Connect with us

    ಹೋಟೆಲಿಗೆ ನುಗ್ಗಿದ ನೀರು | ಭರ್ಜರಿ ಮಳೆಗೆ ಕೆರೆಯಂತಾದ ಜಮೀನು

    ಭರ್ಜರಿ ಮಳೆಗೆ ಕೆರೆಯಂತಾದ ಜಮೀನು

    ಮುಖ್ಯ ಸುದ್ದಿ

    ಹೋಟೆಲಿಗೆ ನುಗ್ಗಿದ ನೀರು | ಭರ್ಜರಿ ಮಳೆಗೆ ಕೆರೆಯಂತಾದ ಜಮೀನು

    https://chat.whatsapp.com/Jhg5KALiCFpDwME3sTUl7x

    CHITRADURGA NEWS | 20 MAY 2024

    ಚಿತ್ರದುರ್ಗ: ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಮಳೆ ಆರ್ಭಟಿಸುತ್ತಿರುವ ಮಳೆರಾಯ, ಬಿಸಿಲ ಬೇಗೆಯಿಂದ ಬಾಯಿ ಬಿಟ್ಟಿದ್ದ ಭೂಮಿಗೆ ತಂಪೆರದಿದ್ದಾನೆ.

    ಸಮೃದ್ಧ ಎನ್ನುವಷ್ಟು ಮಳೆಯಾಗಿದ್ದು, ಬರದ ದವಡೆಗೆ ಸಿಲುಕಿ ತತ್ತರಿಸಿದ್ದ ರೈತರು ನಿಟ್ಟುಸಿರುವ ಬಿಟ್ಟಿದ್ದಾರೆ.

    ಇದನ್ನೂ ಓದಿ: ವಿವಿಸಾಗರ ತಲುಪಿದ ವೇದಾವತಿ | ಒಂದೇ ದಿನಕ್ಕೆ ಡ್ಯಾಂ ಸೇರಿದ ನೀರೆಷ್ಟು ಗೊತ್ತಾ

    ಭಾನುವಾರ ಮಧ್ಯಾಹ್ನ ಸುಮಾರು ಒಂದು ಗಂಟೆ ಭರ್ಜರಿ ಮಳೆಯಾಗಿದೆ. ಸಂಜೆ ವೇಳೆಗೆ ಸುಮಾರು 20 ನಿಮಿಷ ಚಿತ್ರದುರ್ಗ ನಗರದಲ್ಲೂ ಬಿರುಸಿನ ಮಳೆ ಸುರಿಯಿತು.

    ಚಿತ್ರದುರ್ಗ ತಾಲೂಕಿನ ಭೀಮಸಮುದ್ರ ಭಾಗದ ಬೆನಕನಹಳ್ಳಿಯಲ್ಲಿ ಮಳೆಯ ಆರ್ಭಟವನ್ನು ರೈತರು ವೀಡಿಯೋ ಚಿತ್ರಿಕರಿಸಿ ಚಿತ್ರದುರ್ಗ ನ್ಯೂಸ್ ಜೊತೆ ಹಂಚಿಕೊಂಡಿದ್ದಾರೆ.

    ಇದನ್ನೂ ಓದಿ:  ಹೊಸದುರ್ಗದಲ್ಲಿ 12.6 ಸೆ.ಮೀ. ಮಳೆ | ತುಂಬಿ ಹರಿದ ಕೆಲ್ಲೋಡು ತೊರೆ | ವಾಣಿವಿಲಾಸದತ್ತ ಹೊರಟ ವೇದಾವತಿ | ರಾತ್ರಿ ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ ನೋಡಿ

    ರೈತರೊಬ್ಬರ ಜಮೀನಿನಲ್ಲಿ ಬೋರ್ಗರೆದು ಹರಿಯುವ ನೀರು ಮುಂದೆ ಅಡಿಕೆ ಗಿಡಗಳಲ್ಲಿ ಕೆರೆಯಂತೆ ಭಾಸವಾಗುವ ದೃಶ್ಯ ಅದ್ಬುತವಾಗಿದೆ.

    ಜಾನುಕೊಂಡದಲ್ಲಿ ಹೋಟೆಲಿಗೆ ಬಂದ ನೀರು

    ಜಾನುಕೊಂಡದಲ್ಲಿ ಹೋಟೆಲಿಗೆ ಬಂದ ನೀರು

    ಜಾನುಕೊಂಡದಲ್ಲಿ ಹೋಟೆಲಿಗೆ ಬಂದ ನೀರು:

    ಜಾನುಕೊಂಡ ಗೇಟ್‍ನಲಿ ಹೋಟೆಲೊಂದರ ಒಳಗೆ ನುಗ್ಗಿರುವ ಮಳೆ ನೀರು ಅವಾಂತರವೇ ಸೃಷ್ಟಿಯಾಗುವಂತೆ ಮಾಡಿತ್ತು.

    ಇದನ್ನೂ ಓದಿ:  ರಾತ್ರಿ ಮಳೆಗೆ ಕೊಚ್ಚಿ ಹೋದ ರಸ್ತೆ | ಒಂದೇ ಮಳೆಗೆ ತುಂಬಿ ಕೋಡಿ ಹರಿದ ಕೆರೆ

    ತಗ್ಗು ಪ್ರದೇಶದಲ್ಲಿ ಹೋಟೆಲ್ ಇರುವುದರಿಂದ ಮಳೆ ನೀರು ಆ ಮಾರ್ಗದಲ್ಲಿ ಹರಿಯುವಾಗ ಹೋಟೆಲ್ ಒಳ ಭಾಗಕ್ಕೆ ನುಗ್ಗಿ ಮುಂದೆ ಸಾಗುವ ವೀಡಿಡೋ ವೈರಲ್ ಆಗಿದೆ.

    Click to comment

    Leave a Reply

    Your email address will not be published. Required fields are marked *

    More in ಮುಖ್ಯ ಸುದ್ದಿ

    To Top