
ಚಿತ್ರದುರ್ಗ ನ್ಯೂಸ್.ಕಾಂ: ರಾಷ್ಟ್ರೀಯ ಸ್ವಯಂಸೇವಕ ಸಂಘ(ಆರೆಸ್ಸೆಸ್ಸ್) ಶತಾಬ್ದಿಯ ಸನಿಹದಲ್ಲಿರುವ ಸಂದರ್ಭದಲ್ಲಿ ಹಿಂದೂ ಸಮಾಜಕ್ಕೆ ಅಂಟಿರುವ ಕಳಂಕಗಳನ್ನು ತೊಡೆದು ಹಾಕಲು ಸ್ವಯಂಸೇವಕರು ಯಾವ ತ್ಯಾಗಕ್ಕೂ ಸಿದ್ಧರಾಗಬೇಕು ಎಂದು ಅರುಣ್ಕುಮಾರ್ ತಿಳಿಸಿದರು.
ವಿಜಯದಶಮಿ ಅಂಗವಾಗಿ ನಗರದಲ್ಲಿ ಹಮ್ಮಿಕೊಂಡಿದ್ದ ಪಥಸಂಚಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅಸ್ಪೃಶ್ಯತೆ, ಮತಾಂತರ, ಭಾಷೆ, ಪ್ರಾಂತ, ಮೇಲು ಕೀಳುಗಳೆಂಬ ಸಮಸ್ಯೆಗಳು ಹಿಂದೂ ಸಮಾಜಕ್ಕೆ ಕಳಂಕವಾಗಿವೆ ಎಂದರು.
ಸ್ವರ್ಗದ ಸುಖಕ್ಕಾಗಿ ತಮ್ಮ ಬದುಕನ್ನು ನರಕ ಮಾಡಿಕೊಂಡು, ಜಗತ್ತಿನೆಲ್ಲೆಡೆ ನರಕ ಸೃಷ್ಟಿ ಮಾಡುತ್ತಿರುವ ಶಕ್ತಿಗಳು ದ್ವೇಷ ಬೆಳೆಸುವ ಪ್ರವೃತ್ತಿ ನಡೆಸುತ್ತಿವೆ. ಆದರೆ, ಆರೆಸ್ಸೆಸ್ಸ್ ಎಂದೂ ಮತ್ತೊಬ್ಬರ ಮೇಲೆ ದ್ವೇಷಕ್ಕಾಗಿ ಸಂಘಟನೆ ಮಾಡಲಿಲ್ಲ. ನಮ್ಮ ಸಮಾಜದ ರಕ್ಷಣೆ ಮಾತ್ರ ಉದ್ದೇಶವಾಗಿತ್ತು. ದ್ವೇಷ ಮಾಡಿದವರು ನಾಶವಾಗುತ್ತಿರುವ ಉದಾಹರಣೆಗಳು ಕಾಣಿಸುತ್ತಿವೆ ಎಂದು ತಿಳಿಸಿದರು.

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರಕ್ಕಾಗಿ 570 ವರ್ಷ ಹೋರಾಟ ನಡೆದಿದೆ. ನಮ್ಮೆಲ್ಲರ ಪುಣ್ಯ ನಾವೆಲ್ಲಾ ಭವ್ಯ ರಾಮಮಂದಿರದ ಉದ್ಘಾಟನೆಯನ್ನು ಜನವರಿ ತಿಂಗಳಲ್ಲಿ ನೋಡುತ್ತಿದ್ದೇವೆ. ಈ ಸಂದರ್ಭದಲ್ಲಿ ಹಿಂದೂ ಸಮಾಜ ತನ್ನೆಲ್ಲಾ ದೌರ್ಬಲ್ಯಗಳನ್ನು ಮೆಟ್ಟಿ ನಿಲ್ಲಬೇಕು. ಜಾತಿ, ಭಾಷೆ, ಪ್ರಾಂತದ ಬೇಧಗಳನ್ನು ಮರೆಯಬೇಕು ಎಂದು ಕರೆ ನೀಡಿದರು.

ಸಂಘದ ಕಾರ್ಯಚಟುವಟಿಕೆ ಎಲ್ಲೆಡೆ ವ್ಯಾಪಿಸುತ್ತಿದೆ. ಹಿಂದೂ ಸಮಾಜ ಅಸ್ಪøಶ್ಯತೆಯ ಕಳಂಕ ತೊಳೆದುಕೊಂಡು ನಿಲ್ಲಬೇಕು. ಈ ನಿಟ್ಟಿನಲ್ಲಿ ನಮ್ಮ ಮನೆಗಳು ಸಜ್ಜಾಗಬೇಕು. ಹಿಂದುಗಳು ಬೇರೆ, ಲಿಂಗಾಯತರು ಬೇರೆ ಎನ್ನುವ ಒಡಕಿನ ಸ್ವರಗಳು ಕೇಳಿ ಬರುತ್ತಿವೆ. ಇದರ ನಡುವೆ ಲವ್ ಜಿಹಾದ್ ಸಮಸ್ಯೆ ಬಾಧಿಸುತ್ತಿದೆ. ಇವೆಲ್ಲದರ ವಿರುದ್ಧ ನಾವೆಲ್ಲಾ ಒಟ್ಟಾಗಬೇಕು ಎಂದು ತಿಳಿಸಿದರು.
ದೇಶದ ಅಭಿವೃದ್ಧಿ, ಭಾರತ ಜಗದ್ಗುರುವಾಗಲು ನಮ್ಮ ಜನಸಂಖ್ಯೆಯ ಅರ್ಧದಷ್ಟಿರುವ ಮಾತೆಯರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸ ಮಾಡಬೇಕು ಎಂದರು.
ಈ ಭೂಮಿಯಲ್ಲಿ ನಡೆಯುತ್ತಿರುವ ಅತ್ಯಾಚಾರ, ಅನಾಚಾರ, ಸ್ಪೃಶ್ಯ, ಅಸ್ಪೃಶ್ಯ, ಜಾತಿಗಳ ಮೇಲಾಟ, ಭಾಷೆಯ ಗಲಾಟೆ ಹೀಗೆ ಎಲ್ಲವನ್ನೂ ನೋಡಿ ತಾಯಿ ಭಾರತಿಗೆ ನೋವಾಗಿದೆ. ಈ ನೋವನ್ನು ಸರಿಪಡಿಸಬೇಕು. ಹೆಣ್ಣು, ಅಬಲೆ ಎನ್ನುವ ಭಾವನೆ ತಾಯಂದಿರಲ್ಲಿದೆ. ಅದರ ಜೊತೆಗೆ ಪುರುಷ ಪ್ರಧಾನ ಸಮಾಜ ವ್ಯವಸ್ಥೆ ಕೂಡಾ ಹಾಗೇ ಮಾಡಿದೆ ಎಂದು ಹೇಳಿದರು.
ಏಷ್ಯಾಡ್ ಕ್ರೀಡಾಕೂಟದಲ್ಲಿ 107 ಪದಕಗಳು ಭಾರತಕ್ಕೆ ಬಂದಿವೆ. ಇದರಲ್ಲಿ ಮಹಿಳೆಯರ ಪಾತ್ರ ದೊಡ್ಡದಿದೆ. ಅವರಲ್ಲೂ ಸದೃಢವಾದ ಮನಸ್ಸಿದೆ ಎನ್ನುವುದಕ್ಕೆ ಕಾಲುಗಳಲ್ಲೇ ಬಿಲ್ಲು ಪ್ರಯೋಗ ಮಾಡಿ ಪದಕ ಗೆದ್ದ ಕ್ರೀಡಾಪಟು ಉದಾಹರಣೆಯಾಗಿದ್ದಾರೆ ಎಂದರು.
ವಿಜಯದಶಮಿ ಆಯುಧ ಪೂಜೆಯಲ್ಲಿ ಕಾರು, ಬೈಕು, ಚಾಕು, ಕತ್ತರಿ, ಕಂಪ್ಯೂಟರ್, ಪ್ರಿಂಟರ್ ಗಳನ್ನು ಪೂಜೆ ಮಾಡಿ ಆಯುಧ ಪೂಜೆ ಮಾಡಿದ್ದೇವೆ. ಆದರೆ, ನಿಜವಾದ ಶಸ್ತ್ರವಾಗಿರುವ ನಮ್ಮ ಶರೀರವನ್ನು ಅಸ್ತ್ರವಾಗಿ ಮಾಡಿಕೊಳ್ಳಬೇಕು. ಎಂಥದ್ದೇ ಸಂದರ್ಭ ಬಂದರೂ ಎದುರಿಸುವ ಗಟ್ಟಿಯಾದ ಮನಸ್ಸು ಮತ್ತು ದೇಹ ನಮಗೆ ಬೇಕಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ: ಕಾಂಗ್ರೆಸ್ನಲ್ಲಿ ಅಚ್ಚರಿಯ ಬೆಳವಣಿವೆ

ಚಿತ್ರದುರ್ಗ ನಗರ ಸಂಘಚಾಲಕ ಎಸ್.ಕೃಷ್ಣಮೂರ್ತಿ ವೇದಿಕೆಯಲ್ಲಿದ್ದರು. ಜಿಲ್ಲಾ ಪ್ರಚಾರಕ ಶ್ರೀನಾಥ್, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಶ್ರೀನಿವಾಸ್, ಕೊಟ್ಲಾ ದೇವರಾಜ್, ಜಿಲ್ಲಾ ಬೌದ್ಧಿಕ್ ಪ್ರಮುಖ್ ರಾಮ್ಕಿರಣ್, ಜಿಲ್ಲಾ ವ್ಯವಸ್ಥಾ ಪ್ರಮುಖ್ ನವೀನ್, ಸಹ ವ್ಯವಸ್ಥಾ ಪ್ರಮಖ್ ಉದಯ್, ನಗರ ಕಾರ್ಯವಾಹ ಚಂದನ್, ಸಹ ಕಾರ್ಯವಾಹ ಜಯದೇವ್, ನಗರ ವ್ಯವಸ್ಥಾ ಪ್ರಮುಖ್ ದರ್ಶನ್ ಉಪಸ್ಥಿತರಿದ್ದರು.
ಕಾರ್ಯಕ್ರಮದ ನಂತರ ನಗರದ ಬುರುಜನಹಟ್ಟಿ, ಚಿಕ್ಕಪೇಟೆ, ಆನೆಬಾಗಿಲು, ಗಾಂಧಿ ವೃತ್ತದ ಮೂಲಕ ಹೊಳಲ್ಕೆರೆ ರಸ್ತೆಯಲ್ಲಿ ಪಥ ಸಂಚಲನ ಕಾರ್ಯಕ್ರಮ ನಡೆಯಿತು.
ವಿಧಾನ ಪರಿಷತ್ ಸದಸ್ಯ ಕೆ.ಎಸ್.ನವೀನ್, ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರುಳಿ, ಯುವ ಮುಖಂಡರಾದ ಜಿ.ಎಸ್.ಅನಿತ್ಕುಮಾರ್, ಎಂ.ಸಿ.ರಘುಚಂದನ್, ಬಿಜೆಪಿ ಮುಖಂಡರಾದ ಎಸ್.ಆರ್.ಗಿರೀಶ್, ವೆಂಕಟೇಶ್ ಯಾದವ್, ಹನುಮಂತೇಗೌಡ, ನವೀನ್ ಚಾಲುಕ್ಯ, ಬಜರಂಗದಳ ಪ್ರಾಂತ ಸಹ ಸಂಚಾಲಕ ಪ್ರಭಂಜನ್ ಸೇರಿದಂತೆ ಹಲವರು ಆರೆಸ್ಸೆಸ್ಸ್ ಗಣವೇಷ ಧರಿಸಿ ಸಂಚಲನದಲ್ಲಿ ಭಾಗವಹಿಸಿದ್ದರು.
ಹೊಳಲ್ಕೆರೆ ಶಾಸಕ ಡಾ.ಎಂ.ಚಂದ್ರಪ್ಪ, ಮಾಜಿ ಶಾಸಕ ಜಿ.ಎಚ್.ತಿಪ್ಪಾರೆಡ್ಡಿ, ಎಬಿವಿಪಿ ಪ್ರಮುಖರಾದ ಡಾ.ಲೇಪಾಕ್ಷಾ ಮತ್ತಿತರರಿದ್ದರು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
