By using this site, you agree to the Privacy Policy and Terms of Use.
Accept
Chitradurga News-Kannada NewsChitradurga News-Kannada NewsChitradurga News-Kannada News
Notification
Font ResizerAa
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Reading: ಬಿ.ಎಲ್.ವೇಣು @80 | ಅಭಿಮಾನಿಗಳಿಂದ ಜನ್ಮ ದಿನಾಚರಣೆ | ಏನು ಹೇಳಿದ್ರು ನೋಡಿ..
Share
Font ResizerAa
Chitradurga News-Kannada NewsChitradurga News-Kannada News
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Search
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Follow US
© 2022 Foxiz News Network. Ruby Design Company. All Rights Reserved.

Home » ಬಿ.ಎಲ್.ವೇಣು @80 | ಅಭಿಮಾನಿಗಳಿಂದ ಜನ್ಮ ದಿನಾಚರಣೆ | ಏನು ಹೇಳಿದ್ರು ನೋಡಿ..

ಮುಖ್ಯ ಸುದ್ದಿ

ಬಿ.ಎಲ್.ವೇಣು @80 | ಅಭಿಮಾನಿಗಳಿಂದ ಜನ್ಮ ದಿನಾಚರಣೆ | ಏನು ಹೇಳಿದ್ರು ನೋಡಿ..

News Desk Chitradurga News
Last updated: 27 May 2025 19:54
News Desk Chitradurga News
3 weeks ago
Share
ಖ್ಯಾತ ಸಾಹಿತಿ ಡಾ.ಬಿ.ಎಲ್‌.ವೇಣು ಅವರ 80ನೇ ಜನ್ಮ ದಿನಾಚರಣೆ ಆಚರಿಸಲಾಯಿತು
SHARE
https://chat.whatsapp.com/Jhg5KALiCFpDwME3sTUl7x

CHUTRADURGA NEWS | 27 MAY 2025

ಚಿತ್ರದುರ್ಗ: ಖ್ಯಾತ ಕಾದಂಬರಿಕಾರ, ಚಿತ್ರ ಸಾಹಿತಿ ಡಾ.ಬಿ.ಎಲ್‌.ವೇಣು ಅವರಿಗೆ 80 ಜನ್ಮ ದಿನಾಚರಣೆ ಅಂಗವಾಗಿ ಅವರ ನಿವಾಸದಲ್ಲಿ ಅಭಿಮಾನಿಗಳು, ಸಾಹಿತ್ಯಾಸಕ್ತರು ಸೇರಿ ಗೌರವಿಸಿ ಅಭಿನಂದನೆ ಸಲ್ಲಿಸಿದರು.

ALSO READ: ಮಾರುಕಟ್ಟೆ ಧಾರಣೆ | ಇಂದಿನ ಹತ್ತಿ ರೇಟ್ ಎಷ್ಟಿದೆ?

ಈ ವೇಳೆ ಅಭಿಮಾನಿಗಳಿಂದ ಸನ್ಮಾನ ಸ್ವೀಕರಿಸಿದ ಡಾ.ಬಿ.ಎಲ್‌.ವೇಣು ಮಾತನಾಡಿ, ಇನ್ನೂ ಬರೆಯುವುದು ಬಹಳಷ್ಟು ಇದೆ. ಸಾಹಿತಿ ಲಕ್ಷ್ಮಣ ತೆಲಗಾವಿ ಅವರು ನಾಯಕರು, ಎಲ್ಲಾ ಪಾಳೇಗಾರರ ಬಗ್ಗೆಯೂ ಬರೆದು ಮುಗಿಸಿ ಎಂದಿದ್ದಾರೆ ಎಂದರು.

ಪಾಳೆಗಾರರ ಬಗ್ಗೆ ಈಗಾಗಲೇ ಸಾಲು ಸಾಲು ಕಾದಂಬರಿಗಳನ್ನು ಬರೆಯಲಾಗಿದೆ. ಆದರೆ, ದಲಿತ ಸಮಸ್ಯೆಗಳ ಬಗ್ಗೆ ಬರೆದಾಗ ಹೆಚ್ಚಿನ ಪ್ರಮಾಣದಲ್ಲಿ ಬಹುಮಾನಗಳು ಬಂದಿವೆ.

ಚಿತ್ರದುರ್ಗದಲ್ಲಿ ನಾನು ಹುಟ್ಟಿ ಬೆಳದಿದ್ದೆನೆ ಕೋಟೆಯಲ್ಲಿ ತಿರುಗಾಡಿದ್ದೇನೆ, ಚರಿತ್ರೆ ಗೊತ್ತಿರುವುದರಿಂದ ಈ ದಿಸೆಯಲ್ಲಿಯೂ ಸಹಾ ನಾನು ಕೆಲಸ ಮಾಡಿದ್ದೇನೆ. ಐತಿಹಾಸಿಕ ಕಾದಂಬರಿಗಳು ಸಹಾ ನನಗೆ ಹೆಚ್ಚಿನ ಮನ್ನಣೆಯನ್ನು ತಂದು ಕೊಟ್ಟಿವೆ. ಚಿತ್ರದುರ್ಗದ ಐತಿಹಾಸಿಕ ಕಾದಂಬರಿಗಳನ್ನು ಬರೆದಿರುವುದರಿಂದ ನಾನು ಜನಪ್ರಿಯತೆಯನ್ನು ಗಳಿಸಿದ್ದೇನೆ ಎಂದು ವೇಣು ತಿಳಿಸಿದರು.

ಅನಕ್ಷರಸ್ಥರನ್ನು ಸಹಾ ಮುಟ್ಟುವಂತಹ ಕ್ಷೇತ್ರವಾದ ಸಿನಿಮಾ ರಂಗದಲ್ಲಿಯೂ ಸಹಾ ನಾನು ಕೆಲಸವನ್ನು ಮಾಡಿದ್ದೇನೆ ಇದರಿಂದ ಹೆಚ್ಚಿನ ಪ್ರೀತಿ ಸಿಕ್ಕಿದೆ. ನನ್ನ ಆರೋಗ್ಯದ ಗುಟ್ಟು ಎಂದರೆ ಬರವಣಿಗೆ, ಈಗಲೂ ಸಹಾ ಏನಾದರೂ ಬರೆಯುತ್ತೇನೆ ಇಲ್ಲವೇ ಓದುತ್ತೇನೆ, ಇದೇ ನನಗೆ ಕೆಲಸವಾಗಿದೆ.

ALSO READ: ಖಾಸಗಿ ಶಿಕ್ಷಣ ಸಂಸ್ಥೆಗಳ ದುಬಾರಿ ಶುಲ್ಕ ವಿರೋಧಿಸಿ ರೈತ ಸಂಘ ಪ್ರತಿಭಟನೆ

ಮುಂದೆಯೂ ಸಹಾ ಏನಾದರೂ ಬರೆಯುತ್ತೇನೆ, ನನ್ನ ಬರವಣಿಗೆಯ ಗುಟ್ಟೇ ಆರೋಗ್ಯವಾಗಿದೆ. ಎಲ್ಲಿಯವರೆಗೂ ಬರೆಯುತ್ತೇನೋ ಅಲ್ಲಿಯವರೆಗೂ ಬದುಕಿರುತ್ತೇನೆ ಎಂಬ ನಂಬಿಕೆ ಇದೆ. ನಿಮ್ಮ ಪ್ರೀತಿ ವಿಶ್ವಾಸ ನನ್ನ ಮೇಲೆ ಇರಲಿ ಅದೇ ನನ್ನ ಆಯಸ್ಸುನ್ನು ವೃದ್ದಿ ಮಾಡುತ್ತದೆ ಎಂದು ವೇಣು ನುಡಿದರು.

ಬರವಣಿಗೆ ನನ್ನ ಜೀವಾಳ, ನಾನು ಬರೆಯುತ್ತಿದ್ದರೆ ಚೆನ್ನಾಗಿರುತ್ತೇನೆ, ಇಲ್ಲವಾದರೆ ಏರು ಪೇರಾಗುತ್ತದೆ. ನಾನು ಮಾಡಿರುವ ಸಾಧನೆ ಸಾಸಿವೆ ಕಾಳನಷ್ಟು ಮಾತ್ರ. ಆದರೆ, ನೀವೆಲ್ಲಾ ತೋರಿಸುತ್ತಿರುವ ಪ್ರೀತಿ ಬೆಟ್ಟದಷ್ಟು. ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷನನ್ನಾಗಿ ಮಾಡಿದ್ದೀರಿ ಎಂದು ಸ್ಮರಿಸಿದರು.

ಸಾಕಷ್ಟು ಕಾರ್ಯಕ್ರಮಗಳ ಹಿಂದೆ ನಗರಸಭೆ ಮಾಜಿ ಅಧ್ಯಕ್ಷ ಬಿ.ಕಾಂತರಾಜ್‌ ಅವರ ಬೆಂಬಲ ಇದೆ. ಚಿತ್ರದುರ್ಗದಲ್ಲಿ ನನ್ನ ಹೆಸರಿನಲ್ಲಿ ವೃತ್ತ ನಿರ್ಮಾಣ ಮಾಡುವ ಹಿಂದೆಯೂ ಕಾಂತರಾಜ್‌ ಕೊಡುಗೆ ಸಾಕಷ್ಟಿದೆ ಎಂದರು.

ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಎಂ.ಕೆ.ತಾಜ್‍ಪೀರ್ ಮಾತನಾಡಿ, ಬಿ.ಎಲ್‌.ವೇಣು ಬರೆದಿರುವ ಕಾದಂಬರಿಗಳಲ್ಲಿ ಉತ್ತಮವಾದ ಕಾದಂಬರಿಯನ್ನು ಆಯ್ಕೆ ಮಾಡಿ ಅದನ್ನು ಆಂಗ್ಲ ಬಾಷೆಗೆ ತರ್ಜಿಮೆ ಮಾಡುವುದರ ಮೂಲಕ ಇವರ ಜನಪ್ರಿಯತೆ ದೇಶದಾದ್ಯಂತ ಹರಡುವಂತೆ ಆಗಬೇಕಿದೆ ಇದಕ್ಕೆ ಎಲ್ಲರು ಸಹಾ ಸಹಕಾರವನ್ನು ನೀಡಲಿದ್ದಾರೆ ಎಂದರು.

ನಗರಸಭೆ ಮಾಜಿ ಅಧ್ಯಕ್ಷ ಬಿ.ಕಾಂತರಾಜು ಮಾತನಾಡಿ, ಬಿ.ಎಲ್‌.ವೇಣು ಅವರು ನಮ್ಮ ದುರ್ಗದ ಅಸ್ತಿ, ಇವರು ನಮ್ಮ ದುರ್ಗದಲ್ಲಿ ಇರುವುದು ನಮ್ಮೆಲ್ಲರ ಪುಣ್ಯವಾಗಿದೆ. ಭಗವಂತ ಇವರಿಗೆ ಆರೋಗ್ಯವನ್ನು ನೀಡಿ ಇವರ ಕೈಯಿಂದ ಮತ್ತಷ್ಟು ಕಾದಂಬರಿಗಳು ಹೊರಬರುವಂತೆ ಮಾಡಬೇಕಿದೆ ಎಂದು ತಿಳಿಸಿದರು.

ALSO READ: ಡಿಎಪಿ ಬದಲಾಗಿ ಸಂಯುಕ್ತ ರಸಗೊಬ್ಬರ ಬಳಸಿ | ಬಿ.ಮಂಜುನಾಥ್

ಮದಕರಿ ಸಾಂಸ್ಕøತಿಕ ಕೇಂದ್ರದ ಗೋಪಾಲಸ್ವಾಮಿ ನಾಯಕ್ ಮಾತನಾಡಿದರು.

ಮದಕರಿ ನಾಯಕ ವಿದ್ಯಾ ಸಂಸ್ಥೆಯ ಅಧ್ಯಕ್ಷ ಸಂದೀಪ್, ಕಸಾಪ ಜಿಲ್ಲಾಧ್ಯಕ್ಷ ಕೆ.ಎಂ.ಶಿವಸ್ವಾಮಿ, ತಾಲ್ಲೂಕು ಅಧ್ಯಕ್ಷ ಪ್ರಶಾಂತ್, ಪತ್ರಕರ್ತ ಮೇಘಗಂಗಾಧರ ನಾಯ್ಕ್, ನಗರಸಭೆ ಮಾಜಿ ಅಧ್ಯಕ್ಷ ಮೈಲಾರಪ್ಪ, ಮುಖಂಡರಾದ ಸಂಪತ್ ಕುಮಾರ್, ಅಂಜಿನಪ್ಪ, ಖುದ್ದೂಸ್, ತಿಪ್ಪೇಸ್ವಾಮಿ, ಕುಮಾರ್ ಗೌಡ, ಶಿವಕುಮಾರ್, ಭವಾನಿ ಮಂಜುನಾಥ್, ಮದಕರಿನಾಯಕ ವಂಶಸ್ಥರಾದ ರಾಜಮದಕರಿನಾಯಕ ಮತ್ತಿತರರಿದ್ದರು.

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» Chitradurga News gmail

chitradurganews23@gmail.com

» Whatsapp Number

TAGGED:Birthday CelebrationChitradurgaChitradurga newsChitradurga UpdatesFilmKannada Latest NewsKannada NewsLiterary writer B.L. VenuNovelstoryಕಥೆಕನ್ನಡ ನ್ಯೂಸ್ಕನ್ನಡ ಲೇಟೆಸ್ಟ್ ನ್ಯೂಸ್ಕನ್ನಡ ಸುದ್ದಿಕಾದಂಬರಿಚಲನಚಿತ್ರಚಿತ್ರದುರ್ಗಚಿತ್ರದುರ್ಗ ನ್ಯೂಸ್ಜನ್ಮದಿನಾಚರಣೆಸಾಹಿತಿ ಬಿ.ಎಲ್. ವೇಣು
Share This Article
Facebook Email Print
Previous Article APMC: ಮಾರುಕಟ್ಟೆ ಧಾರಣೆ | ಇಂದಿನ ಹತ್ತಿ ರೇಟ್ ಎಷ್ಟಿದೆ?
Next Article ಹಣ್ಣು, ತರಕಾರಿ ಮಾರಾಟ ಮಾಡಲು ಮಳಿಗೆ ಲಭ್ಯ
Leave a Comment

Leave a Reply Cancel reply

Your email address will not be published. Required fields are marked *

ಆಶ್ರಯ ಬಡಾವಣೆ ನಿರ್ಮಾಣ, ಸಿಸಿ ರಸ್ತೆ, ಶಾಲಾ ಕಟ್ಟಡ ಕಾಮಗಾರಿಗೆ ಶಾಸಕ ಎಂ.ಚಂದ್ರಪ್ಪ ಭೂಮಿಪೂಜೆ
ಹೊಳಲ್ಕೆರೆ
ನಿರುದ್ಯೋಗಿಗಳಿಗೆ ಗುಡ್ ನ್ಯೂಸ್ | ಕುರಿ, ಕೋಳಿ ಮತ್ತು ಹಸು ಸಾಕಾಣಿಕೆ ತರಬೇತಿಗೆ ನೇರ ಅಹ್ವಾನ
ಮುಖ್ಯ ಸುದ್ದಿ
arecanut price list
ಅಡಿಕೆ ಧಾರಣೆ | ಜೂನ್‌ 17 | ಇಂದಿನ ಮಾರುಕಟ್ಟೆ ಪೂರ್ಣ ವಿವರ
ಅಡಕೆ ಧಾರಣೆ
ಜೇನು ಕೃಷಿಯನ್ನು ಸಮಗ್ರ ಕೃಷಿಯನ್ನಾಗಿ ಅಳವಡಿಸಿಕೊಳ್ಳಿ | ಸಹಾಯಕ ಕೃಷಿ ನಿರ್ದೇಶಕ ಆರ್.ರಜನೀಕಾಂತ
ಮುಖ್ಯ ಸುದ್ದಿ
© Chitradurga News. Ruby Design Company. All Rights Reserved.

Chitradurga News App

Install
Welcome Back!

Sign in to your account

Username or Email Address
Password

Lost your password?

Not a member? Sign Up