CHITRADURGA NEWS | 08 MARCH 2024
ಚಿತ್ರದುರ್ಗ: ಲೋಕಸಭೆ ಚುನಾವಣೆಗೆ ಸ್ಪರ್ಧೆ ಬಯಸಿ ನಾಮಪತ್ರ ಸಲ್ಲಿಸಿದ್ದ 24 ಅಭ್ಯರ್ಥಿಗಳಲ್ಲಿ ನಾಲ್ವರು ಪಕ್ಷೇತರ ಅಭ್ಯರ್ಥಿಗಳು ಸೋಮವಾರ ತಮ್ಮ ನಾಮಪತ್ರಗಳನ್ನು ಹಿಂಪಡೆದಿದ್ದಾರೆ.
ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಚುನಾವಣೆ ನಾಮಪತ್ರ ಹಿಂಪಡೆಯುವ ಪ್ರಕ್ರಿಯೆ ಸೋಮವಾರ ಮುಕ್ತಾಯಗೊಂಡಿದ್ದು, ಅಂತಿಮವಾಗಿ 20 ಅಭ್ಯರ್ಥಿಗಳು ಚುನಾವಣಾ ಕಣದಲ್ಲಿ ಉಳಿದಿದ್ದಾರೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಟಿ.ವೆಂಕಟೇಶ್ ತಿಳಿಸಿದ್ದಾರೆ.
ಇದನ್ನೂ ಓದಿ: ಮೂರು ದಿನಗಳಲ್ಲಿ ಮಳೆ ಸಾಧ್ಯತೆ | ಭಾರತೀಯ ಹವಾಮಾನ ಇಲಾಖೆ ವರದಿ
ನಾಮಪತ್ರ ಹಿಂಪಡೆದವರು:
- ಕೃಷ್ಣಮೂರ್ತಿ (ಪಕ್ಷೇತರ)
- ಆರ್.ದಾಸಪ್ಪ (ಪಕ್ಷೇತರ)
- ಟಿ.ದೇವರಾಜ (ಪಕ್ಷೇತರ)
- ಕೆ.ಶಿವಲಿಂಗಪ್ಪ (ಪಕ್ಷೇತರ)
ಚುನಾವಣಾ ಕಣದಲ್ಲಿ ಅಂತಿಮವಾಗಿ ಉಳಿದವರು:
- ಗೋವಿಂದ ಕಾರಜೋಳ(ಬಿಜೆಪಿ)
- ಬಿ.ಎನ್.ಚಂದ್ರಪ್ಪ(ಕಾಂಗ್ರೆಸ್)
- ಅಶೋಕ ಚಕ್ರವರ್ತಿ (ಬಿಎಸ್ಪಿ)
- ಸಿ.ಎನ್.ನರಸಿಂಹರಾಜು(ಕರ್ನಾಟಕ ರಾಷ್ಟ್ರಸಮಿತಿ ಪಕ್ಷ)
- ಟಿ.ರಮೇಶ್ ನಾಯ್ಕ್(ಉತ್ತಮ ಪ್ರಜಾಕೀಯ ಪಕ್ಷ)
- ಬಿ.ಟಿ.ರಾಮಸುಬ್ಬಯ್ಯ (ಇಂಡಿಯನ್ ಮೂವ್ಮೆಂಟ್ ಪಾರ್ಟಿ)
- ಆರ್.ಶಬರೀಶ್ (ಕರುನಾಡ ಸೇವಕರ ಪಕ್ಷ)
- ಡಿ.ಸುಜಾತಾ (ಎಸ್ಯುಸಿಐ-ಕಮ್ಯುನಿಸ್ಟ್)
- ಅಮೃತ ರಾಜ (ಪಕ್ಷೇತರ)
- ಗಣೇಶ್(ಪಕ್ಷೇತರ)
- ಎಚ್.ತುಳಸಿ (ಪಕ್ಷೇತರ)
- ಎಂ.ಪಿ.ದಾರಕೇಶ್ವರಯ್ಯ(ಪಕ್ಷೇತರ)
- ಕೆ.ನರಸಿಂಹಮೂರ್ತಿ (ಪಕ್ಷೇತರ)
- ನಾಗರಾಜಪ್ಪ (ಪಕ್ಷೇತರ)
- ವಿ.ಎಸ್.ಭೂತರಾಜ(ಪಕ್ಷೇತರ)
- ಟಿ.ಮಂಜುನಾಥಸ್ವಾಮಿ(ಪಕ್ಷೇತರ)
- ಎಸ್.ರಘುಕುಮಾರ್ (ಪಕ್ಷೇತರ)
- ಬಿ.ವೆಂಕಟೇಶ್ (ಪಕ್ಷೇತರ)
- ಎಸ್.ಎಚ್.ಶ್ರೀನಿವಾಸ(ಪಕ್ಷೇತರ)
- ಆರ್.ಸುಧಾಕರ (ಪಕ್ಷೇತರ)
ನಿಮ್ಮೂರ ಸುದ್ದಿಗೆ ನೀವೇ ವರದಿಗಾರರು
ನಿಮ್ಮೂರ ಸುದ್ದಿ ಈಗ ಜಗತ್ತಿನ ಮೂಲೆ ಮೂಲೆ ತಲುಪಲಿದೆ. ನಿಮ್ಮೂರ ಸುದ್ದಿಗೆ ನೀವೆ ವರದಿಗಾರರು. ಸಭೆ, ಸಮಾರಂಭ, ಪ್ರತಿಭಟನೆ ಸೇರಿ ಸುದ್ದಿಯಾಗುವ ವಿಚಾರಗಳನ್ನು ಕೆಳಗೆ ನೀಡಿರುವ Gmail ಅಥವಾ WhatsApp ನಂಬರ್ಗೆ ಕಳುಹಿಸಬಹುದು. ಸುದ್ದಿ ಪ್ರಕಟಿಸಲು ಸಮಯ ಹಿಡಿಯಲಿದೆ. ಪ್ರಕಟವಾದ ಸುದ್ದಿಯ ಲಿಂಕ್ ಅನ್ನು ನಿಮ್ಮ ನಂಬರ್ಗೆ ಕಳುಹಿಸುತ್ತೇವೆ.
ಸೂಚನೆ : ಗಂಡ – ಹೆಂಡತಿ ಜಗಳ, ಜಮೀನು ವಿವಾದ, ಖಾಸಗಿ ಸಂಗತಿಗಳು, ಬ್ಲಾಕ್ ಮೇಲ್ ಮಾದರಿಯ ಸುದ್ದಿಗಳನ್ನು ನಾವು ಪ್ರಕಟಿಸುವುದಿಲ್ಲ.
» Chitradurga News gmail
chitradurganews23@gmail.com
» Whatsapp Number
