By using this site, you agree to the Privacy Policy and Terms of Use.
Accept
Chitradurga News-Kannada NewsChitradurga News-Kannada NewsChitradurga News-Kannada News
Notification
Font ResizerAa
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Reading: ಮುಲ್ತಾನಿ ಮಿಟ್ಟಿಗೆ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದೇ?
Share
Font ResizerAa
Chitradurga News-Kannada NewsChitradurga News-Kannada News
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Search
  • ಮುಖ್ಯ ಸುದ್ದಿ
  • ಕ್ರೈಂ ಸುದ್ದಿ
  • ತಾಲೂಕು
  • ಅಡಕೆ ಧಾರಣೆ
  • Dina Bhavishya
  • ಮಾರುಕಟ್ಟೆ ಧಾರಣೆ
  • ಹೊಳಲ್ಕೆರೆ
  • ಹಿರಿಯೂರು
  • ಹೊಸದುರ್ಗ
  • Life Style
Follow US
© 2022 Foxiz News Network. Ruby Design Company. All Rights Reserved.

Home » ಮುಲ್ತಾನಿ ಮಿಟ್ಟಿಗೆ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದೇ?

Life Style

ಮುಲ್ತಾನಿ ಮಿಟ್ಟಿಗೆ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದೇ?

News Desk Chitradurga News
Last updated: 9 May 2025 21:03
News Desk Chitradurga News
1 month ago
Share
SHARE
https://chat.whatsapp.com/Jhg5KALiCFpDwME3sTUl7x

CHITRADURGA NEWS | 10 may 2025

ಮುಲ್ತಾನಿ ಮಿಟ್ಟಿಯನ್ನು ಭಾರತದಲ್ಲಿ ಶತಮಾನಗಳಿಂದ ಚರ್ಮ ಮತ್ತು ಕೂದಲಿಗೆ ಬಳಸಲಾಗುತ್ತದೆ. ಈ ಜೇಡಿಮಣ್ಣು ವಿಶೇಷವಾಗಿ ಮುಖದ ಆಳವಾದ ಶುದ್ಧೀಕರಣ, ಮೊಡವೆಗಳನ್ನು ನಿವಾರಿಸುವುದು, ಚರ್ಮದ ಟೋನ್ ಸುಧಾರಿಸುವುದು ಮತ್ತು ಕೂದಲಿನ ಬೇರುಗಳನ್ನು ಬಲಪಡಿಸಲು ಹೆಸರುವಾಸಿಯಾಗಿದೆ.

ಬೇಸಿಗೆಯಲ್ಲಿ, ದೇಹದ ಶಾಖವನ್ನು ತಂಪಾಗಿಸಲು ಜನರು ಇದನ್ನು ಹಚ್ಚುತ್ತಾರೆ. ಈ ಜೇಡಿಮಣ್ಣನ್ನು ಚರ್ಮಕ್ಕೆ ತಂಪು ಮತ್ತು ಶುದ್ಧವೆಂದು ಪರಿಗಣಿಸಲಾಗುತ್ತದೆ. ಹಾಗಾಗಿ ಇಂದಿಗೂ ಅನೇಕ ಜನರು ಇದನ್ನು ತಮ್ಮ ಚರ್ಮದ ಆರೈಕೆಯ ದಿನಚರಿಯಲ್ಲಿ ಸೇರಿಸುತ್ತಾರೆ. ಆದರೆ ಕೆಲವರು, ಮುಲ್ತಾನಿ ಮಿಟ್ಟಿಯನ್ನು ತಿನ್ನುತ್ತಾರೆ. ಆದರೆ ಮುಲ್ತಾನಿ ಮಿಟ್ಟಿ ತಿನ್ನುವುದು ಸುರಕ್ಷಿತವೇ?

ಇದು ದೇಹಕ್ಕೆ ಯಾವುದೇ ಪ್ರಯೋಜನವನ್ನು ನೀಡುತ್ತದೆಯೇ ಅಥವಾ ಗಂಭೀರ ಅಡ್ಡಪರಿಣಾಮಗಳನ್ನು ಉಂಟುಮಾಡಬಹುದೇ? ಎಂಬುದನ್ನು ಮೊದಲು ತಿಳಿದುಕೊಳ್ಳಿ.

ಆಯುರ್ವೇದದಲ್ಲಿ ಮುಲ್ತಾನಿ ಮಿಟ್ಟಿಯನ್ನು ದೇಹದ ಶಾಖವನ್ನು ತೆಗೆದುಹಾಕಲು, ಚರ್ಮದ ಕಾಯಿಲೆಗಳನ್ನು ಕಡಿಮೆ ಮಾಡಲು ಬಾಹ್ಯ ಬಳಕೆಗಾಗಿ ಮಾತ್ರ ಬಳಸಲು ಹೇಳಲಾಗುತ್ತದೆ. ಆದರೆ ಅದನ್ನು ತಿನ್ನುವ ಬಗ್ಗೆ ಯಾವುದೇ ಉಲ್ಲೇಖವಿಲ್ಲ. ಇದು ದೇಹದ ಮೇಲೆ ಅಡ್ಡಪರಿಣಾಮಗಳನ್ನು ಉಂಟುಮಾಡಬಹುದು ಎನ್ನಲಾಗಿದೆ.

ಇದು ಜೀರ್ಣಾಂಗ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ

ಮುಲ್ತಾನಿ ಮಿಟ್ಟಿ ಜೇಡಿಮಣ್ಣಾದ ಕಾರಣ ಈ ಮಣ್ಣು ದಪ್ಪವಾಗಿರುತ್ತದೆ ಮತ್ತು ಜೀರ್ಣವಾಗುವುದಿಲ್ಲ. ಇದು ಮಲಬದ್ಧತೆಗೆ ಕಾರಣವಾಗುತ್ತದೆ. ಮತ್ತು ಅಜೀರ್ಣದಂತಹ ಸಮಸ್ಯೆಗಳು ಬರಬಹುದು. ಇದನ್ನು ಸೇವಿಸುವುದರಿಂದ ಕರುಳಿನ ಸಮಸ್ಯೆ ಕಾಡಬಹುದು.

ಮೂಳೆಗಳಲ್ಲಿ ದೌರ್ಬಲ್ಯ

ಇದರಲ್ಲಿರುವ ಅಂಶಗಳು ಮತ್ತು ಇತರ ಭಾರವಾದ ಲೋಹಗಳು ದೇಹದಲ್ಲಿ ಕ್ಯಾಲ್ಸಿಯಂ ಹೀರಿಕೊಳ್ಳುವಿಕೆಯ ಮೇಲೆ ಪರಿಣಾಮ ಬೀರುತ್ತವೆ. ಇದು ಮೂಳೆ ದೌರ್ಬಲ್ಯ, ಕೀಲು ನೋವುಗಳಿಗೆ ಕಾರಣವಾಗುತ್ತವೆ. ಆಸ್ಟಿಯೊಪೊರೋಸಿಸ್ ಅಂತಹ ಸಮಸ್ಯೆ ಬರಬಹುದು.

ವಿಷಕಾರಿ ಅಂಶಗಳಿಗೆ ಒಡ್ಡಿಕೊಳ್ಳುವುದು

ಅನೇಕ ಬಾರಿ ಆರ್ಸೆನಿಕ್, ಸೀಸ ಮತ್ತು ಇತರ ಭಾರವಾದ ಲೋಹಗಳು ಮುಲ್ತಾನಿ ಜೇಡಿಮಣ್ಣಿನಲ್ಲಿ ಇರಬಹುದು. ಇದು ದೇಹಕ್ಕೆ ಸೇರಿ ನಿಧಾನವಾಗಿ ಜೀವಾಣುಗಳಂತೆ ಕಾರ್ಯನಿರ್ವಹಿಸುತ್ತದೆ. ಇದು ಯಕೃತ್ತು, ಮೂತ್ರಪಿಂಡಗಳು ಮತ್ತು ಮೆದುಳಿನ ಮೇಲೆ ಪರಿಣಾಮ ಬೀರಬಹುದು.

ರಕ್ತಹೀನತೆ

ಮುಲ್ತಾನಿ ಮಿಟ್ಟಿಯನ್ನು ದೀರ್ಘಕಾಲ ತಿನ್ನುವುದರಿಂದ ದೇಹದಲ್ಲಿ ಕಬ್ಬಿಣದ ಕೊರತೆ ಉಂಟಾಗುತ್ತದೆ. ಏಕೆಂದರೆ ಮಣ್ಣು ಕರುಳಿನಿಂದ ಪೋಷಕಾಂಶಗಳನ್ನು ಹೀರಿಕೊಳ್ಳಲು ಅಡ್ಡಿಯಾಗುತ್ತದೆ. ಇದು ರಕ್ತಹೀನತೆಗೆ ಕಾರಣವಾಗಬಹುದು. ಹಾಗಾಗಿ ಮುಲ್ತಾನಿ ಮಿಟ್ಟಿಯನ್ನು ತಿನ್ನುವುದನ್ನು ಇಂದೇ ನಿಲ್ಲಿಸಿ.

ಇದು ಮಾಹಿತಿ ಮಾತ್ರ

ಆರೋಗ್ಯ ಸಮಸ್ಯೆ ಇರುವವರು ವೈದ್ಯರನ್ನು ಸಂಪರ್ಕಿಸಿ, ಮುಂದುವರೆಯಿರಿ

ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು

ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್‌ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್‌ ಅನ್ನು ನಿಮ್ಮ ನಂಬರ್‌ಗೆ ಕಳುಹಿಸುತ್ತೇವೆ.

ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್‌ ಮೇಲ್‌ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.

» Chitradurga News gmail

chitradurganews23@gmail.com

» Whatsapp Number

TAGGED:anemiaChitradurgaChitradurga newsChitradurga Updatesdigestive systemHealthKannada Latest NewsKannada NewsMultani mittiಆರೋಗ್ಯಕನ್ನಡ ನ್ಯೂಸ್ಕನ್ನಡ ಲೇಟೆಸ್ಟ್ ನ್ಯೂಸ್ಕನ್ನಡ ಸುದ್ದಿಚಿತ್ರದುರ್ಗಚಿತ್ರದುರ್ಗ ನ್ಯೂಸ್ಜೀರ್ಣಾಂಗಮುಲ್ತಾನಿ ಮಿಟ್ಟಿರಕ್ತಹೀನತೆ
Share This Article
Facebook Email Print
Previous Article ಸೊಂಪು ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಬಹುದೇ? 
Next Article ಬೇಸಿಗೆಯಲ್ಲಿ ಬೆಲ್ಲದ ನೀರನ್ನು ಕುಡಿಯುವುದು ಸುರಕ್ಷಿತವೇ?
Leave a Comment

Leave a Reply Cancel reply

Your email address will not be published. Required fields are marked *

today bhavishya
Astrology: ದಿನ ಭವಿಷ್ಯ | ಜೂನ್ 21 | ವೃತ್ತಿಪರ ಉದ್ಯೋಗಗಳಲ್ಲಿ ಕಿರಿಕಿರಿ, ಆರ್ಥಿಕ ಲಾಭ ದೊರೆಯುತ್ತದೆ, ಪ್ರಯಾಣವನ್ನು ಮುಂದೂಡುವುದು ಉತ್ತಮ
Dina Bhavishya
arecanut price list
ಅಡಿಕೆ ಧಾರಣೆ | ಯಾವ ಮಾರುಕಟ್ಟೆಯಲ್ಲಿ ಎಷ್ಟು ರೇಟ್‌
ಅಡಕೆ ಧಾರಣೆ
ಮೆಟ್ರಿಕ್ ಪೂರ್ವ ಮತ್ತು ನಂತರದ ವಿದ್ಯಾರ್ಥಿ ವೇತನಕ್ಕೆ ಅರ್ಜಿ
ಮುಖ್ಯ ಸುದ್ದಿ
Power Cut chitradurga News (3)
ನಾಳೆ ವಿದ್ಯುತ್ ವ್ಯತ್ಯಯ | ಎಲ್ಲೆಲ್ಲಿ ಕರೆಂಟ್ ಇರಲ್ಲ?
ಹಿರಿಯೂರು
© Chitradurga News. Ruby Design Company. All Rights Reserved.

Chitradurga News App

Install
Welcome Back!

Sign in to your account

Username or Email Address
Password

Lost your password?

Not a member? Sign Up