By using this site, you agree to the Privacy Policy and Terms of Use.
Accept
Chitradurga News-Kannada NewsChitradurga News-Kannada NewsChitradurga News-Kannada News
Notification
Font ResizerAa
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Reading: ಜೀವನದಲ್ಲಿ ಅವಕಾಶಗಳು ಸಿಕ್ಕಾಗ ಸದ್ಬಳಕೆ ಮಾಡಿಕೊಳ್ಳಿ | ಶಾಂತವೀರ ಶ್ರೀ
Share
Font ResizerAa
Chitradurga News-Kannada NewsChitradurga News-Kannada News
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Search
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Follow US
© 2022 Foxiz News Network. Ruby Design Company. All Rights Reserved.

Home » ಜೀವನದಲ್ಲಿ ಅವಕಾಶಗಳು ಸಿಕ್ಕಾಗ ಸದ್ಬಳಕೆ ಮಾಡಿಕೊಳ್ಳಿ | ಶಾಂತವೀರ ಶ್ರೀ

ಹೊಸದುರ್ಗ

ಜೀವನದಲ್ಲಿ ಅವಕಾಶಗಳು ಸಿಕ್ಕಾಗ ಸದ್ಬಳಕೆ ಮಾಡಿಕೊಳ್ಳಿ | ಶಾಂತವೀರ ಶ್ರೀ

News Desk Chitradurga News
Last updated: 11 June 2025 18:12
News Desk Chitradurga News
5 days ago
Share
SHARE
https://chat.whatsapp.com/Jhg5KALiCFpDwME3sTUl7x

CHITRADURGA NEWS | 11 June 2025

ಹೊಸದುರ್ಗ: ನಾವು ನಮ್ಮ ಮನದ ಇಚ್ಛೆಯಂತೆ ಜೀವನ ಸಾಗಿಸಬೇಕು. ಕೊಂಕು ಮಾತನಾಡುವವರ ಬಗ್ಗೆ ತಲೆಕೆಡಿಸಿಕೊಳ್ಳಬಾರದು. ಜೀವನದಲ್ಲಿ ಅವಕಾಶಗಳು ಸಿಕ್ಕಾಗ, ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಕುಂಚಿಟಿಗ ಮಠದ ಪೀಠಾಧ್ಯಕ್ಷರಾದ ಶ್ರೀ ಶಾಂತವೀರ ಸ್ವಾಮೀಜಿ ಹೇಳಿದರು.

Also Read: ಮಾರುಕಟ್ಟೆ ಧಾರಣೆ | ಇಂದಿನ ಮೆಕ್ಕೆಜೋಳ, ಶೇಂಗಾ ರೇಟ್ ಎಷ್ಟಿದೆ?

ಪಟ್ಟಣದ ಕುಂಚಿಟಿಗ ಮಹಾಸಂಸ್ಥಾನ ಮಠದಲ್ಲಿ ನಡೆದ ಸುಜ್ಞಾನ ಸಂಗಮ ಮತ್ತು ದುಬೈ ದೇಶಕ್ಕೆ ಪ್ರವಾಸ ಹೋಗಿ ಬಂದಿದ್ದವರಿಂದ ಅನಿಸಿಕೆ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡಿದರು.

ಮನುಷ್ಯ ಒಂದು ಬಾವಿಯ ಕಪ್ಪೆಯಾಗದೆ, ಸಮುದ್ರದ ಮೀನಾಗಬೇಕು. ಅದರಂತೆಯೇ, ನಮ್ಮ ಆತ್ಮ ಮತ್ತು ಆಲೋಚನೆಗಳು ವಿಸ್ತಾರಗೊಂಡಾಗ ಪ್ರಬುದ್ಧ ವ್ಯಕ್ತಿಯಾಗಲು ಸಾಧ್ಯವೆಂದರು.

ದೇಹ ಗಟ್ಟಿಯಿದ್ದಾಗಲೇ ಪ್ರವಾಸ ಮಾಡಬೇಕು. ಮುಪ್ಪಾದಾಗ ಪ್ರವಾಸ ಮಾಡಲಾಗುವುದಿಲ್ಲ, ಮನಸ್ಸು ಗಟ್ಟಿಯಿದ್ದರೂ, ದೇಹ ಸ್ಪಂದಿಸುವುದಿಲ್ಲ. ಒಂದೊಂದು ಪ್ರವಾಸ ಹೊಸ ಅಧ್ಯಾಯ, ಆಲೋಚನೆಯನ್ನು ಬೆಳೆಸುತ್ತದೆ. ದುಬೈ ದೇಶದ ಪ್ರಗತಿ ನಮಗಿಂತ 50 ವರ್ಷ ಮುಂದಿದೆ. ಆ ದೇಶದಲ್ಲಿ ಅತ್ಯಾಚಾರ, ಅನಾಚಾರ ಮಾಡಿದ ರಾಜ ಮತ್ತು ಪ್ರಜೆಗಳನ್ನು ಯಾವುದೇ ತಾರತಮ್ಯವಿಲ್ಲದೆ, ಗಲ್ಲುಗೇರಿಸಲಾಗುತ್ತದೆ.

ನಮ್ಮ ದೇಶದಲ್ಲಿ ಶಿಕ್ಷೆ ಕೊಡಿಸಲು ಬಹಳ ವರ್ಷಗಳೇ ಬೇಕಾಗುತ್ತದೆ. ಬಸವಣ್ಣ ಮತ್ತು ಅಂಬೇಡ್ಕರ್ ಇರದೇ ಇದ್ದಿದ್ದರೆ, ಸಮಾನತೆ, ಭ್ರಾತೃತ್ವ ಇರುತ್ತಿರಲಿಲ್ಲ. ನಾವೆಂದಿಗೂ ಈ ಇಬ್ಬರನ್ನೂ ಎಂದಿಗೂ ಮರೆಯುವಂತಿಲ್ಲ ಎಂದರು.

Also Read: ಹಸಿರು ಮೆಣಸಿನಕಾಯಿ ತಿನ್ನುವುದು ಹೃದ್ರೋಗಿಗಳಿಗೆ ಒಳ್ಳೆಯದೇ?

ನಿವೃತ್ತ ಉಪನ್ಯಾಸಕ ತಣಿಗೇಕಲ್ಲು ನಾಗರಾಜ್ ಮಾತನಾಡಿ, ದುಬೈ ಬಹಳ ಸುಂದರವಾದ ದೇಶವಾಗಿದೆ. ರಸ್ತೆಗಳಲ್ಲಿ ಅಕ್ಕ-ಪಕ್ಕದಲ್ಲಿಯೇ ವಾಹನಗಳು ಹೋದರು, ಹಾರನ್ ಮಾಡುವುದಿಲ್ಲ. ಒಂದೇ ಒಂದು ಗುಂಡಿ ನೋಡಿಲ್ಲ, ದುಬೈ ರಾಷ್ಟ್ರದ ಜನರು ದುಡಿಮೆಯಲ್ಲಿ ನಂಬಿಕೆ ಇಟ್ಟಿದ್ದಾರೆ. ಹಾಗಾಗಿ ಆ ದೇಶ ಅಷ್ಟರ ಮಟ್ಟಿಗೆ ಪ್ರಗತಿ ಹೊಂದಿದೆ.

ನಮ್ಮ ದೇಶದಲ್ಲಿ ಭ್ರಷ್ಟಾಚಾರ, ಕಳಪೆ ಕಾಮಗಾರಿ, ಮತಾಂಧತೆ ತುಂಬಿ ತುಳುಕುತ್ತಿದೆ. ಹೀಗಿರುವಾಗ ಅಭಿವೃದ್ಧಿ ಹೊಂದಲು ಸಾಧ್ಯವೇ? ಬದಲಾವಣೆಗಳಾದರೆ ಮಾತ್ರ, ದೇಶ ಮತ್ತಷ್ಟು ಪ್ರಗತಿ ಸಾಧಿಸಲು ಸಾಧ್ಯ ಎಂದರು.

ದುಬೈ ಪ್ರವಾಸದ ಕುರಿತು ಮುಖಂಡ ತಿಪ್ಪೇಸ್ವಾಮಿ ಮಾತನಾಡಿ, ಶಕ್ತಿಯಿದ್ದಾಗ, ಅವಕಾಶಗಳಿದ್ದಾಗ ವಿದೇಶ ಸುತ್ತ ಬೇಕು, ಇಲ್ಲ ಕೋಶ ಓದುವ ಕೆಲಸ ಮಾಡಬೇಕು. ಗುರುಗಳು ನಮಗೆ ದುಬೈ ತೋರಿಸಿ, ಅತಿ ಸಂತೋಷ ನೀಡಿದ್ದಾರೆ. ಅರಬ್ ರಾಷ್ಟ್ರಗಳಲ್ಲಿ ಗಾಲೀಜಿಲ್ಲ, ರಾತ್ರಿ ಸಮಯದಲ್ಲಿ ವಾಹನಗಳಲ್ಲಿ ಹಾರಾನ್ ಮಾಡುವುದಿಲ್ಲ, ಅಂತಹ ಶಿಸ್ತನ್ನು ಬೆಳೆಸಿಕೊಂಡಿದ್ದಾರೆ. ಅವರ ದೇಶಕ್ಕೆ ಹೋಲಿಸಿದರೆ, ನಮ್ಮ ದೇಶ ಬಹಳ ಸುಂದರ. ಆದರೆ, ನಾವುಗಳು ಇನ್ನಷ್ಟು ಸುಂದರವಾಗಿ ಇಡುವ ಕೆಲಸ ಮಾಡಬೇಕು. ಪ್ರವಾಸ ನಮ್ಮ ಬದುಕಿನಲ್ಲಿ ಸುಂದರವಾದ ಸಮಯಗಳಾಗಿ ಉಳಿದಿವೆ ಎಂದು ಸಂತಸ ವ್ಯಕ್ತಪಡಿಸಿದರು.

ಆಪರೇಷನ್ ಸಿಂಧೂರ ಯುದ್ಧದಲ್ಲಿ ಭಾಗವಹಿಸಿದ ರೊಪ್ಪ ಗ್ರಾಮದ ರಮೇಶ್ ಗೆ ತಾಲೂಕಿನ ಜನತೆಯ ಪರವಾಗಿ ಸನ್ಮಾನಿಸಲಾಯಿತು.

23 ವರ್ಷಗಳ ಕಾಲ ಕುಂಚಶ್ರೀ ಸಂಗಮೇಶ್ವರ ಮಹಿಳಾ ಸಂಘದ ಬೆಳವಣಿಗೆಗೆ ಸಕ್ರಿಯವಾಗಿ ತೊಡಗಿಸಿಕೊಂಡ ಪ್ರೇಮಕ್ಕ, ಜಾನಕಮ್ಮ, ಲೋಕಮ್ಮ, ಪ್ರಭಕ್ಕ ಶ್ರೀಮಠದಿಂದ ಸನ್ಮಾನಿಸಲಾಯಿತು.

Also Read: KRS ಮಾದರಿಯಲ್ಲಿ ವಿವಿ ಸಾಗರದ ಅಭಿವೃದ್ಧಿ | ಬೆಂಗಳೂರಿನಲ್ಲಿ ಮಹತ್ವದ ಸಭೆ | ಪ್ರವಾಸಿ ತಾಣವಾಗಿ ರೂಪಿಸಲು ಸೂಚನೆ

ಈ ವೇಳೆ ಹೊಸದುರ್ಗ ತಾಲೂಕು ಕುಂಚಿಟಿಗ ಸಮಾಜದ ಅಧ್ಯಕ್ಷ ಕಲ್ಕೆರೆ ಶೇಖರಪ್ಪ, ಉಪಾಧ್ಯಕ್ಷ ಐಯ್ಯನಹಳ್ಳಿ ಧನಂಜಯ್, ಮುಖಂಡ ಕೋಡಿಹಳ್ಳಿ ತಮ್ಮಣ್ಣ ಸೇರಿದಂತೆ ವಿವಿಧ ಮುಖಂಡರು ಮತ್ತು ಮಹಿಳೆಯರು ಪಾಲ್ಗೊಂಡಿದ್ದರು.

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» Chitradurga News gmail

chitradurganews23@gmail.com

» Whatsapp Number

TAGGED:ChitradurgaChitradurga newsChitradurga UpdatesDubai TourHosadurgaKannada Latest NewsKannada NewsSri Shantaveera SwamijiSugnan-Sangamaಕನ್ನಡ ನ್ಯೂಸ್ಕನ್ನಡ ಲೇಟೆಸ್ಟ್ ನ್ಯೂಸ್ಕನ್ನಡ ಸುದ್ದಿಚಿತ್ರದುರ್ಗಚಿತ್ರದುರ್ಗ ನ್ಯೂಸ್ದುಬೈ ಪ್ರವಾಸಶ್ರೀ ಶಾಂತವೀರ ಸ್ವಾಮೀಜಿಸುಜ್ಞಾನ ಸಂಗಮಹೊಸದುರ್ಗ
Share This Article
Facebook Email Print
Previous Article APMC: ಮಾರುಕಟ್ಟೆ ಧಾರಣೆ | ಇಂದಿನ ಮೆಕ್ಕೆಜೋಳ, ಶೇಂಗಾ ರೇಟ್ ಎಷ್ಟಿದೆ?
Next Article arecanut price list ಅಡಿಕೆ ಧಾರಣೆ | ಯಾವ ಮಾರುಕಟ್ಟೆಯಲ್ಲಿ ಎಷ್ಟು ರೇಟ್
Leave a Comment

Leave a Reply Cancel reply

Your email address will not be published. Required fields are marked *

arecanut price list
ಅಡಿಕೆ ಧಾರಣೆ | ಜೂನ್‌ 16 | ರಾಜ್ಯದ ಯಾವ ಮಾರುಕಟ್ಟೆಯಲ್ಲಿ ಎಷ್ಟು ರೇಟ್‌
ಅಡಕೆ ಧಾರಣೆ
UPSC ಪರೀಕ್ಷೆ ತರಬೇತಿಗೆ ಅರ್ಜಿ ಆಹ್ವಾನ
ಮುಖ್ಯ ಸುದ್ದಿ
ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕರಾಗಿ ಪಾಪೇಶ್ ಅವಿರೋಧ ಆಯ್ಕೆ
ಮುಖ್ಯ ಸುದ್ದಿ
ಖಾಸಗಿ ಕಂಪನಿಗಳಲ್ಲಿ ಉದ್ಯೋಗ | ಜೂ.19 ರಂದು ನೇರ ನೇಮಕಾತಿ ಸಂದರ್ಶನ
ಮುಖ್ಯ ಸುದ್ದಿ
© Chitradurga News. Ruby Design Company. All Rights Reserved.
Welcome Back!

Sign in to your account

Username or Email Address
Password

Lost your password?

Not a member? Sign Up