
CHITRADURGA NEWS | 08 JULY 2026
ಬದಲಾಗುತ್ತಿರುವ ಹವಾಮಾನವು ದೇಹದ ರೋಗಗಳ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ದುರ್ಬಲಗೊಳಿಸುತ್ತದೆ. ಇದರಿಂದ ಜನರು ಆಗಾಗ ಅನಾರೋಗ್ಯಕ್ಕೊಳಗಾಗುತ್ತಾರೆ. ಆದ್ದರಿಂದ ಕಷಾಯವು ಅದರ ಶಕ್ತಿಯನ್ನು ಪುನಃಸ್ಥಾಪಿಸಲು ಸಹಾಯ ಮಾಡುತ್ತದೆ. ಈಗಾಗಲೇ ಮಳೆಗಾಲವು ಶುರುವಾಗಿದೆ. ಈ ಋತುವಿನಲ್ಲಿ ಕೆಮ್ಮು, ಶಿತದಂತಹ ಸಮಸ್ಯೆಗಳು ಸಾಮಾನ್ಯವಾಗಿದೆ. ಹಾಗಾಗಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಆಯುರ್ವೇದದಲ್ಲಿ ತಿಳಿಸಿರುವ ಕಷಾಯಗಳನ್ನು ತಯಾರಿಸಿ ಕುಡಿಯಿರಿ.
ತುಳಸಿ ಶುಂಠಿ ಕಷಾಯ
ಈ ಕಷಾಯವು ಅತ್ಯಂತ ಸುಲಭ ಮತ್ತು ಪರಿಣಾಮಕಾರಿಯಾಗಿದೆ. ಇದನ್ನು ತಯರಿಸಲು 2 ಕಪ್ ನೀರು, 10-12 ತುಳಸಿ ಎಲೆಗಳು, 1 ಇಂಚಿನ ಶುಂಠಿ ತುಂಡುಗಳು, 1 ಟೀಸ್ಪೂನ್ ಜೇನುತುಪ್ಪ ತೆಗೆದುಕೊಳ್ಳಿ.
ಹೇಗೆ ಮಾಡುವುದು?
ನೀರಿಗೆ ತುಳಸಿ ಮತ್ತು ಶುಂಠಿಯನ್ನು ಸೇರಿಸಿ ಕುದಿಸಿ. 10 ನಿಮಿಷಗಳ ನಂತರ, ನೀರು ಅರ್ಧದಷ್ಟು ಕಡಿಮೆಯಾದಾಗ, ಜೇನುತುಪ್ಪವನ್ನು ಸೇರಿಸಿ ಸೇವಿಸಿ.
ಶುಂಠಿ, ತುಳಸಿ ಮತ್ತು ಆಮ್ಲಾ ಕಷಾಯ
ದೇಹವು ದಣಿದ ಅನುಭವವಾದಾಗ, ಈ ಕಷಾಯ ಸೇವಿಸುವುದರಿಂದ ಶಕ್ತಿ ದೊರೆಯುತ್ತದೆ. ಶುಂಠಿ, ತುಳಸಿ ಮತ್ತು ನೆಲ್ಲಿಕಾಯಿಯ ಕಷಾಯ ತಯಾರಿಸಲು 10-12 ತುಳಸಿ ಎಲೆಗಳು, 1 ಇಂಚು ಶುಂಠಿ, 1 ನೆಲ್ಲಿಕಾಯಿ ತುಂಡುಗಳು, 2 ಕಪ್ ನೀರು, 1 ಟೀಸ್ಪೂನ್ ಜೇನುತುಪ್ಪ ತೆಗೆದುಕೊಳ್ಳಿ.
ಹೇಗೆ ಮಾಡುವುದು?
ಎಲ್ಲಾ ಪದಾರ್ಥಗಳನ್ನು ಎರಡು ಕಪ್ ನೀರಿಗೆ ಸೇರಿಸಿ ಕನಿಷ್ಠ 15 ನಿಮಿಷಗಳ ಕಾಲ ಕುದಿಸಿ. ಕೊನೆಯಲ್ಲಿ, ಜೇನುತುಪ್ಪ ಸೇರಿಸಿ ಬೆಳಿಗ್ಗೆ ಮತ್ತು ಸಂಜೆ ಸೇವಿಸಿ.
ಮುಲೇತಿ ಮತ್ತು ತುಳಸಿ ಕಷಾಯ
ಕೆಮ್ಮು ಮತ್ತು ಶೀತದಿಂದ ತಕ್ಷಣದ ಪರಿಹಾರ ಬೇಕಾಗಲಿ ಅಥವಾ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಲು ಈ ಕಷಾಯವು ಪ್ರಯೋಜನಕಾರಿಯಾಗಿದೆ. ಇದನ್ನು ತಯಾರಿಸಲು 1 ಚಮಚ ಮುಲೇತಿ , 10-12 ತುಳಸಿ ಎಲೆಗಳು, 2 ಕಪ್ ನೀರು, 1 ಟೀಸ್ಪೂನ್ ಜೇನುತುಪ್ಪ ಬೇಕು.
ಹೇಗೆ ಮಾಡುವುದು?
ಮೆಂತ್ಯ ಮತ್ತು ತುಳಸಿ ಎಲೆಗಳನ್ನು ನೀರಿನಲ್ಲಿ ಬೆರೆಸಿ 10-15 ನಿಮಿಷ ಕುದಿಸಿ. ನಂತರ ಜೇನುತುಪ್ಪ ಸೇರಿಸಿ ಸೇವಿಸಿ.
ದಾಲ್ಚಿನ್ನಿ, ಲವಂಗ ಮತ್ತು ಶುಂಠಿಯ ಕಷಾಯ
ಈ ಕಷಾಯವು ಉಸಿರಾಟದ ತೊಂದರೆಗಳು ಮತ್ತು ಸೋಂಕುಗಳಿಗೆ ಚಿಕಿತ್ಸೆ ನೀಡಲು ಹಾಗೂ ಉತ್ತಮ ರೋಗನಿರೋಧಕ ಶಕ್ತಿಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇ ಕಷಾಯ ತಯಾರಿಸಲು 3-4 ದಾಲ್ಚಿನ್ನಿ ತುಂಡುಗಳು, 1 ಇಂಚು ಶುಂಠಿ, 5-6 ಲವಂಗ, 3 ಕಪ್ ನೀರು, 1 ಸಣ್ಣ ತುಂಡು ಬೆಲ್ಲ ಅಥವಾ 1 ಚಮಚ ಜೇನುತುಪ್ಪ ತೆಗೆದುಕೊಳ್ಳಿ.
ಹೇಗೆ ಮಾಡುವುದು?
ನೀರಿಗೆ ಎಲ್ಲಾ ಪದಾರ್ಥಗಳನ್ನು ಸೇರಿಸಿ ಕನಿಷ್ಠ 10 ನಿಮಿಷಗಳ ಕಾಲ ಕುದಿಸಿ. ಕೊನೆಯಲ್ಲಿ, ಬೆಲ್ಲ ಅಥವಾ ಜೇನುತುಪ್ಪ ಸೇರಿಸಿ ಸೇವಿಸಿ.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

