
CHITRADURGA NEWS | 03 MARCH 2026
ಹೊಳಲ್ಕೆರೆ: ಮಧ್ಯ ಕರ್ನಾಟಕದ ಐತಿಹಾಸಿಕ ಜಾತ್ರಾ ಮಹೋತ್ಸವ ಎಂದೇ ಹೆಸರಾಗಿರುವ ಹೊರಕೆರೆದೇವರಪುರದ ಶ್ರೀ ಲಕ್ಷ್ಮೀನರಸಿಂಹ ಸ್ವಾಮಿ ಬ್ರಹ್ಮ ರಥೋತ್ಸವದ ಮೇಲೆ ಕೇತುಗ್ರಸ್ಥ ಚಂದ್ರಗ್ರಹಣದ ಕರಿನೆರಳು ಬಿದ್ದಿತ್ತು.
ಇದನ್ನೂ ಓದಿ: ಜಿಲ್ಲಾಸ್ಪತ್ರೆ | ಮಕ್ಕಳ ಉಚಿತ ಹೃದಯ ತಪಾಸಣೆ

ಪ್ರತಿ ವರ್ಷ ಸಂಜೆ 3.30 ರಿಂದ 4 ಗಂಟೆ ವೇಳೆಗೆ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಬ್ರಹ್ಮರಥೋತ್ಸವ ನಡೆಯುತ್ತಿತ್ತು. ಆದರೆ, ಈ ವರ್ಷದ ಗ್ರಹಣದ ಹಿನ್ನೆಲೆಯಲ್ಲಿ ಮಧ್ಯಾಹ್ನ 12 ರಿಂದ 12.30 ರ ಒಳಗಾಗಿ ರಥೋತ್ಸವ ಮುಗಿಸಿ ದೇವರನ್ನು ದೇವಸ್ಥಾನದೊಳಗೆ ಕರೆದೊಯ್ಯಲಾಯಿತು.
ಭಕ್ತರು ದೇವರ ದರ್ಶನ ಪಡೆಯಲು ಬರುತ್ತಿದ್ದರೂ ಕೂಡಾ ಉತ್ಸವ ಮೂರ್ತಿಯನ್ನು ದೇವಸ್ಥಾನದ ಒಳಗೆ ತೆಗೆದುಕೊಂಡು ಹೋಗಿ ಮುಖ್ಯ ದ್ವಾರವನ್ನು ಬಂದ್ ಮಾಡಲಾಯಿತು.
ಗ್ರಹಣ ಮುಗಿಯುವವರೆಗೆ ಜಾತ್ರಾ ಮಹೋತ್ಸವದ ಕಾರ್ಯಗಳು ನಡೆಯುವುದಿಲ್ಲ. ಆನಂತರ ಶುದ್ಧೀಕರಣ ಮಾಡಿಕೊಂಡು ಜಾತ್ರೆಯ ಮುಂದಿನ ಚಟುವಟಿಕೆಗಳನ್ನು ನಡೆಸಲಾಗುತ್ತದೆ.
ವ್ಯತ್ಯಾಸವಾಗದ ಗರುಡ ಪ್ರದಕ್ಷಿಣೆ:
ಹೊರಕೆರೆದೇವರಪುರದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ರಥೋತ್ಸವದ ವಿಶೇಷವೆಂದರೆ ತೇರು ಎಳಯುವ ಸಮಯಕ್ಕೆ ಸರಿಯಾಗಿ ಗರುಡ ಪಕ್ಷಿ ಬಂದು ಪ್ರದರ್ಶನ ಹಾಕುತ್ತದೆ. ಪ್ರತಿ ವರ್ಷ ಕೂಡಾ ಭಕ್ತರು ಗರುಡನ ಆಗಮನಕ್ಕೆ ಕಾಯುತ್ತಾರೆ.
ಇದನ್ನೂ ಓದಿ: ಮಾರುಕಟ್ಟೆ ಧಾರಣೆ | ಮಾರ್ಚ್ 03 | ಹತ್ತಿ ರೇಟ್ ಎಷ್ಟಿದೆ?
ಆದರೆ, ಈ ವರ್ಷ ನಾಲ್ಕು ತಾಸು ಮೊದಲೇ ತೇರು ಎಳೆಯುವ ಹಿನ್ನೆಲೆಯಲ್ಲಿ ಗರುಡ ಪ್ರದರ್ಶನದ ಬಗ್ಗೆ ಆತಂಕವಿತ್ತು. ಆದರೆ, ಯಾವ ಆತಂಕಕ್ಕೂ ಎಡೆ ಇಲ್ಲದೆ ಮಧ್ಯಾಹ್ನದ ರಥೋತ್ಸವಕ್ಕೆ ಗರುಡ ಪ್ರದಕ್ಷಿಣೆ ಹಾಕಲಾಯಿತು.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
