವೇಳೆ ಮಾತನಾಡಿದ ಅವರು, ʼಸತ್ಯ ಶುದ್ಧ ಕಾಯಕʼ ಪತ್ರಿಕೆಯು ಹಿರಿಯ ಗುರುಗಳಾದ ಶ್ರೀ ಮಲ್ಲಿಕಾರ್ಜುನ ಸ್ವಾಮಿಗಳ ಕಾಲದಲ್ಲಿ ಪ್ರಾರಂಭವಾಗಿತ್ತು. ಆದರೆ, ಆನಂತರ ನಿಂತು ಹೋಗಿತ್ತು ಎಂದರು.
ಇದನ್ನೂ ಓದಿ: ವೀರಶೈವ ಸಮದಾಯ ಭವನಕ್ಕೆ ಭೂಮಿ ಪೂಜೆ | ವೀರಶೈವ ಅರ್ಬನ್ ಕೋ-ಆಪರೇಟಿವ್ ಸೊಸೈಟಿ ರಜತ ಮಹೋತ್ಸವದ ಸ್ಮರಣಾರ್ಥ
ವಿದ್ವತ್ ಪೂರ್ಣವಾದ ಈ ಪತ್ರಿಕೆಯನ್ನು ಈಗ ಮತ್ತೆ ಮಠದ ಆಡಳಿತ ಮಂಡಳಿ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿ ಮರುಜೀವ ನೀಡಿದ್ದಾರೆ. ಕಾಯಕ ಸತ್ಯವಾದದು, ಶುದ್ದವಾದದು ಆಗಿರಬೇಕು ಎನ್ನುವ ಕಾರಣಕ್ಕೆ ಈ ಪತ್ರಿಕೆ ಸತ್ಯ ಶುದ್ದ ಕಾಯಕ ಎಂಬ ಹೆಸರನ್ನು ಪಡೆದುಕೊಂಡಿದೆ. ಈಗ ಪತ್ರಿಕೆ ಹೊಸರೂಪ ಪಡೆದುಕೊಂಡು ಪ್ರಕಟಗೊಂಡಿದೆ ಎಂದು ತಿಳಿಸಿದರು.
ಎಸ್ಜೆಎಂ ವಿದ್ಯಾಪೀಠದ ಅಧ್ಯಕ್ಷರಾದ ಶಿವಯೋಗಿ ಸಿ.ಕಳಸದ್ ಮಾತನಾಡಿ, ಬಸವಣ್ಣನವರು ಯಾಕೆ ಇನ್ನೂ ಪ್ರಸ್ತುತ?. ಅವರ ಆರ್ಥಿಕ ಚಿಂತನೆಗಳು ಹೇಗೆ ಪ್ರಾಮುಖ್ಯವೆಂಬುದನ್ನು ಮನಗಾಣಬೇಕಿದೆ. “ಸತ್ಯಶುದ್ದ ಕಾಯಕ” ಎಂಬ ತ್ರೈಮಾಸಿಕ ಪತ್ರಿಕೆ ಅಪರೂಪದ ವಿದ್ವತ್ ಪತ್ರಿಕೆ. ಇದನ್ನು ಎಲ್ಲ ಸಮುದಾಯದವರು ಓದುವಂತಾಗಬೇಕು ಎಂದರು.
ಇದನ್ನೂ ಓದಿ: ಅಡಿಕೆ ಧಾರಣೆ | ರಾಜ್ಯದ ಯಾವ ಮಾರುಕಟ್ಟೆಯಲ್ಲಿ ಎಷ್ಟು ರೇಟ್
ಹೊಸಪೇಟೆಯ ವಿಶ್ರಾಂತ ಪ್ರಾಧ್ಯಾಪಕರು ಹಾಗೂ ಆರ್ಥಿಕ ಚಿಂತಕರಾದ ಪ್ರೊ.ಟಿ.ಆರ್. ಚಂದ್ರಶೇಖರ್ ಮಾತನಾಡಿ, 12ನೇ ಶತಮಾನದ ಶಿವಶರಣರ ಜೀವನ ವಿಧಾನಗಳನ್ನು ಕಂಡಾಗ, ಇದು ಸಾಮಾಜಿಕ ಧಾರ್ಮಿಕ ಆರ್ಥಿಕ ಎಂದು ವಿಂಗಡಿಸಲು ಸಾಧ್ಯವಿಲ್ಲ, ಅವರ ವಚನಗಳಲ್ಲಿ ದಿನ ನಿತ್ಯದ ಬದುಕಿನ ಬಗ್ಗೆಯೇ ಮಾತನಾಡಿದ್ದಾರೆ.
ಇಡೀ ಬಸವ ಸಂವಿಧಾನದಲ್ಲಿ ಮತ್ತೆ ಮತ್ತೆ ಕಾಯಕದ ಬಗ್ಗೆ ದುಡಿಮೆಯ ಬಗ್ಗೆ ಪ್ರಸ್ತಾಪಿಸಲಾಗಿದೆ. ವರ್ಣಕ್ರಮಗಳ ಸಿದ್ದಾಂತದಲ್ಲಿ ಕಾಯಕಕ್ಕೆ ಬೆಲೆಯಿಲ್ಲ, ಅದರೆ, ಶರಣರು ಕಾಯಕವೇ ಕೈಲಾಸ, ದುಡಿಮೆಯೆ ದೇವರು ಎಂಬ ಮೌಲ್ಯದೊಂದಿಗೆ ಬದುಕಿದರು. ವಚನಕಾರರ ಚಿಂತನೆ ಅಂಬಲಿಯು ಸಂಸ್ಕೃತಿಯನ್ನು ಪ್ರತಿಪಾದಿಸಿದ್ದು ಭೋಜನದ ಸಿದ್ದಾಂತವಲ್ಲ. ನಿರ್ಲಕ್ಷಕ್ಕೆ ಒಳಗಾಗಿದ್ದ ಸಮಾಜವನ್ನು ಅಪ್ಪಿಕೊಳ್ಳ್ಳುವಂತ ಸಂಸ್ಕೃತಿಯನ್ನು ಬಸವ ಸಂವಿಧಾನ ಕಲ್ಪಿಸಿಕೊಟ್ಟಿತು ಎಂದರು.
ಇದನ್ನೂ ಓದಿ: ನೀವು ಹೆಚ್ಚು ಒತ್ತಡದಲ್ಲಿದ್ದರೆ ಚರ್ಮದ ಮೇಲೆ ಈ ಚಿಹ್ನೆಗಳು ಕಾಣಿಸಿಕೊಳ್ಳುತ್ತದೆಯಂತೆ
ಕಾರ್ಯಕ್ರಮದಲ್ಲಿ ಮಠದ ಆಡಳಿತ ಮಂಡಳಿ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿ, ವೀರಶೈವ ಸಮಾಜದ ಅಧ್ಯಕ್ಷರಾದ ಎಚ್.ಎನ್.ತಿಪ್ಪೇಸ್ವಾಮಿ, ಜಿಪಂ ಕೆ.ಡಿ.ಪಿ ಸದಸ್ಯ ಕೆ.ಸಿ.ನಾಗರಾಜ್ ಸೇರಿದಂತೆ ಹಲವು ಮುಖಂಡರು ಭಾಗವಹಿಸಿದ್ದರು.
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail
chitradurganews23@gmail.com
» Whatsapp Number
