ಮುಖ್ಯ ಸುದ್ದಿ
VV sagara; ವಿವಿ ಸಾಗರ ಜಲಾಶಯಕ್ಕೆ ಭರ್ಜರಿ ಒಳಹರಿವು | ಭರ್ತಿಯಾಗುವ ದಿನ ಇನ್ನಷ್ಟು ಹತ್ತಿರ


CHITRADURGA NEWS | 15 OCTOBER 2024
ಚಿತ್ರದುರ್ಗ: ಜಿಲ್ಲೆಯ ಜೀವನಾಡಿ ವಾಣಿ ವಿಲಾಸ ಸಾಗರ(VV sagara) ಜಲಾಶಯಕ್ಕೆ ಭರ್ಜರಿ ಒಳಹರಿವು ಪ್ರಾರಂಭವಾಗಿದೆ.
ಕ್ಲಿಕ್ ಮಾಡಿ ಓದಿ: Village Administrator; ಗ್ರಾಮ ಆಡಳಿತಾಧಿಕಾರಿ ಹುದ್ದೆ | ಕನ್ನಡ ಕಡ್ಡಾಯ ಪರೀಕ್ಷೆಯ ಫಲಿತಾಂಶ ಪ್ರಕಟ
ಜಿಲ್ಲೆಯಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಕೆರೆ, ಕಟ್ಟೆಗಳು ತುಂಬಿದ್ದು, ಈಗ ಬೀಳುತ್ತಿರುವ ಮಳೆಯ ನೀರು ಹಳ್ಳ ಕೊಳ್ಳಗಳ ಮೂಲಕ ಹರಿದು ನೇರವಾಗಿ ಜಲಾಶಯದ ಒಡಲು ಸೇರುತ್ತಿದೆ.
ವೇದಾವತಿ ನದಿ ಹರಿಯುವ ಹೊಸದುರ್ಗ ತಾಲೂಕಿನ ಕೆಲ್ಲೋಡು, ಬಲ್ಲಾಳಸಮುದ್ರ ಬ್ಯಾರೇಜ್ ಗಳು ಭರ್ತಿಯಾಗಿದ್ದು, ವಿವಿ ಸಾಗರಕ್ಕೆ ನೀರು ಹರಿಯುವ ಪ್ರಮಾಣ ಹೆಚ್ಚಾಗಿದೆ.
ವೇದಾವತಿ ಮೈದುಂಬಿ ಹರಿಯುತ್ತಿದ್ದು, ಇದೇ ಮಳೆ ಇನ್ನೊಂದು ವಾರ ಮುಂದುವರೆದರೆ ವಿವಿ ಸಾಗರ ಜಲಾಶಯ ಕೋಡಿ ಬೀಳುವ ಸಾಧ್ಯತೆ ಹೆಚ್ಚಾಗಿದೆ.
ಇಂದಿನ ಜಲಾಶಯ ಮಟ್ಟ:
ಅ.15 ಮಂಗಳವಾರ ಬೆಳಗ್ಗೆ 8 ಗಂಟೆಗೆ ನಡೆಸಿದ ಮಾಪನದಲ್ಲಿ ವಿವಿ ಸಾಗರಕ್ಕೆ 2426 ಕ್ಯೂಸೆಕ್ ನೀರು ಹರಿದು ಬಂದಿದೆ.
ಕ್ಲಿಕ್ ಮಾಡಿ ಓದಿ: MLA Chandrappa: ಮತ್ತೆ ಅಕ್ರಮ ಅದಿರು ಸಾಗಾಣಿಕೆ | ಜಿಲ್ಲಾ ಪಂಚಾಯಿತಿ ಸಭೆಯಲ್ಲಿ ಶಾಸಕ ಚಂದ್ರಪ್ಪ ಗರಂ
ಇಂದಿನ ಜಲಾಶಯ ಮಟ್ಟ122.60 ಅಡಿಯಾಗಿದ್ದು, ಜಲಾಶಯದಲ್ಲಿ 24.22 TMC ನೀರು ಸಂಗ್ರಹವಾಗಿದೆ. ಕಳೆದ ವರ್ಷ ಇದೇ ದಿನ ಜಲಾಶಯದಲ್ಲಿ 122.15 ಅಡಿವರೆಗೆ ನೀರಿದ್ದು, 23.84 TMC ಸಂಗ್ರಹ ಇತ್ತು.
ಈ ಮೂಲಕ ಕಳೆದ ವರ್ಷದ ದಾಖಲೆಯನ್ನು ಮುರಿದು ಮುಂದೆ ಸಾಗಿದಂತಾಗಿದೆ.

