
CHITRADURGA NEWS | 19 MARCH 2025
ಚಿತ್ರದುರ್ಗ: ಬಾಹ್ಯಾಕಾಶದಲ್ಲಿ ಒಂಬತ್ತು ತಿಂಗಳ ಸವಾಲುಗಳ ದಿನಗಳನ್ನು ಎದುರಿಸಿ, ಭೂಮಿಗೆ ಬಂದಿಳಿದಿರುವ ಸುನಿತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಜಗತ್ತಿನ ಸರ್ವಜನರಿಗೂ ಸ್ಫೂರ್ತಿ ಆಗಬೇಕು ಎಂದು ಮಾನವ ಬಂಧುತ್ವ ವೇದಿಕೆ ಜಿಲ್ಲಾ ಸಂಚಾಲಕ ಪಿ.ಬಸವರಾಜ್ ತಿಳಿಸಿದ್ದಾರೆ.
Also Read: ಸುನಿತಾ ವಿಲಿಯಮ್ಸ್ ತಾಳ್ಮೆ ಯುವ ಪೀಳಿಗೆಗೆ ಮಾದರಿ | ಡಾ.ಸೌಮ್ಯ

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಜಗತ್ತಿನಲ್ಲಿ ಭೂತ, ದೆವ್ವದ ಹೆಸರಲ್ಲಿ ಭೀತಿ ಹುಟ್ಟಿಸುವ, ಜಾತಿ-ಧರ್ಮದ ಹೆಸರಲ್ಲಿ ಕಂದಕ ಉಂಟು ಮಾಡುವ ವ್ಯಕ್ತಿಗಳು ಜಗತ್ತಿಗೆ ಕಂಟಕವಾಗಿದ್ದು, ನಮಗೆ ಸುನಿತಾ ವಿಲಿಯಮ್ಸ್ ಅಂತಹ ದಿಟ್ಟರ ವೈಜ್ಞಾನಿಕ ನಡೆ ಮಾದರಿ ಆಗಬೇಕಾಗಿದೆ ಎಂದು ಹೇಳಿದ್ದಾರೆ.
ಇವರು ಹಾಗೂ ಇಲ್ಲಿಯವರೆಗೂ ಸಹಸ್ರಾರು ಮಂದಿ ವಿಜ್ಞಾನ ಕ್ಷೇತ್ರದಲ್ಲಿ ನಿರಂತರ ಅಧ್ಯಯನದ ಮೂಲಕ ಜಗತ್ತಿನ ಸಂಕಷ್ಟಗಳನ್ನು ದೂರ ಮಾಡಲು ಶ್ರಮಿಸಿದ್ದಾರೆ.

ಈ ನಡೆ ನಿರಂತರವಾಗಿರುತ್ತದೆ. ಈ ಮಧ್ಯೆ ಮೌಢ್ಯ, ಕಂದಾಚಾರಗಳು ಹೆಚ್ಚುತ್ತಿವೆ. ಮೌಢ್ಯಾಚಾರಣೆಗಳ ಮೂಲಕ ಸಮಸ್ಯೆಗಳೇ ಹೆಚ್ಚು. ವಿಜ್ಞಾನದತ್ತ ಆಸಕ್ತಿ ಬೆಳೆಸಿಕೊಂಡರೇ ಬದುಕು ನೆಮ್ಮದಿಯತ್ತ ಸಾಗುತ್ತದೆ. ಇದಕ್ಕೆ ಬಾಹ್ಯಾಕಾಶದಲ್ಲಿ 9 ತಿಂಗಳ ಕಾಲ ಇದ್ದು, ಜೀವಂತವಾಗಿ ಭೂಮಿಗೆ ಬಂದಿಳಿದಿರುವ ಇಬ್ಬರು ಉತ್ತಮ ಸಾಕ್ಷಿ ಎಂದಿದ್ದಾರೆ.
Also Read: SSLC ವಿದ್ಯಾರ್ಥಿಗಳಿಗೆ ಡಿಸಿ, ಸಿಇಓ ಪತ್ರ | ಏನಿದೆ ಪತ್ರದಲ್ಲಿ ಈ LINK CLICK ಮಾಡಿ
ಶೀಘ್ರದಲ್ಲಿ ಮಾನವ ಬಂಧುತ್ವ ವೇದಿಕೆಯಿಂದ ಈ ಇಬ್ಬರು ಹಾಗೂ ಇಲ್ಲಿಯವರೆಗೂ ಬಾಹ್ಯಾಕಾಶಕ್ಕೆ ತೆರಳಿದವರು, ವಿಜ್ಞಾನದ ವಿಸ್ಮಯಗಳ ಕುರಿತು ಕಾರ್ಯಕ್ರಮ ಆಯೋಜಿಸಲಾಗುವುದು. ಈ ಮೂಲಕ ಜನರನ್ನು ವೈಜ್ಞಾನಿಕ ಚಿಂತನೆಯತ್ತ ಕೊಂಡೊಯ್ಯುವ ಕೆಲಸವನ್ನು ಮಾನವ ಬಂಧುತ್ವ ವೇದಿಕೆಯಿಂದ ಮಾಡಲಾಗುವುದು ಎಂದು ಪಿ.ಬಸವರಾಜ್ ತಿಳಿಸಿದ್ದಾರೆ.


________________________________________________
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
________________________________________________
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail: chitradurganews23@gmail.com
» Whatsapp Number: 9008943015
________________________________________________
