CHITRADURGA NEWS | 17 MAY 2026
ಚಿತ್ರದುರ್ಗ: ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಮೂಲಕರ್ತ ಮುರಿಗೆಯ ಶಾಂತವೀರ ಮುರುಘರಾಜೇಂದ್ರ ಮಹಾಸ್ವಾಮಿಗಳವರ ಲೀಲಾವಿಶ್ರಾಂತಿ ಸನ್ನಿಧಾನದ ಪ್ರಾಂಗಣದಲ್ಲಿ ಶಿವಶರಣರಾದ ತುರುಗಾಹಿ ರಾಮಣ್ಣ ಹಾಗೂ ಕುರುಬ(ವೀರ)ಗೊಲ್ಲಾಳೇಶ್ವರ ಜಯಂತ್ಯುತ್ಸವ (ಶರಣೋತ್ಸವ) ಆಚರಿಸಲಾಯಿತು.
ಇದನ್ನೂ ಓದಿ: ಅಡಿಕೆ ಧಾರಣೆ | 16 ಮೇ | ರಾಜ್ಯದ ಅಡಿಕೆ ಮಾರುಕಟ್ಟೆಗಳ ನೋಟ
ಸಾನ್ನಿಧ್ಯ ವಹಿಸಿ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ.ಎಂ. ವಿದ್ಯಾಪೀಠ ಆಡಳಿತ ಮಂಡಳಿಯ ಸದಸ್ಯರಾದ ಡಾ.ಬಸವಕುಮಾರ ಸ್ವಾಮೀಜಿ ಮಾತನಾಡಿ, ಮೇಲ್ಜಾತಿ-ಕೆಳಜಾತಿ, ಉಚ್ಛ-ನೀಚ, ಶ್ರೇಷ್ಠ-ಕನಿಷ್ಠ, ಈ ತರತಮ ಭಾವನೆಯ ಶಬ್ದಗಳು ಮನುಷ್ಯರಲ್ಲಿ ಬರಬಾರದು. ಅದು ಜಾತಿಯ ಹೆಸರಿನಲ್ಲಿ. ಯಾವ ವ್ಯಕ್ತಿ ತನ್ನ ಸದ್ಗುಣಗಳಿಂದ ಸಮಾಜಕ್ಕೆ ಆದರ್ಶವಾಗಿ ಬದುಕುತ್ತಾನೋ ಅವನು ಶ್ರೇಷ್ಠ.
ಅದುಬಿಟ್ಟು ಸಮಾಜಕ್ಕೆ ವ್ಯಕ್ತಿತ್ವಕ್ಕೆ ಮಾರಕವಾಗಿ ಅಡ್ಡದಾರಿ ಹಿಡಿದು ಸಮಾಜ ಕಂಟಕ ಕೆಲಸ ಮಾಡುತ್ತಾನೋ ಅವನು ಕನಿಷ್ಠ ಅಂತ ಹೇಳಬಹುದು. ಜಾತಿಯ ಹೆಸರಿನಲ್ಲಿ ಅಸಮಾನತೆ ಸೃಷ್ಟಿಸುವುದು ಬೇಡ. ಅದಕ್ಕಾಗಿ 12ನೇ ಶತಮಾನದಲ್ಲಿ ಕಸುಬುಗಳಿದ್ದವೇ ಹೊರತು ಜಾತಿಗಳಿರಲಿಲ್ಲ. ಜಾತಿ ಇಲ್ಲವಾಗಿಸುವ ಪ್ರಯತ್ನ ಬಸವಾದಿ ಶಿವಶರಣರಣದ್ದಾಗಿತ್ತು ಎಂದು ಅಭಿಪ್ರಾಯಪಟ್ಟರು.
ಇಂದಿನ ಕಾಲದಲ್ಲಿ ಜನ್ಮದಿನ ಆಚರಿಸಿಕೊಳ್ಳುವವರ ಪರಿಸ್ಥಿತಿ ಏನಾಗಿದೆ ಎಂದರೆ ಒಂದು ರೀತಿಯಲ್ಲಿ ಆಡಂಬರ. ಸಮಾಜಕ್ಕೆ ಇದು ಬೇಕೆ ಎನ್ನುವ ರೀತಿಯಲ್ಲಿ ಕೆಲವರು ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಾರೆ. ತಾವೇ ಎಲ್ಲಾ ರೆಡಿ ಮಾಡಿಕೊಂಡು ಸಾರ್ವಜನಿಕರು ಒತ್ತಾಯ ಮಾಡಿ ನನ್ನ ಜನ್ಮದಿನ ಆಚರಿಸುತ್ತಿದ್ದಾರೆನ್ನುವ ಮಾತು ಅವರಿಂದ ಬರುತ್ತದೆ.
ಇದನ್ನೂ ಓದಿ: ಡಿ.ಸುಧಾಕರ್ ಆಸೆಯಂತೆ ಚಿತ್ರದುರ್ಗಕ್ಕೆ ಭದ್ರಾ ನೀರು | ಶಾಸಕ ಕೆ.ಸಿ.ವೀರೇಂದ್ರ (ಪಪ್ಪಿ)
ಇದು ಅಗತ್ಯವಿಲ್ಲ ಎಂದೆನಿಸುತ್ತದೆ. ಸಾರ್ವಜನಿಕವಾಗಿ ಅಗಾಧ ಸೇವೆ ಸಲ್ಲಿಸಿದವರನ್ನು ನಾವು ಗೌರವಿಸಲೇಬೇಕು ಆಧರಿಸಲೇಬೇಕು. ಇಂದಿನ ನಮ್ಮ ಜನ್ಮ ಸಗಣಿಯ ಹುಳುವಿನಂತೆ, ಹುಟ್ಟಿ ಒಂದಷ್ಟು ದಿನ ಕೆಲಸ ಮಾಡಿ ಕರೆ ಬಂದಾಗ ಈ ಜೀವ ಬಯಲಲ್ಲಿ ಬಯಲಾಗುತ್ತದೆ.
12ನೇ ಶತಮಾನದಲ್ಲಿ ನೂರಾರು ವಿವಿಧ ಕಸುಬಿನವರು ಯಾವುದೇ ಶಿಕ್ಷಣ ಪಡೆಯದೇ ಅನೇಕ ಸಣ್ಣ-ಸಣ್ಣ ಕಸುಬುಗಳನ್ನು ಮಾಡುತ್ತ ಅದರಲ್ಲೇ ನೆಮ್ಮದಿ ಖುಷಿ ಕಂಡುಕೊAಡು ನಂತರ ಅನುಭವ ಮಂಟಪದಲ್ಲಿ ಸೇರಿ ದಂದಣ-ದತ್ತಣ ಗೋಷ್ಠಿಗಳಲ್ಲಿ ಭಾಗವಹಿಸುತ್ತ ಸಮಾಜಕ್ಕೆ ದಾರಿದೀಪವಾಗಬಲ್ಲ ವಚನಗಳನ್ನು ನಮಗೆ ನೀಡಿ ಹೋಗಿದ್ದಾರೆ.
ಅಂತಹವರು ಸಾವಿರಾರು ವರ್ಷ ಕಳೆದರೂ ಅವರ ಕಾಯ ಅಳಿದರೂ ಅವರ ವಿಚಾರಗಳ ಜತೆಯಲ್ಲಿ ನಾವೆಲ್ಲ ಸಾಗುತ್ತಿದ್ದೆವೆ. ಇದು ನಿಜಕ್ಕೂ ಜಯಂತಿಗೆ ಸಾರ್ಥಕವಾಗಬಲ್ಲ ಸಂದರ್ಭ ಎಂದರು.
ಇದನ್ನೂ ಓದಿ: ಅಂಬೇಡ್ಕರ್ ಮೆಟ್ರಿಕ್ ಪೂರ್ವ ಮತ್ತು ನಂತರದ ವಿದ್ಯಾರ್ಥಿನಿಲಯಗಳಿಗೆ ಅರ್ಜಿ ಅಹ್ವಾನ
ಜಿಲ್ಲಾ ಕುರುಬ ಸಮಾಜದ ಪ್ರಧಾನ ಕಾರ್ಯದರ್ಶಿ, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರೂ ಆದ ಬಿ.ಟಿ. ಜಗದೀಶ್ ಅವರು ಮಾತನಾಡಿ, ಬೃಹನ್ಮಠವು ಹಿಂದುಳಿದ, ಶೋಷಿತ ಸಮುದಾಯದವರನ್ನು ಪ್ರತಿನಿಧಿಸುವ ಅವರ ಕಸುಬಿನ ಬಹುತೇಕ ಶರಣರನ್ನು ಅವರ ಬಗೆಗಿನ ಜೀವನ ವೃತ್ತಾಂತವನ್ನು ಪರಿಚಯಿಸುವ ಮಹಾತ್ಕಾರ್ಯ ಮಾಡುತ್ತಿದೆ. ಬಹುತೇಕ ಎಲ್ಲೂ ಇಂತಹ ಆದರ್ಶ ನಡೆ ಇಲ್ಲ ಎಂದೇ ಹೇಳಬೇಕು. ಮುಂದಿನ ಪೀಳಿಗೆಗೆ ಇದೊಂದು ಮಾರ್ಗದರ್ಶಿ ಕೈದೀವಿಗೆಯಾಗಿದೆ ಎಂದರು.
ವಾಸುದೇವರೆಡ್ಡಿ ಸ್ಮಾರಕ ಪ್ರೌಢಶಾಲೆಯ ಶಿಕ್ಷಕ ಡಿ.ಹೆಚ್. ರಾಮಲಿಂಗಪ್ಪ ಶಿವಶರಣರಾದ ಕುರುಬ(ವೀರ) ಗೊಲ್ಲಾಳೇಶ್ವರರ ಬಗ್ಗೆ ವಿಷಯ ಮಂಡಿಸಿದರು. ನಗರದ ಪ್ರಿಯದರ್ಶಿನಿ ಪ್ರೌಢಶಾಲೆ ಪ್ರಭಾರ ಮುಖ್ಯಶಿಕ್ಷಕ ಸಿ.ಎಂ.ತಿಪ್ಪೇರುದ್ರಪ್ಪ ಶಿವಶರಣ ತುರುಗಾಹಿ ರಾಮಣ್ಣ ಅವರ ಬಗೆಗೆ ವಿಷಯಾವಲೋಕನ ಮಾಡಿದರು.
ವೇದಿಕೆಯಲ್ಲಿ ಗೌಳಿ ಸಮಾಜದ ಜಾಲಿಕಟ್ಟೆ ಓಂಕಾರಪ್ಪ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು, ಸಮಾಜಗಳ ಮುಖಂಡರಾದ ಎಸ್.ವೀರೇಶ್, ಕಣಿವೆಮಾರಮ್ಮ ತಿಪ್ಪೇಸ್ವಾಮಿ, ಬಸವರಾಜ ಕಟ್ಟಿ, ನಾಗರಾಜ ಸಂಗಮ್, ಪಶುವೈದ್ಯಾಧಿಕಾರಿ ಡಾ ದೊಡ್ಡಮಲ್ಲಯ್ಯ, ಚಂದ್ರಣ್ಣ, ರುದ್ರಪ್ಪ, ಪರಮೇಶ್ವರಪ್ಪ ಜಾಲಿಕಟ್ಟೆ, ವಕೀಲರಾದ ಹನುಮಂತಪ್ಪ, ಕ.ರ.ವೇ. ಸಂಚಾಲಕ ರಮೇಶ್, ಮಾಲತೇಶ್, ಎಂ.ವಿ.ಬಾಗೇಶ್, ಉಗ್ರಾಣ ಅಂಗಡಿ ಬಸವರಾಜ್, ಶ್ರೀಮತಿ ಪುಷ್ಪವಲ್ಲಿ, ನಾರಾಯಣಪ್ಪ ಸೇರಿದಂತೆ ಸಾರ್ವಜನಿಕರು, ಭಕ್ತರು, ಎಸ್.ಜೆ.ಎಂ. ವಿದ್ಯಾಪೀಠದ ಶಾಲಾಕಾಲೇಜಿನ ಸಿಬ್ಬಂದಿವರ್ಗ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಇದನ್ನೂ ಓದಿ: ಕೈಮಗ್ಗ ನೇಕಾರರಿಗೆ ರಾಜ್ಯಮಟ್ಟದ ಪ್ರಶಸ್ತಿ | ಅರ್ಜಿ ಸಲ್ಲಿಸಲು ಮೇ.30 ಕೊನೆದಿನ
ಪ್ರಿಯದರ್ಶಿನಿ ಶಾಲೆಯ ನಿರ್ವಹಣೆಯಲ್ಲಿ ನಡೆದ ಈ ಕಾರ್ಯಕ್ರಮಕ್ಕೆ ಪಂಡಿತ್ ರವಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಉಮೇಶ್ ಪತ್ತಾರ್ ಹಾಗೂ ಬಸವರಾಜ ಕಟ್ಟಿ ಅವರುಗಳು ತುರುಗಾಹಿ ರಾಮಣ್ಣ ಹಾಗೂ ಕುರುಬ ಗೊಲ್ಲಾಳೇಶ್ವರರ ವಚನಗಳನ್ನು ಹಾಡಿದರು.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

