By using this site, you agree to the Privacy Policy and Terms of Use.
Accept
Chitradurga News-Kannada NewsChitradurga News-Kannada NewsChitradurga News-Kannada News
Notification
Font ResizerAa
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Reading: Mahabharata: ವಿದ್ಯಾರ್ಥಿಗಳು ರಾಮಾಯಣ, ಮಹಾಭಾರತ ಗ್ರಂಥ ಓದುವ ಹವ್ಯಾಸ ರೂಢಿಸಿಕೊಳ್ಳಿ | ತರಳಬಾಳು ಶ್ರೀ 
Share
Font ResizerAa
Chitradurga News-Kannada NewsChitradurga News-Kannada News
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Search
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Follow US
© 2022 Foxiz News Network. Ruby Design Company. All Rights Reserved.

Home » Mahabharata: ವಿದ್ಯಾರ್ಥಿಗಳು ರಾಮಾಯಣ, ಮಹಾಭಾರತ ಗ್ರಂಥ ಓದುವ ಹವ್ಯಾಸ ರೂಢಿಸಿಕೊಳ್ಳಿ | ತರಳಬಾಳು ಶ್ರೀ 

ಮುಖ್ಯ ಸುದ್ದಿ

Mahabharata: ವಿದ್ಯಾರ್ಥಿಗಳು ರಾಮಾಯಣ, ಮಹಾಭಾರತ ಗ್ರಂಥ ಓದುವ ಹವ್ಯಾಸ ರೂಢಿಸಿಕೊಳ್ಳಿ | ತರಳಬಾಳು ಶ್ರೀ 

News Desk Chitradurga News
Last updated: 11 November 2024 09:57
News Desk Chitradurga News
8 months ago
Share
ತರಳಬಾಳು ನುಡಿಹಬ್ಬ
ತರಳಬಾಳು ನುಡಿಹಬ್ಬ
SHARE
https://chat.whatsapp.com/Jhg5KALiCFpDwME3sTUl7x

CHITRADURGA NEWS | 11 NOVEMBER 2024

ಚಿತ್ರದುರ್ಗ: ಭಾರತ ಸಾಂಸ್ಕೃತಿಕವಾಗಿ ಹಿರಿಮೆ ಪಡೆದಿದ್ದು, ಎಲ್ಲಾ ವಿದ್ಯಾರ್ಥಿಗಳು ರಾಮಾಯಣ(Ramayana), ಮಹಾಭಾರತ(Mahabharata) ಗ್ರಂಥಗಳನ್ನು ಓದುವ ಅಭ್ಯಾಸ ರೂಡಿಸಿಕೊಳ್ಳಬೇಕು ಎಂದು ಸಿರಿಗೆರೆಯ ತರಳಬಾಳು ಡಾ. ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಯವರು ಹೇಳಿದರು.

ಕ್ಲಿಕ್ ಮಾಡಿ ಓದಿ: ದಿನ ಭವಿಷ್ಯ | ನವೆಂಬರ್ 11 | ಆರ್ಥಿಕ ಸಮಸ್ಯೆ, ಅನಿರೀಕ್ಷಿತ ಪ್ರಯಾಣ, ಆರೋಗ್ಯದಲ್ಲಿ ಎಚ್ಚರ

ಸಿರಿಗೆರೆಯ ಶ್ರೀ ಗುರುಶಾಂತೇಶ್ವರ ದಾಸೋಹ ಮಂಟಪದಲ್ಲಿ ಶ್ರೀ ತರಳಬಾಳು ಜಗದ್ಗುರು ಬೃಹನ್ಮಠ ಮತ್ತು ಬೆಂಗಳೂರು ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಜರುಗಿದ ತರಳಬಾಳು ನುಡಿಹಬ್ಬ 2024ರ ಮೂರನೇ ದಿನದ ಮಹಿಳೆ ಮತ್ತು ಯುವಜನತೆ ಗೋಷ್ಠಿಯಲ್ಲಿ ಕಾರ್ಯಕ್ರಮದಲ್ಲಿ ದಿವ್ಯಸಾನಿಧ್ಯ ವಹಿಸಿ ಮಾತನಾಡಿದರು.

ದೇಶಾದ್ಯಾಂತ ಇಂದು ಅನೇಕ ಕ್ರೌರ್ಯ, ಅಮಾನುಷ ಕೃತ್ಯಗಳು, ದುಶ್ಚಟಗಳು ಹೆಚ್ಚಾಗಿದ್ದು, ಮನುಷ್ಯ ಮನುಷ್ಯನನ್ನೆ ತಿನ್ನುವ ಕಾಲ ಬಂದಿದೆ. ಆದ್ದರಿಂದ ಎಲ್ಲರೂ ಸಕಲ ಜೀವರಾಶಿಗೆ ಲೇಸನೆ ಬಯಸುವ ನಮ್ಮ ಕೂಡಲ ಸಂಗನ ಶರಣರ ಚಿಂತನೆಗಳನ್ನು ಜೀವನದಲ್ಲಿ ರೂಢಿಸಿಕೊಳ್ಳಬೇಕಾಗಿದೆ ಎಂದು ಎಂದು ಹೇಳಿದರು.

ಕರ್ನಾಟಕ ಸರ್ಕಾರ ನೀಡುವ ರಾಜ್ಯೋತ್ಸವ ಪುರಸ್ಕೃತ ಪ್ರಶಸ್ತಿಗಳಿಗೆ ಅರ್ಜಿಗಳನ್ನು ಕರೆಯುವ ಪದ್ಧತಿಗೆ ತೀಲಾಂಜಲಿ ಹಾಕಿ, ಅದಕ್ಕಾಗಿ ಯೋಗ್ಯ ಸಮಿತಿಯನ್ನು ರಚಿಸಿ, ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಅರ್ಹ, ಯೋಗ್ಯರನ್ನು ಆಯ್ಕೆ ಮಾಡುವ ಹೊಸ ವ್ಯವಸ್ಯೆಗಳು ಜಾರಿಯಾಗಬೇಕು ಎಂದರು.

ಕ್ಲಿಕ್ ಮಾಡಿ ಓದಿ: BUS: ಚಾಲಕನ ನಿಯಂತ್ರಣ ತಪ್ಪಿ ಖಾಸಗಿ ಬಸ್ ಪಲ್ಟಿ

ಹೊಸನಗರ ಮೂಲೆಗದ್ದೆಯ ಸದಾನಂದ ಶಿವಯೋಗಾಶ್ರಮದ ಶ್ರೀಮ.ನಿ.ಪ್ರ ಅಭಿನವ ಚನ್ನಬಸವಸ್ವಾಮಿಗಳು ಮಾತನಾಡಿ, ಭಾರತದಲ್ಲಿ ಸಾಧು ಸಂತರಿಂದ ಭಾರತಕ್ಕೆ ಬೆಲೆ ಬಂದಿದೆ. ಸಂಸ್ಕಾರಯುತ ಶಿಕ್ಷಣ ಇಂದು ಎಲ್ಲಾಕಡೆ ಕಡಿಮೆಯಾಗಿದೆ. ಆದರೆ ಇಂದು ಮಠಗಳಿಂದ ಶಿಕ್ಷಣ ಪಡೆದವರಲ್ಲಿ ಸಂಸ್ಕಾರಯುತ ಶಿಕ್ಷಣ, ಶಿಸ್ತು, ರೂಢಿಯಲ್ಲಿದೆ. ಭಾರತದಲ್ಲಿ ವಚನಗಳನ್ನು ತಂತ್ರಾಂಶದಲ್ಲಿ ರೂಪಿಸಿರುವ ಏಕೈಕ ಗುರುಗಳು ಸಿರಿಗೆರೆಯ ಶ್ರೀಗಳು ಮೊದಲಿಗರು.

ಜೀವನದಲ್ಲಿ ಗುರುಗಳ ಸೇವೆ ಮಾಡುವುದು ಪುಣ್ಯದ ಕೆಲಸ. ಎಲ್ಲರ ಕನಸು ನನಸುಮಾಡುವ ಇಡೀ ಸಮಾಜ ಜಗತ್ತು, ನೋಡುವ ಹಾಗೆ ಸಾಧನೆ ಮಾಡುವ ಶಕ್ತಿ ನಮ್ಮೊಳಗಿದೆ. ವಸ್ತುಗಳ ಬದಲು ವ್ಯಕ್ತಿಗಳನ್ನು ಪ್ರೀತಿ ಮಾಡಿದಾಗ ನಮ್ಮ ಜೀವನಕ್ಕೆ ಬೆಲೆ ಲಭಿಸಲಿದೆ. ನಾಡಿನಲ್ಲಿರುವ ಬಹು ದೊಡ್ಡ ಗುರುಮನೆ ಎಂದರೆ ಅದುವೇ ನಮ್ಮ ಸಿರಿಗೆರೆಯ ತರಳಬಾಳು ಮನೆ. ನಾಡೊಂದು ಸುಖ ಸಮೃದ್ಧಿಯ ವೇದಿಕೆಯಾಲಕಿ ಎಂದರು.

ದಾವಣಗೆರೆಯ ಕನ್ನಡ ಉಪನ್ಯಾಸಕಿ ಡಾ.ಗೀತಾಬಸವರಾಜ್ ಮಾತನಾಡಿ, ಶತಶತಮಾನಗಳಿಂದ ಮಹಿಳೆ ಶ್ರೇಷ್ಠಳು, ವಚನಕಾರರು ಮಹಿಳೆಯರಿಗೆ ವಿಶೇಷ ಸ್ಥಾನ ನೀಡಿದ್ದಾರೆ. ಕೌಟುಂಬಿಕ ವಲಯಗಳಲ್ಲಿ ಮಹಳೆಯ ಮಹತ್ವ. ಮಹಿಳೆಯು ಬದುಕಿನ ನೇತಾರಳಾಗಿ ತನ್ನ ಜೀವನವನ್ನೇ ಮುಡಿಪಾಗಿಟ್ಟುಕೊಂಡಿದ್ದಾರೆ. ಎಲ್ಲಾ ಕ್ಷೇತ್ರಗಳಲ್ಲಿಯೂ ಮಹಿಳೆಯ ಸಾಧನೆಯ ಹಾದಿ ಮೆಚ್ಚುವಂತಹದ್ದು.

ಕ್ಲಿಕ್ ಮಾಡಿ ಓದಿ: ವಿವಿ ಸಾಗರಕ್ಕೆ ಹರಿದು ಬಂತು 1 ಸಾವಿರ ಕ್ಯೂಸೆಕ್ ನೀರು

ಸಾಧನೆಗೆ ಸ್ಪೂರ್ತಿಯೇ ಮಹಿಳೆ. ಪ್ರತಿಯೊಬ್ಬ ಮಹಿಳೆಯಲ್ಲಿ ಚೈತನ್ಯ ಶಕ್ತಿ ಅಡಗಿದೆ. ಅಸಾಹಕತೆಯ ಸ್ಥಿತಿಯ ಮಹಿಳೆಯು ಇಂದು ಎಲ್ಲಾ ನಿಲುವುಗಳನ್ನು ದಾಟಿ ಮೆಟ್ಟಿನಿಂತಿದ್ದಾಳೆ.

ಉಡುಪಿಯ ಹಾಸ್ಯ ಭಾಶಣಕಾರರಾದ ಸಂಧ್ಯಾಶೆಣೈ ಮಾತನಾಡಿ ಮೌಲ್ಯಗಳು ಯುವಕರ ರಕ್ತದಲ್ಲಿ ಕರಗತವಾಗಬೇಕು. ಯಾರನ್ನೇ ಅಪಮಾನ ಮಾಡದೇ ಬದುಕುವುದು ಸಾರ್ಥಕ.

ಯುವಕರು ಹಸತನ ಹೊಸ ವಿಚಾರಗಳಿಗೆ ಬೆಲೆ ನೀಡಿ ಸಂಸ್ಕಾರಯುತ ಜೀವನ ನಡೆಸಬೇಕಿದೆ. ಇಂದು ತಪ್ಪನ್ನು ಸರಿಪಡಿಸುವ ಜನರೇ ಸಿಗುವುದಿಲ್ಲ. ನಮ್ಮ ಆತ್ಮ ಹೇಳಿದಾಗೆ ಕೇಳಿ ಸಾಧಿಸುವ ಛಲ ನಮ್ಮಲ್ಲಿರಬೇಕು. ನಾವುಗಳು ಯಾವುದನ್ನು ರೂಢಿಸಿಕೊಳ್ಳುವತ್ತೇವೆಯೋ ಅದನ್ನು ಪಡೆಯುತ್ತೇವೆ ಎಂದರು.

2024ರ ರಾಜ್ಯೋತ್ಸವ ಪುರಸ್ಕೃತರಾದ ಸಾಹಿತಿಗಳಾದ ಬಿ.ಟಿ.ಲಲಿತನಾಯ್ಕ್, ತಾಳಿಕೋಟೆಯ ಅಶೋಕ್.ಎಸ್.ಹಂಜಲಿ ಮಾತನಾಡಿದರು.

ಕ್ಲಿಕ್ ಮಾಡಿ ಓದಿ: ಕಬೀರಾನಂದ ಮಠದಲ್ಲಿ ಶಿವಲಿಂಗಾನಂದ ಸ್ವಾಮೀಜಿ ಜನ್ಮ ದಿನಾಚರಣೆ | ಮಾಜಿ ಶಾಸಕ ಎಸ್.ಕೆ.ಬಸವರಾಜನ್, ಮಾದಾರ ಚನ್ನಯ್ಯ ಸ್ವಾಮೀಜಿ ಭಾಗೀ

ಕಾರ್ಯಕ್ರಮದಲ್ಲಿ ಹಾಸನ ಹಾಗೂ ಬಳ್ಳಾರಿಯ ಕಸಾಪ ಅಧ್ಯಕ್ಷರಾದ ಎಚ್.ಎಲ್ ಮಲ್ಲೇಶ ಗೌಡ, ನಿಷ್ಠಿ ರುದ್ರಪ್ಪ ಇದ್ದರು.

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» Chitradurga News gmail

chitradurganews23@gmail.com

» Whatsapp Number

TAGGED:ChitradurgaChitradurga newsChitradurga UpdatesfeaturedKannada Latest NewsKannada NewsMahabharataRamayanaSirigereTaralabalu Folklore FestivalTaralabalu SriTextಕನ್ನಡ ನ್ಯೂಸ್ಕನ್ನಡ ಲೇಟೆಸ್ಟ್ ನ್ಯೂಸ್ಗ್ರಂಥಚಿತ್ರದುರ್ಗಚಿತ್ರದುರ್ಗ ಅಪ್ಡೇಟ್ಸ್ಚಿತ್ರದುರ್ಗ ನ್ಯೂಸ್ಚಿತ್ರದುರ್ಗ ಸುದ್ದಿತರಳಬಾಳು ನುಡಿಹಬ್ಬತರಳಬಾಳು ಶ್ರೀಮಹಾಭಾರತರಾಮಾಯಣಸಿರಿಗೆರೆ
Share This Article
Facebook Email Print
Previous Article today bhavishya Dina Bhavishya: ದಿನ ಭವಿಷ್ಯ | ನವೆಂಬರ್ 11 | ಆರ್ಥಿಕ ಸಮಸ್ಯೆ, ಅನಿರೀಕ್ಷಿತ ಪ್ರಯಾಣ, ಆರೋಗ್ಯದಲ್ಲಿ ಎಚ್ಚರ
Next Article Habbida Malemadhyadolage Kannada Novel: 9. ಊರಿಗೊಬ್ಬ ಅಕ್ಕಸಾಲಿಯ ಆಗಮನ | ಹಬ್ಬಿದಾ ಮಲೆಮಧ್ಯದೊಳಗೆ
Leave a Comment

Leave a Reply Cancel reply

Your email address will not be published. Required fields are marked *

APMC: ಮಾರುಕಟ್ಟೆ ಧಾರಣೆ | ಇಂದಿನ ಮೆಕ್ಕೆಜೋಳ, ಕಡಲೆಕಾಳು, ಶೇಂಗಾ ರೇಟ್ ಎಷ್ಟಿದೆ?
ಮಾರುಕಟ್ಟೆ ಧಾರಣೆ
ಲಿಫ್ಟ್ ಹತ್ತಿದ ತಕ್ಷಣ ತಲೆ ಸುತ್ತುವವರು ಒಮ್ಮೆ ಈ ವಿಚಾರ ತಿಳಿದಿರಿ
Life Style
ಮಳೆಗಾಲದಲ್ಲಿ ಶೀತ ಮತ್ತು ಕೆಮ್ಮು ಬಂದಾಗ ಏನು ತಿನ್ನಬೇಕು ಮತ್ತು ಏನು ತಿನ್ನಬಾರದು? ಎಂಬುದನ್ನು ತಿಳಿಯಿರಿ
Life Style
ಹೆರಿಗೆಯ ನಂತರ ಬೇಗ ಚೇತರಿಸಿಕೊಳ್ಳಲು ಈ ಲಡ್ಡುಗಳನ್ನು ತಿನ್ನಿರಿ
Life Style
© Chitradurga News. Ruby Design Company. All Rights Reserved.

Chitradurga News App

Install
Welcome Back!

Sign in to your account

Username or Email Address
Password

Lost your password?

Not a member? Sign Up