
CHITRADURGA NEWS | 19 APRIL 2026
ಚಿತ್ರದುರ್ಗ: ಮುರುಘಾ ಮಠದಲ್ಲಿ ಬಸವ ಜಯಂತಿ ಅಂಗವಾಗಿ ನಡೆದ ಪ್ರಬಂಧ ಸ್ಪರ್ಧೆಯ ವಿಜೇತರ ಪಟ್ಟಿಯನ್ನು ಪ್ರಕಟಿಸಲಾಗಿದೆ.
ಇದನ್ನೂ ಓದಿ: ಖಾಸಗಿ ಕೃಷಿ ಕಾಲೇಜು ಆರಂಭಿಸಲು ಅರ್ಜಿ ಆಹ್ವಾನ

ಐದು ವಿಭಾಗಗಳಲ್ಲಿ ಪ್ರಬಂಧ ಸ್ಪರ್ಧೆ ಆಯೋಜಿಸಿದ್ದು, ರಾಜ್ಯದ ವಿವಿಧ ಭಾಗಗಳಿಂದ ನೂರಾರು ಸಂಖ್ಯೆಯಲ್ಲಿ ಅಯಾ ವಿಭಾಗವಾರು ಪ್ರಬಂಧಗಳು ಬಂದಿದ್ದವು.
ಮಾಧ್ಯಮಿಕ ತರಗತಿ ಹಂತದಲ್ಲಿ ವಿಶ್ವಗುರು ಬಸವಣ್ಣ ನನಗೇಕೆ ಇಷ್ಟ ವಿಷಯ ಕುರಿತ ಪ್ರಬಂಧ ಸ್ಪರ್ಧೆಯಲ್ಲಿ ಕೊಳಾಳ್ ಅರುಣೋದಯ ವಿದ್ಯಾಸಂಸ್ಥೆಯ ಯಶಸ್ವಿನಿ ಎಲ್. (ಪ್ರಥಮ), ಹೊಸದುರ್ಗದ ಎಸ್.ಎನ್.ಐ.ಎಸ್. ಶಾಲೆಯ ಹೆಚ್.ಎನ್. ನಲ್ಮೆ (ದ್ವಿತೀಯ) ಹಾಗೂ ದಾವಣಗೆರೆ ಎಸ್.ಜೆ.ಎಂ. ಆಂಗ್ಲಮಾಧ್ಯಮ ಶಾಲೆಯ ನಿಖಿತ ಪಿ.ಬಿ. (ತೃತೀಯ) ಸ್ಥಾನ ಗಳಿಸಿರುತ್ತಾರೆ.
ಪ್ರೌಢಶಾಲಾ ಹಂತದ ವಿಭಾಗದಲ್ಲಿ ಬಸವಣ್ಣನವರ ಮೌಢ್ಯ ವಿರೋಧ ನಿಲುವು ವಿಷಯ ಕುರಿತ ಪ್ರಬಂಧ ಸ್ಪರ್ಧೆಯಲ್ಲಿ ದಾವಣಗೆರೆ ಜಿಲ್ಲೆ ಕಕ್ಕರಗೊಳ್ಳದ ಸರಕಾರಿ ಪ್ರೌಢಶಾಲೆಯ ವೇದಾ ಕೆ.ಆರ್. (ಪ್ರಥಮ), ದಾವಣಗೆರೆ ಎಸ್.ಜೆ.ಎಂ. ಪ್ರೌಢಶಾಲೆಯ ಲೀಲಾವತಿ ಎನ್. (ದ್ವಿತೀಯ) ಮತ್ತು ಚಿತ್ರದುರ್ಗದ ಇಂಡಿಯನ್ ಇಂಟರ್ನ್ಯಾಷನಲ್ ಸ್ಕೂಲ್ನ ಅನನ್ಯ ಹೆಚ್.ವಿ. (ತೃತೀಯ) ಬಹುಮಾನ ಗಳಿಸಿದ್ದಾರೆ.
ಇದನ್ನೂ ಓದಿ: ಎರಡು ದಿನ ಕೃಷಿ ಪ್ರಾಯೋಗಿಕ ತರಬೇತಿ
ಪಿಯುಸಿ, ಡಿಪ್ಲೋಮಾ ಹಂತದ ವಿಭಾಗದಲ್ಲಿ ಬಸವಣ್ಣನವರ ಸಮ ಸಮಾಜ ವಿಷಯ ಕುರಿತ ಪ್ರಬಂಧ ಸ್ಪರ್ಧೆಯಲ್ಲಿ ಚಿತ್ರದುರ್ಗ ಎಸ್.ಜೆ.ಎಂ. ಪ.ಪೂ. ಕಾಲೇಜಿನ ಅರ್ಚನ (ಪ್ರಥಮ), ಚಾಮರಾಜನಗರ ಜಿಲ್ಲೆ ಮರಿಯಾಲದ ಎಸ್.ಜೆ.ಎಂ. ಕಾಲೇಜಿನ ದೀಪಿಕಾ (ದ್ವಿತೀಯ) ಹಾಗೂ ಭರಮಸಾಗರದ ಸಿ.ಜೆ. ವೀರೇಶ (ತೃತೀಯ) ಬಹುಮಾನ ಪಡೆದಿರುತ್ತಾರೆ.
ಪದವಿ ಹಂತದ ವಿಭಾಗದಲ್ಲಿ ಸಮಕಾಲೀನ ಶರಣರು ಕಂಡ ಬಸವಣ್ಣ ವಿಷಯ ಕುರಿತ ಪ್ರಬಂಧ ಸ್ಪರ್ಧೆಯಲ್ಲಿ ಹಾವೇರಿ ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯದ ಬಸವಣ್ಣೆಮ್ಮ ಕಾಡಪ್ಪನವರ್ (ಪ್ರಥಮ), ವಿಜಯಪುರದ ಎ.ಆರ್.ಎಸ್. ಇನಾಮದಾರ ಮಹಾವಿದ್ಯಾಲಯದ ಕೀರ್ತಿ ಆರಾಣಿ (ದ್ವಿತೀಯ), ಹಾವೇರಿ ಬಸವೇಶ್ವರ ಶಿಕ್ಷಣ ಮಹಾವಿದ್ಯಾಲಯದ ಕಾವೇರಿ ಪ. ಹಳ್ಳದ (ತೃತೀಯ) ಬಹುಮಾನ ಪಡೆದಿರುತ್ತಾರೆ.
ಇದನ್ನೂ ಓದಿ: ಪ್ರಧಾನಿ ಜತೆ ಚಿತ್ರದುರ್ಗದ ದಂತ ವೈದ್ಯ ಡಾ.ದೀಕ್ಷಿತ್ ಕುಮಾರ್ ಸಂವಾದ | ಮೈ ಭಾರತ್ ಬಜೆಟ್ ಕ್ವೆಸ್ಟ್ ರಲ್ಲಿ ಸಾಧನೆ
ಸ್ನಾತಕೋತ್ತರ ಪದವಿ ವಿಭಾಗದಲ್ಲಿ ಬಸವಣ್ಣನವರ ಚಿಂತನೆಗಳಲ್ಲಿ ಭಾರತೀಯ ಸಂವಿಧಾನ ವಿಷಯ ಕುರಿತ ಪ್ರಬಂಧ ಸ್ಪರ್ಧೆಯಲ್ಲಿ ಮೈಸೂರಿನ ಬೂದೇಶ ಬಸಪ್ಪ ಮಜ್ಜಿಗುಡ್ಡ (ಪ್ರಥಮ), ಕೊಪ್ಪಳದ ಮೋನಿಕಾ (ದ್ವಿತೀಯ) ಮತ್ತು ಚಿತ್ರದುರ್ಗ ಸರಸ್ವತಿ ಕಾನೂನು ಮಹಾವಿದ್ಯಾಲಯದ ಕಿರಣ್ಕುಮಾರ್ (ತೃತೀಯ) ಸ್ಥಾನವನ್ನು ಪಡೆದಿದ್ದಾರೆಂದು ಶ್ರೀಮಠದ ಪ್ರಕಟಣೆಯಲ್ಲಿ ತಿಳಿಸಿದೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
