By using this site, you agree to the Privacy Policy and Terms of Use.
Accept
Chitradurga News-Kannada NewsChitradurga News-Kannada NewsChitradurga News-Kannada News
Notification
Font ResizerAa
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Reading: ಈ ಹಳ್ಳಿಯಲ್ಲಿನ ಜನರು ಚಿರತೆಗಳಿಗೆ ಹೆದರುವುದಿಲ್ಲವಂತೆ
Share
Font ResizerAa
Chitradurga News-Kannada NewsChitradurga News-Kannada News
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Search
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Follow US
© 2022 Foxiz News Network. Ruby Design Company. All Rights Reserved.

Home » ಈ ಹಳ್ಳಿಯಲ್ಲಿನ ಜನರು ಚಿರತೆಗಳಿಗೆ ಹೆದರುವುದಿಲ್ಲವಂತೆ

Life Style

ಈ ಹಳ್ಳಿಯಲ್ಲಿನ ಜನರು ಚಿರತೆಗಳಿಗೆ ಹೆದರುವುದಿಲ್ಲವಂತೆ

News Desk Chitradurga News
Last updated: 15 May 2025 21:06
News Desk Chitradurga News
4 weeks ago
Share
SHARE
https://chat.whatsapp.com/Jhg5KALiCFpDwME3sTUl7x

CHITRADURGA NEWS | 16 may 2025

ಯಾವ ವ್ಯಕ್ತಿ ಎಷ್ಟು ಧೈರ್ಯವಂತನಾಗಿದ್ದರೂ ಕೂಡ ಕಣ್ಣುಬಿಟ್ಟಾಗ ಎದುರಿಗೆ ಚಿರತೆ ಕಾಣಿಸಿದರೆ ಜೀವ ಭಯಕ್ಕೆ ಎದ್ದುಬಿದ್ದು ಓಡಿಹೋಗುತ್ತಾರೆ. ಆದರೆ ರಾಜಸ್ಥಾನದ ಒಂದು ಹಳ್ಳಿಯಲ್ಲಿನ ಜನರು ಚಿರತೆಯನ್ನು ಕಂಡರೆ ಸ್ವಲ್ಪವೂ ಭಯಪಡುವುದಿಲ್ಲವಂತೆ.

ಬದಲಾಗಿ ಅವರು ಚಿರತೆಯನ್ನು ತಮ್ಮ ನೆರೆಹೊರೆಯವನು ಎಂದು ಪರಿಗಣಿಸುತ್ತಾರಂತೆ. ನಿಜ ಇದು ಕಥೆಯಲ್ಲ, ವಾಸ್ತವ. ಇಲ್ಲಿ ಮನುಷ್ಯರು ಮತ್ತು ಚಿರತೆಗಳ ನಡುವೆ ಹೋರಾಟ ನಡೆಯಲ್ಲ ಬದಲಾಗಿ ಪರಸ್ಪರ ತಿಳುವಳಿಕೆ ಮತ್ತು ನಂಬಿಕೆ ಇರುವ ಒಂದು ವಿಶಿಷ್ಟ ಸಂಬಂಧವಿದೆ. ಈ ಪ್ರದೇಶದ ಜನರು ಚಿರತೆಗಳನ್ನು ಶತ್ರುಗಳೆಂದು ಪರಿಗಣಿಸುವುದಿಲ್ಲ, ಅವರು ಅದನ್ನು ಹಳ್ಳಿಯ ರಕ್ಷಕ ಎಂದು ತಿಳಿಯುತ್ತಾರೆ. ಹಾಗಾದ್ರೆ ಆ ಹಳ್ಳಿ ಯಾವುದೆಂಬುದನ್ನು ತಿಳಿದುಕೊಳ್ಳಿ.

ಚಿರತೆಗೆ ಹೆದರದ ಹಳ್ಳಿ

ರಾಜಸ್ಥಾನದ ಪಾಲಿ ಜಿಲ್ಲೆಯಲ್ಲಿರುವ ಬೇರಾ, ಫಲ್ನಾ, ದಂತಿವಾಡಾ ಮತ್ತು ಜವಾಯಿಯಂತಹ ಕೆಲವು ಹಳ್ಳಿಗಳು ತಮ್ಮದೇ ಆದ ವಿಶೇಷ ಕಾರಣಗಳಿಗಾಗಿ ಸುದ್ದಿಯಲ್ಲಿವೆ. ಈ ಪ್ರದೇಶಗಳಲ್ಲಿ ಚಿರತೆಗಳು ಬಯಲಿನಲ್ಲಿ ಸುತ್ತಾಡುತ್ತವೆ, ಪರ್ವತ ಗುಹೆಗಳಲ್ಲಿ ವಾಸಿಸುತ್ತವೆ ಮತ್ತು ಕೆಲವೊಮ್ಮೆ ಮನೆಗಳ ಛಾವಣಿಗಳ ಮೇಲೂ ಕಂಡುಬರುತ್ತವೆ. ಅಚ್ಚರಿಯ ವಿಷಯವೆಂದರೆ ಇಲ್ಲಿನ ಜನರು ಅವರಿಗೆ ಹೆದರುವುದಿಲ್ಲ ಅಥವಾ ದಾಳಿ ಮಾಡುವುದಿಲ್ಲ. ಬದಲಾಗಿ, ಚಿರತೆಗಳು ಇಲ್ಲಿನ ಜನರ ಜೀವನದ ಒಂದು ಭಾಗವಾಗಿ ಮಾರ್ಪಟ್ಟಿವೆ.

ಚಿರತೆಗೆ ಹೆದರದ ಸಮುದಾಯ

ಈ ಹಳ್ಳಿಗಳಲ್ಲಿ ವಾಸಿಸುವ ರಬಾರಿ ಸಮುದಾಯವು ಚಿರತೆಗಳನ್ನು ಕಂಡು ಹೆದರುವುದಿಲ್ಲವಂತೆ, ಬದಲಾಗಿ ಒಡನಾಡಿಯಾಗಿ ಪರಿಗಣಿಸುತ್ತದೆ. ಅವರ ದೃಷ್ಟಿಯಲ್ಲಿ, ಈ ಚಿರತೆಗಳು ಗ್ರಾಮವನ್ನು ರಕ್ಷಿಸುವ ಜೀವಿಗಳು. ಇಷ್ಟೇ ಅಲ್ಲ, ಚಿರತೆಗಳು ಗ್ರಾಮವನ್ನು ದುಷ್ಟ ಶಕ್ತಿಗಳಿಂದ ರಕ್ಷಿಸುತ್ತವೆ ಎಂದು ಅವರು ನಂಬುತ್ತಾರೆ. ಈ ನಂಬಿಕೆಯ ಪ್ರಭಾವ ಎಷ್ಟು ಆಳವಾಗಿ ಇರುತ್ತವೆ ಎಂದರೆ, ಚಿರತೆ ಯಾರೊಬ್ಬರ ಮೇಕೆಯನ್ನು ತೆಗೆದುಕೊಂಡು ಹೋದರೂ, ಜನರು ಅದನ್ನು ಪ್ರಕೃತಿಯ ನಿಯಮ ಎಂದು ಪರಿಗಣಿಸುತ್ತಾರೆ ಮತ್ತು ಕೋಪಗೊಳ್ಳುವುದಿಲ್ಲವಂತೆ.

ಹಾಗಾಗಿ ಪಾಲಿ ಜಿಲ್ಲೆಯ ಜವಾಯಿ ಪ್ರದೇಶವನ್ನು ವಿಶೇಷವಾಗಿ ಚಿರತೆಗಳ ಭದ್ರಕೋಟೆ ಎಂದು ಪರಿಗಣಿಸಲಾಗಿದೆ. ಇಲ್ಲಿನ ಪರ್ವತ ಗೌಹೆಗಳು ಈ ಚಿರತೆಗಳಿಗೆ ಸೂಕ್ತವಾದ ವಾಸಸ್ಥಾನವಾಗಿದೆ. ಜವಾಯಿ ಪ್ರದೇಶವೊಂದರಲ್ಲೇ 60 ಕ್ಕೂ ಹೆಚ್ಚು ಚಿರತೆಗಳು ವಾಸಿಸುತ್ತವೆ ಎಂದು ನಂಬಲಾಗಿದೆ. ಅವುಗಳ ಇರುವುದರಿಂದ ಹಳ್ಳಿಯ ಜಾನುವಾರುಗಳಿಗೆ ಅಪಾಯವನ್ನು ಉಂಟುಮಾಡುವಂತಹ ತೋಳಗಳು ಮತ್ತು ಕತ್ತೆಕಿರುಬಗಳಂತಹ ಪರಭಕ್ಷಕಗಳನ್ನು ಅಲ್ಲಿಗೆ ಬರುವುದಿಲ್ಲವಂತೆ.

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» Chitradurga News gmail

chitradurganews23@gmail.com

» Whatsapp Number

TAGGED:ChitradurgaChitradurga newsChitradurga UpdatesKannada Latest NewsKannada NewsleopardpeopleRajasthanvillageಕನ್ನಡ ನ್ಯೂಸ್ಕನ್ನಡ ಲೇಟೆಸ್ಟ್ ನ್ಯೂಸ್ಕನ್ನಡ ಸುದ್ದಿಚಿತ್ರದುರ್ಗಚಿತ್ರದುರ್ಗ ನ್ಯೂಸ್ಚಿರತೆಜನರುರಾಜಸ್ಥಾನಹಳ್ಳಿ
Share This Article
Facebook Email Print
Previous Article ಬೇಸಿಗೆಯಲ್ಲಿ ಗರ್ಭಿಣಿಯರು ಈ 5 ಪಾನೀಯಗಳನ್ನು ಕುಡಿಯುವುದು ಉತ್ತಮ
Next Article APMC: ಮಾರುಕಟ್ಟೆ ಧಾರಣೆ | ಇಂದಿನ ಮೆಕ್ಕೆಜೋಳ, ಶೇಂಗಾ ರೇಟ್ ಎಷ್ಟಿದೆ?
Leave a Comment

Leave a Reply Cancel reply

Your email address will not be published. Required fields are marked *

ಋತುಚಕ್ರದ ಸಮಯದಲ್ಲಿ ತಣ್ಣನೆಯ ಆಹಾರವನ್ನು ಸೇವಿಸಿದರೆ ಏನಾಗುತ್ತದೆ ಗೊತ್ತಾ?
Life Style
ದೇಹದಲ್ಲಿ ಫೈಬರ್ ಅಂಶ ಹೆಚ್ಚಿಸಲು ಊಟ-ಉಪಾಹಾರದಲ್ಲಿ ಈ ಆಹಾರಗಳನ್ನು ಸೇರಿಸಿ
Life Style
today bhavishya
Astrology: ದಿನ ಭವಿಷ್ಯ | 13 ಜೂನ್ 2025 | ಉದ್ಯೋಗಗಳಲ್ಲಿ ಅನುಕೂಲಕರ ವಾತಾವರಣ, ಆರೋಗ್ಯದ ವಿಚಾರದಲ್ಲಿ ಎಚ್ಚರಿಕೆ ಅಗತ್ಯ
Dina Bhavishya
Shivananda patil meating
ಹೊಸದುರ್ಗದಲ್ಲಿ ಗಾರ್ಮೆಂಟ್ಸ್‌ | ಬೆಂಗಳೂರಿನಲ್ಲಿ ಸಭೆ ನಡೆಸಿದ ಸಚಿವ ಶಿವಾನಂದ ಪಾಟೀಲ್‌ | ಜವಳಿ ಪಾರ್ಕ್‌ ಸ್ಥಳ ನಿಗಧಿ
ಹೊಸದುರ್ಗ
© Chitradurga News. Ruby Design Company. All Rights Reserved.
Welcome Back!

Sign in to your account

Username or Email Address
Password

Lost your password?

Not a member? Sign Up