
ಚಿತ್ರದುರ್ಗ ನ್ಯೂಸ್.ಕಾಂ: ನಗರದ ಜಯಲಕ್ಷ್ಮೀ ಬಡಾವಣೆಯ ನಿವಾಸಿಗಳೆಲ್ಲರೂ ಸಂಭ್ರಮದಿಂದ ವಿಜಯದಶಮಿ ಆಚರಿಸುತ್ತಿರುವ ಹೊತ್ತಿಗೆ, ಬೀದಿಯೊಂದರಲ್ಲಿ ಗಲಾಟೆ ಶುರುವಾಗಿದೆ. ಗಲಾಟೆ ಪೊಲೀಸರ ಗಮನಕ್ಕೆ ಬಂದು ಸ್ಥಳಕ್ಕೆ ಧಾವಿಸಿ ಓರ್ವ ವ್ಯಕ್ತಿಯನ್ನು ಬಂಧಿಸಿದ್ದಾರೆ.
ಈ ಗಲಾಟೆಗೆ ಕಾರಣ ಕೇಳಿದರೆ ಚಿತ್ರದುರ್ಗದಲ್ಲಿ ಇನ್ನೂ ಇದೆಲ್ಲಾ ನಡೆಯುತ್ತಿದೆಯಾ ಎನ್ನುವ ಬೇಸರ ಮೂಡುತ್ತದೆ.
ಇದನ್ನೂ ಓದಿ: ನಾಯಿ ತಪ್ಪಿಸಲು ಹೋಗಿ ಡಿವೈಡರ್ಗೆ ಡಿಕ್ಕಿಯಾದ ಕಾರು

ಮನಿ ಡಬ್ಲಿಂಗ್ (money dubbling) ವಿಚಾರವಾಗಿ ನಡೆದ ಮಾತುಕತೆ ಎರಡು ಗುಂಪುಗಳ ನಡುವೆ ಜಗಳಕ್ಕೆ ತಿರುಗಿದೆ. ಹಣ ಡಬ್ಬಲ್ ಮಾಡಿಕೊಡುವುದಾಗಿ ವಂಚನೆ ಮಾಡಿದ್ದ ಆರೋಪದಡಿ ಇಲ್ಲಿನ ಶಂಕರ್ ಗೌಡ ಪಾಟೀಲ್ ಎಂಬ ವ್ಯಕ್ತಿಯನ್ನು ಬಂದಿಸಿದ್ದಾರೆ.
ಬಂದಿತನಿಂದ 1 ಕಾರು, 2 ಟ್ರಂಕ್ಗಳಲ್ಲಿ ತುಂಬಿದ್ದ ನಕಲಿ ನೋಟುಗಳು, 17,66 ಲಕ್ಷ ರೂ. ಮೊತ್ತದ ಅಸಲಿ ನೋಟುಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಜಯಲಕ್ಷ್ಮೀ ಬಡಾವಣೆಯಲ್ಲಿ ನಡೆದ ಘಟನೆಯ ವಿವರ:
ಮೂರು ತಿಂಗಳ ಹಿಂದೆ ಜಯಲಕ್ಷ್ಮೀ ಬಡಾವಣೆಯ ಬಟ್ಟೆ ವ್ಯಾಪಾರಿ ಶಂಕರಗೌಡ ಪಾಟೀಲ್ ಪೋನ್ ಮೂಲಕ ಮಹಾರಾಷ್ಟ್ರ ಮೂಲದ ಮಹೇಶ್ ಕಾಟ್ಕರ್, ಸಚಿನ್ ಬಾಳು ಕಾಂಬ್ಳೆ ಹಾಗೂ ಅನಘ ಸುನೀಲ್ ಧವಳೆ ಅವರನ್ನು ಪರಿಚಯ ಮಾಡಿಕೊಂಡು ತನ್ನ ಬಳಿ ಅಪಾರ ಪ್ರಮಾಣದ ಹಣವಿದೆ. ನೀವು 1 ಲಕ್ಷ ಕೊಟ್ಟರೆ ಅದಕ್ಕೆ ಮೂರು ಪಟ್ಟು ಕೊಡುವುದಾಗಿ ತಿಳಿಸಿದ್ದಾನೆ.
ಈ ಮಾತನ್ನು ನಂಬಿ ಮೂರು ಜನ ಅ.23ರಂದು 17,66 ಲಕ್ಷ ರೂ. ಹಣದೊಂದಿಗೆ ಚಿತ್ರದುರ್ಗದ ಜಯಲಕ್ಷ್ಮೀ ಬಡಾವಣೆಯ ಶಂಕರಗೌಡ ಪಾಟೀಲ್ ಮನೆ ಬಳಿ ಬಂದಿದ್ದಾರೆ.
ಈ ವೇಳೆ ಶಂಕರಗೌಡ ಪಾಟೀಲ್ ತನ್ನ ಕಾರಿನ ಡಿಕ್ಕಿಯಲ್ಲಿ ಎರಡು ಟ್ರಂಕ್ಗಳಲ್ಲಿಟ್ಟಿದ್ದ ಹಣವನ್ನು ಮೂರು ಜನರಿಗೆ ತೋರಿಸಿದ್ದಾರೆ. ಹಣ ಪರಿಶೀಲಿಸಿದಾಗ ಅದರಲ್ಲಿ ಚಿಲ್ಡ್ರನ್ ಬ್ಯಾಂಕ್ ಆಫ್ ಇಂಡಿಯಾ (children bank of india) ಮತ್ತು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (reserve bank of india) ಎಂದು ಮುದ್ರಿಸಿರುವುದು ಗೊತ್ತಾಗಿದೆ. ಟ್ರಂಕುಗಳಲ್ಲಿದ್ದ 100, 200 ಹಾಗೂ 500 ಮುಖ ಬೆಲೆಯ ನೋಟುಗಳು ನಕಲಿ ಎನ್ನುವುದು ಗೊತ್ತಾಗಿದೆ.
ಇದನ್ನೂ ಓದಿ: ಚಲಿಸುತ್ತಿದ್ದ ಕಾರಿನ ಟೈಯರ್ ಬ್ಲಾಸ್ಟ್ – ಪಲ್ಟಿಯಾದ ಕಾರು
ಈ ವಿಚಾರವಾಗಿ ಎರಡು ಗುಂಪುಗಳ ನಡುವೆ ಗಲಾಟೆ ಶುರುವಾಗಿದೆ. ತಕ್ಷಣ ಹೊರಡಲು ಅನುವಾದ ಮಹಾರಾಷ್ಟ್ರ ತಂಡವನ್ನು ಅಡ್ಡಗಟ್ಟಿ ಅವರ ಬಳಿಯಿದ್ದ ಅಸಲಿ ನೋಟು 17,66 ಲಕ್ಷ ರೂ. ತುಂಬಿದ್ದ ಬ್ಯಾಗ್ ಕಿತ್ತುಕೊಂಡು, ಹಣ ಕೊಡದಿದ್ದರೆ ಸರಿಯಿರುವುದಿಲ್ಲ ಎಂದು ಮಹೇಶ್ ಕಾಟ್ಕರ್ಗೆ ಚಾಕು ಹಿಡಿದಿದ್ದಾರೆ. ತಕ್ಷಣ ಉಳಿದ ಇಬ್ಬರು ಚಾಕು ಕಿತ್ತುಕೊಂಡಿದ್ದಾರೆ.
ಈ ವೇಳೆಗೆ ಕೋಟೆ ಠಾಣೆ ಸಿಪಿಐ ದೊಡ್ಡಣ್ಣ, ಸಿಬ್ಬಂದಿಗಳಾದ ಬಾಬು ಎಂ, ಷಣ್ಮುಖ ಮತ್ತು ಎಪಿಸಿ ಸಲ್ಮಾನ್ ಸ್ಥಳಕ್ಕೆ ಆಗಮಿಸಿ ವಿಚಾರಿಸಿದಾಗ ಹಣಕಾಸಿನ ವಿಚಾರಕ್ಕೆ ಜಗಳ ಎನ್ನುವುದನ್ನು ತಿಳಿದು ನಾಲ್ಕು ಜನರನ್ನು ಕೋಟೆ ಠಾಣೆಗೆ ಕರೆದುಕೊಂಡು ಹೋಗಿದ್ದಾರೆ.
ಠಾಣೆಯಲ್ಲಿ ನಾಲ್ವರನ್ನು ವಿಚಾರಣೆಗೆ ಒಳಪಡಿಸಿದಾಗ ಮೇಲಿನ ವಿಚಾರಗಳು ಬೆಳಕಿಗೆ ಬಂದಿದ್ದು, ಹಣ ದ್ವಿಗುಣ ಮಾಡಿಕೊಡುವ ಆರೋಪ ಹೊತ್ತಿದ್ದ ಶಂಕರಗೌಡ ಪಾಟೀಲ್ ಕೂಡಾ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಈ ಹಿನ್ನೆಲೆಯಲ್ಲಿ
ಕೋಟೆ ಪೊಲೀಸ್ ಠಾಣೆ ಪಿಎಸ್ಐ ದೊಡ್ಡಣ್ಣ ಹಾಗೂ ಕೆ.ನಾಗರಾಜ್ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
