CHITRADURGA NEWS | 16 AUGUST 2026
ಚಿತ್ರದುರ್ಗ: ಹೆಬ್ಬಂಡೆ, ಕೋಟೆಯ ಬೃಹತ್ ಗೋಡೆಗಳನ್ನು ಸರಸರನೆ ಸರಾಗವಾಗಿ ಏರುತ್ತಿದ್ದ ಚಿತ್ರದುರ್ಗದ ಜ್ಯೋತಿರಾಜ್ ಹಸೆಮಣೆ ಏರಲು ಸಜ್ಜಾಗಿದ್ದಾರೆ.
ಚಿತ್ರದುರ್ಗದ ಕೋಟೆಯಲ್ಲಿ ಬೃಹತ್ ಗಾತ್ರದ ಬತೇರಿ, ಉಯ್ಯಾಲೆ ಕಂಬ, ಗೋಡೆಗಳು, ಹೆಬ್ಬಂಡೆಗಳನ್ನು ಬರಿಗೈಯಲ್ಲಿ ಹತ್ತಿ, ಥೇಟ್ ಕೋತಿಯಂತೆ ಅಲ್ಲಿಂದ ನೇತಾಡುತ್ತಿದ್ದ ಕೋತಿರಾಜ್ ಅಲಿಯಾಸ್ ಜ್ಯೋತಿರಾಜ್ ಜಿಲ್ಲೆಯ ಅಳಿಯನಾಗುತ್ತಿದ್ದಾರೆ.
ಇದನ್ನೂ ಓದಿ: ದಲಿತರ ಉದ್ದಾರಕ್ಕೆ ವಾಜಪೇಯಿ ವಿಶೇಷ ಅಧಿವೇಶನ | ಸಂಸದ ಗೋವಿಂದ ಕಾರಜೋಳ
ಮೂಲತಃ ತಮಿಳುನಾಡಿನ ಜ್ಯೋತಿರಾಜ್ ಅದ್ಹೇಗೋ ಬಂದು ಚಿತ್ರದುರ್ಗದಲ್ಲಿ ನೆಲೆ ನಿಂತು, ಇಲ್ಲಿನ ಕೋಟೆಯಲ್ಲೇ ಬದುಕು ಕಟ್ಟಿಕೊಂಡಿದ್ದ. ಈಗ ಚಿತ್ರದುರ್ಗ ಜಿಲ್ಲೆ, ಚಳ್ಳಕೆರೆ ತಾಲೂಕು ದೊಡ್ಡುಳ್ಳಾರ್ತಿ ಗ್ರಾಮದ ನಿವೇದಿತಾ ಎಂಬ ಯುವತಿಯ ಕೈ ಹಿಡಿಯುವ ಮೂಲಕ ಅಧಿಕೃತವಾಗಿ ಅಳಿಯನಾಗುತ್ತಿದ್ದಾರೆ.
ಆಗಸ್ಟ್ ೨೩ ರಂದು ವೈಭವ್ ಗಾರ್ಡ್ನಲ್ಲಿ ಜ್ಯೋತಿರಾಜ್ ಹಾಗೂ ನಿವೇದಿತಾ ಸಪ್ತಪದಿ ತುಳಿಯಲಿದ್ದು, ಇದಕ್ಕಾಗಿ ಶಾಸಕರಾದ ಡಾ.ಎಂ.ಚಂದ್ರಪ್ಪ, ಕೆ.ಸಿ.ವೀರೇಂದ್ರ(ಪಪ್ಪಿ) ಸೇರಿದಂತೆ ಅನೇಕರು ಸಹಕಾರ ನೀಡಿದ್ದಾರೆ ಎಂದು ಜ್ಯೋತಿರಾಜ್ ಹೇಳಿಕೊಂಡಿದ್ದಾರೆ.
ಜೋಗ್ಫಾಲ್ಸ್ನಲ್ಲಿ ಬಿದ್ದಾಗ ಮದುವೆ ನಿಂತಿತ್ತು:
ಹಿಂದೊಮ್ಮೆ ಜ್ಯೀತಿರಾಜ್ ಜೋಗ್ಫಾಲ್ಸ್ನಲ್ಲಿ ಬಿದ್ದವರನ್ನು ರಕ್ಷಣೆ ಮಾಡುವ ಸಲುವಾಗಿ ಜೋಗದ ಗುಂಡಿಗೆ ಇಳಿಯುವಾಗ ಆಯತಪ್ಪಿ ಬಿದ್ದು ಆಗ ನಿಗಧಿಯಾಗಿದ್ದ ಮದುವೆ ನಿಂತು ಹೋಗಿತ್ತು.
ಇದನ್ನೂ ಓದಿ: ಜಿಲ್ಲಾ ಪಂಚಾಯಿತಿಯಲ್ಲಿ ಪ್ರಜಾ ಸೇವಾ ಶಾಖೆಗೆ ಸಚಿವ ಟಿ.ರಘುಮೂರ್ತಿ ಚಾಲನೆ
ಆಗ ಮದುವೆ ನಿಶ್ಚಯವಾಗಿದ್ದ ಯುವತಿಯ ಮದುವೆ ಬೇರೊಬ್ಬರ ಜೊತೆ ಮದುವೆ ನಡೆದಿದ್ದು, ಈಗ ಅದೇ ಯುವತಿಯ ಸಂಬಂಧಿ ಮತ್ತೋರ್ವ ಯುವತಿ ನಿವೇದಿತಾ ಜೊತೆಗೆ ಜ್ಯೋತಿರಾಜ್ ಮದುವೆಯಾಗುತ್ತಿದ್ದಾರೆ. ಕೋಟೆಯಲ್ಲಿ ಒಮ್ಮೆ ಜ್ಯೋತಿರಾಜ್ ಬಿದ್ದಿದ್ದಾಗ ಬಸವೇಶ್ವರ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿತ್ತು.
ಡಾ.ಶ್ರೀ.ಮುರುಘಾ ಶರಣರು ನೆರವು ನೀಡಿದ್ದರು. ಈ ಕಾರಣಕ್ಕೆ ಮುರುಘಾ ಮಠದಲ್ಲೇ ಮದುವೆಯಾಗಬೇಕು ಎಂಬ ಆಸೆ ಇತ್ತು. ಆದರೆ, ಸ್ವಾಮೀಜಿ ಮಠದಲ್ಲಿ ಇಲ್ಲದ ಕಾರಣಕ್ಕೆ ಹೊರಗೆ ಮದುವೆಯಾಗುತ್ತಿದ್ದೇನೆ ಎಂದು ಜ್ಯೋತಿರಾಜ್ ತಿಳಿಸಿದ್ದಾರೆ.
ಜ್ಯೋತಿರಾಜ್ ಮದುವೆಗಾಗಿ ಅಡುಗೆ ಮಾಡುವವರು, ಪೋಟೋಗ್ರಾಫರ್, ಕಲ್ಯಾಣ ಮಂಟಪದವರು ಎಲ್ಲರೂ ರಿಯಾಯಿತಿ ನೀಡುವ ಮೂಲಕ ಕೋಟೆಯಲ್ಲಿ ಬೆಳೆದ ಹುಡುಗನನ್ನು ಅಭಿಮಾನದಿಂದ ಮದುವೆ ಮಾಡುತ್ತಿದ್ದಾರೆ ಎಂದು ಜ್ಯೋತಿರಾಜ್ ತಿಳಿಸಿದ್ದಾರೆ.
ಇದನ್ನೂ ಓದಿ: ನವೀಕೃತ ತ.ರಾ.ಸು ರಂಗಮಂದಿರವನ್ನು ಸಚಿವ ಟಿ.ರಘುಮೂರ್ತಿ ಉದ್ಘಾಟನೆ
ತಾಯಿ ಏಕನಾಥೇಶ್ವರಿ ಆಶೀರ್ವಾದದಿಂದ ಕೋಟೆ ನಾಡಲ್ಲಿ ಪುಟ್ಟ ಬದುಕು ಕಟ್ಟಿಕೊಂಡಿದ್ದೆ. ಇಂದು ತಾಯಿಯ ಆಶೀರ್ವಾದದಿಂದ ಮದುವೆಗೆ ಅಣಿಯಾಗಿದ್ದೇನೆ ಎಂದಿದ್ದಾರೆ.
________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________

