By using this site, you agree to the Privacy Policy and Terms of Use.
Accept
Chitradurga News-Kannada NewsChitradurga News-Kannada NewsChitradurga News-Kannada News
Notification
Font ResizerAa
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Reading: Trip: ವಿಮಾನದಲ್ಲಿ ಸರ್ಕಾರಿ ಶಾಲೆ ಮಕ್ಕಳ ಪ್ರವಾಸ | ಹಕ್ಕಿಯಂತೆ ಹಾರಾಡಿದ ಹಳ್ಳಿ ಮಕ್ಕಳು
Share
Font ResizerAa
Chitradurga News-Kannada NewsChitradurga News-Kannada News
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Search
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Follow US
© 2022 Foxiz News Network. Ruby Design Company. All Rights Reserved.

Home » Trip: ವಿಮಾನದಲ್ಲಿ ಸರ್ಕಾರಿ ಶಾಲೆ ಮಕ್ಕಳ ಪ್ರವಾಸ | ಹಕ್ಕಿಯಂತೆ ಹಾರಾಡಿದ ಹಳ್ಳಿ ಮಕ್ಕಳು

ಹೊಸದುರ್ಗ

Trip: ವಿಮಾನದಲ್ಲಿ ಸರ್ಕಾರಿ ಶಾಲೆ ಮಕ್ಕಳ ಪ್ರವಾಸ | ಹಕ್ಕಿಯಂತೆ ಹಾರಾಡಿದ ಹಳ್ಳಿ ಮಕ್ಕಳು

News Desk Chitradurga News
Last updated: 6 December 2024 15:44
News Desk Chitradurga News
7 months ago
Share
ವಿಮಾನದಲ್ಲಿ ಸರ್ಕಾರಿ ಶಾಲೆ ಮಕ್ಕಳ ಪ್ರವಾಸ
ವಿಮಾನದಲ್ಲಿ ಸರ್ಕಾರಿ ಶಾಲೆ ಮಕ್ಕಳ ಪ್ರವಾಸ
SHARE
https://chat.whatsapp.com/Jhg5KALiCFpDwME3sTUl7x

CHITRADURGA NEWS | 06 DECEMBER 2024

ಹೊಸದುರ್ಗ: ತಾಲೂಕಿನ ಕಸಬಾ ಹೋಬಳಿಯ ಮಾರಬಘಟ್ಟ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ 6 ಮತ್ತು 7ನೇ ತರಗತಿಯ 19 ಮಕ್ಕಳು ತಮ್ಮ ಶಿಕ್ಷಕರ ನೆರವು ಹಾಗೂ ಮಾರ್ಗದರ್ಶನದಲ್ಲಿ ಶೈಕ್ಷಣಿಕ ಪ್ರವಾಸ(Trip)ಕ್ಕಾಗಿ ಗುರುವಾರ ಶಿವಮೊಗ್ಗದಿಂದ ಬೆಂಗಳೂರಿಗೆ ವಿಮಾನದಲ್ಲಿ ಪ್ರಯಾಣಿಸಿದರು.

ಕ್ಲಿಕ್ ಮಾಡಿ ಓದಿ: ಚಿತ್ರದುರ್ಗ ಮಾರುಕಟ್ಟೆ | ಇಂದಿನ ಮೆಕ್ಕೆಜೋಳ, ಸೂರ್ಯಕಾಂತಿ ರೇಟ್ ಎಷ್ಟಿದೆ?

ಶಾಲೆಯ ಮುಖ್ಯಶಿಕ್ಷಕ ಕೆ.ರಾಮಪ್ಪ, ಸಹಶಿಕ್ಷಕರಾದ ಎಚ್.ಸಿ.ಯೋಗರಾಜ್, ಎಸ್.ಜಿ.ಶೀಲಾ ಹಾಗೂ ಶಿಕ್ಷಣ ಸಂಯೋಜಕ ಶಶಿಧರ್ ಅವರು ವಿಮಾನದಲ್ಲಿ ಮಕ್ಕಳ ಜೊತೆಗೆ ಪ್ರಯಾಣಿಸಿದರು.

ಹಿರಿಯ ವಿದ್ಯಾರ್ಥಿಗಳಾದ ಪ್ರಭಾಕರ್, ಚನ್ನಪ್ಪ, ಸದ್ಗರು ಪ್ರದೀಪ್,ಬಸವರಾಜ್ ಮಹಾಲಿಂಗಪ್ಪ, ಘನಮೂರ್ತಿ, ಪಿಡಿಓ ಶಾಂತಕುಮಾರ್ ಅರುಣ್ ಗೋವಿಂದಪ್ಪ ಸೇರಿದಂತೆ ಶಿಕ್ಷಕರು ಸಹ ಸಹಕಾರ ಮಾಡಿದ್ದಾರೆ.

ಗುರುವಾರ ಮಧ್ಯಾಹ್ನ 3 ಗಂಟೆಗೆ ಶಿವಮೊಗ್ಗ ವಿಮಾನ ನಿಲ್ದಾಣದಿಂದ ಬೆಂಗಳೂರಿನ ದೇವನಹಳ್ಳಿ ವಿಮಾನ ನಿಲ್ದಾಣ ತೆರಳಿ ನಂತರ, ಖಾಸಗಿ ವಾಹನದಲ್ಲಿ ಬೆಂಗಳೂರು ಈಶ ಪೌಂಡೇಶನ್, ಮೆಟ್ರೋ, ವಿಧಾನ ಸೌಧ, ಬನ್ನೇರುಘಟ್ಟ ಮೊದಲಾದ ಪ್ರವಾಸಿ ಕೇಂದ್ರಗಳಿಗೆ ತೆರಳಿದ್ದಾರೆ.

ಕ್ಲಿಕ್ ಮಾಡಿ ಓದಿ: ಸಂತಾನಹರಣ ಶಸ್ತ್ರಚಿಕಿತ್ಸೆ ವಿಫಲ | ವೈದ್ಯರಿಗೆ ದಂಡ ಹಾಕಿದ ಗ್ರಾಹಕರ ನ್ಯಾಯಾಲಯ

ನಾನು ಚಿಕ್ಕಂದಿನಿಂದಲೇ ವಿಮಾನವನ್ನು ಹತ್ತಿರದಿಂದ ನೋಡಬೇಕು, ಅದರಲ್ಲಿ ಹೋಗಬೇಕೆಂಬ ಆಸೆ ಇರುತ್ತದೆ ಹಾಗಾಗಿ ಈ ಪ್ರವಾಸ ಬಹಳ ವಿದ್ಯಾರ್ಥಿಗಳಿಗೆ ಸ್ಮರಣೀಯ ಎಂದು ಪ್ರವಾಸ ತಂಡದಲ್ಲಿರುವ ಶಿಕ್ಷಣ ಸಂಯೋಜಕ ಶಶಿಧರ್ ಹರ್ಷ ವ್ಯಕ್ತಪಡಿಸಿದರು.

ಬರುವಾಗ ರೈಲಿನಲ್ಲಿ ಲ್ಲಿ ಪ್ರಯಾಣ ಬೆಳೆಸಲಿದ್ದು ಒಟ್ಟಾರೆ ಪ್ರತಿ ವಿದ್ಯಾರ್ಥಿಗೆ ಸುಮಾರು 4 ಸಾವಿರ ಖರ್ಚು ಆಗಲಿದ್ದು, ಹಣವನ್ನು ದಾನಿಗಳು ನೀಡಿದ್ದು ಎಲ್ಲ ವಿದ್ಯಾರ್ಥಿಗಳ ಪ್ರವಾಸ ವೇಳೆ ಊಟ, ವಸತಿ, ಓಡಾಟಕ್ಕಾಗಿ ವ್ಯಯಿಸಲಿದ್ದಾರೆ.

ಹಳ್ಳಿಗಾಡಿನ ಮಕ್ಕಳನ್ನು ವಿಮಾನದಲ್ಲಿನ ಪ್ರಯಾಣದ ಅನುಭವ ಒದಗಿಸಿರುವುದು ಹಾಗೂ ಮಕ್ಕಳ ಕಲಿಕೆಗೆ ಚೈತನ್ಯ ತುಂಬಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಉತ್ತಮ ಪ್ರತಿಕ್ರಿಯೆಯೊಂದಿಗೆ ಮೆಚ್ಚುಗೆಯೂ ವ್ಯಕ್ತವಾಗಿದೆ.

ಕ್ಲಿಕ್ ಮಾಡಿ ಓದಿ: ದಿನ ಭವಿಷ್ಯ | 06 ಡಿಸೆಂಬರ್ | ಈ ದಿನ ಹೇಗಿದೆ ನಿಮ್ಮ ರಾಶಿ ಫಲ…

ಸರ್ಕಾರಿ ಶಾಲಾ ಮಕ್ಕಳ ವಿಮಾನ ಪ್ರಯಾಣ ಮಕ್ಕಳ ಕಲಿಕೆಗೆ ಅವಕಾಶ ಮಾಡಿದೆ.

ಸೖಯದ್ ಮೋಸೀನ್, ಬಿಇಓ

ಹಳ್ಳಿಗಾಡಿನ ಮಕ್ಕಳನ್ನು ಗ್ರಾಮಸ್ಥರ, ದಾನಿಗಳ, ಸಹಕಾರ ದಲ್ಲಿ ಪ್ರವಾಸಕ್ಕೆ ವಿಮಾನದಲ್ಲಿ ಕರೆದುಕೊಂಡು ಹೋಗುತ್ತಿರುವುದಕ್ಕೆ ಖುಷಿಯಾಗುತ್ತಿದೆ. ಮಕ್ಕಳಿಗೆ ಅವರು ಪೋಷಕರು ಕಲಿಕೆಗೆ ಸ್ಫೂರ್ತಿ ತುಂಬುತ್ತಿದ್ದಾರೆ.

ರಾಮಪ್ಪ , ಮುಖ್ಯ ಶಿಕ್ಷಕ

ಶಾಲೆಯ ಮಕ್ಕಳು ಸ್ಕೌಟ್ ನಲ್ಲಿ ಸೇವಾ ಮನೋಭಾವನೆ ಹೊಂದಿದ್ದು, ಗ್ರಾಮದ ಪ್ರೋತ್ಸಾಹದಿಂದ ವಿಮಾನ, ರೈಲ್ವೇ ಮೂಲಕ ಪ್ರಯಾಣ ಮಾಡಿ ಬೆಂಗಳೂರು ಪಟ್ಟಣ ತೋರಿಸಲಾಗುವುದು.

ಯೋಗಾನಂದ, ಶಿಕ್ಷಕ ಸ. ಹಿ. ಪ್ರಾ ಶಾಲೆ, ಮಾರಬಘಟ್ಟ

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» Chitradurga News gmail

chitradurganews23@gmail.com

» Whatsapp Number

TAGGED:BangaloreChitradurgaChitradurga newsChitradurga UpdatesEducational tourfeaturedGovt School ChildrenHosadurgaKannada Latest NewsKannada NewsplaneShimogaಕನ್ನಡ ನ್ಯೂಸ್ಕನ್ನಡ ಲೇಟೆಸ್ಟ್ ನ್ಯೂಸ್ಕನ್ನಡ ಸುದ್ದಿಚಿತ್ರದುರ್ಗಚಿತ್ರದುರ್ಗ ನ್ಯೂಸ್ಫೀಚರ್ಡ್ಬೆಂಗಳೂರುವಿಮಾನಶಿವಮೊಗ್ಗಶೈಕ್ಷಣಿಕ ಪ್ರವಾಸಸರ್ಕಾರಿ ಶಾಲೆ ಮಕ್ಕಳುಹೊಸದುರ್ಗ
Share This Article
Facebook Email Print
Previous Article APMC: ಚಿತ್ರದುರ್ಗ ಮಾರುಕಟ್ಟೆ | ಇಂದಿನ ಮೆಕ್ಕೆಜೋಳ, ಸೂರ್ಯಕಾಂತಿ ರೇಟ್ ಎಷ್ಟಿದೆ?
Next Article ಡಾ.ಬಿ.ಆರ್.ಅಂಬೆಡ್ಕರ್ 68ನೇ ಪುಣ್ಯಸ್ಮರಣೆ Dr.B.R.Ambedkar: ಡಾ.ಬಿ.ಆರ್.ಅಂಬೆಡ್ಕರ್ 68ನೇ ಪುಣ್ಯಸ್ಮರಣೆ | ಜಿಲ್ಲಾಡಳಿತದಿಂದ ಗೌರವ
Leave a Comment

Leave a Reply Cancel reply

Your email address will not be published. Required fields are marked *

ಲಿಫ್ಟ್ ಹತ್ತಿದ ತಕ್ಷಣ ತಲೆ ಸುತ್ತುವವರು ಒಮ್ಮೆ ಈ ವಿಚಾರ ತಿಳಿದಿರಿ
Life Style
ಮಳೆಗಾಲದಲ್ಲಿ ಶೀತ ಮತ್ತು ಕೆಮ್ಮು ಬಂದಾಗ ಏನು ತಿನ್ನಬೇಕು ಮತ್ತು ಏನು ತಿನ್ನಬಾರದು? ಎಂಬುದನ್ನು ತಿಳಿಯಿರಿ
Life Style
ಹೆರಿಗೆಯ ನಂತರ ಬೇಗ ಚೇತರಿಸಿಕೊಳ್ಳಲು ಈ ಲಡ್ಡುಗಳನ್ನು ತಿನ್ನಿರಿ
Life Style
today bhavishya
Astrology: ದಿನ ಭವಿಷ್ಯ | ಜೂನ್ 30 | ಉದ್ಯೋಗಗಳಲ್ಲಿ ಬಡ್ತಿ, ದೂರದ ಪ್ರಯಾಣ, ಆರೋಗ್ಯದಲ್ಲಿ ಎಚ್ಚರ
Dina Bhavishya
© Chitradurga News. Ruby Design Company. All Rights Reserved.

Chitradurga News App

Install
Welcome Back!

Sign in to your account

Username or Email Address
Password

Lost your password?

Not a member? Sign Up