
CHITRADURGA NEWS | 29 AUGUST 2025
ಚಿತ್ರದುರ್ಗ: ಹಿರಿಯೂರು ತಾಲ್ಲೂಕಿನ ಬಬ್ಬೂರುಫಾರಂನ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಸೆಪ್ಟೆಂಬರ್ 03 ರಿಂದ 5 ರವರೆಗೆ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ‘ಐಕಾಂತಿಕ ಸಮುದಾಯ’ ಇವರ ಸಹಯೋಗದಲ್ಲಿ ಚಿತ್ರದುರ್ಗ ಜಿಲ್ಲೆಯ ರೈತರಿಗೆ “ಸಹಜ ಕೃಷಿ – ಆನಂದಮಯ ಜೀವನಕ್ಕೆ ದಾರಿ’’ ಎನ್ನುವ ವಿಷಯದ ಕುರಿತು ಮೂರು ದಿನದ ತರಬೇತಿ ಕಾರ್ಯಗಾರ ಹಮ್ಮಿಕೊಳ್ಳಲಾಗಿದೆ.
ಇದನ್ನೂ ಓದಿ: ನಾಮನಿರ್ದೇಶಿತ ಸದಸ್ಯರ ನೇಮಕಕ್ಕೆ ಅರ್ಜಿ ಆಹ್ವಾನ
ಸೆ.03ರಂದು ಬೆಳಿಗ್ಗೆ 9ಕ್ಕೆ ಉದ್ಘಾಟನೆ ನೆರವೇರಲಿದ್ದು, ತರಬೇತಿ ಕಾರ್ಯಕ್ರಮದಲ್ಲಿ ‘ಐಕಾಂತಿಕ ಸಮುದಾಯ’ದ ಪ್ರಗತಿಪರ ಸಹಜ ಕೃಷಿಕರಾದ ದಾವಣಗೆರೆಯ ರಾಘವ, ಚಿಕ್ಕಜಾಜೂರಿನ ವೀರೇಶ್, ಮಲೇಬೆನ್ನೂರಿನ ಪಾಂಡುರಂಗ, ದಾವಣಗೆರೆಯ ಅಭಿಶೇಕ್ ಮತ್ತು ಹರಿಹರದ ಜಬೀವುಲ್ಲಾ ಇವರುಗಳು ಕೃಷಿ ಬೆಳೆದು ಬಂದ ಹಾದಿ, ಸುಸ್ಥಿರ ಕೃಷಿ ಪದ್ದತಿಗಳು, ಸಹಜ ಕೃಷಿಯ ಪರಿಚಯ, ಸಜೀವ ಮಣ್ಣು, ನೀರು ನಿರ್ವಹಣೆ ಮತ್ತು ಸಹಜ ಕೃಷಿಯಿಂದ ಅಂತರ್ಜಲ ಮಟ್ಟ ಹೆಚ್ಚಿಸುವ ಬಗೆ, ಕಳೆ ನಿರ್ವಹಣೆ, ಕೀಟ ಮತ್ತು ರೋಗ ನಿರ್ವಹಣೆ, ಬಹುಪಯೋಗಿ ಜೀವಂತ ಬೇಲಿ, ತೋಟಗಾರಿಕೆ ಬೆಳೆಗಳಲ್ಲಿ ಗಿಡಗಳ ಸಂಯೋಜನೆ, ಹೊಸದಾಗಿ ತೋಟ ಕಟ್ಟಲು ಅನುಸರಿಸುವ ಕ್ರಮಗಳು, ಹಾಲಿ ಇರುವ ಹಳೆಯ ತೋಟವನ್ನು ಉತ್ತಮಪಡಿಸುವ ವಿಧಾನಗಳು, ತೋಟದ ಕೆಲಸ ಮತ್ತು ಖರ್ಚು ಕಡಿಮೆ ಮಾಡಲು ಇರುವ ಪರಿಹಾರಗಳು, ‘ಚೌಕಾಬಾರ’ ಪದ್ಧತಿಯಲ್ಲಿ ಸುಲಭವಾಗಿ ಬೆಳೆಯಬಹುದಾದ ಸೊಪ್ಪು ಮತ್ತು ತರಕಾರಿಗಳು, ಬಿದಿರಿನ ಮಹತ್ವ, ಸಹಜ ಕೃಷಿಯ ಪುಸ್ತಕಗಳ ಪರಿಚಯ ಮತ್ತು ಮಾರಾಟ, ನೇರ ಮಾರುಕಟ್ಟೆ ವ್ಯವಸ್ಥೆ ಹಾಗೂ ಸಹಜ ಜೀವನದ ವಿಚಾರಗಳ ಕುರಿತ ವಿಷಯಗಳನ್ನು ಮಂಡನೆ ಮಾಡಲಿದ್ದಾರೆ.
ಈಗಾಗಲೇ ಸಹಜ ಕೃಷಿಯಲ್ಲಿ ತೊಡಗಿರುವ ಮತ್ತು ತಮ್ಮ ತಾಕಿನಲ್ಲಿ ಸಹಜ ಕೃಷಿ ಪ್ರಾರಂಭಿಸಲು ಆಸಕ್ತಿ ಇರುವ ಹಾಗೂ ಕಾರ್ಯಗಾರದ 3 ದಿನವೂ ಕಡ್ಡಾಯವಾಗಿ ತರಬೇತಿ ಕೇಂದ್ರದಲ್ಲಿ ವಾಸ್ತವ್ಯ ಮಾಡಿ ಭಾಗವಹಿಸುವ ಚಿತ್ರದುರ್ಗ ಜಿಲ್ಲೆಯ ಪ್ರತಿ ತಾಲ್ಲೂಕಿಗೆ 10 ರಂತೆ, ಆರು ತಾಲ್ಲೂಕಿನ 60 ಜನ ಉತ್ಸಾಹಿ ಯುವ ಕೃಷಿ ದಂಪತಿಗಳು ಅಥವಾ ಯುವ ರೈತಭಾಂದವರು ದೂರವಾಣಿ ಸಂಖ್ಯೆ 8277931058 ಗೆ ಕರೆ ಮಾಡಿ ಸೆ.02 ರೊಳಗೆ ನೋಂದಾಯಿಸಿ ತರಬೇತಿಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಜಿಲ್ಲಾ ಕೃಷಿ ತರಬೇತಿ ಕೇಂದ್ರದ ಸಹಾಯಕ ಕೃಷಿ ನಿರ್ದೇಶಕ ಆರ್.ರಜನೀಕಾಂತ ಕೋರಿದ್ದಾರೆ.
ಕಾರ್ಯಕ್ರಮವನ್ನು ಯಶಸ್ವಿಯಾಗಿ ಆಯೋಜಿಸಲು, ನೋಂದಾವಣಿ ಮಾಡಿಸದೆ ಇರುವ ಮತ್ತು ನಿಗದಿತ ಸಮಯದ ನಂತರ ಬರುವವರಿಗೆ ತರಬೇತಿಯಲ್ಲಿ ಭಾಗವಹಿಸಲು ಅವಕಾಶವಿರುವುದಿಲ್ಲ.
ಇದನ್ನೂ ಓದಿ: ಯುವಕರಿಂದ ವಿನೂತನ ಪ್ರಯತ್ನ | ಸರ್ಕಾರಿ ಶಾಲೆ ರೀತಿಯಲ್ಲಿ ಗಣಪತಿ ಮಂಟಪ | ಇಲ್ಲಿ ಗಣೇಶನೇ ಮೇಸ್ಟ್ರು
ಮೊದಲು ನೋಂದಾವಣಿ ಮಾಡಿಕೊಂಡ ಅರ್ಹ 60 ಜನ ರೈತ ಭಾಂದವರಿಗೆ ಆದ್ಯತೆ ಮೇರೆಗೆ ತರಬೇತಿಗೆ ಪರಿಗಣಿಸಲಾಗುವುದು ಹಾಗೂ ತರಬೇತಿಗೆ ಹಾಜರಾಗುವ ರೈತಬಾಂಧವರು ಕಡ್ಡಾಯವಾಗಿ ತಮ್ಮ ಎಫ್ಐಡಿ ಕಾರ್ಡ್ ಅಥವಾ ಚುನಾವಣೆ ಗುರುತಿನ ಚೀಟಿಯನ್ನು ತರಲು ಮನವಿ ಮಾಡಲಾಗಿದೆ.
ತರಬೇತಿ ಕಾರ್ಯಗಾರವು ಮೊದಲನೇ ದಿನ ಬೆಳಿಗ್ಗೆ 9 ಗಂಟೆಗೆ, ಎರಡನೇ ಮತ್ತು ಮೂರನೇ ದಿನ ಬೆಳಿಗ್ಗೆ 6.30 ರಿಂದ ರಾತ್ರಿ 9 ಗಂಟೆಯವರೆಗೆ ವಿವಿಧ ಅಧಿವೇಶನ ಮತ್ತು ಚಟುವಟಿಕೆಗಳನ್ನು ಒಳಗೊಂಡಿರುವುದರಿಂದ ಆಸಕ್ತ ಉತ್ಸಾಹಿ ಯುವ ರೈತಭಾಂದವರು ಭಾಗವಹಿಸುವಂತೆ ಕೋರಿದೆ.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

