
CHITRADURGA NEWS | 29 AUGUST 20-25
ಚಿತ್ರದುರ್ಗ: ಸರ್ಕಾರಿ ಶಾಲೆಗಳು ಉಳಿಯಬೇಕು ಅಂತ ಸರ್ಕಾರ ಪ್ರತಿ ವರ್ಷ ಒಂದಿಲ್ಲೊಂದು ಯೋಜನೆ ರೂಪಿಸುತ್ತಿದೆ. ಆದರೆ ಪೋಷಕರು ಮಕ್ಕಳನ್ನ ಮಾತ್ರ ಖಾಸಗಿ ಶಾಲೆಗಳಿಗೆ ಸೇರಿಸೋದು ನಿಂತಿಲ್ಲ. ಇದ್ರಿಂದ ಹಲವೆಡೆ ಸರ್ಕಾರಿ ಶಾಲೆ ಮುಚ್ಚುವ ಸ್ಥಿತಿಗೆ ತಲುಪಿವೆ.
ಇದನ್ನೂ ಓದಿ: ಹೊಳಲ್ಕೆರೆ | ಮೂವರು ವ್ಯಕ್ತಿಗಳು ಕಾಣೆ | ಪತ್ತೆಗೆ ಮನವಿ
ಕೋಟೆನಾಡಲ್ಲಿ ಯುವಕರ ಬಳಗ ಸರ್ಕಾರಿ ಶಾಲೆ ಉಳಿವಿಗಾಗಿ ಹೊಸ ಪ್ರಯತ್ನ ಕೈ ಹಾಕಿದ್ದಾರೆ. ಗಣಪತಿ ಹಬ್ಬಕ್ಕೆ ಶಾಲೆಯನ್ನೇ ನಿರ್ಮಿಸಿ ಗಣಪತಿ ಪ್ರತಿಷ್ಠಾಪನೆ ಮಾಡಿ ಮಕ್ಕಳು,ಪೋಷಕರ ಗಮನ ಸೆಳೆದಿದ್ದಾರೆ.
ಈ ಶಾಲೆಗೆ ಸಾಕ್ಷಾತ್ ವಿಘ್ನ ನಿವಾರಕ, ಲಂಬೋದರ, ಡೊಳ್ಳು ಹೊಟ್ಟೆ ಗಣಪನೇ ಮೇಷ್ಟ್ರಾಗಿದ್ದಾನೆ. ಮಕ್ಕಳಿಗೆ ವಿಧ್ಯೆ ಬುದ್ದಿ ಹೇಳಿಕೊಡೋ ಗುರುವಾಗಿದ್ದಾನೆ.
ಇಂಥಾದೊಂದು ವಿನೂತನ ಪ್ರಯತ್ನಕ್ಕೆ ಕೈ ಹಾಕಿ ಎಲ್ಲರ ಗಮನ ಸೆಳದದ್ದು ಬಂಬೂ ಬಜಾರ್ ನ ಯವಕರ ಬಳಗ. ಕಾರಣ ಸರ್ಕಾರಿ ಶಾಲೆಗಳು ಉಳಿಬೇಕು, ಬೆಳಿಬೇಕು ಅಂತ.
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ನಗರದ ಮಹಾದೇವಿ ರಸ್ತೆಯ ಬಂಬೂ ಬಜಾರನ ಓಂ ಗಣಪತಿ ಬಳಗದ ಯುವಕರು ಪ್ರತೀ ವರ್ಷ ಗಣೇಶನನ್ನ ಪ್ರತಿಷ್ಠಾಪನೆ ಮಾಡ್ತಾರೆ. ಆದರೇ ಈ ಭಾರಿ ಗಣಪತಿ ಪೂಜೆ ಬರೀ ಹಬ್ಬಕ್ಕೆ ಸೀಮಿತ ಆಗದೆ ಶೈಕ್ಷಣಿಕ ಕ್ಷೇತ್ರಕ್ಕೆ ಮಾದರಿ ಆಗಬೇಕು ಅನ್ನೋ ಚಿಂತನೆ ಮೂಡಿದೆ. ಅದೇನಂದ್ರೆ ವರ್ಷಗಳು ಕಳೆದಂತೆ ರಾಜ್ಯದ ಸರ್ಕಾರಿ ಕನ್ನಡ ಶಾಲೆಗಳು ಮಕ್ಕಳ ದಾಖಲಾತಿ ಇಲ್ಲದೆ ಮುಚ್ಚುತ್ತಿವೆ.
ಇದನ್ನೂ ಓದಿ: ಧರ್ಮಸ್ಥಳದ ಅಪಪ್ರಚಾರದ ಹಿಂದೆ ಷಡ್ಯಂತರ | ವಿಶ್ವ ಹಿಂದೂ ಪರಿಷತ್ ಭಜರಂಗದಳ ಖಂಡನೆ
ಸರ್ಕಾರಗಳು ಎಷ್ಟೇ ಹೊಸ ಹೊಸ ಸೌಲಭ್ಯ ನೀಡಿದ್ರೂ ದಾಖಲಾತಿ ಮಾತ್ರ ಹೆಚ್ಚುತ್ತಿಲ್ಲ. ಇದರಿಂದ ಸರ್ಕಾರಿ ಶಾಲೆಗಳು ಅಳಿವಿನಂಚಿಗೆ ತಲುಪುತ್ತಿವೆ ಎಂಬ ಆತಂಕ.
ಇದನ್ನ ನಿವಾರಣೆ ಮಾಡಿ, ಜನರ ಮನಸಲ್ಲಿ ಸರ್ಕಾರಿ ಶಾಲೆಗಳ ಬಗೆಗಿನ ನಿರಾಕರಣೆ ತೊಲಗಿಸಬೇಕು ಅನ್ನೋ ಉದ್ದೇಶವಿದೆ. ಹಾಗಾಗಿ ಸರ್ಕಾರಿ ಶಾಲೆ ಮಾದರಿಯ ಪ್ರಾತ್ಯಕ್ಷಿಕೆಗಾಗಿ ತಾತ್ಕಾಲಿಕ ಶೆಡ್ ನಿರ್ಮಿಸಲಾಗಿದೆ. ಅಲ್ಲಿ ಪಾಠ ಹೇಳಿಕೊಡಲು ಗಣಪತಿ ಕನ್ನಡ ಮೇಷ್ಟ್ರಾಗಿ ಕೆಲಸ ಮಾಡುವಂತೆ ಮೂರ್ತಿ ಇಟ್ಟು ಪೂಜೆ ಮಾಡಿದ್ದಾರೆ.
ಬಿದಿರು, ಬ್ಯಾನರ್ ಬಳಸಿ ಕಟ್ಟಿದ ತಾತ್ಕಾಲಿಕ ಶಾಲಾ ಕಟ್ಟಡ, ಥೇಟ್ ಶಾಲೆಯಂತೇ ಇದೆ. ಶಾಲಾ ಗೋಡೆಗಳ ಮೇಲೆ ಕನ್ನಡ ವರ್ಣಮಾಲೆ, ದಾರ್ಶನಿಕರು, ಇತಿಹಾಸಕಾರರು, ಕವಿಗಳು, ಸಾಹಿತಿಗಳು ಸೇರಿ ಅನೇಕರ ಭಾವ ಚಿತ್ರಗಳನ್ನ ಬಿಡಿಸಲಾಗಿದೆ.
ಇದನ್ನೂ ಓದಿ: ಮೀನು ಮಾರಾಟಗಾರರಿಗೆ ವಾಹನ ಖರೀದಿಸಲು ಅರ್ಥಿಕ ನೆರವು | ಅರ್ಜಿ ಅಹ್ವಾನ
ಕನ್ನಡ ಶಾಲೆ ಯಾವ್ ಖಾಸಗಿ ಶಾಲೆಗೂ ಕಮ್ಮಿ ಇಲ್ಲ ಅನ್ನೋ ರೀತಿ ಸ್ವಚ್ಚತೆಗೆ ಪ್ರಮುಖ್ಯತೆ ನೀಡಲಾಗಿದೆ. ಇದನ್ನ ನೋಡಿದವರಿಗೆ ಕನ್ನಡ ಶಾಲೆಗೆ ತಮ್ಮ ಮಕ್ಕಳನ್ನು ಸೇರಿಸಬೇಕು ಅನ್ನೋ ವಾತಾವರಣವನ್ನು ನಿರ್ಮಾಣ ಮಾಡಿದ್ದಾರೆ.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

