Connect with us

    ಗಾಂಧಿ ವೃತ್ತದಿಂದ ಮೆದೇಹಳ್ಳಿ, ದಾವಣಗೆರೆ ರಸ್ತೆಗಳನ್ನು ವಿಸ್ತರಿಸಿ

    ಮುಖ್ಯ ಸುದ್ದಿ

    ಗಾಂಧಿ ವೃತ್ತದಿಂದ ಮೆದೇಹಳ್ಳಿ, ದಾವಣಗೆರೆ ರಸ್ತೆಗಳನ್ನು ವಿಸ್ತರಿಸಿ

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 28 January 2025

    ಚಿತ್ರದುರ್ಗ: ಗಾಂಧಿ ವೃತ್ತದಿಂದ ದಾವಣಗೆರೆ ರಸ್ತೆ ಹಾಗೂ ಮೆದೇಹಳ್ಳಿ ರಸ್ತೆಗಳನ್ನು ತುರ್ತಾಗಿ ಅಗಲೀಕರಣ ಮಾಡಿ, ಪಾದಚಾರಿಗಳು, ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಜಯ ಕರ್ನಾಟಕ ಜನಪರ ವೇದಿಕೆಯಿಂದ ಅಪರ ಜಿಲ್ಲಾಧಿಕಾರಿಗೆ ಮಂಗಳವಾರ ಮನವಿ ಸಲ್ಲಿಸಲಾಯಿತು.

    Also Read: ಚಿತ್ರದುರ್ಗದಲ್ಲಿ ರಸ್ತೆ ಅಗಲೀಕರಣ ಬೇಡ | ನಗರದ ವಿಸ್ತರಣೆಗೆ ಒತ್ತು ಕೊಡಿ | AAP ಜಗದೀಶ್

    ಚಳ್ಳಕೆರೆ ರಸ್ತೆಯಿಂದ ಗಾಂಧಿ ವೃತ್ತ, ಗಾಂಧಿ ವೃತ್ತದಿಂದ ಕನಕ ವೃತ್ತದವರೆಗೆ ರಸ್ತೆ ಅಗಲೀಕರಣಕ್ಕೆ ಜಿಲ್ಲಾಡಳಿತ ತೀರ್ಮಾನ ಮಾಡಿದೆ. ಅದೇ ರೀತಿ ಗಾಂಧಿ ವೃತ್ತದಿಂದ ಮೆದೇಹಳ್ಳಿ ರಸ್ತೆ ಹಾಗೂ ದಾವಣಗೆರೆ ರಸ್ತೆಗಳನ್ನೂ ಅಗಲೀಕರಣ ಮಾಡಿದರೆ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದು ಮನವಿ ಮಾಡಿದರು.

    ಚಿತ್ರದುರ್ಗ ಐತಿಹಾಸಿಕ ಏಳು ಸುತ್ತಿನ ಕೋಟೆಗೆ ಪ್ರಸಿದ್ದಿಯಾಗಿದೆ. ಆದರೆ, ಇಲ್ಲಿನ ರಸ್ತೆಗಳು ಕಿರಿದಾಗಿದ್ದು, ಪ್ರವಾಸಿಗರು ಬಂದು ಹೋಗಲು ಹರಸಾಹಸ ಮಾಡುವಂತಾಗಿದೆ. ಈ ಹಿನ್ನೆಲೆಯಲ್ಲಿ ರಸ್ತೆಗಳನ್ನು ಅಗಲೀಕರಣ ಮಾಡಿ ನಗರಕ್ಕೆ ಹೊಸ ರೂಪ ಕೊಡಬೇಕು. ನಗರ ಸುಂದರವಾಗಿರುವಂತೆ ಮಾಡಬೇಕು ಎಂದು ಒತ್ತಾಯಿಸಿದರು.

    Also Read: APMC: ಮಾರುಕಟ್ಟೆ ಧಾರಣೆ | ಇಂದಿನ ಹತ್ತಿ ಎಷ್ಟಿದೆ?

    ಜಯ ಕರ್ನಾಟಕ ಜನಪರ ವೇದಿಕೆ ಜಿಲ್ಲಾಧ್ಯಕ್ಷ ಬಿ.ಟಿ.ರಾಜೇಂದ್ರ, ಉಪಾಧ್ಯಕ್ಷ ದೇವರಾಜ ಅರಸ್, ಕಾರ್ಯದರ್ಶಿ ಟಿ.ಗಿರೀಶ, ತಾಲ್ಲೂಕು ಕಾರ್ಯಾಧ್ಯಕ್ಷ ನಿರಂಜನ್, ಅಧ್ಯಕ್ಷ ಬಿ.ಅಶೋಕ ಇತರರಿದ್ದರು.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top